ಮನಗೆದ್ದ ಪದ್ಯಾಣ ಕನ್ನಡಿಕಟ್ಟೆ ಗಾಯನ 


Team Udayavani, Aug 17, 2018, 6:00 AM IST

c-4.jpg

ಸರ್ಪಂಗಳ ಸುಬ್ರಹ್ಮಣ್ಯ ಭಟ್‌ ಕಲಾಪೋಷಕರು. ಅವರ ಹೆಸರಿನಲ್ಲಿ ಹಿರಿಯ ಕಲಾವಿದರೊಬ್ಬರನ್ನು ಗೌರವಿಸಿ, ಯಕ್ಷಗಾನ ಪ್ರದರ್ಶನ ಆಯೋಜಿಸುವುದರ ಮೂಲಕ ನೆನಪು ಮಾಡಿಕೊಳ್ಳುವ ಸಂಪ್ರದಾಯ ಅವರ ಪತ್ನಿ, ಮಕ್ಕಳದ್ದು. ಈ ಪ್ರಶಸ್ತಿಗೆ ಆಯ್ಕೆಯಾದ‌ವರು ಭಾಗವತ ಬೊಟ್ಟಿಕೆರೆ ಪುರುಷೋತ್ತಮ ಪೂಂಜರು

ಹೆಚ್ಚಾಗಿ ಆಡುವ ಪ್ರಸಂಗವೇ ಆದರೂ ಭಾವಪೂರ್ಣ ಅಭಿನಯ ಹಾಗೂ ಶ್ರವ್ಯಸುಖ ಗಾಯನದಿಂದಾಗಿ ಆಟ ರೈಸಿದ್ದು ಪಿಪಿಸಿ ಅಡಿಟೋರಿಯಂನಲ್ಲಿ. ಪದ್ಯಾಣ ಗಣಪತಿ ಭಟ್‌ ಹಾಗೂ ರವಿಚಂದ್ರ ಕನ್ನಡಿಕಟ್ಟೆಯ ದ್ವಂದ್ವಗಾಯನ ಪ್ರಸಂಗದ ಸೌಂದರ್ಯ ಹೆಚ್ಚಿಸಿತು. ಗೇಯಪರಂಪರೆಯಲ್ಲಿ ತಮ್ಮದೇ ಶೈಲಿ ಉಳಿಸಿ ಬೆಳೆಸಿಕೊಂಡಿರುವ ಪದ್ಯಾಣರು ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ದೊಡ್ಡ ಕೊಡುಗೆಗಳಲ್ಲಿ ರವಿಚಂದ್ರ ಕೂಡಾ ಒಬ್ಬರು. ಗುರುಶಿಷ್ಯರು ಒಂದೇ ಮೇಳದಲ್ಲಿ ಯಕ್ಷಗಾನದ ವ್ಯವಸಾಯ ಮಾಡುತ್ತಾ ಶೈಲಿಯೊಂದರ ಬೆಳವಣಿಗೆಗೆ ಕಾರಣರಾಗಿದ್ದಾರೆ. (ದಿವಾಕರ ರೈ ಸಂಪಾಜೆ) ಅಭಿಮನ್ಯುವಿಗೆ ಸುಭದ್ರೆಯಾಗಿ ಜತೆಗೂಡಿದ್ದು ತೆಂಕುಬಡಗಿನ ಪಾತ್ರಧಾರಿ ಕೋಳ್ಯೂರರಂತಹ ಹಿರಿ ತಲೆಮಾರಿನ ಪಾತ್ರಗಾರಿಕೆಯನ್ನು ಅಳವಡಿಸಿಕೊಂಡು ಹೊಸತನ ಹಾಗೂ ಪರಂಪರೆ ಎರಡರಲ್ಲೂ ಮೇಲ್ಮೆ ಸಾಧಿಸಿರುವ ಶಶಿಕಾಂತ ಶೆಟ್ಟಿ ಕಾರ್ಕಳ. ಗರತಿ ಪಾತ್ರಕ್ಕಿಂತಲೂ ಭಾವಪೂರ್ಣ ಅಭಿನಯಕ್ಕೆ ಆಪ್ತರು. 

