ಸಂಪೂರ್ಣ ಯಾಂತ್ರೀಕೃತ ಆಗುವತ್ತ ಭತ್ತದ ಕೃಷಿ


Team Udayavani, Mar 8, 2020, 5:50 AM IST

peddy-corp

ಕಳೆದ 10 ವರ್ಷಗಳಿಂದ ಜಿಲ್ಲೆಯ ಹಳ್ಳಿಗಳತ್ತ ಭತ್ತದ ಕೃಷಿಗೆ ಯಂತ್ರಗಳು ದಾಪುಗಾಲಿಟ್ಟರೂ ನೇಜಿ ನಾಟಿ ಮತ್ತು ಪೈರು ಕೊಯ್ಲಿಗೆ ಯಂತ್ರ ಬಳಕೆ ಮಾಡುತ್ತಿದ್ದ ರೈತರು ಇದೀಗ ಕೊಯ್ಲಿನ ಅನಂತರ ಬೈಹುಲ್ಲು ಸಂಗ್ರಹ ವ್ಯವಸ್ಥೆಯ ತನಕವೂ ಯಂತ್ರಗಳನ್ನೇ ಬಳಕೆ ಮಾಡಲು ಮುಂದಾಗಿದ್ದಾರೆ.

ಕರಾವಳಿ ಜಿಲ್ಲೆಯ ಸಾಂಪ್ರದಾಯಿಕ ಭತ್ತದ ಕೃಷಿಯೂ ಇಂದು ಸಂಪೂರ್ಣ ಯಾಂತ್ರೀಕರಣದತ್ತ ಹೊರಳಿದೆ. ಗದ್ದೆ ಉಳುಮೆಯಿಂದ ಹಿಡಿದು ನೇಜಿ ನಾಟಿ, ಕೊಯ್ಲು, ಭತ್ತದ ಹುಲ್ಲು ಸಂಗ್ರಹದವರೆಗೂ ಯಂತ್ರದ ಬಳಕೆ ಕಾಣಿಸಿಕೊಳ್ಳುತ್ತಿದೆ ಮತ್ತು ಇದು ಅನಿವಾರ್ಯತೆ ಎನ್ನುವಂತೆ ಆಗಿದೆ.
ಕಳೆದ 10 ವರ್ಷಗಳಿಂದ ಜಿಲ್ಲೆಯ ಹಳ್ಳಿಗಳತ್ತ ಭತ್ತದ ಕೃಷಿಗೆ ಯಂತ್ರಗಳು ದಾಪುಗಾಲಿಟ್ಟರೂ ನೇಜಿ ನಾಟಿ ಮತ್ತು ಪೈರು ಕೊಯ್ಲಿಗೆ ಯಂತ್ರ ಬಳಕೆ ಮಾಡುತ್ತಿದ್ದ ರೈತರು ಇದೀಗ ಕೊಯ್ಲಿನ ಅನಂತರ ಬೈಹುಲ್ಲು ಸಂಗ್ರಹ ವ್ಯವಸ್ಥೆಯ ತನಕವೂ ಯಂತ್ರಗಳನ್ನೇ ಬಳಕೆ ಮಾಡಲು ಮುಂದಾಗಿದ್ದಾರೆ.

ಎತ್ತಿನ ಉಳುಮೆ ದೂರ
ಮನುಷ್ಯನ ಶ್ರಮ ಹಾಗೂ ಎತ್ತುಗಳ ಶ್ರಮದ ಮೂಲಕ ಭತ್ತದ ಗದ್ದೆಗಳನ್ನು ಸಾಂಪ್ರದಾಯಿಕವಾಗಿ ಇತ್ತೀಚಿಗಿನ ತನಕ ಕಾಪಾಡಿಕೊಂಡು ಬರುತ್ತಿದ್ದ ರೈತರು ಅದೇ ಮಾದರಿಯನ್ನು ಮುಂದುವರೆಸಿದ್ದರು. ಸುಗ್ಗಿ, ಏಣೇಲು ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಿದ್ದ ರೈತವರ್ಗದ ಕೆಲವರು ನೀರಾವರಿ ಹೆಚ್ಚಳ ಇದ್ದ ಗದ್ದೆಗಳಲ್ಲಿ ಕೊಳಕೆ ಬೆಳೆಗೂ ಆದ್ಯತೆ ನೀಡಿದ್ದರು. ಇದಕ್ಕೆ ಪೂರಕವಾಗಿ ಶ್ರಮ ವಿನಿಮಯ ವ್ಯವಸ್ಥೆಯೂ ಗ್ರಾಮೀಣ ಭಾಗಗಳಲ್ಲಿ ಪೂರಕವಾಗಿತ್ತು.

