ಧನಯೋಗ ಬೇಕು, ಅದರಿಂದ ಸುಖ ಪಡಲು ಅದೃಷ್ಟವೂ ಇರಬೇಕು


Team Udayavani, Mar 26, 2016, 8:32 AM IST

7.jpg

ಹಿಂದಿನ ವಾರ ಧನಯೋಗ, ಧನಲಾಭ, ಧನಲಾಭದ್ದೂ ಪ್ರಾರಬ್ಧಗಳು ಸುತ್ತಿಕೊಳ್ಳುವ ಅಸಂಗತೆಗಳ ಬಗ್ಗೆ ಬರೆದಿದ್ದೆ. ಮುಖ್ಯವಾಗಿ ಗುರು, ಶುಕ್ರ, ಬುಧ, ಗ್ರಹಗಳು ಕೂಡಾ ಧನಲಾಭ ಅಥವಾ ಧನಗಳಿಕೆಯ ವಿಚಾರದಲ್ಲಿ ಮಹತ್ವದ ಪಾತ್ರ ನಿರ್ವಸುತ್ತದೆ ಯಾದರೂ ಚಂದ್ರ,ಕುಜ ಹಾಗೂ ಶನಿ ಗ್ರಹಗಳು ಜನ್ಮಕುಂಡಲಿಯ ಮೂಲಕ ಒಬ್ಬ ವ್ಯಕ್ತಿಯ ಜಾತಕದಲ್ಲಿ ನಿರ್ವಹಿಸುವ ಭೂಮಿಕೆಗೆ ಪ್ರತ್ಯೇಕವಾದದ್ದೊಂದು ತೂಕವೇ ಇದೆ. ಸೂರ್ಯ,ರಾಹು ಮತ್ತು ಕೇತುಗಳು ಕೂಡಾ ಆರ್ಥಿಕ ವಿಚಾರದಲ್ಲಿ ಸಕಾರಾತ್ಮಕವಾದ ಬಲವನ್ನು ನೀಡಬಲ್ಲವಾದರೂ ಈ ಗ್ರಹಗಳು ಬೇರೊಂದು ಗ್ರಹಗಳ ಜತೆಗೂಡಿದಾಗ, ಧನಹಾನಿಯನ್ನು ಸೃಷ್ಟಿಸುವ ದುಡಿದು ಹಣ ಗಳಿಸಿದರೂ ಉಳಿಸಲಾಗದ ಪರದಾಟಗಳನ್ನು ಸೃಷ್ಟಿಸಿಬಿಡುತ್ತದೆ. ಚಂದ್ರ, ಕುಜ ಹಾಗೂ ಶನಿಗ್ರಹಗಳು ವಿಪತ್ತುಗಳನ್ನು ಸೃಷ್ಟಿಸಬಲ್ಲವಾದರೂ ಆರ್ಥಿಕವಾಗಿ ಒಬ್ಬ ವ್ಯಕ್ತಿಯನ್ನು ಬಲಾಡ್ಯವಾಗಿಸುವಲ್ಲಿ ಹಲವು ಅನ್ಯರೀತಿಯ ಜಿಗುಟುತನ, ಸ್ಥೈರ್ಯ ಮುನ್ನುಗ್ಗುವಿಕೆಗಾಗಿನ ಪ್ರೇರಣೆ ನೀಡಿ ಮುಂದಡಿ ಇಡಲು ತುಡಿತಗಳನ್ನು ಸೃಷ್ಟಿಸುತ್ತದೆ. ಈ ಗ್ರಹಗಳು ಏಟು ನೀಡಿದರೆ ಅದು ಬಹುದೊಡ್ಡ ಏಟೇ ಆಗಿರುತ್ತದೆ.

