ಶ್ರುತಿ ವಿಶ್ವಕರ್ಮ ಹಿಂದುಸ್ತಾನಿ ಗಾಯನ
Team Udayavani, Sep 7, 2018, 6:00 AM IST
ಕುಂದಾಪುರ ಸಂಗೀತ ಭಾರತಿ ಟ್ರಸ್ಟ್ ಆಶ್ರಯದಲ್ಲಿ ಆ.19ರಂದು ಯುವ ಪ್ರತಿಭೆ ಪುಣೆಯ ಕು| ಶ್ರುತಿ ವಿಶ್ವಕರ್ಮ ಪ್ರಸ್ತುತಪಡಿಸಿದ ಹಿಂದುಸ್ತಾನಿ ಶಾಸ್ತ್ರೀಯ ಗಾಯನ ಕಾರ್ಯಕ್ರಮ ಜನಮನ ಸೂರೆಗೊಂಡಿತು. ಸಂಗೀತವೇ ಆಸ್ತಿಯಾಗಿರುವ ಕುಟುಂಬದಲ್ಲಿ 1992ರಲ್ಲಿ ಜನಿಸಿದ ಶ್ರುತಿ 6 ವರ್ಷದ ಬಾಲೆಯಾಗಿರುವಾಗಲೇ ಕಿರಾಣಾ ಘರಾಣೆಯ ತಾಯಿ ಜಯಂತಿ ವಿಶ್ವಕರ್ಮ ಹಾಗೂ ತಂದೆ ಗಣಪತ್ರಾವ್ ವಿಶ್ವಕರ್ಮರಿಂದ ಸಂಗೀತದ ಮೊದಲ ಪಾಠ ಕಲಿತರು. ಮುಂದೆ ಕೆಲವು ವರ್ಷ ಗ್ವಾಲಿಯರ್ ಘರಾಣೆಯ ಡಾ| ವೀಣಾ ಸಹಸ್ರಬುದ್ಧೆಯವರಿಂದ ತರಬೇತಿ ಪಡೆದು ಪ್ರಸ್ತುತ ಆಗ್ರಾ ಘರಾಣೆ ಹಾಗೂ ಬೆಂಡಿಬಜಾರ್ ಘರಾಣೆಯ ಪಂ. ಕೇದಾರ್ ಬೊಡಾಸ್ ಅವರಿಂದ ಹುಬ್ಬಳ್ಳಿಯ ಡಾ| ಗಂಗೂಬಾಯಿ ಹಾನಗಲ್ ಗುರುಕುಲದಲ್ಲಿ ಹೆಚ್ಚಿನ ಶಿಕ್ಷಣ ಪಡೆಯುತ್ತಿರುವರು.
ಮಿಯಾಮಲಾರ್ ರಾಗದೊಂದಿಗೆ ಆರಂಭಗೊಂಡ ಕಾರ್ಯಕ್ರಮ ಪೀಲು, ಕೀರ್ವಾನಿ ಬಳಿಕ ಭೈರವಿ ಹಾಡುವುದರ ಮೂಲಕ ಸಂಪನ್ನಗೊಂಡಿತು. ಸಂವಾದಿನಿಯಲ್ಲಿ ಗೌರೀಶ ಯಾಜಿ, ತಬಲಾದಲ್ಲಿ ವಿಘ್ನೇಶ ಎಸ್. ಕಾಮತ್, ತಾನ್ಪುರದಲ್ಲಿ ಕು| ವೀಣಾ ನಾಯಕ್ ಹಾಗೂ ವಿವೇಕ ಪೈ ಸಹಕರಿಸಿದರು.
ಪಿ.ಜಯವಂತ ಪೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