ಘಲ್ಲು ಘಲ್ಲೆನುತಾವ್‌ ಒಡವೆ, ಗೆಜ್ಜೆ ಮಾತಾಡುತಾವೋ, ಮೈಯೆಲ್ಲಾ!


Team Udayavani, Oct 14, 2020, 6:00 PM IST

pjimage (8).jpg

“ಗೆಜ್ಜೆ ಗೆಜ್ಜೆ ಮಾತಾಡು ..’ ಅಂತ ಗೆಜ್ಜೆ ಹಾಕ್ಕೊಂಡು ಲಜ್ಜೆಯಿಂದ ನಿಂತ ಪೋರಿಯನ್ನು ಮಾತನಾಡಿಸಿದೋರು ನಮ್ಮ ಜನ. ಈಗ ಗೆಜ್ಜೆ ದೇಸಿ ಟ್ರೆಂಡ್‌ ಆಗಿ ಹುಡುಗೀರ ಫೇವರೆಟ್‌ ಆಕ್ಸೆಸರಿ ಲೀಸ್ಟ್‌ನಲ್ಲಿ ಸೇರ್ಕೊಂಡಿದೆ. ಕಾಲ್ಗೆಜ್ಜೆ ವಿಷ್ಯ ಹೇಳ್ತಿಲ್ಲ, ಅವಳ ಮೂಗುತಿ ಮೇಲೆ, ಕಿವಿಯೋಲೆಯಾಗಿ, ಕೈ ಬೆರಳ ಉಂಗುರವಾಗಿ ಕಿಣಿ ಕಿಣಿ ನಾದ ಹೊಮ್ಮಿಸೋ ಮೂಗುತಿ ಕತೆ ಇದು.
*
ಗೆಜ್ಜೆ ಅಂದರೆ ಅವಳು, ಗೆಜ್ಜೆಯನ್ನು ಮಾತನಾಡಿಸುವ ನೆವದಲ್ಲಿ ಅವಳ ಕುಶಲ ವಿಚಾರಿಸುತ್ತಾನೆ ಹುಡುಗ. ಅವಳ ದನಿ ಕೆಲವೊಮ್ಮೆ ಅವನಿಗೆ ಗೆಜ್ಜೆಯಂತೆ ಕೇಳಿಸೋದಿದೆ, ನಗುವಂತೂ ಥೇಟ್‌ ಗೆಜ್ಜೆಯ ಝಲ್‌ ಝಲ್‌ ನಾದವೇ.

ಬಹಳ ಹಿಂದಿನಿಂದಲೇ ಗೆಜ್ಜೆಗೊಂದು ರೊಮ್ಯಾಂಟಿಕ್‌ ಕಲ್ಪನೆ ಇದೆ. ಗೆಜ್ಜೆ ಅಂದರೆ ಸಾಕು, ಮನಃಪಟಲದಲ್ಲಿ ಗೆಜ್ಜೆ ತೊಟ್ಟ ಲಂಗದಾವಣಿಯ ಹಳ್ಳಿ ಹುಡುಗಿ ಇಣುಕುತ್ತಾಳೆ. ಮಾಡರ್ನ್ ಹುಡುಗಿಯರು ಗೆಜ್ಜೆ ಹಾಕ್ಕೊಳ್ಳೋದೆ ಇಲ್ವಲ್ಲಾ? ಅಂತ ಗೊಣಗೋ ಹಾಗಿಲ್ಲ. ಈ ಜನರೇಶನ್‌ ಹೆಣ್ಮಕ್ಕಳು ಕಾಲಿಗೆ ಗೆಜ್ಜೆ ತೊಡುತ್ತಾರೋ ಇಲ್ಲವೋ ಬೇರೆ ಮಾತು, ಆದರೆ ಗೆಜ್ಜೆ ಪ್ರೀತಿ ಹೆಣ್ಮನಸ್ಸಿಂದ ದೂರ ಸರಿದಿಲ್ಲ ಅನ್ನೋದು ಇತ್ತಿತ್ತೀಚೆಗೆ ಸ್ಪಷ್ಟವಾಗ್ತಿದೆ. ಈ ಕಾಲದ ಹುಡುಗೀರು ಹಳತರಲ್ಲೇನೋ ಹೊಸತು ಹುಡುಕುವ ಜಾಯಮಾನದವರು. ಹಳೆಯ ಗೆಜ್ಜೆಯನ್ನು ಹಳಬರ ಹಾಗೆ ಕಾಲಿಗೆ ಕಟ್ಟಿಕೊಂಡು ಓಡಾಡುವುದರಲ್ಲಿ ಅವರಿಗೆ ಅಂಥ ಖುಷಿ ಏನಾಗಲ್ಲ, ಹಾಗಂತ ಗೆಜ್ಜೆಯ ಕಿಣಿ ಕಿಣಿ ನಾದದಿಂದ ಹಿಂದೋಡಲು ಮನಸ್ಸು ಕೇಳಲ್ಲ. ಅದಕ್ಕೆ ಗೆಜ್ಜೆಯಲ್ಲಿ ಹೊಸ ಹೊಸ ಸ್ಟೈಲ್‌ಗ‌ಳ ಬಗ್ಗೆ ಅವರು ಯೋಚಿಸ್ತಾರೆ. ಇಂಥ ಕ್ರಿಯೇಟಿವ್‌ ಥಿಂಕಿಂಗ್‌ನಲ್ಲಿ ಹೊಳೆದದ್ದೇ, ಗೆಜ್ಜೆಯ ಮೂಗುತಿ, ಗೆಜ್ಜೆಯ ಯಿಯರ್‌ ರಿಂಗ್‌, ಗೆಜ್ಜೆಯ ಕೈ ಬಳೆ, ಗೆಜ್ಜೆಯ ಸರ ..ಹೀಗೆ.