ಶ್ರಮ ವಿನಿಮಯ
ಆಧುನಿಕತೆಯ ಗಾಳಿ ಕಡಿಮೆ ಇದ್ದ ದಿನಗಳಲ್ಲಿ ಮುಂಜಾನೆ 4 ಗಂಟೆಗೆ ಎದ್ದು, ತಮ್ಮ ಎತ್ತುಗಳನ್ನು ಬಳಸಿಕೊಂಡು ಉಳಮೆ ನಡೆಸುತ್ತಿದ್ದರು. ಉಳುಮೆ ಮಾಡಿದ ಗದ್ದೆಯ ಒಂದು ಭಾಗದಲ್ಲಿ ನೇಜಿ ತಯಾರು ಮಾಡಿಕೊಳ್ಳುತ್ತಿದ್ದರು. ಒಂದೊಂದು ಗದ್ದೆಯನ್ನು ಕನಿಷ್ಠ 15-20 ದಿನಗಳಲ್ಲಿ 4ರಿಂದ 5 ಸಾಲು ಉಳುಮೆ ಮಾಡಿದ ಅನಂತರ ನೇಜಿ ನಾಟಿ ಮಾಡಲಾಗುತ್ತಿತ್ತು. ಇಂತಹ ಸಂದರ್ಭದಲ್ಲಿ ಸಹಕಾರ ತಣ್ತೀವೇ ಪ್ರಮುಖವಾಗಿತ್ತು. ಹಳ್ಳಿಯಲ್ಲಿ ಬಹುತೇಕ ಕುಟುಂಬಗಳಲ್ಲಿ ಭತ್ತದ ಗದ್ದೆಗಳಿದ್ದ ಕಾರಣ ಪ್ರತಿಯೊಂದು ಕುಟುಂಬವೂ ಪರಸ್ಪರ ಸಹಕಾರದೊಂದಿಗೆ ಕೃಷಿ ಕೆಲಸಗಳಿಗೆ ಮುಂದಾಗುತ್ತಿದ್ದವು. ಈ ಭತ್ತದ ಕೃಷಿಗೆ ಹಳ್ಳಿಗಳಲ್ಲಿ ಕಾರ್ಮಿಕರ ಕೊರತೆಯೇ ಕಾಣದ ದಿನಗಳವು ಅದಾಗಿದ್ದವು.

ಶ್ರಮವಲ್ಲ, ಖುಷಿ: ಭತ್ತದ ನೇಜಿ ನಾಟಿ ಹಾಗೂ ನೇಜಿ ತೆಗೆಯುವಾಗ ಹಳ್ಳಿಯ ಜನ ಹಾಡುತ್ತಿದ್ದ ಅದ್ಭುತ ಸಾರವುಳ್ಳ ಪಾಡªನಗಳು ಶ್ರಮ ಅರಿದಂತೆ ಜನರನ್ನು ಕಟ್ಟಿ ಹಾಕುತ್ತಿದ್ದವು. ಅದೊಂದು ಕೆಲಸವೆನ್ನಿಸದೆ ಮನೋರಂಜನೆ ಎಂಬಂತೆ ಕೃಷಿ ಕೆಲಸ ಮುಗಿಯುತ್ತಿತ್ತು. ಉಳಮೆ ಮಾಡುತ್ತಿದ್ದ ರೈತರು ಕೊಡುತ್ತಿದ್ದ ಉರಲ್‌ ಕೇವಲ ಎತ್ತುಗಳಿಗೆ ಮಾತ್ರವಲ್ಲ, ಕೇಳುಗರ ಕಿವಿಗೂ ಇಂಪು ನೀಡುತ್ತಿತ್ತು.

