ನವಿರು ಹಾಸ್ಯ-ಗಂಭೀರ ಸಂದೇಶದ ಗಂಗಮ್ಮಜ್ಜಿ ಗಂಟು


Team Udayavani, Jan 11, 2019, 12:30 AM IST

q-8.jpg

ವೃದ್ಧರಿಗೆ ದಂಪತಿಗಳಿಗೆ, ಯುವಜನರಿಗೆ, ಹಾಗೂ ಮಕ್ಕಳಿಗೆ ಎಲ್ಲರೂ ಅನುಸರಿಸಿಕೊಂಡು ಬರಬೇಕಾದ ಮಾರ್ಗವನ್ನು ತೆರೆದಿಟ್ಟು ನಾವೆಲ್ಲರೂ ಮೊದಲು ಹೇಗಿದ್ದೆವು, ಈಗ ಹೇಗಿದ್ದೇವೆ, ಮುಂದೆ ಹೇಗಿರಬೇಕು ಎನ್ನುವುದನ್ನು ತಿಳಿ ಹೇಳುವ ಸಾಂಸಾರಿಕ ಬೋಧ‌ಪ್ರದ ನಗೆ ನಾಟಕವೇ ಗಂಗಮ್ಮಜ್ಜಿ ಗಂಟು. 

ಇತ್ತೀಚೆಗೆ ಧರ್ಮಸ್ಥಳ ಮಂಜುನಾಥೇಶ್ವರ ವಸತಿ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರದರ್ಶನಗೊಂಡ ನಾಟಕ ಗಂಗಮ್ಮಜ್ಜಿ ಗಂಟು ನವಿರಾದ ಹಾಸ್ಯದೊಂದಿಗೆ ಗಂಭೀರ ಸಂದೇಶ ನೀಡಿತು. ವೃದ್ಧರಿಗೆ ದಂಪತಿಗಳಿಗೆ, ಯುವಜನರಿಗೆ, ಹಾಗೂ ಮಕ್ಕಳಿಗೆ ಎಲ್ಲರೂ ಅನುಸರಿಸಿಕೊಂಡು ಬರಬೇಕಾದ ಮಾರ್ಗವನ್ನು ತೆರೆದಿಟ್ಟು ನಾವೆಲ್ಲರೂ ಮೊದಲು ಹೇಗಿದ್ದೆವು, ಈಗ ಹೇಗಿದ್ದೇವೆ, ಮುಂದೆ ಹೇಗಿರಬೇಕು ಎನ್ನುವುದನ್ನು ತಿಳಿ ಹೇಳುವ ಸಾಂಸಾರಿಕ ಬೋಧ‌ಪ್ರದ ನಗೆ ನಾಟಕವೇ ಗಂಗಮ್ಮಜ್ಜಿ ಗಂಟು. 

ಕಥಾವಸ್ತು: ಮಧ್ಯಮ ವರ್ಗದ ಕುಟುಂಬ. ಅದರಲ್ಲಿ ದೂರದ ಸಂಬಂಧಿ ಅಜ್ಜಿ, ಅಣ್ಣ-ತಮ್ಮ, ಅವರ ಹೆಂಡತಿಯರು, ನೆರೆಮನೆಯ ಸ್ನೇಹಿತ‌, ಕುಟುಂಬ ವೈದ್ಯ, ಹಮಾಲಿ, ವೇಷ ಮರೆಸಿದ ಪೋಲೀಸ್‌ ಆಫೀಸರ್‌ ಹಾಗೂ ಮಾಡರ್ನ್ ಪುರೋಹಿತ. ತನ್ನ ಗಂಡ ಅವನ ಕೊನೇ ಕಾಲದಲ್ಲಿ ನೀಡಿದ ಗಂಟಿನ ಸಮೇತ ದೂರದ ಸಂಬಂಧಿ ವೆಂಕಣ್ಣನ ಮನೆ ಸೇರಿಕೊಂಡ ಗಂಗಮ್ಮಜ್ಜಿಯ ಅನಾರೋಗ್ಯ ಸಮಯದಲ್ಲಿ ಗಂಟಿನ ಸುತ್ತ ಏನಿದೆ? ಏನೇನಿರಬಹುದು? ನನಗೇನು ಈ ಗಂಟಿಂದ ಸಿಗುತ್ತೆ? ಗಂಗಮ್ಮಜ್ಜಿ ಯಾವಾಗ ಗೊಟಕ್‌ ಎನ್ನುತ್ತಾಳೆ ಎಂಬಿತ್ಯಾದಿ ಕುತೂಹಲ ಅಂಶಗಳ ಸುತ್ತ ನಾಟಕ ತೆರೆದು ಕೊಳ್ಳುತ್ತದೆ. ಈ ಅಜ್ಜಿಯನ್ನು ಸಾಕಿದ ನನಗೇ ಗಂಟು ಸಿಗಬೇಕೆಂದು ಕುಟುಂಬ ಕಲಹ, ಪಾಲು ನಿರೀಕ್ಷಿಸುವ ಪಕ್ಕದ ಮನೆಯವ ಸ್ನೇಹಿತ‌, ಪೌರೋಹಿತ್ಯದಿಂದ ಜೀವನ ಸಾಗಿಸುವ ಉಪಾಯ ಹೆಣೆಯುವ ನಾಗೇಶ ಭಟ್ಟ, ಅವರಿವರಿಗೆ ಔಷಧಿ ನೀಡಿ ಜೀವನ ಸಾಗಿಸುವ ವೈದ್ಯ ಮಹಾಶಯ ಹಾಗೂ ದುಡಿಮೆಯಿಂದ ಜೀವನ ನಡೆಸುವ ಅಮಾಯಕ ಹಮಾಲಿಗಳೇ ಕಥಾ ಪಾತ್ರಗಳು. 