ಆಲಿಪುದೆಲೆ ತಾಯೆ ಎನ್ನ ಬಿನ್ನಪವನು, ತಡೆವರೆನೆಲೆ ತಾಯೆ, ಏತಕಿಂತಾ ಬುದ್ಧಿ ಬಂತೋ ಕಂದ ಕಂದ ಎಂಬಂತಹ ಪದ್ಯಗಳಿಗೆ ಸುಭದ್ರೆ ಅಭಿಮನ್ಯುವಿನ ಸಂಭಾಷಣಾ ದೃಶ್ಯಗಳು ಪ್ರೇಕ್ಷಕರ ಮನ ಮುಟ್ಟಿದವು. ಪತಿ ಎಲ್ಲಿ ಎಂದು ಕೇಳಿದರೆ ಮನೆತುಂಬಿಕೊಂಡ ಸೊಸೆಗೆ ಏನೆಂದು ಉತ್ತರಿಸಲಿ, ಯುದ್ಧಕ್ಕೆ ಹೋದ ತಂದೆ ಮರಳಿ ಬಂದು ಮಗನೆಲ್ಲಿ ಎಂದಾಗ ಏನೆಂದು ಹೇಳಲಿ. ಇಂತಹ ಹುಡುಗುತನದ ನಿರ್ಧಾರ ಮಾಡಿ ಯುದ್ಧಕ್ಕೆ ಹೋಗುವ ಬದಲು “ನೀತಿಯಲ್ಲ ಪೋಪುದಿಂದು ಕಂದ, ಕಂದ. ಎನ್ನ ಘಾತಿಸಿ ಪೋಗಯ್ಯ ರಣಕೆ’ ಎಂದು ಸುಭದ್ರೆ ಸ್ವಂತ ಮಗನನ್ನು ಯುದ್ಧ ಭೂಮಿಗೆ ಕಳುಹಿಸಿಕೊಡುವ ದೃಶ್ಯ ಅಮೋಘವಾಗಿ ಮೂಡಿಬಂತು. 

ಕೌರವ (ಜಯಾನಂದ ಸಂಪಾಜೆ) ಹಾಗೂ ದ್ರೋಣರ (ಸುಣ್ಣಂಬಳ ವಿಶ್ವೇಶ್ವರ ಭಟ್‌) ಸಂಭಾಷಣೆ ಅರ್ಥಪೂರ್ಣವಾಗಿತ್ತು. ಸಮಕಾಲೀನ ರಾಜಕೀಯ ಮಾತುಗಳಿಗೆ ಬಣ್ಣ ಹಚ್ಚಿ ಪೌರಾಣಿಕದ ಲೇಪನ ಕೊಟ್ಟದ್ದು ಮನರಂಜನೆಯಾಗಿತ್ತು. ಇದು ಅಭಿಮನ್ಯು ದ್ರೋಣರ ಸಂಭಾಷಣೆವರೆಗೂ ಬಂತು. 

ಅಭಿಮನ್ಯುವಾಗಿ ಕೆಲವೇ ಪದ್ಯಗಳಿಗೆ ಬಂದು ಹೋದರೂ ರಕ್ಷಿತ್‌ ಪಡ್ರೆ ಕೂಡಾ ಚೆನ್ನಾದ ಅಭಿನಯ ನೀಡಿದರು. ಧರ್ಮರಾಯ (ಶಂಭಯ್ಯ ಕಂಜರ್ಪಣೆ) ಪಾತ್ರಪೋಷಣೆ ಚೆನ್ನಾಗಿತ್ತು. ಪ್ರಬುದ್ಧ ಹಿಮ್ಮೇಳ ಪದ್ಯಾಣ ಜಯರಾಮ ಭಟ್‌ ಹಾಗೂ ಪದ್ಯಾಣ ಶಂಕರನಾರಾಯಣ ಭಟ್‌. ಗದ್ದಲವಿಲ್ಲದ ಮೆಲುನುಡಿಯ ಚೆಂಡೆ ಗಾಯನದ ಆಸ್ವಾದನೆಗೆ ಆಸ್ಪದ ನೀಡಿತ್ತು. 

