6 ತಿಂಗಳೊಳಗೆ ಎನ್ಐಟಿಕೆ, ಬ್ರಹ್ಮರಕೂಟ್ಲು ಟೋಲ್ ಸ್ಥಗಿತ
Team Udayavani, Feb 16, 2017, 3:35 AM IST
ಮಂಗಳೂರು: ಕೇಂದ್ರ ಸರಕಾರಿ ಟೋಲ್ಗಳೆಂದು ಪರಿಗಣಿತ ಸುರತ್ಕಲ್ನ ಎನ್ಐಟಿಕೆ ಹಾಗೂ ಬಂಟ್ವಾಳ ಬ್ರಹ್ಮರಕೂಟ್ಲು ಟೋಲ್ ಮುಂದಿನ ಆರು ತಿಂಗಳ ಒಳಗೆ ಸಂಪೂರ್ಣ ಸ್ಥಗಿತವಾಗಲಿದೆ ಎಂದು ದ.ಕ. ಸಂಸದ ನಳಿನ್ ಕುಮಾರ್ ಕಟೀಲು ತಿಳಿಸಿದ್ದಾರೆ.
ಎನ್ಐಟಿಕೆ ಟೋಲ್ ಹೆಜಮಾಡಿಗೆ ಸ್ಥಳಾಂತರವಾಗಧಿಲಿದೆಯೇ ಎಂಬ ಬಗ್ಗೆ ಮಂಗಳೂರಿನಲ್ಲಿ ಬುಧವಾರ ಸುದ್ದಿಗಾರರ ಪ್ರಶ್ನೆಗೆ, ರಾ.ಹೆ. ಪ್ರಾಧಿಕಾರದ ಯೋಜನಾ ನಿರ್ದೇಶಕ ವಿಜಯ್ ಕುಮಾರ್ ಅವರಲ್ಲಿ ಮಾಹಿತಿ ಪಡೆದು ಮಾತನಾಡಿದ ಸಂಸದ ನಳಿನ್ ಕುಮಾರ್, ಸರಕಾರಿ ಟೋಲ್ಗಳಾಗಿರುವ ಬ್ರಹ್ಮರಕೂಟ್ಲು ಹಾಗೂ ಸುರತ್ಕಲ್ ಟೋಲನ್ನು ಮುಂದಿನ 6 ತಿಂಗಳೊಳಗೆ ಪೂರ್ಣ ಸ್ಥಗಿತ ಮಾಡಲಾಗುತ್ತದೆ. ದೇಶದಲ್ಲಿ ಸರಕಾರಿ ಟೋಲ್ಗಳು ಇರದಂತೆ ನೋಡಿಕೊಳ್ಳುವ ಕೇಂದ್ರ ಮೋಟಾರು ಕಾಯ್ದೆಯನ್ವಯ ಈ ಎರಡು ಟೋಲ್ಗಳು ಸ್ಥಗಿತಗೊಳ್ಳಲಿವೆ. ಈ ಬಗ್ಗೆ ಅಂತಿಮ ನಿರ್ಧಾರವನ್ನು ಕೇಂದ್ರ ಸರಕಾರ ತೆಗೆದುಕೊಳ್ಳಲಿದೆ ಎಂದರು.
ರಾ.ಹೆ. 75ರಲ್ಲಿ (ಹಿಂದಿನ ರಾ.ಹೆ. 48)ಬಿ. ಮೂಡ ಗ್ರಾಮದ ಬ್ರಹ್ಮರಕೂಟ್ಲು ಟೋಲ್ಗೇಟ್ ಹಾಗೂ ಮಂಗಳೂರು-ಉಡುಪಿ ರಾ.ಹೆ. 66 (ಹಳೆಯ ರಾ.ಹೆ. 17)ರ ಸುರತ್ಕಲ್ ಎನ್ಐಟಿಕೆ ಬಳಿಯ ಟೋಲ್ ಕರಾವಳಿ ಭಾಗದಲ್ಲಿ ಭಾರೀ ವಿರೋಧ ಎದುರಿಧಿಸುತ್ತಾ ಆರಂಭವಾದ ಕೇಂದ್ರಗಳು. ವಿವಿಧ ಕಾರಣಗಳಿಂದ ಈ ಎರಡೂ ಟೋಲ್ಗಳು ರಾಜ್ಯಾದ್ಯಂತ ಸುದ್ದಿಗೂ ಗ್ರಾಸವಾಗಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನಮೀಬಿಯಾ ವಿರುದ್ದ ಗೆದ್ದ ಇಂಗ್ಲೆಂಡ್; ಸೂಪರ್ 8ರಲ್ಲಿ ಒಂದು ಕಾಲಿಟ್ಟು ಕುಳಿತ ಬಟ್ಲರ್ ಪಡೆ
Udupi: ಎಸೆಸೆಲ್ಸಿ ಫಲಿತಾಂಶ ಶ್ರೇಷ್ಠತೆಗೆ ವಿನೂತನ ಪ್ರಯೋಗ
Daily Horoscope:ವಸ್ತ್ರ,ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ,ಮಿತ್ರರೊಂದಿಗೆ ಪ್ರವಾಸ
ಪ್ಲಾಸ್ಟಿಕ್ ಆಯುವ ಇಸ್ಮಾಯಿಲ್ರಿಂದ ಮನೆ ಮನೆಗೆ ಹೋಗಿ ಪರಿಸರ ಜಾಗೃತಿ
ಕಂಬಳಕ್ಕೆ ಸರಕಾರದಿಂದ ಸಿಗದ ಅನುದಾನ:ಇಂದು ತುರ್ತು ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.