ತೆಕ್ಕಟ್ಟೆ: ಅಪಾಯದಲ್ಲಿದ್ದ ನವಿಲಿನ ರಕ್ಷಣೆ
Team Udayavani, May 8, 2024, 6:25 PM IST
ತೆಕ್ಕಟ್ಟೆ: ಇಲ್ಲಿನ ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವೃತ್ತ ಮುಖ್ಯೋಪಾಧ್ಯಾಯ ಶ್ರೀನಿವಾಸ ಅಡಿಗ ಅವರ ಮನೆಯ ಸಮೀಪದ ಕೆರೆಯೊಂದರಲ್ಲಿ ಬಲೆಗೆ ಸಿಲುಕಿ ಅಪಾಯದಲ್ಲಿದ್ದ ನವಿಲೊಂದನ್ನು ಜಿ.ಪಂ.ಶಿಕ್ಷಣ ಮತ್ತು ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಗಣಪತಿ ಟಿ.ಶ್ರೀಯಾನ್ ರಕ್ಷಿಸಿ ಮಾನವೀಯತೆ ಮೆರೆದ ಘಟನೆ ಮೇ.8 ರಂದು ಸಂಭವಿಸಿದೆ.
ಕಳೆದ ಒಂದು ದಿನಗಳಿಂದಲೂ ನವಿಲೊಂದು ಆಕ್ರಂದಿಸುತ್ತಿರುವುದನ್ನು ನೋಡಿದ ಇಲ್ಲಿನ ಸ್ಥಳೀಯ ನಿವಾಸಿ ಶಾರದಾ ಅಡಿಗ, ಕೆರೆ ಬಳಿ ತೆರಳಿದಾಗ ನವಿಲಿನ ಕಾಲಿಗೆ ಬಲೆ ಸಿಲುಕಿ ಅಪಾಯದಲ್ಲಿರುವುದು ಗಮನಕ್ಕೆ ಬಂದಿದೆ.
ತತ್ಕ್ಷಣವೇ ಜಿ.ಪಂ.ಶಿಕ್ಷಣ ಮತ್ತು ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಗಣಪತಿ ಟಿ.ಶ್ರೀಯಾನ್ ಅವರಿಗೆ ಕರೆ ಮಾಡಿ ತಿಳಿಸಿದಾಗ, ಅವರು ಸ್ಥಳಕ್ಕೆ ಧಾವಿಸಿ ನವಿಲಿನ ಕಾಲಿಗೆ ಸಿಲುಕಿಕೊಂಡಿರುವ ಬಲೆಯನ್ನು ಕತ್ತರಿಯ ಸಹಾಯದಿಂದ ಬೇರ್ಪಡಿಸುವ ಮೂಲಕ ಅಪಾಯದಲ್ಲಿ ಸಿಲುಕಿದ್ದ ನವಿಲಿಗೆ ಜೀವದಾನ ಮಾಡಿದರು.
ಈ ಸಂದರ್ಭದಲ್ಲಿ ಗೀತಾ ಪುರಾಣಿಕ್ ಹಾಗೂ ಮೀನಾಕ್ಷಿ ಅವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Channagiri ಠಾಣೆ ಧ್ವಂಸ, ಆದಿಲ್ ಸಾವಿನ ಪ್ರಕರಣಗಳ ಹೆಚ್ಚಿನ ತನಿಖೆ: ಡಾ| ಜಿ. ಪರಮೇಶ್ವರ್
ಸಿಂಪ್ಲಿಲರ್ನ್ ಸಮೀಕ್ಷೆ: ಶೇ.85ಷ್ಟು ಮಂದಿ, ಬಡ್ತಿ, ಸಂಬಳ ಹೆಚ್ಚಳದ ಬಗ್ಗೆ ಆಶಾವಾದಿಗಳು!
Madhu Bangarappa: ನೀತಿ ಸಂಹಿತೆ ಮುಗಿಯುತ್ತಿದ್ದಂತೆ ಇನ್ನಷ್ಟು ಶಿಕ್ಷಕರ ನೇಮಕ: ಮಧು
Graduates ಸಮಸ್ಯೆಗೆ ಧ್ವನಿಯಾಗಿ ವಿಧಾನ ಪರಿಷತ್ ನಲ್ಲಿ ಕೆಲಸ ಮಾಡುತ್ತೇನೆ: ಡಾ.ಸರ್ಜಿ
“ಮೋದಿಗೆ ಗಾಂಧಿ ಪುಸ್ತಕ ಕಳುಹಿಸಿ ಕೊಡುತ್ತೇನೆ’: ಕಿಮ್ಮನೆ ರತ್ನಾಕರ್