ಭಾರತದ ಸಾಮರ್ಥ್ಯ ನಿರೂಪಿಸಿದ ಭೇಟಿ


Team Udayavani, Feb 27, 2020, 5:53 AM IST

majji-36

ಜಗತ್ತಿಗೆ ಕಂಟಕವಾಗಿ ಪರಿಣಮಿಸಿರುವುದು ಇಸ್ಲಾಮಿಕ್‌ ಭಯೋತ್ಪಾದನೆ ಎಂಬುದನ್ನು ಘಂಟಾಘೋಷವಾಗಿ ಸಾರಿದ ಟ್ರಂಪ್‌ ಇದೇ ವೇಳೆ ಭಯೋತ್ಪಾದನೆಯ ತವರು ದೇಶವಾದ ಪಾಕಿಸ್ಥಾನ ಭಯೋತ್ಪಾದನೆ ನಿಗ್ರಹಕ್ಕೆ ಪ್ರಯತ್ನಿಸುತ್ತಿದೆ ಎಂದು ಹೇಳುವ ಮೂಲಕ ಆ ದೇಶದ ಬಗ್ಗೆ ತಮಗಿರುವ ಮೃದು ಧೋರಣೆಯನ್ನು ತೋರಿಸಿದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಅವರ ಪರಿವಾರಕ್ಕೆ ಭಾರತ ಬಹುಕಾಲ ನೆನಪಿಟ್ಟುಕೊಳ್ಳುವಂಥ ಆತಿಥ್ಯವನ್ನು ನೀಡಿದೆ. ಬಹಳಷ್ಟು ನಿರೀಕ್ಷೆಗಳನ್ನು ಮೂಡಿಸಿದ್ದ ಟ್ರಂಪ್‌ ಭೇಟಿ ಫ‌ಲಪ್ರದವಾಗಿ ಮುಕ್ತಾಯಗೊಂಡಿದೆ. ಎಲ್ಲ ನಿರೀಕ್ಷೆಗಳು ಈಡೇರದಿದ್ದರೂ ಈ ಒಂದು ಭೇಟಿಯಿಂದಾಗಿ ಜಗತ್ತಿನ ಎರಡು ಬೃಹತ್‌ ಪ್ರಜಾತಂತ್ರ ದೇಶಗಳ ನಡುವಿನ ಸಂಬಂಧ ಇನ್ನಷ್ಟು ನಿಕಟವಾಗಿರುವುದು ಸತ್ಯ. ರೋಡ್‌ ಶೋ ಇರಬಹುದು, ಸಬರಮತಿ ಭೇಟಿ ಇರಬಹುದು, ಮೋಟೆರಾದ ನಮಸ್ತೆ ಟ್ರಂಪ್‌ ಕಾರ್ಯಕ್ರಮ ಇರಬಹುದು ಅಥವಾ ತಾಜ್‌ಮಹಲ್‌ ಪ್ರವಾಸ ಇರಬಹುದು. ಈ ಎಲ್ಲ ಸನ್ನಿವೇಶಗಳಲ್ಲಿ ಟ್ರಂಪ್‌ ಭಾರತೀಯರು ಮತ್ತು ಭಾರತೀಯತೆಗೆ ನೀಡಿರುವ ಪ್ರಾಧಾನ್ಯ ಗಮನಾರ್ಹ ಅಂಶವಾಗಿತ್ತು.

ಕೆಲವೊಂದು ವಿಚಾರಗಳಲ್ಲಿ ಉಭಯ ದೇಶಗಳ ನಡುವೆ ಭಿನ್ನಮತವಿರುವುದು ನಿಜ. ಮುಖ್ಯವಾಗಿ ವಾಣಿಜ್ಯ ಸುಂಕ ಮತ್ತು ಎಚ್‌-1ಬಿ ವಿಸಾಕ್ಕೆ ಸಂಬಂಧಿಸಿದಂತೆ ಕೆಲ ಸಮಯದಿಂದ ಶೀತಲವಾದ ತಿಕ್ಕಾಟ ನಡೆಯುತ್ತಿದೆ. ಆದರೆ ಈ ಯಾವ ಅಂಶಗಳು ಭೇಟಿಯ ಮೇಲೆ ನಕರಾತ್ಮಕವಾದ ಪರಿಣಾಮವನ್ನು ಬೀರದಂತೆ ಉಭಯ ನಾಯಕರು ನೋಡಿಕೊಂಡಿದ್ದಾರೆ.

