ಉಪನಿಷತ್ತಿನ ಕಥಾ ಸಾರ


Team Udayavani, Apr 15, 2020, 12:04 PM IST

ಉಪನಿಷತ್ತಿನ ಕಥಾ ಸಾರ

ಹಿಂದೊಮ್ಮೆ ಮಾನವರೆಲ್ಲಾ ಯಥೇಚ್ಛವಾಗಿ ಸಂಪಾದಿಸುತ್ತಿದ್ದರೂ, ಇನ್ನೂ ತೃಪ್ತಿಯಿಲ್ಲದಂತೆ ದುಡಿಯತೊಡಗಿದರು. ಇನ್ನೊಂದೆಡೆ, ರಾಕ್ಷಸರು ಯಥೇಚ್ಛವಾಗಿ ದುಷ್ಟಕರ್ಮಗಳನ್ನು ಮಾಡತೊಡಗಿದ್ದರು. ಹಿಂಸಿಸುವುದು, ಅನ್ಯರನ್ನು ನೋಯಿಸುವುದು, ಅನ್ಯಾಯ ಮಾಡುವುದರಲ್ಲೇ ಸುಖಪಡುತ್ತಲಿದ್ದರು.

ಮತ್ತೂಂದೆಡೆ ದೇವತೆಗಳು, ಇಂದ್ರಿಯಗಳಿಗೆ ಕಡಿವಾಣವೇ ಇಲ್ಲದಂತೆ ವೈಭೋಗ, ವ್ಯಸನಗಳಲ್ಲಿ ತಲ್ಲೀನರಾಗಿದ್ದರು. ಹೀಗೆ ದೇವತೆಗಳು, ರಾಕ್ಷಸರು, ಮಾನವರು ಮೂರು ವರ್ಗದವರೂ ಮನಸೋ ಇಚ್ಛೆಯಾಗಿ ವರ್ತಿಸಿದರೂ, ಅವರಿಗೆ ನೆಮ್ಮದಿ ದೊರಕುತ್ತಿರಲಿಲ್ಲ. ಅತಿಯಾದ ಸುಖವೂ ದುಃ ಖಕ್ಕೆ ಕಾರಣವಂತೆ. ಹಾಗೆ ಯಥೇಚ್ಛ ಸುಖದ ಅನುಭವದಲ್ಲಿದ್ದರೂ, ದುಃಖ ತಪ್ತರಾಗಿ, ಮೂರೂ ವರ್ಗದವರು ಬ್ರಹ್ಮನಲ್ಲಿಗೆ ಹೋಗಿ ತಮ್ಮ ಸಮಸ್ಯೆಯನ್ನಿಟ್ಟರು. ಬ್ರಹ್ಮನು ಇವರೆಲ್ಲರ ವಿಶೇಷತೆಗಳನ್ನು ಗಮನಿಸಿ, ಪರಿಹಾರಸೂಚಕವಾಗಿ ಒಂದೇ ಒಂದು ಅಕ್ಷರವನ್ನು ಅರುಹಿದ. “ದ’ ಎಂಬುದಾಗಿ. “ದ’ ಎಂಬ ಒಂದೇ ಶಬ್ದವನ್ನು
ಮೂವರೂ ಅವರ ಸಂಸ್ಕಾರಕ್ಕೆ ಅನುಗುಣವಾಗಿ ಗ್ರಹಿಸಿದರು. ಇಂದ್ರಿಯಗಳು ಕೆಲಸ ಮಾಡುವುದು ದೇವತೆಗಳ ಶಕ್ತಿಯಿಂದ. ಅದನ್ನು ಅವರೇ ನಿಗ್ರಹಿಸಬೇಕು. ಹಾಗೆಂದೇ ದೇವತೆಗಳು “ದ’ ಅಂದರೆ “ದಮ್ಯತಾ’ ಎಂಬುದಾಗಿ ಗ್ರಹಿಸಿದರು. ಇಂದ್ರಿಯ ನಿಗ್ರಹ ಮಾಡಿ ಚಾಪಲ್ಯವನ್ನು ತೊರೆದು ನೆಮ್ಮದಿ ಕಂಡುಕೊಂಡರು.

ಕ್ರೌರ್ಯ ಅಸುರೀ ಪ್ರವೃತ್ತಿ. ಅದನ್ನು ಆ ಶಕ್ತಿಗಳೇ ನಿಗ್ರಹಿಸಬೇಕು. ಹಾಗಾಗಿ ಅಸುರರು, “ದ- ದಯಾ’ ಎಂಬುದಾಗಿ ಅರ್ಥೈಸಿಕೊಂಡರು. ಎಲ್ಲರಲ್ಲೂ ದಯೆ
ತೋರಿಸುತ್ತಾ, ಸಾತ್ವಿಕ ಮನೋಭಾವ ಹೊಂದಿ ನೆಮ್ಮದಿ ಕಂಡರು. ಮಾನವರಿಗೆ ಸಂಪತ್ತಿನ ಸಂಗ್ರಹ ಸ್ವಭಾವ. ಅವರು “ದ-ದಾನಂ’ ಎಂಬುದಾಗಿ ಅರ್ಥೈಸಿಕೊಂಡು, ಸ್ವಾರ್ಥಕ್ಕಾಗಿ ಕೂಡಿಟ್ಟುಕೊಳ್ಳದೆ ಪರರಿಗೂ ಹಂಚುತ್ತಾ, ಪ್ರಕೃತಿಯಲ್ಲಿಯ ಸಮತೋಲನ ಕಾಪಾಡಿಕೊಂಡರು. ದೇವತಾಭಾವ, ಆಸುರಿಭಾವ, ಮಾನುಷಿಭಾವ ಎಲ್ಲವೂ, ನಮ್ಮಲ್ಲಿ ಆಗಾಗ ಕಾಣುವಂಥದ್ದೇ. ಇಂದ್ರಿಯ ಸುಖಕ್ಕೆ ಅಲ್ಲಲ್ಲಿ ಕಡಿವಾಣ ಹಾಕುತ್ತಾ, ಅನ್ಯರಿಗೆ ಹಿಂಸೆ ಮಾಡದೆ, ತಮಗೇ ತಾವು ಹಿಂಸೆಗೈದುಕೊಳ್ಳದೆ ದಯಾಪರ ರಾಗಿ, ದಾನ ಮಾಡುತ್ತ ಭಗವಂತನ ಸ್ಮರಣೆಯಲ್ಲಿ ತೊಡಗಬೇಕು ಎಂಬುದೇ, ಈ ಉಪನಿಷತ್ತಿನ ಕಥೆಯ ಸಾರ.

ಡಾ. ಯಶಸ್ವಿನಿ, ಸಂಸ್ಕೃತಿ ಚಿಂತಕಿ, ಅಷ್ಟಾಂಗಯೋಗ ವಿಜ್ಞಾನ ಮಂದಿರಂ

ಟಾಪ್ ನ್ಯೂಸ್

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.