ಮನೆ ಯಜಮಾನ‌ ವೆಂಕಣ್ಣನಾಗಿ ಪ್ರೀತಮ್‌ ಎಂ.ಎಸ್‌ ತನ್ನ ಜವಾಬ್ದಾರಿ ಹಾಗೂ ಅಸಹಾಯಕತೆೆಯಿಂದ ಮಿಂಚಿದರೆ, ತಮ್ಮ ಶ್ರೀನಿವಾಸನ ಪಾತ್ರದಲ್ಲಿ ವಿಕಾಸ್‌ ಜಿ. ಬ್ಯಾಂಕಿನ ಅಧಿಕಾರಿಯಾಗಿದ್ದೂ ಹೆಂಡತಿಯ ಶೋಕೀ ಜೀವನಕ್ಕಾಗಿ ವಾಮಮಾರ್ಗ ಹಿಡಿದು ತಲೆ ತಗ್ಗಿಸುತ್ತಾನೆ. ವೈಯಾರದ ಹೆಂಡತಿಯ (ಪದ್ಮಾವತಿ/ಪದ್ದಿ) ಪಾತ್ರದಲ್ಲಿ ಮೋನೀಶ್‌ ಪಿ., ಹಾಗೂ ಬ್ಯಾಂಕ್‌ ಅಧಿಕಾರಿ ಪಾತ್ರದಲ್ಲಿ ವಿಕಾಸ್‌ ಜಿ.ಯವರ ನಿರ್ವಹಣೆ ಚೆನ್ನಾಗಿತ್ತು. ಗಂಟಿನಿಂದಲೇ ಎಲ್ಲರನ್ನೂ ಬೇಸ್ತು ಬೀಳಿಸಿದ ಗಂಗಮ್ಮಜ್ಜಿ (ರತನ್‌ ಅಕ್ಕಿ) ಚೆನ್ನಾಗಿ ಪಾತ್ರ ಪೋಷಣೆ ಮಾಡಿದ್ದಾರೆ. ಇನ್ನೂ ಸ್ವಲ್ಪ ಅಭಿನಯ ಚಾತುರ್ಯ ಹಾಗೂ ಮಾತಿನ ಸ್ಪಷ್ಟತೆ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಅಂತ ಅನ್ನಿಸಿತು. ನೆರೆಮನೆಯ ನಾರಾಯಣನ ಪಾತ್ರದಲ್ಲಿ ದರ್ಶನ ಎಸ್‌. ಜಗದೀಶ್‌ ಚುರುಕಿನ ಅಭಿನಯ ಹಾಗೂ ಸ್ಪಷ್ಟ ಮಾತುಗಳಿಂದ ಮನದಲ್ಲಿ ಪ್ರಬುದ್ಧವಾಗಿ ಉಳಿಯುತ್ತಾರೆ. ಪೋಲೀಸ್‌ ಅಧಿಕಾರಿಯ ಪಾತ್ರಧಾರಿಯಾಗಿ ಬಂದಾಗ ಅಭಿನಯ ಚೆನ್ನಾಗಿದ್ದರೂ ಮಾತಿನ ಬಿಗುವಿನಲ್ಲಿ ಸ್ವಲ್ಪ ಬದಲಾವಣೆ ಬೇಕಿತ್ತು. ಕಾವೇರಿ ಪಾತ್ರದಲ್ಲಿ ಅಕ್ಷಯ ಎಸ್‌. ಸಾಂಸಾರಿಕ ಜೀವನದ ಹೆಣ್ಣಿನ ಜಂಜಾಟಗಳನ್ನು ಉತ್ತಮವಾಗಿ ನಿರ್ವಹಿಸಿ ಅರಿವು ಮೂಡಿಸಿದ್ದಾರೆ. ಪುರೋಹಿತ ನಾಗೇಶ ಭಟ್ಟನ ಪಾತ್ರದಲ್ಲಿ ಪನ್ನಗ ಪಿ.