ಹಳ್ಳಿಯ ಬಹುತೇಕ ಭತ್ತದ ಗದ್ದೆಗಳು ಇಂದು ಅಡಕೆ ಬೆಳೆಯುವ ತಾಣಗಳಾಗಿವೆ. ಅಲ್ಲಲ್ಲಿ ಉಳಿದ ಭತ್ತದ ಗದ್ದೆಗಳಿಗೆ ಕಾರ್ಮಿಕರ ಕೊರತೆ, ಸಹಕಾರ ತಣ್ತೀ ಎಂಬುವುದು ಹಳ್ಳಿಯಲ್ಲೂ ಕಾಣುತ್ತಿಲ್ಲ. ಹಾಗಾಗಿ ಭತ್ತ ಬೆಳೆಯಲೇಬೇಕೆಂಬ ಹಟತೊಟ್ಟ ರೈತ ವರ್ಗ ಸಂಪೂರ್ಣವಾಗಿ ಯಾಂತ್ರೀಕೃತ ಬದುಕಿಗೆ ಶರಣಾಗಿದ್ದಾರೆ. ನೇಜಿಯನ್ನು ಪಾತಿಗಳಲ್ಲಿ ತಯಾರು ಮಾಡುವುದು ಮಾತ್ರ ಈಗಿನ ರೈತರ ಕೆಲಸ. ನೇಜಿ ನಾಟಿ, ಬೆಳೆ ಕೊಯ್ಲು, ಉಳಮೆ ಕೊನೆಗೆ ಬೈಹುಲ್ಲು ಸಂಗ್ರಹವೂ ಯಂತ್ರಗಳಿಂದಲೇ ಸಾಧ್ಯವಾಗುವುದರಿಂದ ರೈತರಿಗೆ ಕಾರ್ಮಿಕ ಕೊರತೆಯ ಸಮಸ್ಯೆಯಿಂದ ರಕ್ಷಣೆ ಪಡೆಯಲು ಸಾಧ್ಯವಾಗುತ್ತಿದೆ.

ಯಂತ್ರಧಾರಾ ನೆರವು
ರಾಜ್ಯ ಸರಕಾರ ನೀಡಿದ ಯಂತ್ರಧಾರಾದ ಕೊಡುಗೆ ರೈತರ ಪಾಲಿಗೆ ಆಪಾರ ಬೆಂಬಲ ನೀಡಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಯಂತ್ರಧಾರಾ ಜಿಲ್ಲೆಯ ಪ್ರತಿ ಹೋಬಳಿ ಮಟ್ಟದಲ್ಲಿ ಕೇಂದ್ರಗಳನ್ನು ಹೊಂದಿದೆ. ಸ್ಥಳೀಯ ರೈತರಿಗೆ ಬಾಡಿಗೆ ರೂಪದಲ್ಲಿ ಯಂತ್ರಗಳನ್ನು ನೀಡುತ್ತಿದ್ದು, ಭತ್ತದ ಕೃಷಿ ಉಳಿಸಿಕೊಳ್ಳುವಲ್ಲಿ ಇದು ಹೆಚ್ಚು ನೆರವು ನೀಡುತ್ತಿದೆ. ಇದರ ಜತೆ ಖಾಸಗಿಯಾಗಿ ಯಂತ್ರಗಳನ್ನು ಬಾಡಿಗೆ ನೀಡುವ ಸಾಯ ಕಂಪೆನಿಯೂ ರೈತರ ಅನುಕೂಲದಲ್ಲಿ ದೊಡ್ಡ ಪಾತ್ರ ಪಡೆಯುತ್ತಿವೆ. ಸಮರ್ಪಕವಾದ ರೀತಿಯಲ್ಲಿ ಯಂತ್ರಗಳನ್ನು ರೈತರ ಕೃಷಿ ಕೆಲಸಗಳಿಗೆ ಪೂರೈಕೆ ಮಾಡುವ ಮೂಲಕ ಸಂಸ್ಥೆಗಳು ರೈತರ ಮಿತ್ರನಾಗಿ ಕೆಲಸ ಮಾಡುತ್ತಿರುವುದು ಭತ್ತದ ಕೃಷಿ ಉಳಿಸುವಲ್ಲಿ ನಮಗೆ ಸಹಕಾರಿಯಾಗುತ್ತಿದೆ ಎನ್ನುತ್ತಾರೆ ಬಜತ್ತೂರಿನ ಭತ್ತದ ಕೃಷಿಕ ರಾಮಣ್ಣ ಗೌಡ.

ರಾಜೇಶ್‌ ಪಟ್ಟೆ, ಪುತ್ತೂರು

ಟಾಪ್ ನ್ಯೂಸ್

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.