ಈಶಾ ಸೇವಾ


Team Udayavani, Apr 6, 2018, 7:00 AM IST

18.jpg

ತೆರೆಯ ಮೇಲೆ ಕಾಣಿಸಿಕೊಳ್ಳುವುದು ಮಾದಕ ಸುಂದರಿಯಾಗಿ. ಗ್ಲಾಮರ್‌ನಲ್ಲಿ ಇವಳನ್ನು ಮೀರಿಸಿದವರಿಲ್ಲ. ವಾರೆನೋಟ ಬೀರಿ ತುಟಿಯಂಚಿನಲ್ಲಿ ನಕ್ಕಳೆಂದರೆ ಪಡ್ಡೆಗಳ ಎದೆ ಬಡಿತ ಡಬ್‌ ಡಬ್‌. ಇದು ಈಶಾ ಗುಪ್ತಾ ಎಂಬ ನಟಿಯ ಒಂದು ಮುಖ. ಅವಳಿಗೆ ಸಮಾಜಮುಖಿಯಾದ ಇನ್ನೊಂದು ಮುಖವೂ ಇದೆ ಎನ್ನುವುದು ಮಾತ್ರ ಹೆಚ್ಚಿನವರಿಗೆ ತಿಳಿದಿಲ್ಲ. 

ಹಣಕಾಸಿನ ಬೆಂಬಲವಿಲ್ಲದೆ ಪರದಾಡುವ ಉದಯೋನ್ಮುಖ ಫ‌ುಟ್ಬಾಲ್‌ ಆಟಗಾರರಿಗೆ ನೆರವಾಗುವ ಉದ್ದೇಶದಿಂದ ಈಶಾ ಅಕಾಡೆಮಿಯೊಂದನ್ನು ಪ್ರಾರಂಭಿಸುವ ಚಿಂತನೆಯಲ್ಲಿದ್ದಾಳೆ. ಇನ್ನೊಂದೆರಡು ತಿಂಗಳಲ್ಲಿ ಈ ಅಕಾಡೆಮಿ ಅಸ್ತಿತ್ವಕ್ಕೆ ಬರಲಿದೆ.  ಇದೀಗ ಆಕೆ ಸಮಾಜ ಸೇವೆಯಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾಳೆ. ಈ ಸಲ ಈಶಾ ಉದ್ಧಾರ ಮಾಡಲು ಮುಂದಾಗಿರುವುದು ಹಳ್ಳಿ ಮಕ್ಕಳನ್ನು. ಹಳ್ಳಿಯ ಮಕ್ಕಳು ವಿದ್ಯಾಭ್ಯಾಸದಲ್ಲಿ ಹಿಂದುಳಿಯುತ್ತಿರುವುದು ಕಳವಳಕಾರಿ ವಿಚಾರ ಎಂದು ಭಾವಿಸಿರುವ ಈಶಾ ಉತ್ತರಪ್ರದೇಶದ ಬಿಜ್ನೋರ್‌ ಜಿಲ್ಲೆಯ ಎರಡು ಹಳ್ಳಿಗಳನ್ನು ದತ್ತು ಸ್ವೀಕರಿಸಿದ್ದಾಳಂತೆ. ಈ ಹಳ್ಳಿಯ ಬಡ ಮಕ್ಕಳ ಶಿಕ್ಷಣದ ಸಂಪೂರ್ಣ ಖರ್ಚು ಈಶಾಳದ್ದು. ದಿಲ್ಲಿಯ ಎನ್‌ಜಿಒ ಒಂದರ ಸಹಭಾಗಿತ್ವದಲ್ಲಿ ತನ್ನ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಈಶಾ ಕಾರ್ಯಗತಗೊಳಿಸುತ್ತಿದ್ದಾಳೆ. ಮೊದಲಾಗಿ ಬಡವರ ಮಕ್ಕಳು ಕಲಿಯುವ ಶಾಲೆಗಳಿಗೆ ಮೂಲಸೌಲಭ್ಯಗಳನ್ನು ಒದಗಿಸುವುದು, ಬಳಿಕ ಶಿಕ್ಷಕರನ್ನು ನೇಮಿಸುವುದು, ಮಕ್ಕಳು ಶಾಲೆ ಅರ್ಧಕ್ಕೆ ಬಿಡದಂತೆ ನೋಡಿಕೊಳ್ಳುವುದು, ಪುಸ್ತಕ, ಸಮವಸ್ತ್ರ ಎಂದು ಅವರ ಇತರ ಖರ್ಚುಗಳನ್ನು ಭರಿಸುವಂಥ ಹೊಣೆಗಾರಿಕೆಗಳನ್ನು ಈಶಾ ವಹಿಸಿಕೊಂಡಿದ್ದಾಳೆ. ಇದು ನಿಜವಾಗಿಯೂ ಭಾರೀ ದೊಡ್ಡ ಯೋಜನೆ ಹಾಗೂ ಅಷ್ಟೇ ನಿಧಿ ಅಗತ್ಯವಿದೆ ಎನ್ನುವ ಅರಿವು ಈಶಾಳಿಗಿದೆ. ಸಮಾಜದ ಸಹೃದಯರ ನೆರವಿನಿಂದ ಯೋಜನೆ ಯಶಸ್ವಿಯಾಗಲಿದೆ ಎನ್ನುವ ವಿಶ್ವಾಸ ಅವಳದ್ದು. 

ಬಾಲಿವುಡ್‌ ನಟಿಯೊಬ್ಬಳು ತಾನು ಗಳಿಸಿದ್ದೆಲ್ಲವನ್ನು ಬಡವರಿಗಾಗಿ ವ್ಯಯಿಸುವುದು ಒಂದು ಅಪರೂಪದ ಉದಾಹರಣೆಯೇ ಸರಿ. 

ಟಾಪ್ ನ್ಯೂಸ್

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.