ಚಕ್ರವ್ಯೂಹದ ಬಳಿಕ ಪದ್ಮವ್ಯೂಹ ನಡೆಯಿತು. ಪರಂಪರೆಯ ಶೈಲಿಯಲ್ಲಿ ಬಲಿಪ ಪ್ರಸಾದ ಭಾಗವತರು ಏರುಶ್ರುತಿಯಲ್ಲಿ ಸೈಂಧವ ವಧೆ ಕಥಾಭಾಗವನ್ನು ನಡೆಸಿದರು. ಸಂಶಪ್ತಕರನ್ನು ಸದೆಬಡಿದ ಕೃಷ್ಣಾರ್ಜುನರು ಮರಳಿ ಬರುವಾಗ ಅಭಿಮನ್ಯುವಿನ ಮರಣದ ದಾರುಣ ವಾರ್ತೆ ಕೇಳಿ ಸಹಿಸಿಕೊಳ್ಳಲು ಕೃಷ್ಣ (ವಾಸುದೇವ ರಂಗ ಭಟ್‌) ಪಾರ್ಥ(ಸುಬ್ರಾಯ ಹೊಳ್ಳ)ನನ್ನು ಸನ್ನದ್ಧಗೊಸುತ್ತಾನೆ. ಇಲ್ಲಿಯೂ ಸುಭದ್ರೆಯಾಗಿ ಮಿಂಚಿದವರು ಶಶಿಕಾಂತ್‌ ಶೆಟ್ಟರು. ಮಗನ ಅಗಲುವಿಕೆಯ ನೋವಿನ ವಾರ್ತೆಯನ್ನು ಪತಿಯ ಬಳಿ ಹೇಳುವ ಭಾವನಾತ್ಮಕ ಸನ್ನಿವೇಶ ಮನಮುಟ್ಟಿತು. ಸೂರ್ಯಾಸ್ತದೊಳಗೆ ಸೈಂಧವ(ಶಶಿಕಿರಣ ಕಾವು)ನನ್ನು ವಧಿಸುವ ಮನಸ್ಸಂಕಲ್ಪ ಮಾಡಿ ಹೊರಡುವುದು, ದ್ರೋಣ (ಸುನಿಲ್‌ ಪಲ್ಲೆಮಜಲು) ಕೌರವ (ಲಕ್ಷ್ಮಣ ಮರಕಡ)ನ ಕೊಂಕುನುಡಿಗಳು, ಸೈಂಧವನಿಗೆ ಮರಣಭೀತಿಯಾಗುವುದು, ಪದ್ಮವ್ಯೂಹದ ರಚನೆ, ಯುದ್ಧ, ಸೂರ್ಯನಿಗೆ ಅಡ್ಡಲಾಗಿ ಸುದರ್ಶನ ಚಕ್ರ ಹಿಡಿದ ಕೃಷ್ಣ ಕತ್ತಲೆಯ ವಾತಾವರಣ ನಿರ್ಮಿಸಿ ಸೈಂಧವನ ವಿಜಯೋತ್ಸವಕ್ಕೆ ಅನುವು ಮಾಡಿಕೊಡುವುದು, ಹೇಳಿದ್ದನ್ನು ಮಾಡಲಾಗದೇ ಅರ್ಜುನ ಅಗ್ನಿಗಮನಗೈಯುವ ಮನ ಮಾಡಿದಾಗ ಕೃಷ್ಣನ ಆಜ್ಞೆಯಂತೆ ಸೈಂಧವ ವಧೆ ಕಥಾಹಂದರ. ಸಾತ್ಯಕಿಯಾಗಿ ಲೋಕೇಶ್‌ ಮುಚ್ಚಾರು ಉತ್ತಮ ಅಭಿನಯ. ಹರಿರಾಜ ಕಟೀಲು, ಅಜಿತ್‌ ಪುತ್ತಿಗೆ, ಪ್ರಜ್ವಲ್‌ ಇರುವೈಲು, ಶ್ರೀನಿಧಿ, ಶಶಾಂಕ್‌, ಶಿವಾನಂದ ಪೆರ್ಲ, ವೆಂಕಟೇಶ್‌ ಕಲ್ಲುಗುಂಡಿ, ಆದಿತ್ಯ ಹಾಗೂ ಶಿವರಾಜ್‌ ಕಲಾವಿದರಾಗಿ ಯಶಸ್ವಿಯಾಗಿದ್ದರು. ಚೈತನ್ಯ ಪದ್ಯಾಣರ ಚೆಂಡೆ, ಕೃಷ್ಣ ಪ್ರಕಾಶ ಉಳಿತ್ತಾಯರ ಮದ್ದಳೆ ಹಿಮ್ಮೇಳದ ಹೈಲೈಟ್‌.

ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.