ಹತ್ತು ರೂ. ಕೊಟ್ಟ ದೇವರು!


Team Udayavani, Dec 26, 2017, 6:15 AM IST

devaru.jpg

ಹದಿನೈದು ವರ್ಷಗಳ ಹಿಂದಿನ ಮಾತು. ಪುಟ್ಟ ಮುದ್ದುಮಗನೊಂದಿಗೆ ತವರು ಮನೆಗೆ ಬರುವ ಸಡಗರದಲ್ಲಿ, ನಾಲ್ಕಾರು ಬ್ಯಾಗುಗಳ ಲಗೇಜನ್ನು ಹಿಡಿದು ಬಸ್ಸು ಹತ್ತಿ ತರೀಕೆರೆಗೆ ಬಂದು ತಲುಪಿದೆ. ಅಲ್ಲಿಂದ ನನ್ನೂರಿಗೆ ಬರಲು ಮತ್ತೂಂದು ಬಸ್‌ ಹತ್ತಬೇಕಿತ್ತು. ಕಂಕುಳಲ್ಲಿ ಗುಂಗುರು ಕೂದಲಿನ ಪುಟ್ಟ ಕಂದ, ಭುಜದಲ್ಲಿ ನೇತುಹಾಕಿಕೊಂಡ ಒಂದು ಬ್ಯಾಗು, ಕೈಯಲ್ಲೆರಡು ಬಟ್ಟೆ ಬ್ಯಾಗು, ಸಾಲದ್ದಕ್ಕೆ ಅಂಗೈಯಲ್ಲೊಂದು ಹಣವಿದ್ದ ಪರ್ಸ್‌! ರಷ್‌ ಆಗಿದ್ದ ಬಸ್ಸಿನೊಳಗೆ ಹೇಗೋ ನುಗ್ಗಿ ಸೀಟೊಂದನ್ನು ಹಿಡಿದು ಕುಳಿತು ನಿಟ್ಟುಸಿರುಬಿಟ್ಟೆ.

ಕಿರಿಕಿರಿ ಉಂಟು ಮಾಡುತ್ತಿದ್ದ ಮಗನನ್ನು ಹೇಗೋ ಸಂತೈಸುತ್ತಿರುವಾಗಲೇ ಕಂಡಕ್ಟರ್‌ ಟಿಕೆಟ್‌ ಕೇಳುತ್ತಾ ಹತ್ತಿರ ಬಂದಾಗ, ಹಣ ಕೊಡಲು ಅಂಗೈ ನೋಡಿದಾಗಲೇ ಗೊತ್ತಾಗಿದ್ದು, ಪರ್ಸ್‌ ಕಳುವಾಗಿದೆ ಅಂತ. ಆತಂಕ, ಗಾಬರಿ. ಈಗೇನು ಮಾಡುವುದು? ಟಿಕೇಟಿಗೆ ಎಲ್ಲಿಂದ ಹಣ ನೀಡಲಿ? ಕಣ್ಣಲ್ಲಿ ನೀರು ತುಂಬಿ ಬಂತು. ಯಾವ ಸಂದರ್ಭದಲ್ಲೂ ಇಂಥ ದೀನ ಸ್ಥಿತಿ ಬಂದಿರಲಿಲ್ಲ. ಕಂಡಕ್ಟರ್‌ ಆಗಲೇ ಪಕ್ಕದಲ್ಲಿ ನಿಂತಿದ್ದ. ನಿಧಾನವಾಗಿ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯತ್ತ ತಿರುಗಿದೆ. ಆತನತ್ತ ನೋಡಲೂ ಅಂಜಿಕೆ, ಅಳುಕು.

ಆ ಹೊತ್ತಿನಲ್ಲಿ ಬೇರೆ ದಾರಿಯೇ ಕಾಣಲಿಲ್ಲ; “ರೀ, ನನ್ನ ಬಳಿ ಹಣವಿಲ್ಲ, ಪರ್ಸ್‌ ಕಳೆದುಹೋಗಿದೆ, ಟಿಕೆಟ್‌ ಮಾಡಿಸಲು 10 ರೂ. ಇದ್ದರೆ ಕೊಡ್ತೀರಾ? ಊರಿಗೆ ಹೋದಮೇಲೆ ನಿಮ್ಮ ಅಕೌಂಟಿಗೆ ಹಣ ಹಾಕುತ್ತೇನೆ’ ಎಂದು ಕಣ್ಣಲ್ಲಿ ನೀರು ತುಂಬಿಕೊಂಡು ಆತನ ಬಳಿ ಅಂಗಲಾಚಿದೆ. 

ಥಟ್ಟನೆ ಆತ “ಅಯ್ಯೋ ಅದಕ್ಯಾಕೆ ಅಳ್ತೀರಾ? ಪರವಾಗಿಲ್ಲ ತೆಗೆದುಕೊಳ್ಳಿ’ ಎಂದು ಕೂಡಲೇ 10 ರೂ.ನ ನೋಟೊಂದನ್ನು ನೀಡಿದಾಗ ಕೃತಜ್ಞತೆಯಿಂದ ಆತನಿಗೆ ಏನು ಹೇಳಬೇಕೆಂಬುದೇ ನನಗೆ ತಿಳಿಯಲಿಲ್ಲ. ಕಂಡಕ್ಟರ್‌ಗೆ ಹಣ ನೀಡಿ, ಈತನ ಕಡೆ ತಿರುಗಿ, “ನಿಮ್ಮಿಂದ ಬಹಳ ಉಪಕಾರವಾಯಿತು. ನನ್ನನ್ನು ನಂಬಿ ಹಣ ನೀಡಿದರಲ್ಲ, ನಿಮ್ಮ ಈ ಋಣ ಎಂದಿಗೂ ಮರೆಯಲಾರೆ, ನಿಮ್ಮ ಫೋನ್‌ ನಂಬರ್‌ ಕೊಡಿ, ಅಕೌಂಟ್‌ ನಂಬರ್‌ ಕೊಡಿ. ಊರಿಗೆ ಹೋದ ಮೇಲೆ ಹಣ ಹಾಕುತ್ತೇನೆ’ ಎಂದಾಗ ಆತ, “ಅಯ್ಯೋ ಅದೇನು ಬೇಡ. ನಿಮ್ಮನ್ನು ನಾನು ನನ್ನ ತಂಗಿನೋ ಅಥವಾ ಅಕ್ಕನೋ ಎಂದು ಭಾವಿಸಿರುವೆ’ ಎಂದು ತನ್ನ ಹೆಸರು ಹಾಗೂ ವಿಳಾಸವನ್ನೂ ನೀಡದೆ ಮುಂದಿನ ನಿಲ್ದಾಣದಲ್ಲಿ ಇಳಿದೇ ಹೋದ. ನಿಜಕ್ಕೂ ಆತ ಅವತ್ತು ದೇವರ ರೂಪದಲ್ಲಿ ಬಂದಿದ್ದ.

– ಎಸ್‌. ಗುಣ ಶಂಕರಘಟ್ಟ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.