ಇಂಥ ಸೊಗಸುಗಾರ್ತಿ ಪುಟ್ಟಮ್ಮಂದಿರಿಗೆ ಇದ್ದದ್ದನ್ನು ಇದ್ದ ಹಾಗೆ ಒಪ್ಪಿಕೊಳ್ಳೋದು ಕಷ್ಟ. ಎಲ್ಲವನ್ನೂ ತಮ್ಮ ಮೂಗಿನ ನೇರಕ್ಕೇ ನೋಡೋ ಸ್ವಭಾವ. ಇದಕ್ಕೊಂದು ಕ್ರಿಯೇಟಿವ್‌ ಛಾಯೆಯೂ ಇರೋ ಕಾರಣ ಗೆಜ್ಜೆಯ ವೈವಿಧ್ಯಮಯ ರೂಪಗಳ ಆವಿಷ್ಕಾರವಾಗಿದೆ.

ಮೊನ್ನೆ ಮೊನ್ನೆ ಎಂ.ಜಿ ರೋಡ್‌ನ‌ಲ್ಲಿ ಕಾಲೇಜ್‌ ಹುಡುಗಿಯೊಬ್ಬಳು ತನ್ನ ವಿಭಿನ್ನ ಡ್ರೆಸಿಂಗ್‌ ಸ್ಟೈಲ್‌ನಿಂದಲೇ ಇತರರ ಗಮನ ಸೆಳೆಯುತ್ತಿದ್ದಳು. ಅವಳ ಉಡುಗೆಯಲ್ಲೆಲ್ಲ ದೇಸಿತನ ಎದ್ದುಕಾಣುತ್ತಿತ್ತು. ಬೆಳ್ಳನೆಯ ಮಂಜಿನಂತ ಟಾಪು, ಅದಕ್ಕೊಂದು ದೊಗಲೆ ಪ್ಯಾಂಟ್‌. ಗಾಳಿಗೆ ಮನಸೋ ಇಚ್ಛೆ ಹಾರಾಡ್ತಿದ್ದ ಕೂದಲು, ಇದೆಲ್ಲಕ್ಕಿಂತ ಗಮನಸೆಳೆದದ್ದು ಸಂಸ್ಕೃತದ ಶಬ್ಧವಿದ್ದ ಬೆಳ್ಳಿಯ ಬ್ಯಾಡ್ಜ್, ಅದರ ತುದಿಯಲ್ಲೆರಡು ಗೆಜ್ಜೆ, ಹೌದೋ ಅಲ್ಲವೋ ಎಂಬಹಾಗೆ ಶಬ್ಧ ಮಾಡುತ್ತಿದ್ದವು. ಆಕೆಯ ಕಾಲಿನ ಕಡೆ ನೋಡಿದರೆ ಅವು ಗೆಜ್ಜೆಗಳಿಲ್ಲದೆ ಬೋಳಾಗಿದ್ದವು.

