ಅಂಜನಾ ಕಿತಾಬ್‌


Team Udayavani, Feb 9, 2018, 8:15 AM IST

18.jpg

ತೂಕ ಇಳಿಸುವುದು ಹೇಗೆ, ರುಚಿಕಟ್ಟಾಗಿ ಅಡುಗೆ ಮಾಡುವುದು ಹೇಗೆ, ಸ್ಟೈಲಾಗಿ ಯೋಗ ಮಾಡುವುದು ಹೇಗೆ ಎಂಬುದನ್ನೆಲ್ಲ ಕಲಿಸಲು ಹಲವು ನಟೀಮಣಿಯರು ಪುಸ್ತಕ ಬರೆದಿದ್ದಾರೆ. ಆದರೆ ಅಡುಗೆ ಮನೆಯ ಬಜೆಟ್‌ ಹೊಂದಿಸುವುದು ಹೇಗೆ ಎಂದು ಯಾರಾದರೂ ಬರೆದಿದ್ದಾರೆಯೇ? ಇಷ್ಟಕ್ಕೂ ಇದೊಂದು ಪುಸ್ತಕ ಬರೆಯುವಷ್ಟು ದೊಡ್ಡ ಸಂಗತಿಯಾ? ಅಂಜನಾ ಸುಖಾನಿ ಪ್ರಕಾರ ಹೌದು. ಮನೆಯ ಬಜೆಟ್‌ನಲ್ಲಿ ಮಹಿಳೆಯರದ್ದೇ ಮುಖ್ಯ ಪಾತ್ರ. ಒಂದೊಂದು ಪೈಸೆಯನ್ನು ಲೆಕ್ಕ ಹಾಕಿ ಖರ್ಚು ಮಾಡುವ ಕಲೆ ಅವರಿಗೆ ಮಾತ್ರ ಕರಗತವಾಗಿರುತ್ತದೆ. ಆದರೆ ಇಷ್ಟರತನಕ ಯಾರೂ ಗೃಹಿಣಿಯರ ಈ ಕಲೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಹೀಗಾಗಿ ಅಂಜನಾ ಈ ಕುರಿತು “ಹಿಸಾಬ್‌ ಕಿತಾಬ್‌’ ಎಂಬ ಪುಸ್ತಕ ಬರೆದಿದ್ದಾಳೆ. ಅಚ್ಚಿನ ಮನೆಯಲ್ಲಿರುವ ಪುಸ್ತಕ ಸದ್ಯದಲ್ಲೇ ಬಿಡುಗಡೆಯಾಗಲಿದೆಯಂತೆ. ಇದು ನನ್ನದೇ ಅನುಭವ ಕಥನ ಎಂದು ಮುನ್ನುಡಿಯಲ್ಲೇ ಅಂಜನಾ ಹೇಳಿಕೊಂಡಿದ್ದಾಳೆ. ಹಾಗೆಂದು ಇದು ಹೇಗೆ ಹಣ ಉಳಿತಾಯ ಮಾಡುವುದು ಎಂದು ಉಪದೇಶ ನೀಡುವ ಪುಸ್ತಕ ಅಲ್ಲ. ಗೃಹಿಣಿಯರು ಮತ್ತು ನೌಕರಿಯಲ್ಲಿರುವ ಮಹಿಳೆಯರು ಹೇಗೆ ಮನೆಯ ಖರ್ಚುವೆಚ್ಚಗಳನ್ನು ಸರಿದೂಗಿಸಿಕೊಂಡು ಹೋಗುತ್ತಾರೆ, ಈ ಸಂದರ್ಭದಲ್ಲಿ ಅವರು ಎದುರಿಸುವ ಸಮಸ್ಯೆಗಳು, ಅವರ ಮಾನಸಿಕ ತೊಳಲಾಟ ಇತ್ಯಾದಿಗಳ ನೈಜ ಚಿತ್ರಣ ಎನ್ನುವುದು ಅಂಜನಾ ನೀಡುವ ವಿವರಣೆ. ಅಂದ ಹಾಗೆ ಈ ಅಂಜನಾ ಯಾರು? ಸಲಾಮ್‌-ಇ-ಇಶ್ಕ್, ಗೋಲ್‌ಮಾಲ್‌ ರಿಟರ್ನ್ಸ್, ಅಲ್ಲಾ ಕೆ ಬಂದೇ ಇತ್ಯಾದಿ ಹಿಟ್‌ ಚಿತ್ರಗಳಲ್ಲಿ ನಟಿಸಿದ್ದರೂ ಹಿಟ್‌ ಆಗದೆ ಉಳಿದಿರುವ ನಟಿ ಅಂಜನಾ ಸುಖಾನಿ. ಹದಿಮೂರು ವರ್ಷಗಳ ಹಿಂದೆಯೇ ಬಾಲಿವುಡ್‌ಗೆ ಬಂದಿದ್ದರೂ ಇಷ್ಟರ ತನಕ ನಟಿಸಿರುವುದು ಇಪ್ಪತ್ತೂ ಚಿಲ್ಲರೆ ಚಿತ್ರಗಳಲ್ಲಿ ಮಾತ್ರ. ಅದರಲ್ಲಿ ಕನ್ನಡ, ತಮಿಳು, ತೆಲುಗು, ಪಂಜಾಬಿ, ಮರಾಠಿ ಭಾಷೆಗಳ ಚಿತ್ರವೂ ಸೇರಿದೆ. ಸಿನೆಮಾದ ಹಿನ್ನೆಲೆಯಿಲ್ಲದ ರಾಜಸ್ಥಾನದ ಸಿಂಧಿ ಕುಟುಂಬವೊಂದರಲ್ಲಿ ಜನಿಸಿದ ಅಂಜನಾ, ಬಣ್ಣ ಹಚ್ಚಿದ್ದೇ ಒಂದು ಪವಾಡ. ಬಣ್ಣದ ಬದುಕಿನ ಹೋರಾಟದಲ್ಲಿ ಜಾಹೀರಾತು ಚಿತ್ರವೊಂದರಲ್ಲಿ ಅಮಿತಾಭ್‌ ಬಚ್ಚನ್‌ ಜತೆಗೆ ನಟಿಸಲು ಅವಕಾಶ ಸಿಕ್ಕಿದ್ದು ತನ್ನ ಪುಣ್ಯ ಎಂದು ಭಾವಿಸಿಕೊಂಡಿದ್ದಾಳೆ. ಸದ್ಯ ಕೈಯಲ್ಲಿ ಯಾವುದೇ ಸಿನೆಮಾ ಇಲ್ಲದಿದ್ದರೂ, ಪುಸ್ತಕ, ಆಲ್ಬಂ, ಟಿವಿ ಕಾರ್ಯಕ್ರಮ ಎಂದು ಫ‌ುಲ್‌ ಬ್ಯುಸಿಯಾಗಿದ್ದಾಳೆ.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.