ವಾಟ್ಸ್‌ ಆ್ಯಪ್‌ ಡಾರ್ಕ್‌ ಮೋಡ್‌ ಮೋಡಿ


Team Udayavani, Mar 9, 2020, 5:30 AM IST

smart-gallery

ವಾಟ್ಸ್‌ ಆ್ಯಪ್‌ ಕಡೆಗೂ “ಡಾರ್ಕ್‌ ಮೋಡ್‌’ ಎಂಬ ಹೊಸ ಸವಲತ್ತನ್ನು ಆಂಡ್ರಾಯ್ಡ ಮತ್ತು ಐಫೋನ್‌ ಬಳಕೆದಾರರಿಗೆ ಬಿಡುಗಡೆಗೊಳಿಸಿದೆ. ಒಂದು ವರ್ಷದಿಂದಲೂ ಸಂಸ್ಥೆ ಡಾರ್ಕ್‌ ಮೋಡ್‌ ಅನ್ನು ಅಭಿವೃದ್ಧಿ ಪಡಿಸುತ್ತಲೇ ಇತ್ತು. ಅಲ್ಲದೆ ಕೆಲ ಸಮಯದ ಹಿಂದೆ ಡಾರ್ಕ್‌ ಮೋಡ್‌ನ‌ ಬೀಟಾ(ಅಪೂರ್ಣ) ಆವೃತ್ತಿಯನ್ನು ಬಿಡುಗಡೆಗೊಳಿಸಿತ್ತು. ಇದೀಗ ಸಂಸ್ಥೆ, ಪೂರ್ಣ ಪ್ರಮಾಣದಲ್ಲಿ ಈ ಸವಲತ್ತನ್ನು 2 ಶತಕೋಟಿ ಸ್ಮಾರ್ಟ್‌ಫೋನುಗಳಲ್ಲಿ ಅಳವಡಿಸಲು ಸಂಸ್ಥೆ ಮುಂದಾಗಿದೆ.

ಏನು ಪ್ರಯೋಜನ?
ಫೋನನ್ನು ಮಂದ ಬೆಳಕಿನಲ್ಲಿ ಚಾಲೂ ಮಾಡಿದರೆ, ಕಣ್ಣುಗಳಿಗೆ ದಣಿವಾಗದು. ಅಕ್ಷರಗಳನ್ನು ಓದಲು, ಚಿತ್ರಗಳನ್ನು ನೋಡಲು ಶ್ರಮವಾಗದ ರೀತಿಯಲ್ಲಿ ಈ ಸವಲತ್ತನ್ನು ಅಭಿವೃದ್ಧಿಪಡಿಸಲಾಗಿದೆ. ಅಲ್ಲದೆ, ಕತ್ತಲ ಕೋಣೆಯಲ್ಲಿ ಯಾವುದೋ ಕಾರಣಕ್ಕೆ ಫೋನ್‌ ಸ್ಕ್ರೀನ್‌ ಆನ್‌ ಆದಾಗ ಝಗ್ಗನೆ ಕೋರೈಸುವ ಬೆಳಕು ಕೋಣೆಯನ್ನು ತುಂಬುವುದರಿಂದ ಮುಕ್ತಿ ಪಡೆಯಬಹುದು.

ಡಾರ್ಕ್‌ ಮೋಡ್‌ ಆಯ್ಕೆ ಹೇಗೆ?
ಕೆಲವೊಂದು ಸಂದರ್ಭಗಳಲ್ಲಿ ಫೋನು ತನ್ನಷ್ಟಕ್ಕೇ ಡಾರ್ಕ್‌ ಮೋಡ್‌ಅನ್ನು ಅಳವಡಿಸಿಕೊಂಡಿರಬಹುದು. ಇಲ್ಲದೇ ಹೋದರೆ ಅದನ್ನು ಬಳಕೆದಾರ ಖುದ್ದಾಗಿ ಅಳವಡಿಸಿಕೊಳ್ಳಬೇಕಾಗುತ್ತದೆ. ಫೋನಿನ ಆಪರೇಟಿಂಗ್‌ ಸಿಸ್ಟಮ್‌, ಆಂಡ್ರಾಯ್ಡ 10 ಮತ್ತು ಐಫೋನುಗಳಲ್ಲಿ ಐಓಎಸ್‌13 ಇದ್ದರೆ ಸಿಸ್ಟಮ್‌ ಸೆಟ್ಟಿಂಗ್ಸ್‌ನಲ್ಲಿ ಹೋಗಿ “ಡಾರ್ಕ್‌ ಮೋಡ್‌’ಅನ್ನು ಸೆಲೆಕ್ಟ್ ಮಾಡಿಕೊಳ್ಳಬಹುದು. ಒಂದು ವೇಳೆ ಆಂಡ್ರಾಯ್ಡ ಫೋನುಗಳಲ್ಲಿ ಓಎಸ್‌ ಆಂಡ್ರಾಯ್ಡ 9ನೇ ಆವೃತ್ತಿ ಇದ್ದರೆ, ವಾಟ್ಸ್‌ ಆ್ಯಪ್‌ ಸೆಟ್ಟಿಂಗ್ಸ್‌ನಲ್ಲಿ, ಚಾಟ್ಸ್‌ ಆಯ್ಕೆ ಕ್ಲಿಕ್‌ ಮಾಡಬೇಕು. ಅಲ್ಲಿ “ಥೀಮ್‌’ ಅಂಬ ಆಯ್ಕೆ ಸೆಲೆಕ್ಟ್ ಮಾಡಿ. ಆಗ “ಡಾರ್ಕ್‌ ಮೋಡ್‌’ ಆಯ್ಕೆ ತೆರೆದುಕೊಳ್ಳುವುದು. ಫೋನು ಡಾರ್ಕ್‌ ಮೋಡ್‌ನ‌ಲ್ಲಿದೆ ಎನ್ನುವುದನ್ನು ತಿಳಿಯಲು ಸುಲಭ ವಿಧಾನವೆಂದರೆ ವಾಟ್ಸ್‌ ಆ್ಯಪ್‌ನ ಬಣ್ಣವನ್ನು ಗಮನಿಸುವುದು. ಡಾರ್ಕ್‌ ಮೋಡಿಗೆ ಬದಲಾಗಿದ್ದರೆ ಅದರ ಬಣ್ಣ ಕಪ್ಪು ಅಥವಾ ಗಾಢವಾದ ಬೂದು ಬಣ್ಣಕ್ಕೆ ತಿರುಗಿಕೊಂಡಿರುತ್ತದೆ.