ಆಲ್‌ ಫ್ರೆಡ್‌ ನೋಬಲ್‌, ಅಂಬಾನಿ, ಬಿಲ್‌ ಗೇಟ್ಸ್‌ ಇತ್ಯಾದಿ
ಹೆಸರಿಸುತ್ತಾ ಹೋದರೆ ನೊಬೆಲ್‌, ಅಂಬಾನಿ, ಬಿಲ್‌ಗೇಟ್ಸ್‌ ಮಿತ್ತಲ್‌ ಮುಂತಾಗಿ ನೂರಾರು ಹೆಸರುಗಳನ್ನು ಹೇಳಬಹುದು. ಸೂಕ್ಷ್ಮವಾದ ನೆಲೆಯಲ್ಲಿ ಇವರುಗಳು ಧನವಂತರಾಗವ ಭಾಗ್ಯವನ್ನು ಹುಟ್ಟಿನಿಂದಲೇ ಪಡೆದವರಲ್ಲ. ಬಾಲ್ಯದಲ್ಲಿನ ಬಡತನ ಆರ್ಥಿಕತೆಯಲ್ಲಿನ ಪೂರ್ವಾಶ್ರಮದ ಬವಣೆಗಳು ಇತ್ಯಾದಿ ಹೇರಳವೇ ಆಗಿದ್ದ ಇವರುಗಳ ವಿಚಾರದಲ್ಲಿ. ಆದರೂ ನೊಬೆಲ್‌ ವಿಚಾರ ಗಮನಿಸಿ. ತನ್ನ ಸಂಶೋಧನೆಯಾದ ಡೈನಾಮೈಟ್‌ ಸಂಶೋಧನೆಯ ಮೂಲಕವಾಗಿ ಅಪಾರವಾದ ಸಂಪತ್ತನ್ನು ಗಳಿಸಿದ. ಚಂದ್ರ ಹಾಗೂ ಕುಜ ಗ್ರಹಗಳ ಕೇಂದ್ರಾಧಿಪತ್ಯ ಯೋಗ ಚಂದ್ರನ ದುಷ್ಟತನವನ್ನು ನಾಶ ಮಾಡಿತು. ಯೋಗಕಾರಕನಾದ ಶನೈಶ್ಚರ ನೀಚಭಂಗ ರಾಜಯೋಗಕ್ಕೆ ಕಾರಣನಾದ ಶುಕ್ರನ ಜತೆ ಸೇರಿ ಉತ್ತಮವಾದ ಕೆಲಸಕ್ಕೆ ತಳಹದಿಯಾಗುವ ಉನ್ನತ ಧ್ಯೇಯವೊಂದನ್ನು ನೊಬೆಲ್‌ಗೆ ಕರುಣಿಸಿದ. ಇಂದೂ ನೊಬೆಲ್‌ ಪುರಸ್ಕಾರ ಧನಗಳಿಕೆಗಾಗಿನ ನೊಬೆಲ್‌ ಪರಿಶ್ರಮªಲ್ಲಿ ದಿವ್ಯತೆ ಒದಗಿಸಿದೆ. ಚಂದ್ರ, ಕುಜ ಹಾಗೂ ಶನೈಶ್ಚರರು ಈ ಸಿದ್ಧಿಯನ್ನು ನೊಬೆಲ್‌ಗೆ ಕೊಡಮಾಡಿದರು. ಇಂದೂ ನೊಬೆಲ್‌ ಜನಮಾನಸದಲ್ಲಿ ಜೀವಂತ. 

