ಪಿಸುಮಾತುಗಳನ್ನು ಕೇಳಿಸಿಕೊಂಡಿತ್ತು ಸಿಟಿ ಬಸ್‌ಸ್ಟಾಂಡ್‌


Team Udayavani, Aug 28, 2018, 6:00 AM IST

13.jpg

ಯಾರದ್ದೂ ಭಯವಿಲ್ಲದ ಕಾಲವದು. ಲಂಗು ಲಗಾಮು ಇಲ್ಲದೆ ಹುಡುಗಿಯ ಜೊತೆ ಸುತ್ತುತ್ತಿದ್ದ ದಿನಗಳವು. ಪ್ರೀತಿಯಲ್ಲಿ ಬಿದ್ದವರಿಗೆ ಲೋಕಾನೇ ಕಾಣಿಸೋದಿಲ್ಲ ಅನ್ನೋದು ಸತ್ಯ ಅನಿಸಿದ್ದು ಆ ದಿನಗಳಲ್ಲೇ. 

ಆ ಸಿಟಿ ಬಸ್‌ಸ್ಟಾಂಡ್‌ ಅನ್ನೋದು ನಮ… ಪ್ರೀತಿಯ ಅಡ್ಡಾ ಆಗಿತ್ತು. ಕ್ಲಾಸ್‌ನಲ್ಲಿ ಅವಳ ಜತೆ ಮಾತಾಡೋಕೆ ಆಗ್ಲಿಲ್ಲ ಅಂದ್ರೆ, ನನ್ನ ನಡೆ ಸಿಟಿ ಬಸ್‌ಸ್ಟಾಂಡ್‌ ಕಡೆ! ಅಲ್ಲಿ ಎಷ್ಟು ಹೊತ್ತು ಮಾತಾಡುತ್ತಾ ನಿಂತರೂ ನಮ್ಮನ್ನ ಕೇಳ್ಳೋರೇ ಇರಲಿಲ್ಲ. ನಮ್ಮಿಬ್ಬರ ಪಿಸುಮಾತುಗಳನ್ನು ಕಿವಿಕೊಟ್ಟು ಕೇಳುತ್ತಿದ್ದಿದ್ದು ಇದೇ ಬಸ್‌ ಸ್ಟಾಂಡ್‌. 

ನಮ್ಮ ಕಾಲೇಜಿನಿಂದ ಬಸ್‌ಸ್ಟಾಂಡ್‌ಗೆ ಎರಡು ಕಿ. ಮೀ ದೂರ ಇರಬಹುದು. ಅಷ್ಟು ದೂರ ಹುಡುಗಿ ಜತೆ ಹರಟುತ್ತಾ ನಡೆದರೆ ದಾರಿ ಸಾಗಿದ್ದೇ ಗೊತ್ತಾಗುತ್ತಿರಲಿಲ್ಲ. ನಿಜ ಹೇಳಬೇಕು ಅಂದ್ರೆ, ಅವಳು ಪರಿಚಯವಾಗುವವರೆಗೂ ಬಳ್ಳಾರಿ ಬಿಸಿಲೆಂದಂರೇನೆ ನನಗೆ ಅಲರ್ಜಿ ಆಗ್ತಿತ್ತು. ಆದ್ರೆ ಅವಳ ಜೊತೆಗಿದ್ದರೆ ಸುಡುವ ಬಿಸಿಲು ಕೂಡ ಮುಂಗಾರು ಮಳೆ ನಿಂತ ಮೇಲೆ ಬೀಸುವ ತಂಗಾಳಿಯಂತೆ ತೋರುತ್ತಿತ್ತು.

ನಾನು, ನನ್ನದು ಎಂಬ ನನ್ನ ಸ್ವಾರ್ಥ ತಪ್ಪೆಂದು ತಿದ್ದಿ ಹೇಳಿದವಳು ನನ್ನ ಹುಡುಗಿ. ಕತ್ತಲು ಆವರಿಸಿಕೊಂಡಿದ್ದ ಮನಸ್ಸಲ್ಲಿ ದೀಪ ಹಚ್ಚಿ ಬೆಳಕು ಚೆಲ್ಲಿದಳು ಅವಳು.
ನಿನ್‌ ಜೀವನದಲ್ಲಿ ಯಾರೇ ಬರಲಿ, ಯಾರೇ ಹೋಗಲಿ. ನಾನು ಕೊನೆಯ ತನಕ ಜೊತೆಗಿರಿ¤àನಿ ಅಂತ ಆಣೆ ಮಾಡಿದ ಪೆದ್ದು ಹುಡುಗಿ. ಆದ್ರೆ ಮುಂದೆ ನಡೆಯೋದು ಅವಳ ಅರಿವಿಗೆ ಬಂದಿರಲಿಲ್ಲ ಅನ್ಸುತ್ತೆ. ನೋಡು ನೋಡ್ತಿದ್ದಂಗೇನೇ ಅವಳಿಗೆ ಬೇರೆ ಯಾರ ಜೊತೇನೋ ಮದುವೆ ಫಿಕÕ… ಆಯ್ತು . ಅವಳು ನನ್ನ ಹತ್ತಿರ ಬಂದು ಹೇಳಿದ ಕೊನೇ ಮಾತು ನನಗೆ ಇಂದಿಗೂ ನೆನಪಿದೆ; “ಪ್ಲೀಸ್‌ ನನ್ನನ್ನ ಮರೆತು ಬಿಡು’…

ಆಗ ಅವಳ ಕಣ್ಣಲ್ಲಿ ಕಂಬನಿ ಕಂಡ ನನಗೆ ಜೀವನ ಭಾರ ಅನಿಸಿತು. ಅಂದು ನನ್ನ ಬೆನ್ನಿಗೆ ನಿಂತದ್ದು ನನ್ನ ಗೆಳೆಯರ ಬಳಗ. ಅವರೆಲ್ಲ ಇಲ್ಲದಿದ್ದರೆ ಇಂದು ನಾನು ಎಲ್ಲಿರುತ್ತಿದ್ದೆನೋ ನಂಗೇ ತಿಳಿಯದು. ಇವತ್ತಿಗೂ ಬಳ್ಳಾರಿಗೆ ಹೋದ್ರೆ ಯಾಕೋ ಒಮ್ಮೆ ಆ ಬಸ್‌ಸ್ಟಾಂಡ್‌ನ‌ಲ್ಲಿ ಕೂತು ಆ ಸುಂದರ ಕ್ಷಣಗಳನ್ನು ನೆನೆಯತ್ತಿರುತ್ತೇನೆ. ಆ ದಿನಗಳನ್ನು ಮರೆಯಲು ಯಾವತ್ತಿಗೂ ಸಾಧ್ಯವಿಲ್ಲ…. 

ಮೈಲಾರಿ ಸಿಂಧುವಾಳ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.