ಹಾಯ್‌, “ಹೈ ವೇಸ್ಟ್‌’


Team Udayavani, Dec 6, 2018, 6:00 AM IST

d-9.jpg

ಕಪಾಟಿನಲ್ಲಿ ಭದ್ರವಾಗಿ ಇಟ್ಟಿದ್ದ ಆ ಬೆಲ್ ಬಾಟಮ್ ಜೀನ್ಸ್‌, ಬೂಟ್‌ ಕಟ್‌ ಜೀನ್ಸ್‌ ಸೇರಿದಂತೆ ಇತರ ಎಲ್ಲ ಹೈ ವೇಸ್ಟ್‌ ಜೀನ್ಸ್‌ ಪ್ಯಾಂಟ್‌ಗಳನ್ನೂ ಹೊರ ತೆಗೆಯಿರಿ. ಸಂದೇಹವಿಲ್ಲದೆ ಅವುಗಳನ್ನು ಮತ್ತೆ ತೊಟ್ಟುಕೊಂಡು ಎಲ್ಲೆ ಡೆ ಓಡಾಡಬಹುದು ನೋಡಿ!

ಫ್ಯಾಷನ್‌ ಲೋಕದಲ್ಲಿ ಒಮ್ಮೆಲೇ ಲೊ ವೇಸ್ಟ್ ಜೀನ್ಸ್ ಬಹು ದೊಡ್ಡ ಅಲೆ ಎಬ್ಬಿಸಿತ್ತು. ಎಬ್ಬಿಸಿದ ನಂತರ ವರ್ಷಗಳ ಕಾಲ ಅದರದೇ ಹಾವಳಿ ಇತ್ತು. ಆದರೀಗ ಕೇವಲ ರೆಟ್ರೋ ಥೀಮ… ಪಾರ್ಟಿ, ಫ್ಯಾನ್ಸಿ ಡ್ರೆಸ್‌ ಹಾಗು ಫ್ಯಾಷನ್‌ ಶೋಗಳಿಗೆ ಸೀಮಿತವಾಗಿದ್ದ ಹೈ ವೇಸ್ಟ್ ಜೀನ್ಸ್ ಟ್ರೆಂಡ್‌ ಆಗುತ್ತಿದೆ. ಹೌದು! ನಿಮ್ಮ ಕಪಾಟಿನಲ್ಲಿ ಭದ್ರವಾಗಿ ಇಟ್ಟಿದ್ದ ಆ ಬೆಲ… ಬಾಟಮ… ಜೀನ್ಸ್‌, ಬೂಟ್‌ ಕಟ್‌ ಜೀನ್ಸ್‌ ಸೇರಿದಂತೆ ಇತರ ಎಲ್ಲ ಹೈ ವೇಸ್ಟ್‌ ಜೀನ್ಸ್‌ ಪ್ಯಾಂಟ್‌ಗಳನ್ನೂ ಹೊರ ತೆಗೆಯಿರಿ. ಸಂದೇಹವಿಲ್ಲದೆ ಅವುಗಳನ್ನು ಮತ್ತೆ ತೊಟ್ಟುಕೊಂಡು ಎಲ್ಲೆಡೆ ಓಡಾಡಬಹುದು ನೋಡಿ!

ಚಿತ್ರನಟಿಯರು ಫ್ಲೈಟ್‌ ಏರುವ ಮುನ್ನ ಅಥವಾ ಫ್ಲೈಟ್‌ನಿಂದ ಇಳಿದಾಗ ವಿಮಾನ ನಿಲ್ದಾಣದಲ್ಲಿ ಅವರನ್ನು ಸ್ವಾಗತಿಸುವುದೇ ಫೋಟೋಗ್ರಾಫ‌ರ್‌ಗಳ ಕ್ಯಾಮೆರಾಗಳು. ಈ ಕಾರಣದಿಂದ ಅವರೆಲ್ಲ ಆಕರ್ಷಕ ಉಡುಪನ್ನು ತೊಟ್ಟುಕೊಂಡೇ ಇಂಥ ಸ್ಥಳಗಳಲ್ಲಿ ದರ್ಶನ ಕೊಡುತ್ತಾರೆ. “ಏರ್‌ಪೋರ್ಟ್‌ ಫ್ಯಾಶನ್‌’ ಎಂಬುದು ಅಸ್ತಿತ್ವಕ್ಕೆ ಬಂದಿದ್ದು ಕೂಡ ಇದೇ ಹಿನ್ನೆಲೆಯಲ್ಲಿಯೇ. ಸದ್ಯದ ಏರ್‌ಪೋರ್ಟ್‌ ಫ್ಯಾಶನ್‌ ಅಂದ್ರೆ… ಹೈ ವೇಸ್ಟ್‌ ಜೀನ್ಸ್‌ ಪ್ಯಾಂಟ್‌ ಹಾಗೂ ಅದರ ಜೊತೆ ಶರ್ಟ್‌ ಅಥವಾ ಟಿ ಶರ್ಟ್‌ಗಳು. ಹಾಲಿವುಡ್‌ ನಟಿಯಾಗಿರುವ ಪ್ರಿಯಾಂಕಾ ಚೋಪ್ರಾ, ಬೆಂಗಳೂರಿನ ಬೆಡಗಿಯರಾದ ದೀಪಿಕಾ ಪಡುಕೋಣೆ, ಅನುಷ್ಕಾ ಶರ್ಮಾ, ಬಾಲಿವುಡ್‌ ನಟಿಯರಾದ ಆಥಿಯಾ ಶೆಟ್ಟಿ, ಸೋನಂ ಕಪೂರ್‌, ಪರಿಣೀತಿ ಚೋಪ್ರಾ, ಶ್ರದ್ಧಾ ಕಪೂರ್‌, ಮಲೈಕಾ ಅರೋರಾ, ಆಲಿಯಾ ಭಟ್, ಮತ್ತಿರರು ಈ ಫ್ಯಾಷನ್‌ ಟ್ರೆಂಡ್‌ ಆಗುತ್ತಿರಲು ಕಾರಣಕರ್ತರು.

