ಪರ್ಕಳ: ಪರಿಹಾರ ಕಾಣದ ರಸ್ತೆ ಸಮಸ್ಯೆ
Team Udayavani, Jul 6, 2020, 5:59 AM IST
ಉಡುಪಿ: ರಾಷ್ಟ್ರೀಯ ಹೆದ್ದಾರಿ ಪರ್ಕಳ ಮುಖ್ಯ ಪೇಟೆಯಲ್ಲಿ ರಸ್ತೆ ಸಮಸ್ಯೆ ಹಲವು ಸಮಯದಿಂದ ಬಗೆಹರಿದಿಲ್ಲ.
ಕಾಮಗಾರಿ ಸ್ಥಗಿತಗೊಂಡ ಈ ಭಾಗದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಗೆ ರಸ್ತೆ ಪೂರ್ತಿ ಕೆಸರು ತುಂಬಿ ಅನಾಹುತಕ್ಕೆ ಎಡೆಮಾಡಿಕೊಟ್ಟಿತ್ತು.
ಅನಂತರ ಎಚ್ಚೆತ್ತುಕೊಂಡ ಹೆದ್ದಾರಿ ಇಲಾಖೆಯವರು ರಸ್ತೆಯ ಮೇಲಿನ ಮಣ್ಣನ್ನು ತೆಗೆದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು. ಅನಂತರವೂ ಸಮಸ್ಯೆ ನಿವಾರಣೆಯಾಗಿಲ್ಲ.
ಮಳೆ ನೀರು ಹರಿದು ಹೋಗಲು ಸೂಕ್ತ ಚರಂಡಿಯಿಲ್ಲದೆ, ರಸ್ತೆ ಮೇಲೆ ನೀರು ಹರಿಯುತ್ತದೆ. ವಾಹನ ಸವಾರರು ರಸ್ತೆಯಲ್ಲಿನ ಹೊಂಡ ಕಾಣದೆ ವಾಹನ ಸವಾರರು, ಪಾದಚಾರಿಗಳು ಸಂಕಷ್ಟಕ್ಕೀಡಾಗುವುದು ಇಲ್ಲಿ ಮಾಮೂಲಿಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.