ಸೌತೆಯ ಸವಿರುಚಿ


Team Udayavani, Nov 28, 2018, 6:00 AM IST

c-7.jpg

ಬೇಸಿಗೆಯಲ್ಲಿ ಹಿತವೆನಿಸುವ, ವರ್ಷವಿಡೀ ಮಾರುಕಟ್ಟೆಯಲ್ಲಿ ದೊರೆಯುವ, ಎಲ್ಲರಿಗೂ ಇಷ್ಟವಾಗುವ ತರಕಾರಿಗಳಲ್ಲಿ ಸೌತೆಕಾಯಿಯೂ ಒಂದು. ಶೇ. 90ರಷ್ಟು ನೀರಿನಂಶ ಹೊಂದಿರುವ ಈ ತರಕಾರಿ, ಜೀರ್ಣಕ್ರಿಯೆಗೆ ಹಾಗೂ ತ್ವಚೆಯ ಆರೋಗ್ಯಕ್ಕೆ ಒಳ್ಳೆಯದು. ಹಸಿಯಾಗಿ ತಿಂದರೂ ರುಚಿಯಾಗಿರುವ ಸೌತೆಕಾಯಿಯಿಂದ ಸ್ವಾದಿಷ್ಟ ಅಡುಗೆಗಳನ್ನೂ ಮಾಡಬಹುದು. ಅಂಥ ಕೆಲವು ರೆಸಿಪಿಗಳು ಇಲ್ಲಿವೆ.  

1. ಸೌತೆಕಾಯಿ ಜ್ಯೂಸ್‌
ಬೇಕಾಗುವ ಸಾಮಗ್ರಿ: ಕತ್ತರಿಸಿದ ಸೌತೆಕಾಯಿ-3 ಕಪ್‌, ಕರಿಬೇವಿನ ಎಸಳು-10, ಪುದೀನಾ ಎಲೆಗಳು-8, ಜೀರಿಗೆ-3 ಚಮಚ, ಕಾಳುಮೆಣಸಿನ ಪುಡಿ-1/2 ಚಮಚ, ಲಿಂಬೆರಸ-1 ಚಮಚ, ಉಪ್ಪು-ರುಚಿಗೆ ತಕ್ಕಷ್ಟು.

ಮಾಡುವ ವಿಧಾನ: ಸೌತೆಕಾಯಿ, ಕರಿಬೇವು, ಪುದೀನಾ ಸೊಪ್ಪು, ಜೀರಿಗೆ ಹಾಗೂ ಕಾಳುಮೆಣಸಿನ ಪುಡಿಯನ್ನು ಸೇರಿಸಿ, ಒಂದು ಕಪ್‌ ನೀರು ಬೆರೆಸಿ, ಅರೆಯಿರಿ. ಆ ಮಿಶ್ರಣವನ್ನು ಶೋಧಿಸಿ, ಪಾನಕದ ಹದಕ್ಕೆ ನೀರು ಹಾಕಿ, ಉಪ್ಪು, ನಿಂಬೆರಸ ಹಾಕಿದರೆ ಜ್ಯೂಸ್‌ ತಯಾರು. 

2. ಖಮಂಗ್‌ ಕಾಕಡಿ
ಬೇಕಾಗುವ ಸಾಮಗ್ರಿ:
ಸಣ್ಣಗೆ ಹೆಚ್ಚಿದ ಸೌತೆಕಾಯಿ-2 ಕಪ್‌, ಶೇಂಗಾ ಪುಡಿ-3/4 ಕಪ್‌, ಜೀರಿಗೆ ಪುಡಿ-1 ಚಮಚ, ಹಸಿಮೆಣಸು-4, ಸಕ್ಕರೆ-1/2 ಚಮಚ, ತೆಂಗಿನ ತುರಿ-1/2 ಕಪ್‌, ಕೊತ್ತಂಬರಿ ಸೊಪ್ಪು-4 ಚಮಚ, ಲಿಂಬೆರಸ-1 ಚಮಚ, ಉಪ್ಪು-ರುಚಿಗೆ, ಎಣ್ಣೆ-4 ಚಮಚ, ಸಾಸಿವೆ-1 ಚಮಚ, ಇಂಗು-1/4 ಚಮಚ, ಕರಿಬೇವು -8 ಎಸಳು