“ನತ್ತು’ ಸಾಂಪ್ರದಾಯಿಕವಾಗಿಯೂ ಚೆಂದ, ಮಾಡರ್ನ್ ಡಿಸೈನ್‌ ಇದ್ರೂ ಅಂದ, ನತ್ತಿನಲ್ಲಿ ಅವಳಿಗಷ್ಟೇ ಕೇಳುವಂತೆ ಗೆಜ್ಜೆ ಇದ್ರೆ ಕ್ಯೂಟ್‌ನೆಸ್‌ ಇನ್ನೂ ಒಂಚೂರು ಹೆಚ್ಚಾಗುತ್ತದೆ. ಇಲ್ಲೊಬ್ಬ ಹೆಣ್ಮಗಳು ಸಂಪಿಗೆ ನಾಸಿಕಕ್ಕೆ ಮೂಗುಬೊಟ್ಟು ಸಿಕ್ಕಿಸಿಕೊಂಡು ಅದಕ್ಕೆರಡು ಗೆಜ್ಜೆಗಳ ಕಿಂಕಿಣಿಯನ್ನೂ ಸೇರಿಸಿದ್ದಾಳೆ.

ಕಿವಿಯೋಲೆಗಳಲ್ಲಿ ಗೆಜ್ಜೆ ಬರೋದು ಅಪರೂಪ ಏನಲ್ಲ. ಸಿಲ್ವರ್‌ ಯಿಯರ್‌ರಿಂಗ್‌ ತಗೊಂಡರೆ ಅದರಲ್ಲಿ  ತರಹೇವಾರಿ ವಿನ್ಯಾಸದ ಗೆಜ್ಜೆಗಳಿರುತ್ತವೆ. ಆದರೆ ಕಿವಿಯ ಮೇಲೆ ಯಿಯರ್‌ಕಫ್ನಲ್ಲಿ ಈಕೆ ಗೆಜ್ಜೆ ತೊಟ್ಟಿದ್ದಾಳೆ. ಇವು ಕಾಲ್ಗೆಜ್ಜೆಗಳಂತೆ ಘಲ್‌ ಘಲ್‌ ಅನ್ನಲಾರವು, ಆದರೆ ಪಕ್ಕದಲ್ಲೇ ಇರೋ ಕಿವಿಗೆ ಅವು ಒಂದಕ್ಕೊಂದು ತಾಗಿದಾಗ ಹೊಮ್ಮುವ ನಾದದ ಅನುಭೂತಿಯಾಗಬಹುದು.

ಇದಲ್ಲದೇ ಕೈ ಬೆರಳಿಗೆ ಉಂಗುರದ ಜೊತೆಗೆ ಗೆಜ್ಜೆ ಪೋಣಿಸಿದ್ದರೆ ಅದೊಂಥರ ಚೆಂದ, ಬ್ರೇಸ್‌ಲೈಟ್‌ಗಳಲ್ಲೂ ಗೆಜ್ಜೆಗಳನ್ನು ಜೋಡಿಸಬಹುದು. ಬ್ರೇಸ್‌ಲೈಟ್‌ಗಳಲ್ಲಿ ಹಳೆಯ ಐದುಪೈಸೆ ನಾಣ್ಯ ಬಳಸಿ ಮಾಡಿದ, ಅಲ್ಲಲ್ಲಿ ಗೆಜ್ಜೆ ಕಟ್ಟಿದ ವಿನ್ಯಾಸಕ್ಕೆ ಎಲ್ಲಿಲ್ಲದ ಜನಪ್ರಿಯತೆ ಇದೆ.