ಇನ್‌ಫಾರ್ಮೇಷನ್‌ ಟೆಕ್ನಾಲಜಿಯಲ್ಲಿ ದೊಡ್ಡ ಕ್ರಾಂತಿಗೆ ಕಾರಣನಾದ ಹರಿಕಾರ ಅಮೆರಿಕಾದ ಬಿಲ್‌ ಗೇಟ್ಸ್‌. ಜಗತ್ತಿನ ಪ್ರಮುಖಾತಿ ಪ್ರಮುಖ ಶ್ರೀಮಂತರಲ್ಲಿ ಒಬ್ಬ. ಅಸ್ತಂಗತ ದೋಷ ಕಳೆದುಕೊಂಡ ಉತ್ಛ ಶನಿಗ್ರಹ ಆರ್ಥಿಕ ಸ್ಥಾನದ ಅಧಿಪತಿಯಾದ ಸೂರ್ಯನ ಮೂಲಕ ಬಿಲ್‌ ಗೇಟ್ಸ್‌ ಗೆ ನೀಚಭಂಗ ರಾಜಯೋಗ ಕೊಡಮಾಡಿತು. ಕುಜ ಹಾಗೂ ಚಂದ್ರರು ಬಲಾಡ್ಯರಾದ ಧೈರ್ಯ ಹಾಗೂ ಭಾಗ್ಯಸ್ಥಾನಗಳನ್ನು ಸಂಪನ್ನಗೊಳಿಸಿ ಧನದೇವತೆ ಮಹಾಲಕ್ಷ್ಮೀ  ಬಿಲ್‌ ಗೇಟ್ಸ್‌ಗೆ ಒಲಿಯುವಂತೆ ಮಾಡಿದರು. ಪರಿಶ್ರಮದ ಕುರಿತಾದ ಸಂಕಲ್ಪ ಧೈರ್ಯ ಸ್ಥೈರ್ಯಗಳನ್ನೂ ಕುಜ ಒದಗಿಸಿದ್ದೂ ಗಮನಾರ್ಹ. ಧೀರೂಭಾಯಿ ಅಂಬಾನಿ ಸಹ ಮುಂಬಯಿ ಎಂಬ ಮಾಯಾನಗರಿಗೆ ಬರುವಾಗ ಆರ್ಥಿಕವಾಗಿ ಬಲಾಡ್ಯರಲ್ಲ. ಏನೋ ಕಿಂಚತ್‌ ಹಣ ಸಂಪಾದಿಸುವ ಮನೋಗತದೊಂದಿಗೆ ಬಂದರಾದರೂ ಶನೈಶ್ಚರ ಧೀರೂಭಾಯಿ ಅವರನ್ನು ಆರ್ಥಿಕವಾಗಿ ಪ್ರಚಂಡರನ್ನಾಗಿಸಿದ. ಚಂದ್ರ, ಗುರು ಕೇಂದ್ರ ಯೋಗ ಕುಜ ಸಂಪನ್ನ ಭಾಗ್ಯಯೋಗ ಎಲ್ಲಾ ಸೇರಿ ಪ್ರಪಂಚದ ಕೆಲವೇ ಶ್ರೀಮಂತರ ಪಟ್ಟಿಗೆ ಅಂಬಾನಿ ಸೇರಿದರು. ಉತ್ತಮವಾದ ಮಾನವ ಸಂಪನ್ಮೂಲ ಶಕ್ತಿಯನ್ನು ಶನೈಶ್ಚರ ಸ್ವಾಮಿ ಅಂಬಾನಿಯವರಿಗೆ ಒದಗಿಸಿಕೊಟ್ಟ. ಉದ್ಯಮಿಯಾಗಿ ಸಫ‌ಲತೆ ಪಡೆದಿರುವ ಅವರ ಯಶಸ್ಸಿನ ಹಿಂದಿನ ಶಕ್ತಿ ಲೇಬರ್‌ ಶಕ್ತಿಯನ್ನು ಯುಕ್ತವಾಗಿ ಕ್ರೋಢೀಕರಿಸಿಕೊಂಡಿದ್ದು ಇದಕ್ಕೆ ಶನೈಶ್ಚರನೇ ಕಾರಣನಾಗಿದ್ದಾನೆ. ಶನಿದಶಾದ ಸಂದರ್ಭದಲ್ಲಿ ಅವರು ಮುಟ್ಟಿದ್ದೆಲ್ಲಾ ಚಿನ್ನವಾಗುವ ಸ್ಥಿತಿ ಬಂದಿತ್ತು. ಆದರೆ ಅದೇ ಕಾಲಕ್ಕೆ ಕೂಡಿಬಂದ ಸಾಡೇ ಸಾತಿ ಪೀಡೆ ಜೀವನ್ಮುಕ್ತಿಗೂ ಕಾರಣವಾಯ್ತು. ಶನೈಶ್ಚರನು ಮಾರಕ ಗ್ರಹವೂ ಆಗಿ ಚಂದ್ರ ಮರಣಸ್ಥಾನದ ಅಧಿಪತಿಯಾಗಿ ಶನಿಚಂದ್ರರ ಕೊಂಡಿಯ ಕಾರಣದಿಂದ ಉಂಟಾಗುವ ಶನಿಪೀಡೆ ಅಂಬಾನಿಯವರ ಇಹಲೋಕದ ವ್ಯಾಪಾರಕ್ಕೆ ಸಮಾಪ್ತಿ ತಂದಿತ್ತು. ಎಪ್ಪತ್ತು ವಸಂತಗಳನ್ನು ಅಂಬಾನಿ ಆಗಲೇ ಜೀವನದ ಸಂದರ್ಭದಲ್ಲಿ ಮುಗಿಸಿದ್ದರು.