ಮೊಟೆರೊದಲ್ಲಿ ಟ್ರಂಪ್‌ ಮಾಡಿದ ಭಾಷಣದ ಬಹುಭಾಗ ಭಾರತ ಮತ್ತು ಮೋದಿ ಪ್ರಶಂಸೆಗೆ ಮೀಸಲಾಗಿದ್ದರೂ ಅದರ ನಡುವೆಯೇ ಭಯೋತ್ಪಾದನೆ, ಚೀನ , ಪಾಕಿಸ್ಥಾನ ಮತ್ತಿತರ ವಿಚಾರಗಳನ್ನೂ ಪ್ರಸ್ತಾವಿಸಿದ್ದಾರೆ. ಕೆಲವು ದೇಶಗಳು “ಬಲವಂತವಾಗಿ ಮತ್ತು ಸಂಘರ್ಷದಿಂದ’ ಯಶಸ್ಸನ್ನು ಗಳಿಸಲು ಶ್ರಮಿಸುತ್ತಿವೆ ಎಂದಿರುವ ಟ್ರಂಪ್‌ ಮಾತುಗಳು ಪರೋಕ್ಷವಾಗಿ ಬದ್ಧ ಎದುರಾಳಿ ಚೀನಕ್ಕೆ ನೀಡಿದ ಟಾಂಗ್‌ ಆಗಿತ್ತು. ಜಗತ್ತಿಗೆ ಕಂಟಕವಾಗಿ ಪರಿಣಮಿಸಿರುವುದು ಇಸ್ಲಾಮಿಕ್‌ ಭಯೋತ್ಪಾದನೆ ಎಂಬುದನ್ನು ಘಂಟಾಘೋಷವಾಗಿ ಸಾರಿದ ಟ್ರಂಪ್‌ ಇದೇ ವೇಳೆ ಭಯೋತ್ಪಾದನೆಯ ತವರು ದೇಶವಾದ ಪಾಕಿಸ್ಥಾನ ಭಯೋತ್ಪಾದನೆ ನಿಗ್ರಹಕ್ಕೆ ಪ್ರಯತ್ನಿಸುತ್ತಿದೆ ಎಂದು ಹೇಳುವ ಮೂಲಕ ಆ ದೇಶದ ಬಗ್ಗೆ ತಮಗಿರುವ ಮೃದು ಧೋರಣೆಯನ್ನು ತೋರಿಸಿದರು.

ಮೋದಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಯಾವ ರೀತಿ ಬಹುಮುಖ್ಯ ಪಾಲುದಾರರಾಗಿವೆ ಎಂಬ ಅಂಶಕ್ಕೆ ಹೆಚ್ಚಿನ ಒತ್ತು ನೀಡಿದರು. ಟ್ರಂಪ್‌ ಇದನ್ನು ಒಪ್ಪಿಕೊಂಡರೂ ಅವರ ಆದ್ಯತೆ ಭಾರತದ ಜೊತೆಗಿನ ವಾಣಿಜ್ಯ ವ್ಯವಹಾರದ ತಕರಾರನ್ನು ಬಗೆಹರಿಸುವುದಾಗಿತ್ತು.

ಅಪಾಚೆ ಮತ್ತು ಎಂಎಚ್‌-60 ರೋಮಿಯೊ ಸಮರ ಹೆಲಿಕಾಪ್ಟರ್‌ಗಳನ್ನು ಖರೀದಿಸುವ ಸುಮಾರು 21,000 ಕೋ. ರೂ.ಗಳ ಒಪ್ಪಂದಕ್ಕೆ ಅಂಕಿತ ಹಾಕಿರುವುದು ಈ ದ್ವಿದಿನ ಭೇಟಿಯ ಬಹುಮುಖ್ಯ ಅಂಶಗಳಲ್ಲಿ ಒಂದು. ಈ ಮೂಲಕ ಭಾರತದ ಸೇನೆಯನ್ನು ಆಧುನೀಕರಣಗೊಳಿಸಿ ಇನ್ನಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಭಾರತ ದಾಪುಗಾಲಿಟ್ಟಿದೆ. ಇಂಡಿಯನ್‌ ಆಯಿಲ್‌ ಕಾರ್ಪೋರೇಶನ್‌ ಮತ್ತು ಎಕ್ಸನ್‌ಮೊಬಿಲ್‌ ನಡುವೆ ಆಗಿರುವ ತೈಲೋದ್ಯಮದ ಒಪ್ಪಂದ ಇನ್ನೊಂದು ಪ್ರಮುಖ ಅಂಶ. ಇದಲ್ಲದೆ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಮೂರು ಒಪ್ಪಂದಗಳನ್ನೂ ಮಾಡಿಕೊಳ್ಳಲಾಗಿದೆ.