ಟಾಪ್ ನ್ಯೂಸ್

1-cy

Cyclone Remal ಅಪಾರ ಹಾನಿ ; ಪ.ಬಂಗಾಲದಲ್ಲಿ 6, ಬಾಂಗ್ಲಾದಲ್ಲಿ 7 ಸಾವು

1-murali

ಕೇರಳದಲ್ಲೂ ದಿಲ್ಲಿ ಮಾದರಿ ಮದ್ಯ ಹಗರಣ: ಸಿಬಿಐ ತನಿಖೆಗೆ ಸಚಿವ ಮುರಳೀಧರನ್‌ ಆಗ್ರಹ

1-sm

Delhi; ಬಿಭವ್‌ ಬಿಡುಗಡೆಯಾದರೆ ಅಪಾಯ: ಸಂಸದೆ ಸ್ವಾತಿ ಮಲಿವಾಲ್‌

ಶಾಸಕರ ಮನೆಗೆ ಮೊದಲು ಮೂರೇ ಸಿಬಂದಿ ಕಳಿಸಿದ್ದೆವು: ಪೊಲೀಸ್‌ ಅಧೀಕ್ಷಕ ರಿಷ್ಯಂತ್‌

ಶಾಸಕರ ಮನೆಗೆ ಮೊದಲು ಮೂರೇ ಸಿಬಂದಿ ಕಳಿಸಿದ್ದೆವು: ಪೊಲೀಸ್‌ ಅಧೀಕ್ಷಕ ರಿಷ್ಯಂತ್‌

1-qeewqewqewe

Naxal ಬೆದರಿಕೆ; ಪದ್ಮಶ್ರೀ ವಾಪಸ್‌: ನಾಟಿ ವೈದ್ಯ ಹೇಳಿಕೆ

Sullia ಹಲಸಿನ ಹಣ್ಣು ಕೊಯ್ಯುವಾಗ ದಂಪತಿಗೆ ವಿದ್ಯುದಾಘಾತ

Sullia ಹಲಸಿನ ಹಣ್ಣು ಕೊಯ್ಯುವಾಗ ದಂಪತಿಗೆ ವಿದ್ಯುದಾಘಾತ

1-reaa

I.N.D.I.A. ಸಭೆ; ಜೂ.1ರಂದು ಫ‌ಲಿತಾಂಶ ಬಳಿಕದ ಕಾರ್ಯತಂತ್ರ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

xgdtgret

ಫ್ಯಾಶನ್ ಶೋ  ‘ಮೆಟ್ ಗಾಲಾ’ದಲ್ಲಿ ಗಣೇಶ ವಿಗ್ರಹ ಜೊತೆ ಕಾಣಿಸಿಕೊಂಡ ಸುಧಾ ರೆಡ್ಡಿ

Basavana-hulu

ಗೋದಾವರಿ ನದಿ ತೀರದಲ್ಲಿ ಬೃಹತ್ ಗಾತ್ರದ ಬಸವನ ಹುಳು ಪತ್ತೆ, ಇದರ ಬೆಲೆ ಎಷ್ಟು ಗೊತ್ತಾ?

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

1-cy

Cyclone Remal ಅಪಾರ ಹಾನಿ ; ಪ.ಬಂಗಾಲದಲ್ಲಿ 6, ಬಾಂಗ್ಲಾದಲ್ಲಿ 7 ಸಾವು

1-murali

ಕೇರಳದಲ್ಲೂ ದಿಲ್ಲಿ ಮಾದರಿ ಮದ್ಯ ಹಗರಣ: ಸಿಬಿಐ ತನಿಖೆಗೆ ಸಚಿವ ಮುರಳೀಧರನ್‌ ಆಗ್ರಹ

sensex

76,000 ಅಂಕ ತಲುಪಿದ್ದ ಬಿಎಸ್‌ಇ ಸೂಚ್ಯಂಕ: 23,000ಕ್ಕೇರಿ ಕುಸಿದ ನಿಫ್ಟಿ

arrested

Ranchi;ಮದ್ಯ ಕೊಡದ್ದಕ್ಕೆ ಗುಂಡಿಕ್ಕಿ ಡಿಜೆಯ ಹತ್ಯೆ: ಆರೋಪಿ ಪೊಲೀಸರ ವಶಕ್ಕೆ

1-sm

Delhi; ಬಿಭವ್‌ ಬಿಡುಗಡೆಯಾದರೆ ಅಪಾಯ: ಸಂಸದೆ ಸ್ವಾತಿ ಮಲಿವಾಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.