ಮೈಕೊರೆವ ಚಳಿಯಲ್ಲಿ …


Team Udayavani, Feb 8, 2019, 12:30 AM IST

12.jpg

ಅಂತೂ ಮಳೆರಾಯನ ಆಡಳಿತಾವಧಿ ಕೊನೆಗೊಂಡಿದೆ. ಚಳಿರಾಯ ಪಟ್ಟವೇರಿದ್ದಾನೆ. ಕಾಡುವ ಚಳಿಗೆ ಎಲ್ಲರ ಬದುಕು – ಭಾವಗಳೆಲ್ಲ ಬದಲಾಗುವ ಕಾಲವಿದು. ಜತೆಗೆ ಬೆಚ್ಚಗಿನ ಬಟ್ಟೆ ಹೊದ್ದುಕೊಳ್ಳುವ ಕಾಲವೂ ಹೌದು. ಚಳಿಗಾಲದ ಈ ಅವಧಿಯಲ್ಲಿ ರಾತ್ರಿ ದೀರ್ಘ‌, ಹಗಲು ಕಿರಿದಾಗಿರುವುದು. ಈ ಚಳಿಗಾಲದ ಹೊತ್ತಿಗೆ ಒಂದು ಬೆಚ್ಚಗಿನ ಅಕ್ಷರ ಪಯಣ ಇಲ್ಲಿದೆ. 

ಈ ಚಳಿಗಾಲದ ಚಳಿಗೆ ಒಂದರ ಮೇಲೊಂದು ಹೊದಿಕೆ ಹೊದ್ದಷ್ಟು ಮುಗಿಯದು. ಹೀಗೆ ಹೊದ್ದುಕೊಂಡು ಮೈ ಬೆಚ್ಚಗೆ ಮಾಡಿಕೊಂಡು ಒಳಗೊಳಗೆ ಮುದುರಿಕೊಂಡಷ್ಟು ಮತ್ತೆ ಚಳಿ ಭಾಸವಾಗುತ್ತದೆ. ಚಳಿರಾಯನಿಂದ ರಾತ್ರಿ ಸರಿಯಾಗಿ ನಿದ್ದೆಯೂ ಬಾರದು. ಹೇಗೋ ಕಷ್ಟಪಟ್ಟು ನಿದ್ದೆ ತೊಡೆದೆದ್ದು ಬಂದರೂ ಮತ್ತೆ ಅದೇ ಚಳಿಯ ಕಾಟ. ಊಹ್‌! ಅನ್ನುತ್ತ ಬಚ್ಚಲೊಲೆಯ ಮುಂದೆ ಸೀಟು ಹಿಡಿದುಕೊಳ್ಳದೆ ಇದಕ್ಕೆ ಬೇರೆ ದಾರಿಯೇ ಇಲ್ಲ. ಬೆಂಕಿಯ ಬಿಸಿಗೆ ಕೈಚಾಚಿ ಕುಳಿತರೆ ಅಲ್ಲೇ ಅಮ್ಮನ ಗರ್ಭ ಹೊಕ್ಕಂತೆ ಅನುಭವ! ಹೆಣ್ಮಕ್ಕಳಿಗೆ ಆಷಾಢ‌ ಮಾಡಸಕ್ಕೆ ತವರು ಮನೆಗೆ ಹೋಗಲು ಆಹ್ವಾನ ಬೇಡ. ಹಾಗೆಯೇ ಈ ಚಳಿಯೂ ಆಹ್ವಾನಿಸದೆ ಸೀದಾ ಬಂದುಬಿಡುತ್ತದೆ.

ಮನೆ ಮನಗಳಲ್ಲಿ ಈ ಚಳಿಗೆ ಶುರುವಾಗೋ ಶೀತ-ಕೆಮ್ಮಿಗೆಲ್ಲ ಅಜ್ಜಿಯರದ್ದೇ ಖಾರ ಖಾರ ಕಷಾಯ. ಮಕ್ಕಳೆಲ್ಲ ಖಾರ ಎಂದು ಓಡಿದರಂತೂ ಹಿಡಿದು ಕುಡಿಸೋ ಅಮ್ಮ. ಒಟ್ಟಾರೆ ಅಮ್ಮ ಹಾಗೂ ಅಜ್ಜಿಯ ಆರೈಕೆಯಲ್ಲಿ ಮಕ್ಕಳೆಲ್ಲ ಸುಸ್ತೋ ಸುಸ್ತು.
ಮನೆಯ ಊಟದ ಮೆನುವಿನಲ್ಲೂ ಬದಲಾವಣೆ ಕಾಣುವುದು ಈ ಸಮಯದಲ್ಲೇ. ಊಟ-ತಿಂಡಿ ಎಲ್ಲವೂ ಸ್ಪೈಸಿ, ಸ್ಪೈಸಿ. ಬಜ್ಜಿ, ಬೊಂಡಾಗಳಿಗೆಲ್ಲ ಡಿಮ್ಯಾಂಡೋ ಡಿಮ್ಯಾಂಡ್‌. ಅದರಲ್ಲೂ ಕುರುಂ ಕುರುಂ ಚಕ್ಕುಲಿ ಸಿಕ್ಕಿದರಂತೂ ಹೇಳುವುದೇ ಬೇಡ. ಮಾತ್ರವಲ್ಲದೆ, ನಾಲಿಗೆಗೆ ರುಚಿಯನಿಸುವ ಕುರುಕಲು ತಿಂಡಿಗಳು ಮನೆಯ ಡಬ್ಬಗಳನ್ನು ಅಲಂಕರಿಸಿಬಿಡುತ್ತವೆ. ತಿಂಡಿ ಮೇಳಗಳು, ಫ‌ುಡ್‌ ಫೆಸ್ಟಿವಲ್‌ಗ‌ಳು ಗರಿಗೆದರುವುದು ಈಗಲೆ.

ಸುಶ್ಮಿತಾ ಎಮ್‌. ಸಾಮಾನಿ
ಪತ್ರಿಕೋದ್ಯಮ ವಿಭಾಗ, ಮಂಗಳೂರು ವಿ. ವಿ.

ಟಾಪ್ ನ್ಯೂಸ್

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.