ಸಿಂಹ ಕತ್ತಿನ ರಣಹದ್ದು 


Team Udayavani, Feb 9, 2019, 12:45 AM IST

66.jpg

ಭಾರತದ ಬಿಳಿ ಹದ್ದಿಗಿಂತ ದೊಡ್ಡದಿರುವ ಸಿಂಹಕತ್ತಿನ ರಣಹದ್ದು ಯೂರೋಪ್‌ ಮತ್ತು ಏಷಿಯಾ ಖಂಡಗಳಲ್ಲಿ ಕಂಡುಬರುತ್ತದೆ.Eurasian Eriffon  (Gyps fulvus) RM – Indian Vulture + 
 ಸತ್ತ ಪ್ರಾಣಿಗಳ ಮಾಂಸವನ್ನು ತಿಂದು ಹಾಕುವ ಮೂಲಕ ಇದು ಪರಿಸರ ಸಂರಕ್ಷಣೆಯನ್ನು ಮಹತ್ವದ ಪಾತ್ರ ವಹಿಸುತ್ತದೆ….

ಇದು ಯುರೋಪ್‌ ಮತ್ತು ಏಷಿಯಾ ಖಂಡದಲ್ಲಿ ಕಾಣಸಿಗುವ ಸಿಂಹ ಮುಖದ ರಣಹದ್ದು. ಇದಕ್ಕೆ ಸಿಂಹಕ್ಕೆ ಇರುವಂತೆ ಕತ್ತಿನ ಮುಂಭಾಗದ ಸುತ್ತಲೂ ಬಿಳಿ ರೋಮ ಇರುತ್ತದೆ. ಭಾರತದ ಬಿಳಿ  ಹದ್ದಿಗಿಂತ ಗಾತ್ರದಲ್ಲಿ ಸ್ವಲ್ಪ ದೊಡ್ಡದಿದೆ. ಶ್ರೀಲಂಕಾದಲ್ಲಿರುವ ಸಿನಿಮೊನ್‌ ಹೆಸರಿನ ಮರದ ತೊಗಟೆಯ ಬಣ್ಣ ಇದರ ರೆಕ್ಕೆಯನ್ನು ತುಂಬಾ ಹೋಲುತ್ತದೆ.  ಸ್ವಲ್ಪ ಕೆಂಪು ಛಾಯೆಯ ಕಂದುಬಣ್ಣದ ರೆಕ್ಕೆ ಇದಕ್ಕಿದೆ.  ಇದು ಹಾರುವಾಗ ರೆಕ್ಕೆಯ ಅಡಿಯಲ್ಲಿರುವ ಬಿಳಿಗೆರೆ ಮತ್ತು ಚುಕ್ಕಿ ಎದ್ದು ಕಾಣುತ್ತದೆ. 
 ಎದೆಯ ಎರಡೂ ಪಾರ್ಶ್ವದಲ್ಲಿ ಗರಿಗಳಿಲ್ಲದ ಕೆಂಪು ಚರ್ಮ- ವರ್ತುಲಾಕಾರದಲ್ಲಿ ಇದೆ. ಭಾರತದ ಉದ್ದ ಕೊಕ್ಕಿನ ಬಿಳಿ ಕಾಲರಿನ ಹದ್ದಿನ ಗುಂಪಿನಲ್ಲೂ -ಎದೆ ಭಾಗದಲ್ಲಿ ಹೀಗೆ ಗರಿಗಳಿಲ್ಲದ ಎರಡು ವರ್ತುಲ ಇರುತ್ತದೆ. 
 ಈ ಹಕ್ಕಿಯು ಉತ್ತರಭಾಗದಲ್ಲಿ ಚಳಿ ಹೆಚ್ಚಾದರೆ,  ರಕ್ಷಣೆ ಪಡೆಯಲು ದಕ್ಷಿಣದ ಕಡೆಗೆ ವಲಸೆ ಬರುತ್ತವೆ.  ಇದರ ಎತ್ತರ ಸುಮಾರು 110 ರಿಂದ 122 ಸೆಂ.ಮೀ.  ತಲೆ ಬಿಳಿ ಬಣ್ಣದಿಂದ ಕೂಡಿರುತ್ತದೆ. ಕಣ್ಣಿನ ಸುತ್ತ -ಬೂದು ಬಣ್ಣದ ಮಚ್ಚೆ ಇದೆ. ತಲೆ ಹಳದಿಛಾಯೆಯ ಬಿಳಿಬಣ್ಣ ಇದೆ. ರೆಕ್ಕೆಯ ಅಗಲ 2.3 ಇಂದ 2.8 ಸೆಂ.ಮೀ.  ಗಂಡು ಹಕ್ಕಿ 6.2 ದಿಂದ 10 ಕೆ.ಜಿ ಮತ್ತು ಹೆಣ್ಣು ಹಕ್ಕಿ 5.6 ರಿಂದ 11 ಕೆ.ಜಿ ಭಾರ ಇರುತ್ತದೆ. 
ಭಾರತದ ರಣ ಹದ್ದಿನಂತೆ ಇದಕ್ಕೆ ಉದ್ದ ಕುತ್ತಿಗೆ ಇದೆ. ಕುತ್ತಿಗೆಯ ಹಿಂಭಾಗದ ಕೂದಲಿನಂತೆ ಇರುವ ಗರಿ ಕಿರೀಟದಂತೆ ತೋರುತ್ತದೆ.  ಬಿಳಿ ಕಾಲರಿನ ರಣಹದ್ದು ಇದರ ಹತ್ತಿರದ ಸಂಬಂಧಿ. ನೀಳ ಕತ್ತು , ಕುಳ್ಳ ಕಾಲು, ಕಾಲಿನ ತುದಿ ಭಾಗದಲ್ಲಿ ರೋಮದಂಥ ಗರಿ ಇಲ್ಲ. ಕಾಲಿನ ಬುಡದಲ್ಲಿ ಕಂದು ಬಣ್ಣದ ಗರಿ ಇದರ ಕಾಲನ್ನು ಮುಚ್ಚಿದಂತೆ ಕಾಣುತ್ತದೆ. 

