ಮತ್ತೆ ಫಾರ್ಮಿಗೆ ಮರಳುವೆ: ಭುವನೇಶ್ವರ್
Team Udayavani, Mar 11, 2020, 6:55 AM IST
ಹೊಸದಿಲ್ಲಿ: ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ನನಗೆ ಕಮ್ಬ್ಯಾಕ್ ಸರಣಿಯಾಗಲಿದೆ ಎಂದು ಭಾರತ ತಂಡದ ವೇಗಿ ಭುವನೇಶ್ವರ ಕುಮಾರ್ ಹೇಳಿದ್ದಾರೆ.
ಪದೇ ಪದೇ ಗಾಯದ ಸಮಸ್ಯೆಗೆ ತುತ್ತಾಗುತ್ತಿದ್ದ ಭುವನೇಶ್ವರ್ ಅವರಿಗೆ ಫಿಟ್ನೆಸ್ ಸಮಸ್ಯೆಯಿದೆ ಎಂಬ ಆರೋಪವು ಕೇಳಿಬಂದಿತ್ತು. ಈ ಆರೋಪದಿಂದ ಹೊರಬರಲು ಭುವಿ ಪಾಲಿಗೆ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಮಹತ್ವದ್ದಾಗಿದೆ. ಅಭ್ಯಾಸದ ವೇಳೆ ಮಾತನಾಡಿದ ಭುವನೇಶ್ವರ ಕುಮಾರ್ ಮುಂಬರುವ ಈ ಸರಣಿ ನನ್ನ ಪಾಲಿಗೆ ಪ್ರಮುಖವಾಗಿದೆ. ಮತ್ತೆ ಟೀಮ್ ಇಂಡಿಯಾಕ್ಕೆ ಸೇರಿಕೊಳ್ಳಲು ಈ ಅವಕಾಶವನ್ನು ಬಳಸಿಕೊಳ್ಳಲಿದ್ದೇನೆ. ಉತ್ತಮ ಸಾಮರ್ಥ್ಯ ತೋರುವ ಮೂಲಕ ತಂಡದಲ್ಲಿ ನನ್ನ ಸ್ಥಾನ ಭದ್ರಪಡಿಸಲು ಪ್ರಯತ್ನಿಸುವೆ ಎಂದು ಭುವನೇಶ್ವರ್ ಹೇಳಿದ್ದಾರೆ.
ಪದೇ ಪದೇ ಗಾಯದ ಸಮಸ್ಯೆಗೆ ತುತ್ತಾಗುತ್ತಿದ್ದ ಭುವಿ ಅನಂತರ ವಿಕೆಟ್ಲೆಸ್ ಆಗಿದ್ದರು. ವಿಶ್ವಕಪ್ ಕೂಟದಲ್ಲಿಯೂ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದರಲ್ಲದೇ ಕೂಟದ ಅರ್ಧದಲ್ಲೆ ಗಾಯಾಳಾಗಿ ಭಾರತಕ್ಕೆ ವಾಪಸಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India ಕೋಚ್ ಹುದ್ದೆಗೆ ಮೋದಿ, ಶಾ, ಧೋನಿ, ಶಾರುಖ್, ಸಚಿನ್ ಅರ್ಜಿ! ಏನಿದರ ಅಸಲೀಯತ್ತು?
AUSvsNAM; ಆಟಗಾರರ ಕೊರತೆ: ಫೀಲ್ಡಿಂಗ್ ಮಾಡಿದ ಆಸೀಸ್ ಕೋಚ್, ಆಯ್ಕೆ ಸಮಿತಿ ಮುಖ್ಯಸ್ಥ
India ಕ್ರಿಕೆಟ್ ತಂಡದ ನೂತನ ಕೋಚ್ ಆಗಿ ಗೌತಮ್ ಗಂಭೀರ್; ಘೋಷಣೆಯಷ್ಟೇ ಬಾಕಿ
Major League ಕ್ರಿಕೆಟ್ ಕೂಟಕ್ಕೆ ಅಧಿಕೃತ ಲಿಸ್ಟ್ ‘ಎ’ ಸ್ಥಾನಮಾನ
Norway ಚೆಸ್ ಕೂಟ: ಪ್ರಜ್ಞಾನಂದಗೆ ಗೆಲುವು