ಹಿರಿಯರು, ಜಾಕಲೀನ್‌ ಫೆರ್ನಾಂಡೀಸರು, ಗ್ಲಾಮರು, ಪಿಕ್ಚರು …


Team Udayavani, Sep 1, 2017, 6:35 AM IST

Jacqueline-Fernandez,-Bolly.jpg

ಬೇರೆ ಯಾವುದೇ ವೃತ್ತಿಯಲ್ಲಾದರೆ ಎಂಟು ವರ್ಷ ಎನ್ನುವುದು ದೊಡ್ಡ ಸಂಖ್ಯೆಯೇನೂ ಅಲ್ಲ. ಆದರೆ, ಸಿನೆಮಾ ಕ್ಷೇತ್ರದಲ್ಲಿ ಮಾತ್ರ ಪ್ರತಿ ವರ್ಷವೂ ಲೆಕ್ಕಕ್ಕೆ ಸಿಗುತ್ತದೆ. ಅದರಲ್ಲೂ ನಟಿಯಾಗಿದ್ದರೆ ವರ್ಷಗಳು ಬಹಳ ಬೇಗ ಮುಂದೆ ಹೋಗುತ್ತಿರುತ್ತದೆ. ಎಂಟು ವರ್ಷ ಎಂದರೆ ನಟಿ ಹಿರಿಯ ನಟಿಯಾಗಿ ಭಡ್ತಿ ಪಡೆದಿರುತ್ತಾಳೆ. ಈ ಹಿರಿತನದಿಂದ ಕೆಲವರಿಗೆ ಮಾತ್ರ ಅನುಕೂಲವಾಗುತ್ತದೆ. ಅವರು ಕಿರಿಯರ ಸ್ಪರ್ಧೆಯ ನಡುವೆಯೂ ಮಿಂಚುತ್ತಿರುತ್ತಾರೆ. ಆದರೆ, ಉಳಿದವರಿಗೆ ಹಿರಿತನವೇ ಶಾಪವಾಗುತ್ತದೆ. ಹಿರಿಯರಾದ ಕಾರಣಕ್ಕೆ ಅವರು ಬದಿಗೆ ಸರಿದಿರುತ್ತಾರೆ.

ಈ ಪೈಕಿ ಮೊದಲನೇ ಸಾಲಿನಲ್ಲಿ ಬರುವವಳು ಜಾಕಲಿನ್‌ ಫೆರ್ನಾಂಡಿಸ್‌. ಬಾಲಿವುಡ್‌ಗೆ ಬಂದು ಆಗಲೇ ಎಂಟು ವರ್ಷ ಆಯಿತು ಎನ್ನುವುದನ್ನು ಉಳಿದವರಿಗೆ ಬಿಡಿ ಜಾಕಲಿನ್‌ಗೆ  ನಂಬಲು ಸಾಧ್ಯವಾಗುವುದಿಲ್ಲವಂತೆ. ಎಲ್ಲೋ ನಿನ್ನೆ ಮೊನ್ನೆ ಬಂದ ಹಾಗಿದೆ ಎನ್ನುತ್ತಿದ್ದಾಳೆ ಜಾಕಲಿನ್‌ ಗತಕಾಲವನ್ನು ಮೆಲುಕು ಹಾಕುವಾಗ. ಈ ಎಂಟು ವರ್ಷಗಳಲ್ಲಿ ಸಲ್ಮಾನ್‌, ಅಕ್ಷಯ್‌ ಕುಮಾರ್‌ ಸೇರಿದಂತೆ ಸೂಪರ್‌ಸ್ಟಾರ್‌ಗಳ ಜತೆಗೆ ಹಾಗೂ ರಿತೇಶ್‌ ದೇಶ್‌ಮುಖ್‌, ಸಿದ್ಧಾರ್ಥ ಮಲ್ಹೋತ್ರ ಅವರಂತಹ ಕಿರಿಯರಿಗೆ ನಾಯಕಿಯಾಗಿ ನಟಿಸಿದ್ದಾಳೆ. ಬರೀ ಗ್ಲಾಮರ್‌ ಪಾತ್ರಗಳನ್ನು ಮಾಡುತ್ತಾಳೆ ಎನ್ನುವುದು ಜಾಕಲಿನ್‌ ಕುರಿತಾಗಿರುವ ದೂರು. ಇದು ನಿಜವೂ ಹೌದು. ಎಂಟು ವರ್ಷಗಳಲ್ಲಿ ಸುಮಾರು 15 ಚಿತ್ರಗಳಲ್ಲಿ ನಟಿಸಿದ್ದರೂ ಎಲ್ಲದರಲ್ಲೂ ಜಾಕಲಿನ್‌ ಕಾಣಿಸಿಕೊಂಡಿರುವುದು ಗ್ಲಾಮರ್‌ ಬೊಂಬೆಯಾಗಿ. ಹಾಗೆಂದು ಅವಳಿಗೆ ನಟಿಸಲು ಗೊತ್ತಿಲ್ಲ ಎಂದಲ್ಲ ಆದರೆ ಅವಳ ಒಳಗಿರುವ ನಟಿಯನ್ನು ಹೊರ ತರುವಂತಹ ಪಾತ್ರಗಳು ಇನ್ನೂ ಸಿಕ್ಕಿಲ್ಲ. ಹಾಗೆಂದು ಜಾಕಲಿನ್‌ ಇದಕ್ಕೆಲ್ಲ ಬೇಸರಿಸುವುದಿಲ್ಲ. 

“”ಬಾಲಿವುಡ್‌ನ‌ಲ್ಲಿ ನಾನು ಸ್ವಂತ ಪರಿಶ್ರಮದಿಂದ ನೆಲೆ ಕಂಡು ಕೊಂಡಿದ್ದೇನೆ. ಇದು ನನ್ನ ಬದುಕು. ಹೇಗೆ ಬದುಕಬೇಕೆಂದು ನಿರ್ಧರಿಸುವ ಹಕ್ಕು ನನಗಿದೆ. ಆ ಪಾತ್ರ ಸಿಕ್ಕಿಲ್ಲ, ಈ ಪಾತ್ರ ಸಿಕ್ಕಿಲ್ಲ ಎಂದು ಕೊರಗುವುದಕ್ಕಿಂತ ಸಿಕ್ಕಿದ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುವುದು ಜಾಣತನ. ಗಂಭೀರ ಪಾತ್ರಗಳಲ್ಲಿ ನಟಿಸುವಷ್ಟು ವಯಸ್ಸು ನನಗಿನ್ನೂ ಆಗಿಲ್ಲ. ಆ ಕಾಲ ಬಂದಾಗ ಬದಲಾವಣೆ ಮಾಡಿಕೊಂಡರಾಯಿತು” ಎನ್ನುವುದು ಜಾಕಲಿನ್‌ ತನ್ನನ್ನು ಟೀಕಿಸುವವರ ಮುಖಕ್ಕೆ ಹೊಡೆದಂತೆ ನೀಡಿರುವ ಉತ್ತರ. 

ಟಾಪ್ ನ್ಯೂಸ್

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.