ಸಾಯಿಗೆ ಸ್ಥಾಯಿಯಾಗುವ ಆಸೆ !
Team Udayavani, Jan 18, 2019, 12:30 AM IST
ಮರಾಠಿ ಹುಡುಗಿ ಸಾಯಿ ತಮ್ಹಾಣ್ಕರ್ಗೆ ಮರಾಠಿ ಚಿತ್ರರಂಗವೇ ಕರ್ಮಭೂಮಿ. ಸಾಮಾನ್ಯವಾಗಿ ಪ್ರಾದೇಶಿಕ ಭಾಷೆಗಳ ನಟಿಯರಿಗೆ ಬಾಲಿವುಡ್ಗೆ ಹೋಗಿ ದೇಶ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕೆಂಬ ತುಡಿತವಿರುತ್ತದೆ. ಆದರೆ, ಸಾಯಿ ಇದಕ್ಕೊಂದು ಅಪವಾದ. ಆದರೂ ಅವಳು ಆಗಾಗ ಹಿಂದಿ ಚಿತ್ರರಂಗಕ್ಕೆ ಬಂದು ಹೋಗುವುದಿದೆ. ಒಂದು ಮಲಯಾಳಂ/ತಮಿಳು ಚಿತ್ರದಲ್ಲೂ ನಟಿಸಿದ್ದಾಳೆ. ಹಾಗೆಂದು ಸಾಯಿ ಬಾಲಿವುಡ್ಗೆ ಹೊಸಬಳೇನಲ್ಲ.
ಒಂದು ದಶಕದ ಹಿಂದೆಯೇ ಬ್ಲ್ಯಾಕ್ ಆ್ಯಂಡ್ ವೈಟ್ ಎಂಬ ಚಿತ್ರದ ಮೂಲಕ ಅವಳ ಬಾಲಿವುಡ್ ಆರಂಗೇಟ್ರಂ ಆಗಿತ್ತು. ಆದರೆ, ಬಳಿಕ ಅವಳಿಗೆ ಅವಕಾಶ ಹರಿದುಬಂದದ್ದು ಮರಾಠಿ ಚಿತ್ರರಂಗದಿಂದ. ಹೀಗಾಗಿ ಅಲ್ಲಿಯೇ ಗಟ್ಟಿಯಾಗಿ ನೆಲೆಯೂರಿದಳು. 25ಕ್ಕೂ ಹೆಚ್ಚು ಚಿತ್ರಗಳು, ಹತ್ತಾರು ಧಾರಾವಾಹಿಗಳಿಗೆ ಅವಳು ನಾಯಕಿಯಾಗಿದ್ದಾಳೆ. ಪ್ರಶಸ್ತಿಗಳು ಸಿಕ್ಕಿವೆ.
ಇದು ಸಾಯಿಯ ಒಂದು ಮುಖವಾದರೆ ಅವಳೊಬ್ಬ ಅತ್ಯುತ್ತಮ ಕ್ರೀಡಾಪಟು ಎನ್ನುವುದು ಇನ್ನೊಂದು ಮುಖ. ಆಕೆ ರಾಜ್ಯಮಟ್ಟದ ಕಬಡ್ಡಿ ಆಟಗಾರ್ತಿ. ಇಷ್ಟು ಮಾತ್ರವಲ್ಲದೆ ಕರಾಟೆಯಲ್ಲಿ ಅರೇಂಜ್ ಬೆಲ್ಟ್ ಪಡೆದಿದ್ದಾಳೆ. ಕೊಲ್ಲಾಪುರೆ ಮಾವೆÛ ಎಂಬ ತನ್ನದೇ ಆದ ಕುಸ್ತಿ ತಂಡವನ್ನೂ ಹೊಂದಿದ್ದಾಳೆ. ಚಿತ್ರರಂಗಕ್ಕೆ ಬರುವ ಮೊದಲು ನಾಟಕ ಕಲಾವಿದೆಯಾಗಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದಳು. ಬೀದಿ ನಾಟಕಗಳ ಮೂಲಕ ಜನಪ್ರಿಯಳಾಗಿದ್ದಳು. ಹಾಗೇ ನೋಡಿದರೆ ನಾಟಕವೇ ಕ್ರೀಡಾಪಟುವಾಗಬೇಕಿಕದ್ದವಳನ್ನು ಚಿತ್ರರಂಗಕ್ಕೆ ಕರೆತಂದದ್ದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