ಧನನಾಶಕ್ಕೂ ಕಾರಣರಾಗುವ ಚಂದ್ರ, ಕುಜ, ಹಾಗೂ ಶನೈಶ್ಚರರು
ಚಂದ್ರ ಕುಜ ಹಾಗೂ ಶನೈಶ್ಚರರಲ್ಲಿ ಯಾರೇ ಒಬ್ಬರಿಗೆ ದೋಷ ಒದಗಿದ್ದರೂ ಅಮೂಲ್ಯವಾಗಬೇಕಾದ ಧನಯೋಗದ ಸಿದ್ಧಿಗೆ ಭಂಗ ತರುತ್ತಾರೆಂಬುದು ನಿಶ್ಚಿತ. ಚಂದ್ರನ ಮೂಲಕ ಧನಸಂಚಯನಕ್ಕೆ ಬೇಕಾದ ಮಾನಸಿಕ ಬಲಾಡ್ಯತೆ ಚಂಚಲತೆಗೆ ಕಾರಣವಾಗದ ಏಕಾಗ್ರತೆಗಳು ಸಿದ್ಧಿಗೊಳ್ಳುವುದರಿಂದ ಧನಸಂಪಾದನೆಯಲ್ಲಿ ಚಂದ್ರನ ಪಾತ್ರ ಬಹು ಮುಖ್ಯವಾದದ್ದು. 

ಹಾಗೆಯೇ ಸ್ಥೈರ್ಯ ಧೈರ್ಯ ಜಿಗುಟುತನಗಳನ್ನು ಕುಜಗ್ರಹವು ಒದಗಿಸುವುದರಿಂದ ಒಬ್ಬರ ಜಾತಕದಲ್ಲಿ ಕುಜ ಗ್ರಹದ ಬಲಾಡ್ಯತೆಗೆ ಅದರದ್ದೇ ಆದ ಸಂಪನ್ನತೆ ಇದೆ. ನಂಬಿಗಸ್ಥ ಆಳುಕಾಳುಗಳು ಶ್ರಮಜೀವಿಗಳು ಸಹಾಯಕರು ಕೂಡಿಬರಲು ಶನೈಶ್ಚರ ಸ್ವಾಮಿಯ ಸಿದ್ಧಿಗೆ ಕಾರಣವಾಗುತ್ತದೆ. ಹೀಗಾಗಿ ಜಾತಕ ಕುಂಡಲಿಯಲ್ಲಿ ಧನಪ್ರಾಪ್ತಿಗೆ ಶನೈಶ್ಚರ ಸ್ವಾಮಿಯ ಅನುಗ್ರಹವು ದಿವ್ಯಕ್ಕೆ ದಾರಿಯಾಗುವ ಸೋಜಿಗಕ್ಕೆ ಅವಕಾಶಗಳು ಬೇಕಾಗುತ್ತದೆಂಬುದು ಗಮನಾರ್ಹ.

ಒಂದೊಮ್ಮ ಧನಯೋಗಗಳು ಬೇರೆ ಕಾರಣಕ್ಕಾಗಿ ಹೇರಳವಾಗಿಯೇ ಇದ್ದರೂ ಚಂದ್ರ ಕುಜ ಅಥವಾ ಶನಿಗ್ರಹಗಳಿಗೆ ದೋಷ ಇದ್ದಲ್ಲಿ ಆ ಜಾತಕ ಕುಂಡಲಿಯ ವ್ಯಕ್ತಿಗೆ ಧನಲಾಭದ ಅದೃಷ್ಟ ಇದ್ದರೂ ಜೀವನದ ಸಂದರ್ಭದ ಮಹತಿಕೆಗೆ ಅದು ಕಾರಣವಾಗುವುದಿಲ್ಲ. ಈ ಕುರಿತಾಗಿ ವಿವರವಾಗಿ ಬರೆಯಬಹುದೇ ಹೊರತು ಉದಾಹರಣೆಯಾಗಿ ಕೆಲವು ಹೆಸರುಗಳನ್ನು ನೇರವಾಗಿ ನೀಡಲು ಇದು ಸೂಕ್ತ ಜಾಗವಲ್ಲ. ಆದರೆ ಚಿತ್ರರಂಗದ ಕೆಲ ಮಹಾನ್‌ ತಾರೆಗಳು ರಾಜಕೀಯ ರಂಗದ ಅನೇಕ ಗಣ್ಯ ಮುತ್ಸದ್ಧಿಗಳು ಸಾಂಸ್ಕೃತಿಕ ರಂಗದ ದಿಗ್ಗಜರು ಕ್ರೀಡಾಳುಗಳಾಗಿ ದೇಶಕ್ಕೆ ಸಂಭ್ರಮ ಒದಗಿಸಲು ಕಾರಣವಾಗಿಯೂ ಆರ್ಥಿಕವಾಗಿ ನರಳುತ್ತಿರುವ ಅನೇಕ ಬಲಾಡ್ಯರು ನಮಗೆ ಸಿಗುತ್ತಲೇ ಇರುತ್ತಾರೆ. ಇಂಥವರ ಹೆಸರಿನ ಯಾದಿ ದೊಡ್ಡದೇ ಇದೆ. 