ಅಂತಾರಾಷ್ಟ್ರೀಯವಾಗಿ ಗಮನ ಸೆಳೆದಿರುವ ಇತ್ತೀಚೆಗಿನ ನಿರ್ಧಾರಗಳಾಗಿರುವ ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವುದು ಮತ್ತು ಪೌರತ್ವ ಕಾಯಿದೆ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ಟ್ರಂಪ್‌ ತಟಸ್ಥ ಧೋರಣೆಯನ್ನು ಪ್ರದರ್ಶಿಸಿದ್ದಾರೆ. ಪ್ರವಾಸದ ಸಂದರ್ಭದಲ್ಲಿಯೇ ದಿಲ್ಲಿಯಲ್ಲಿ ಹಿಂಸಾಚಾರ ಭುಗಿಲೆದ್ದಿದ್ದರೂ ಟ್ರಂಪ್‌ ಪೌರತ್ವ ಕಾಯಿದೆ ಭಾರತದ ಆಂತರಿಕ ವಿಚಾರ, ಆ ಬಗ್ಗೆ ಮಾತನಾಡುವುದಿಲ್ಲ ಎನ್ನುವ ಮೂಲಕ ನಮ್ಮ ಸಾರ್ವಭೌಮತೆಯನ್ನು ಗೌರವಿಸಿದರು. ಇದೇ ವೇಳೆ ಉಭಯ ದೇಶಗಳು ಬಯಸಿದರೆ ಕಾಶ್ಮೀರ ವಿವಾದವನ್ನು ಬಗೆಹರಿಸಲು ಮಧ್ಯಸ್ಥಿಕೆ ವಹಿಸುವ ತನ್ನ ಹಿಂದಿನ ಕೊಡುಗೆಯನ್ನು ಪುನರುಚ್ಚರಿಸಿದರೂ ಈ ಬಗ್ಗೆ ಹೆಚ್ಚೇನೂ ಮಾತನಾಡಲಿಲ್ಲ. ಈ ಮೂಲಕ ಪ್ರಬುದ್ಧವಾದ ರಾಜತಾಂತ್ರಿಕ ನಡೆಯೊಂದನ್ನು ಪ್ರದರ್ಶಿಸಿದರು.

ಭಾರತ ತನ್ನ ವಿದೇಶಾಂಗ ನೀತಿಯಂಗವಾಗಿ ಒಂದು ದೇಶದ ಮುಖ್ಯಸ್ಥನಿಗಾಗಿ ಇಷ್ಟೊಂದು ಅದ್ದೂರಿ ಕಾರ್ಯಕ್ರಮ ಏರ್ಪಡಿಸಿದ ನಿದರ್ಶನ ಇಲ್ಲ. ಈ ದೃಷ್ಟಿಯಿಂದಲೂ ಇದು ಒಂದು ಐತಿಹಾಸಿಕ ಭೇಟಿ ಆಗುತ್ತದೆ. ಮುಂಬರುವ ನವಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಅಮೆರಿಕದಲ್ಲಿರುವ ಭಾರತೀಯ ಸಮುದಾಯವನ್ನು ಒಲಿಸಿಕೊಳ್ಳುವ ಪ್ರಯತ್ನ ಇದು ಆಗಿರಲೂಬಹುದು. ಅಂತೆಯೇ ಎರಡು ದಿನದ ಭೇಟಿಗೆ ಆಗಿರುವ ಖರ್ಚುವೆಚ್ಚಗಳು ಇತ್ಯಾದಿಗಳ ಬಗ್ಗೆ ಸಾಕಷ್ಟು ಟೀಕೆಗಳು ಇರಬಹುದು. ಆದರೆ ಈ ಒಂದು ಭೇಟಿಯಿಂದ ಜಾಗತಿಕ ರಾಷ್ಟ್ರಗಳ ಎದುರು ಭಾರತ ತನ್ನ ತಾಕತ್ತು ಮತ್ತು ಸ್ಥಾನಮಾನ ಏನು ಎನ್ನುವುದನ್ನು ತೋರಿಸಿಕೊಟ್ಟಿದೆ.

ಟಾಪ್ ನ್ಯೂಸ್

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.