ಆರತಿ ಪೈ ಮಧುರ ದಾಸ ಕೀರ್ತನೆ
Team Udayavani, Jan 10, 2020, 6:41 PM IST
ಪರ್ಯಾಯ ಪಲಿಮಾರು ಮಠದ ಆಯೋಜನೆಯಲ್ಲಿ ಕಾರ್ಕಳದ ಶ್ರೀ ವೆಂಕಟೇಶ್ವರ ಮಹಿಳಾ ತಂಡದಿಂದ ದಾಸ ಸಂಕೀರ್ತನಾ ಕಾರ್ಯಕ್ರಮವು ಜ.4ರಂದು ನಡೆಯಿತು. ಆರತಿ ಪೈ ಅವರು ಎರಡು ಗಂಟೆಗಳ ಕಾಲ ದಾಸವರೇಣ್ಯರು ರಚಿಸಿದ ಕೀರ್ತನೆಗಳನ್ನು ಸುಮಧುರ ಕಂಠದಿಂದ ಹಾಡಿದರು.
ಆರತಿ ಪೈ ಅವರು ಗಣೇಶ ಸ್ತುತಿಯೊಂದಿಗೆ ದಾಸ ಸಂಕೀರ್ತನಾ ಕಾರ್ಯಕ್ರಮ ಆರಂಭಿಸಿದರು. ಕನಕದಾಸರ ಕೀರ್ತನೆ “ನಮ್ಮಮ್ಮ ಶಾರದೆ, ಉಮಾಮಹೇಶ್ವರಿ ನಿಮ್ಮೊಳಗಿಹನ್ಯಾರಮ್ಮ…’ ಇಂಪಾಗಿ ಮೂಡಿಬಂತು. ಆ ಬಳಿಕ ಪುರಂದರ ದಾಸರ ರಚನೆ “ಭಾಗ್ಯದ ಲಕ್ಷ್ಮೀ ಬಾರಮ್ಮ ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮೀ ಬಾರಮ್ಮ…’ ಹಾಡು ತಲೆದೂಗುವಂತೆ ಮಾಡಿಸಿತು. ಅದೇ ರೀತಿ ವಾದಿರಾಜರು ರಚಿಸಿದ “ವೇಣುನಾದ ಪ್ರಿಯ ಗೋಪಾಲಕೃಷ್ಣ, ವೇಣುನಾದ ವಿನೋದ ಮುಕುಂದಾ…’ ಹಾಗೂ “ಬಾರೋ ಬೇಗ ಬಾರೋ ನೀಲ ಮೇಘವರ್ಣ, ಬಾರೋ ಬೇಗ ವೇಲಾಪುರದ ಚೆನ್ನ…’ ಕೀರ್ತನೆ ಮಧುರವಾಗಿತ್ತು.
“ಎಂದು ಕಾಂಬೆನೋ ನಂದಗೋಪನಾ…’ ಕಂದ ಶ್ರೀ ಗೋವಿಂದನಾ…’ ಶ್ಯಾಮಸುಂದರ ದಾಸರು ರಚಿಸಿದ ಕೀರ್ತನೆ ಹಾಗೂ ಪುರಂದರದಾಸರ ರಚನೆಯಾದ “ಪಿಳ್ಳಂಗೋವಿಯ ಚೆಲುವ ಕೃಷ್ಣನ ಎಲ್ಲಿ ನೋಡಿದಿರಿ… ಆರತಿ ಪೈ ಅವರ ಧ್ವನಿಯಲ್ಲಿ ಮಧುರಾವಾಗಿ ಮೂಡಿ ಬಂತು.
ಸಹಗಾಯಕಿ ಸವಿತಾ ಶೆಣೈ ಅವರು ರೇಗುಪ್ತಿ ರಾಗದಲ್ಲಿ ಹಾಡಿದ ಪುರಂದರ ದಾಸರ ರಚನೆಯಾದ “ಸ್ಮರಣೆ ಒಂದೇ ಸಾಲದೇ ಗೋವಿಂದನಾ ನಾಮ ಒಂದೇ ಸಾಲದೇ…’ ಹಾಡು ಮತ್ತೂಮ್ಮೆ ಕೇಳಬೇಕೆನ್ನುವ ಭಾವ ಮೂಡಿಸಿತು. ಹಾರ್ಮೊನಿಯಂನಲ್ಲಿ ಸವಿತಾ ಶೆಣೈ, ತಬಲದಲ್ಲಿ ಸತೀಶ್ ಶೆಣೈ ಸಹಕರಿಸಿದರು.
– ತಾರಾನಾಥ್ ಮೇಸ್ತ ಶಿರೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