ನಮ್ಮ ದೇಶದ ಮಹಾನ್‌ ಚಲನಚಿತ್ರ ನಟ ನಿರ್ದೇಶಕರೊಬ್ಬರು ಕುಖ್ಯಾತನೊಬ್ಬನ ಬಳಿ ತಮ್ಮ ಚಿತ್ರಗಳಿಗಾಗಿ ಹಣ ಹೊಂದಿಸಿಕೊಳ್ಳುತ್ತಿದ್ದುದು ಮಹಾನ್‌ ನಟಿಯೋರ್ವಳು ಸಾವಿನ ನೆರಳಿನ ದಿನಗಳಲ್ಲಿ ಚಿಕಿತ್ಸೆಗಾಗಿ ಪರದಾಡಿದ್ದು, ವೇದಿಕೆಯ ಮೇಲೆ ಮಹಾನ್‌ ಪ್ರತಿಭಾಶಾಲಿಗಳಾಗಿ ಮಿಂಚುವ ಜನರಿಗೆ ಹಣ ಸಂದಾಯವಾಗುತ್ತಿಂದಂತೆ ಆ ಹಣವನ್ನು ಸರ್ರನೆ ಕಿತ್ತುಕೊಳ್ಳುವ ಕೈಗಳು ಕೇವಲ ಐದುಸಾವಿರ ರೂಪಾಯಿಗಳ ಆದ್ಯತೆ ನೀಗಿಸಿಕೊಳ್ಳಲಾಗದೆ ಪ್ರಮುಖ ಧನಸ್ಥರೊಬ್ಬರ ಬಳಿಯಿಂದ ಕೆಲವರ್ಷಗಳ ಹಿಂದೆ ಅನಿವಾರ್ಯವಾಗಿ ತರಿಸಿಕೊಂಡ.  ಒಂದು ರಾಜ್ಯದ ಮುಖ್ಯಮಂತ್ರಿಗಳೊಬ್ಬರು ಬಿರುದುಬಾವಲಿ ಪುರಸ್ಕಾರಗಳ ರಾಶಿಯೇ ಇದ್ದೂ ಹಣಕ್ಕಾಗಿ ಪರದಾಡುತ್ತಿರುವವರು. ಚಂದ್ರ ಕುಜ, ಶನೈಶ್ಚರರ ಅವಕೃಪೆಗಳಿಗೆ ಒಳಗಾಗದವರೇ ಆಗಿದ್ದಾರೆ. ಹೀಗಾಗಿ ಧನಯೋಗವೂ ಬೇಕು. ಧನಯೋಗದಿಂದ ಸುಖ ಪಡಲು ಅದೃಷ್ಟವೂ ಬೇಕು. 