ಕಾಲಿನಲ್ಲಿನ ಬಲವಾದ ಬೆರಳು -ಅದರ ತುದಿಯಲ್ಲಿ ಕಂದು ಬಣ್ಣದ ಉಗುರಿದೆ. ಇದು ನೆಲದಲ್ಲಿ ಓಡಾಡಲು ಮತ್ತು ಸತ್ತ, ಹಸು, ಕುರಿ , ಆಡು, ಕರಡಿ ಮುಂತಾದ ಪ್ರಾಣಿಗಳ -ದಪ್ಪ ಚರ್ಮ ಹರಿದು ಮಾಂಸ ತಿನ್ನಲು ಅನುಕೂಲಕರವಾಗಿದೆ.   ರೆಕ್ಕೆಯ ಮೇಲಾºಗ ಬೋಳಾಗಿದೆ. ಮಧ್ಯದಲ್ಲಿ ತಿಳಿಕಂದು ಬಣ್ಣದ ಇಂಗ್ಲಿಷ್‌ನ “ಯು ‘ ಅಕ್ಷರದಂತೆ ಕಾಣುತ್ತದೆ. ರೆಕ್ಕೆಯ ಕೆಳ ಭಾಗದ ಗರಿಯ ಮೇಲೆ -ತಿಳಿ ಕಂದು ಬಣ್ಣದ ಈ ಆಕಾರ ಹೆಚ್ಚು ಉದ್ದವಾಗಿದೆ. ಅದರ ಕೆಳಗೆ ರೆಕ್ಕೆಯ ಗರಿಯ ಬಣ್ಣ ಕಡುಕಪ್ಪಾಗಿದೆ.

 ಸಿಂಹ ಕತ್ತಿನ ರಣ ಹದ್ದು ಸಹ ಎಸಿಪಿಡಿಯಾ ಕುಟುಂಬಕ್ಕೆ ಸೇರಿದೆ.  ಇತರ 
ರಣಹದ್ದಿನಂತೆ -ಇದು ಸಹ ಪರಿಸರವನ್ನು ಶುಚಿಗೊಳಿಸುವ ಜಾಡಮಾಲಿ ಕೆಲಸವನ್ನು ಮಾಡುತ್ತದೆ.  ಹಸು, ಕಾಡೆಮ್ಮೆ, ಆಡು, ಕಡವೆ, ಕರಡಿಯಂಥ ಪ್ರಾಣಿಗಳು ಸತ್ತಾಗ -ಅಲ್ಲಿಗೆ ಬಂದು ಸತ್ತಪ್ರಾಣಿಗಳ ಮಾಂಸವನ್ನು ತಿನ್ನುತ್ತದೆ. 

ಈ ಹಕ್ಕಿಯು ಮರದ ಕೋಲನ್ನು ಕಲ್ಲಿನ ಬೆಟ್ಟದ ಸಂದಿಯಲ್ಲಿ ತುರುಕಿ,  ಅಟ್ಟಣಿಗೆ ನಿರ್ಮಿಸುವುದು ವಿಶೇಷ. ಅದರ ಮಧ್ಯ ಮೆತ್ತನೆಯ ಹಾಸನ್ನು ಹಾಕಿ,  ಅಲ್ಲಿ ಮೊಟ್ಟೆ ಇಡುತ್ತದೆ. 47ರಿಂದ 57 ದಿನದ ತನಕ  ಕಾವುಕೊಟ್ಟು ಮರಿಮಾಡುತ್ತದೆ. ಗಂಡು-ಹೆಣ್ಣು ಸೇರಿ ಗುಟುಕು ಕೊಡುತ್ತವೆ. ಅನಂತರ ಇತರ ಹಕ್ಕಿಗಳ ಗುಂಪಿನಲ್ಲಿ ಸೇರಿ ತನ್ನ ಆಹಾರವನ್ನು ತಾನೇ ಹುಡುಕಿಕೊಳ್ಳುತ್ತದೆ. ಈ ಹಕ್ಕಿಯು 55 ವರ್ಷ ಬದುಕುತ್ತದೆ. 

ಪಿ. ವಿ. ಭಟ್‌ ಮೂರೂರು

ಟಾಪ್ ನ್ಯೂಸ್

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.