ಟಾಪ್ ನ್ಯೂಸ್

Belgaum Lok Sabha Constituency: ಅನುಭವದ ರಾಜಕಾರಣಕ್ಕೆ ಯುವ ಮುಖದ ಸವಾಲು

Belgaum Lok Sabha Constituency: ಅನುಭವದ ರಾಜಕಾರಣಕ್ಕೆ ಯುವ ಮುಖದ ಸವಾಲು

vijayendra

Hubli; ಕೇರಳ ಮಾದರಿಯಲ್ಲಿ ರಾಜ್ಯದಲ್ಲಿ ಸರ್ಕಾರ ನಡೆಯುತ್ತಿದೆ: ವಿಜಯೇಂದ್ರ ಆರೋಪ

Threat: ಚುನಾವಣಾ ಫಲಿತಾಂಶಕ್ಕೂ ಮುನ್ನ ನಿಮ್ಮ ಫಲಿತಾಂಶ ಬರಲಿದೆ… ಸಚಿವರಿಗೆ ಜೀವ ಬೆದರಿಕೆ

Threat: ಚುನಾವಣಾ ಫಲಿತಾಂಶಕ್ಕೂ ಮುನ್ನ ನಿಮ್ಮ ಫಲಿತಾಂಶ ಬರಲಿದೆ… ಸಚಿವರಿಗೆ ಜೀವ ಬೆದರಿಕೆ

kangaroo movie review

Kangaroo Movie Review; ನಿಗೂಢ ಹಾದಿಯಲ್ಲಿ ಕಾಂಗರೂ ನಡೆ

Tragedy: ಬಿಸಿಲಿನ ತಾಪಕ್ಕೆ ಬಿಎಂಟಿಸಿ ಕಂಡಕ್ಟರ್ ಮಲ್ಲಯ್ಯ ಮೃತ್ಯು…

Tragedy: ಬಿಸಿಲಿನ ತಾಪ… ಕುಸಿದು ಬಿದ್ದು ಬಿಎಂಟಿಸಿ ಕಂಡಕ್ಟರ್ ಮಲ್ಲಯ್ಯ ಮೃತ್ಯು

ಪೋಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನ… ಅತ್ಯಾಚಾರ ಆರೋಪಿ ಕಾಲಿಗೆ ಗುಂಡೇಟು

ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನ… ಅತ್ಯಾಚಾರ ಆರೋಪಿ ಕಾಲಿಗೆ ಗುಂಡೇಟು

Bihar: 2025ರ ಚುನಾವಣೆಗೂ ಮುನ್ನ 10 ಲಕ್ಷ ಮಂದಿಗೆ ಉದ್ಯೋಗದ ಭರವಸೆ ನೀಡಿದ ಬಿಜೆಪಿ

Bihar: 2025ರ ಚುನಾವಣೆಗೂ ಮುನ್ನ ಬಿಜೆಪಿಯಿಂದ 10 ಲಕ್ಷ ಸರ್ಕಾರಿ ಉದ್ಯೋಗದ ಭರವಸೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belgaum Lok Sabha Constituency: ಅನುಭವದ ರಾಜಕಾರಣಕ್ಕೆ ಯುವ ಮುಖದ ಸವಾಲು

Belgaum Lok Sabha Constituency: ಅನುಭವದ ರಾಜಕಾರಣಕ್ಕೆ ಯುವ ಮುಖದ ಸವಾಲು

vijayendra

Hubli; ಕೇರಳ ಮಾದರಿಯಲ್ಲಿ ರಾಜ್ಯದಲ್ಲಿ ಸರ್ಕಾರ ನಡೆಯುತ್ತಿದೆ: ವಿಜಯೇಂದ್ರ ಆರೋಪ

Threat: ಚುನಾವಣಾ ಫಲಿತಾಂಶಕ್ಕೂ ಮುನ್ನ ನಿಮ್ಮ ಫಲಿತಾಂಶ ಬರಲಿದೆ… ಸಚಿವರಿಗೆ ಜೀವ ಬೆದರಿಕೆ

Threat: ಚುನಾವಣಾ ಫಲಿತಾಂಶಕ್ಕೂ ಮುನ್ನ ನಿಮ್ಮ ಫಲಿತಾಂಶ ಬರಲಿದೆ… ಸಚಿವರಿಗೆ ಜೀವ ಬೆದರಿಕೆ

Theft Case: ನಕಲಿ ಕೀ ಬಳಸಿ ಬ್ಯೂಟಿಷಿಯನ್‌ ಮನೆಗೆ ಕನ್ನ

Theft Case: ನಕಲಿ ಕೀ ಬಳಸಿ ಬ್ಯೂಟಿಷಿಯನ್‌ ಮನೆಗೆ ಕನ್ನ

Arrested: ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ 9 ವರ್ಷ ಬಳಿಕ ಬಂಧನ

Arrested: ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ 9 ವರ್ಷ ಬಳಿಕ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.