ಟಾಪ್ ನ್ಯೂಸ್

Arecanut ಚಾಲಿ ಅಡಿಕೆ ಧಾರಣೆ ಏರಿಕೆ; 500 ರೂ. ಹೊಸ್ತಿಲಿನಲ್ಲಿ ಸಿಂಗಲ್‌, ಡಬ್ಬಲ್‌ ಚೋಲ್‌

Arecanut ಚಾಲಿ ಅಡಿಕೆ ಧಾರಣೆ ಏರಿಕೆ; 500 ರೂ. ಹೊಸ್ತಿಲಿನಲ್ಲಿ ಸಿಂಗಲ್‌, ಡಬ್ಬಲ್‌ ಚೋಲ್‌

ರಸ್ತೆ ಬದಿ ತ್ಯಾಜ್ಯ ರಾಶಿ ಬೀಳದಂತೆ ಕ್ರಮ ಕೈಗೊಳ್ಳಿ : ಪಿಡಿಒಗಳಿಗೆ ಜಿ.ಪಂ. ಸಿಇಒ ಸೂಚನೆ

ರಸ್ತೆ ಬದಿ ತ್ಯಾಜ್ಯ ರಾಶಿ ಬೀಳದಂತೆ ಕ್ರಮ ಕೈಗೊಳ್ಳಿ : ಪಿಡಿಒಗಳಿಗೆ ಜಿ.ಪಂ. ಸಿಇಒ ಸೂಚನೆ

4 ದಿನ ಎಲ್ಲೋ ಅಲರ್ಟ್‌; ಸಿಡಿಲಿನಿಂದ ಕೂಡಿದ ಮಳೆ ಸಾಧ್ಯತೆ

Rain 4 ದಿನ ಎಲ್ಲೋ ಅಲರ್ಟ್‌; ಸಿಡಿಲಿನಿಂದ ಕೂಡಿದ ಮಳೆ ಸಾಧ್ಯತೆ

ಒಂದೇ ಮಳೆಗೆ ತುಂಬಿ ಹರಿದ ಮೃತ್ಯುಂಜಯ ನದಿ

ಒಂದೇ ಮಳೆಗೆ ತುಂಬಿ ಹರಿದ ಮೃತ್ಯುಂಜಯ ನದಿ

Wind-Rain: ವಿವಿಧೆಡೆ ಉರುಳಿ ಬಿದ್ದ ಮರಗಳು

Wind-Rain: ವಿವಿಧೆಡೆ ಉರುಳಿ ಬಿದ್ದ ಮರಗಳು

Udupi ಹೊಟೇಲಿಗೆ ಬೆಂಕಿ; ನಂದಿಸಲು ಬಂದ ಅಗ್ನಿಶಾಮಕ ವಾಹನದಲ್ಲಿ ನೀರೇ ಇಲ್ಲ!

Udupi ಹೊಟೇಲಿಗೆ ಬೆಂಕಿ; ನಂದಿಸಲು ಬಂದ ಅಗ್ನಿಶಾಮಕ ವಾಹನದಲ್ಲಿ ನೀರೇ ಇಲ್ಲ!

Udupi ಲೈಂಗಿಕ ದೌರ್ಜನ್ಯ: ಆರೋಪಿಗಳಿಬ್ಬರಿಗೆ ಜೈಲು ಶಿಕ್ಷೆ

Udupi ಲೈಂಗಿಕ ದೌರ್ಜನ್ಯ: ಆರೋಪಿಗಳಿಬ್ಬರಿಗೆ ಜೈಲು ಶಿಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

Arecanut ಚಾಲಿ ಅಡಿಕೆ ಧಾರಣೆ ಏರಿಕೆ; 500 ರೂ. ಹೊಸ್ತಿಲಿನಲ್ಲಿ ಸಿಂಗಲ್‌, ಡಬ್ಬಲ್‌ ಚೋಲ್‌

Arecanut ಚಾಲಿ ಅಡಿಕೆ ಧಾರಣೆ ಏರಿಕೆ; 500 ರೂ. ಹೊಸ್ತಿಲಿನಲ್ಲಿ ಸಿಂಗಲ್‌, ಡಬ್ಬಲ್‌ ಚೋಲ್‌

ರಸ್ತೆ ಬದಿ ತ್ಯಾಜ್ಯ ರಾಶಿ ಬೀಳದಂತೆ ಕ್ರಮ ಕೈಗೊಳ್ಳಿ : ಪಿಡಿಒಗಳಿಗೆ ಜಿ.ಪಂ. ಸಿಇಒ ಸೂಚನೆ

ರಸ್ತೆ ಬದಿ ತ್ಯಾಜ್ಯ ರಾಶಿ ಬೀಳದಂತೆ ಕ್ರಮ ಕೈಗೊಳ್ಳಿ : ಪಿಡಿಒಗಳಿಗೆ ಜಿ.ಪಂ. ಸಿಇಒ ಸೂಚನೆ

4 ದಿನ ಎಲ್ಲೋ ಅಲರ್ಟ್‌; ಸಿಡಿಲಿನಿಂದ ಕೂಡಿದ ಮಳೆ ಸಾಧ್ಯತೆ

Rain 4 ದಿನ ಎಲ್ಲೋ ಅಲರ್ಟ್‌; ಸಿಡಿಲಿನಿಂದ ಕೂಡಿದ ಮಳೆ ಸಾಧ್ಯತೆ

ಒಂದೇ ಮಳೆಗೆ ತುಂಬಿ ಹರಿದ ಮೃತ್ಯುಂಜಯ ನದಿ

ಒಂದೇ ಮಳೆಗೆ ತುಂಬಿ ಹರಿದ ಮೃತ್ಯುಂಜಯ ನದಿ

Wind-Rain: ವಿವಿಧೆಡೆ ಉರುಳಿ ಬಿದ್ದ ಮರಗಳು

Wind-Rain: ವಿವಿಧೆಡೆ ಉರುಳಿ ಬಿದ್ದ ಮರಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.