ಮಾಡುವ ವಿಧಾನ: ಜೀರಿಗೆ, ಉಪ್ಪು, ಹಸಿಮೆಣಸಿನಕಾಯಿಯನ್ನು ಒಟ್ಟಿಗೆ ಅರೆದು, ಆ ಮಿಶ್ರಣಕ್ಕೆ ಸೌತೆ ಹೋಳು, ಶೇಂಗಾ ಪುಡಿ, ಲಿಂಬೆರಸ, ಸಕ್ಕರೆ ಸೇರಿಸಿ ಚೆನ್ನಾಗಿ ಕಲಸಿ. ಅದಕ್ಕೆ ಸಾಸಿವೆ-ಇಂಗು-ಕರಿಬೇವಿನ ಒಗ್ಗರಣೆ ಹಾಕಿ, ತೆಂಗಿನ ತುರಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ, ರುಚಿಯಾದ ಖಮಂಗ್‌ ಕಾಕಡಿ ರೆಡಿ. ಚಪಾತಿ ಇಲ್ಲವೇ ರೊಟ್ಟಿಯ ಜೊತೆ ತಿನ್ನಲು ಬಲು ರುಚಿ. 

3. ಸೌತೆಕಾಯಿ ಸಿಹಿ ಗೊಜ್ಜು
ಬೇಕಾಗುವ ಸಾಮಗ್ರಿ:
ಸಣ್ಣಗೆ ಹೆಚ್ಚಿದ ಸೌತೆ-3 ಕಪ್‌, ತೆಂಗಿನ ತುರಿ-1/2 ಕಪ್‌, ಹುರಿದ ಉದ್ದಿನ ಬೇಳೆ-1/2 ಚಮಚ, ಹುರಿದ ಕಡಲೆ ಬೇಳೆ-1 ಚಮಚ, ಹಸಿಮೆಣಸು-5, ಹುಣಸೆ ರಸ-2 ಚಮಚ, ಬೆಲ್ಲದ ತುರಿ-3 ಚಮಚ, ಶೇಂಗಾ ಪುಡಿ-4 ಚಮಚ, ಎಣ್ಣೆ-4 ಚಮಚ, ಸಾಸಿವೆ-1 ಚಮಚ, ಇಂಗು-1/4 ಚಮಚ, ಕೊತ್ತಂಬರಿ ಸೊಪ್ಪು-4 ಚಮಚ.

ಮಾಡುವ ವಿಧಾನ: ತೆಂಗಿನ ತುರಿ, ಹಸಿಮೆಣಸು, ಉದ್ದಿನ ಬೇಳೆ, ಕಡಲೆ ಬೇಳೆ ಸೇರಿಸಿ ಅರೆದಿರಿಸಿ. ಸೌತೆ ಹೋಳುಗಳಿಗೆ, ಅರೆದ ಮಿಶ್ರಣ, ಹುಣಸೆ ರಸ, ಬೆಲ್ಲದ ತುರಿ, ಕೊತ್ತಂಬರಿ ಸೊಪ್ಪು, ಶೇಂಗಾ ಪುಡಿ ಸೇರಿಸಿ ಚೆನ್ನಾಗಿ ಕಲಕಿ. ಈ ಮಿಶ್ರಣಕ್ಕೆ ಸಾಸಿವೆ-ಇಂಗಿನ ಒಗ್ಗರಣೆ ಹಾಕಿದರೆ, ಸಿಹಿ ಗೊಜ್ಜು ರೆಡಿ.

4. ಸೌತೆಕಾಯಿ ಇಡ್ಲಿ
ಬೇಕಾಗುವ ಸಾಮಗ್ರಿ:
ತುರಿದ ಸೌತೆಕಾಯಿ-3/4 ಕಪ್‌, ಅಕ್ಕಿ ರವೆ-2 ಕಪ್‌, ಮೊಸರು-2 ಕಪ್‌, ತೆಂಗಿನ ತುರಿ-1/2 ಕಪ್‌, ಹಸಿಮೆಣಸು-6, ಶುಂಠಿ-1 ಇಂಚಿನಷ್ಟು, ಕೊತ್ತಂಬರಿ ಸೊಪ್ಪು-2 ಚಮಚ, ಪುದೀನಾ ಸೊಪ್ಪು-3 ಚಮಚ, ಕಾಳುಮೆಣಸಿನಪುಡಿ-1/2 ಚಮಚ, ಜೀರಿಗೆ ಪುಡಿ-3/4 ಚಮಚ, ಎಣ್ಣೆ-3 ಚಮಚ, ಸಾಸಿವೆ-1 ಚಮಚ, ಅರಿಶಿನ-1/2 ಚಮಚ, ಕಡಲೆ ಬೇಳೆ-1 ಚಮಚ, ಉದ್ದಿನಬೇಳೆ-1 ಚಮಚ, ಇಂಗು-1/4 ಚಮಚ, ಉಪ್ಪು-ರುಚಿಗೆ ತಕ್ಕಷ್ಟು.