ಎಸ್‌ ಉತ್ತಮವಾಗಿ ನಟಿಸಿದ್ದರೂ ಮಾತಿನ ವೇಗಕ್ಕೆ ಸ್ವಲ್ಪ ಕಡಿವಾಣ ಹಾಕಿದ್ದರೆ ಚೆನ್ನಾಗಿರುತ್ತಿತ್ತು. ಡಾಕ್ಟರ್‌ ಪಾತ್ರದ ಮೋಹಿತ್‌ ಡಿ. ಆರ್‌. ಸಹಜವಾಗಿ ಪಾತ್ರ ಪೋಷಣೆ ಮಾಡಿದ್ದಾರೆ. ಆದರೆ ಅಲ್ಲಲ್ಲಿ ಇನ್ನೂ ಸ್ವಲ್ಪ ಲವಲವಿಕೆಯ ಅಗತ್ಯವಿತ್ತು ಎನ್ನಿಸುತ್ತದೆ. ಹಮಾಲಿ ಪಾತ್ರದ ಲೋಕೇಶ್‌ ಎಂ. ಚಿಕ್ಕ ಪಾತ್ರವನ್ನು ಚೊಕ್ಕವಾಗಿ ಅಭಿನಯಿಸಿ ಹಮಾಲರ ಬವಣೆಯನ್ನು ಚೆನ್ನಾಗಿ ತೋಡಿಕೊಂಡಿದ್ದಾರೆ. ಪೂರಕ ಹಿನ್ನೆಲೆ ಗಾಯನದಲ್ಲಿ ಗೌತಮ ಶಾನುಭಾಗ, ಶರಣ, ಪ್ರತ್ಯುಶ್‌ ಎನ್‌.ಜೆ. ಗೌಡ, ತಬಲ ಮತ್ತು ಕ್ಯಾಸಿಯೋದಲ್ಲಿ ರೋಹಿತ್‌ ಎಸ್‌ ಪ್ರಭು ಹಾಗೂ ಭೀಮಣ್ಣ ಎನ್‌. ಎಚ್‌. ಹಾಗೂ ಲೋಕೇಶ್‌ ಎಂ. ನಾಟಕಕ್ಕೆ ಪೂರಕವಾಗಿ ಸಹಕರಿಸಿದ್ದಾರೆ. 

ಸಾಗರದ ಬಸ್ತಿ ಸದಾನಂದ ಪೈ ರಚಿಸಿದ,ಹಿರಿಯ ರಂಗಕರ್ಮಿ ಸಿ.ಟಿ. ಬ್ರಹ್ಮಾಚಾರರ ಸಮರ್ಥ ನಿರ್ದೇಶನದಲ್ಲಿ, ಡಾ. ಟಿ. ಕೃಷ್ಣಮೂರ್ತಿಯವರ ನಿರ್ವಹಣೆಯಲ್ಲಿ ಉಜಿರೆಯಲ್ಲಿ ಮೂಡಿ ಬಂದ ಈ ನಾಟಕ ಅಭಿನಯಿಸಿದ ಪುಟಾಣಿಗಳಲ್ಲಿ ರಂಗಾಭಿರುಚಿಯ ಚಿಗುರನ್ನು ಮೂಡಿಸಿತು.

ಡಾ| ಟಿ. ಕೃಷ್ಣಮೂರ್ತಿ

ಟಾಪ್ ನ್ಯೂಸ್

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.