ನಿಮ್ಮ ದೇಹ ಪ್ರಕೃತಿಗೆ ಯಾವ ಥರದ ಜೀನ್ಸ್‌ ಒಪ್ಪುತ್ತದೆ ಎನ್ನುವುದನ್ನು ಕಂಡುಹಿಡಿಯಲು ಇಲ್ಲಿವೆ ಕೆಲವು ಟಿಪ್ಸ್‌. ಚಿಕ್ಕ ದೇಹಾಕೃತಿ ಹೊಂದಿದ್ದರೆ, ಸ್ಕಿನ್‌ ಫಿಟ್‌ ಜೀನ್ಸ್‌ ಚೆಂದ. ಸ್ಕಿನ್‌ ಫಿಟ್‌ ಎಂದರೆ, ಬಹುತೇಕ ಮೈಗಂಟುವಷ್ಟು ಬಿಗಿಯಾಗಿರುವ ಉಡುಗೆ. ಇದನ್ನು ಉಟ್ಟರೆ, ನಡು ಸಣ್ಣ ಹಾಗೂ ಕಾಲುಗಳು ಉದ್ದವಾಗಿ ಕಾಣಿಸುತ್ತವೆ. ಆದರೆ, ಇದರ ಜೊತೆ ಸಡಿಲ ಅಂಗಿ ಧರಿಸಬೇಕೇ ಹೊರತು, ಬಿಗಿಯಾದ ಅಂಗಿ ತೊಡಬಾರದು. ಬಿಗಿಯಾದ ಅಂಗಿ ತೊಟ್ಟರೆ ದೇಹಾಕೃತಿ ಇರುವುದಕ್ಕಿಂತಲೂ ಚಿಕ್ಕದಾಗಿ ಕಾಣಿಸುತ್ತದೆ. ಹಾಗಾಗಿ, ಮಹಿಳೆಯರು ಗಿಡ್ಡವಾಗಿ ಕಾಣಿಸುತ್ತಾರೆ. ಗಟ್ಟಿಮುಟ್ಟಾದ ದೇಹಾಕೃತಿ ಇದ್ದರೆ, ಒಳ್ಳೆಯ ಫಿಟ್ಟಿಂಗ್‌ ಇರುವ ಅಂಗಿ ಜೊತೆ ಬೂಟ್‌ ಕಟ್‌ ಅಥವಾ ಬೆಲ್‌ ಬಾಟಮ… ಜೀನ್ಸ್‌ ತೊಡಬಹುದು. ಇದನ್ನು ಉಟ್ಟರೆ, ಮಹಿಳೆಯರು ದಪ್ಪಗೆ ಕಾಣಿಸುವುದಿಲ್ಲ. ಈ ಪ್ಯಾಂಟ್‌ ಜೊತೆ ಸಡಿಲ ಅಂಗಿ ತೊಟ್ಟರೆ ದಪ್ಪ ಕಾಣುವ ಸಾಧ್ಯತೆ ಇದೆ. ಆದ್ದರಿಂದ ಸಡಿಲ ಅಂಗಿಯ ತೋಳುಗಳಿಗೆ ಫಿಟ್ಟಿಂಗ್‌ ಇಡಿಸಿ.

ಬಣ್ಣ ಬಣ್ಣದ ಜೀನ್ಸ್‌
ಜೀನ್ಸ್ ಎಂದಾಗ ಕೇವಲ ಗಾಢ ನೀಲಿ ಹಾಗು ತಿಳಿ ನೀಲಿ ಅಷ್ಟೇ ಅಲ್ಲ; ಕಂದು, ಬೂದಿ, ಕಪ್ಪು, ಹಸಿರು, ಬಿಳಿಯೂ ಇವೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ, ಜೀನ್ಸ್‌ನಲ್ಲೂ ಚೆಕ್ಸ್‌ (ಅಂದರೆ ಚೌಕಾಕಾರ), ಚುಕ್ಕಿಗಳು, ಹೂವಿನ ಆಕೃತಿಯ ಮುದ್ರೆಗಳು, ಎಂಬ್ರಾಯರಿ ಮುಂತಾದ ಆಯ್ಕೆಗಳಿವೆ. ಚಿನೊಸ್‌ ಹೆಸರಿನಲ್ಲಿ ಬಣ್ಣ- ಬಣ್ಣದ ಜೀನ್ಸ್‌ ಪ್ಯಾಂಟ್‌ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಕೆಂಪು, ಹಳದಿ, ಗುಲಾಬಿ, ನೇರಳೆ, ಕೇಸರಿ ಮುಂತಾದ ಬಣ್ಣಗಳಲ್ಲಿ ಜೀನ್ಸ್‌ ಸಿಗುತ್ತವೆ. ಇವುಗಳಲ್ಲೂ ಹೈ ವೇಸ್ಟ್‌ ಆಯ್ಕೆ ಲಭ್ಯ.

– ಅದಿತಿಮಾನಸ ಟಿ.ಎಸ್‌.

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.