ಮಾಡುವ ವಿಧಾನ: ಅಕ್ಕಿ ರವೆಯನ್ನು ಹುರಿಯಿರಿ. ಹಸಿಮೆಣಸು, ಶುಂಠಿ ಸೇರಿಸಿ ತರಿತರಿಯಾಗಿ ಅರೆದಿರಿಸಿ. ಅರೆದ ಮಿಶ್ರಣಕ್ಕೆ, ಸೌತೆಕಾಯಿ ತುರಿ, ಅಕ್ಕಿ ರವೆ, ಕಾಳುಮೆಣಸಿನಪುಡಿ, ಜೀರಿಗೆ ಪುಡಿ ಹಾಗೂ ಮೊಸರನ್ನು ಸೇರಿಸಿ ಇಡ್ಲಿ ಮಿಶ್ರಣದ ಹದಕ್ಕೆ ಬೆರೆಸಿ, ಕಾಲು ಗಂಟೆ ಹುದುಗಲು ಬಿಡಿ. ಬಾಣಲೆಯಲ್ಲಿ ಎಣ್ಣೆ ಕಾಯಲಿರಿಸಿ, ಸಾಸಿವೆ, ಇಂಗು, ಅರಶಿನ, ಕಡಲೆ ಬೇಳೆ, ಉದ್ದಿನಬೇಳೆ ಒಗ್ಗರಣೆ ಮಾಡಿ. ಹುದುಗಲಿರಿಸಿದ ಇಡ್ಲಿ ಮಿಶ್ರಣಕ್ಕೆ ಒಗ್ಗರಣೆ, ತೆಂಗಿನ ತುರಿ, ಕೊತ್ತಂಬರಿ, ಪುದಿನಾ ಸೊಪ್ಪು, ಉಪ್ಪು ಬೆರೆಸಿ ಚೆನ್ನಾಗಿ ಕಲಕಿ. ಎಣ್ಣೆ ಸವರಿದ ಇಡ್ಲಿ ತಟ್ಟೆಗೆ, ಹಿಟ್ಟು ಹಾಕಿ ಬೇಯಿಸಿ, ಕಾಯಿ ಚಟ್ನಿಯೊಂದಿಗೆ ಸವಿಯಿರಿ. 

5. ಸೌತೆಕಾಯಿ ಪೂರಿ
ಬೇಕಾಗುವ ಸಾಮಗ್ರಿ:
ಸೌತೆಕಾಯಿ ತುರಿ-1 ಕಪ್‌, ಗೋಧಿ ಹಿಟ್ಟು-2 ಕಪ್‌, ಮೈದಾ ಹಿಟ್ಟು-3 ಚಮಚ, ಚಿರೋಟಿ ರವೆ-2 ಚಮಚ, ತುಪ್ಪ-1 ಚಮಚ, ಉಪ್ಪು-ರುಚಿಗೆ, ಸಕ್ಕರೆ-1 ಚಮಚ, ಕರಿಯಲು ಎಣ್ಣೆ.

ಮಾಡುವ ವಿಧಾನ: ಗೋದಿ ಹಿಟ್ಟಿಗೆ, ಸೌತೆಕಾಯಿ ತುರಿ, ಮೈದಾ ಹಿಟ್ಟು, ಚಿರೋಟಿ ರವೆ, ಉಪ್ಪು, ಸಕ್ಕರೆ, ತುಪ್ಪ ಸೇರಿಸಿ, ಗಟ್ಟಿಯಾಗಿ ಕಲಸಿ, ಅರ್ಧ ಗಂಟೆ ನೆನೆಯಲು ಬಿಡಿ. ನಂತರ ಚಿಕ್ಕ ಚಿಕ್ಕ, ಉಂಡೆ ಮಾಡಿ, ಪೂರಿ ಗಾತ್ರಕ್ಕೆ ಲಟ್ಟಿಸಿ, ಕರಿಯಿರಿ.  

ಜಯಶ್ರೀ ಕಾಲ್ಕುಂದ್ರಿ , ಬೆಂಗಳೂರು

ಟಾಪ್ ನ್ಯೂಸ್

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.