ಸ್ವಚ್ಛ ಭಾರತಕ್ಕೊಂದು ಕಲಾ ಶಿಬಿರ 


Team Udayavani, Feb 9, 2018, 8:15 AM IST

8.jpg

ಮಂಗಳೂರಿನ ರಾಮಕೃಷ್ಣ ಮಠ ಸ್ವಚ್ಛ ಭಾರತ್‌ ಕಾರ್ಯಕ್ರಮಕ್ಕೆ ಪೂರಕವಾಗಿ ಸ್ವತ್ಛ ಮನಸು ಎಂಬ ಪರಿಕಲ್ಪನೆಯಲ್ಲಿ ದ.ಕ. ಜಿಲ್ಲೆಯ ಕೆಲವು ಶಾಲೆಗಳಲ್ಲಿ ಚಿತ್ರ ಬಿಡಿಸುವುದರ ಮೂಲಕ ಮನಸು ಸ್ವತ್ಛವಾಗುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಸಾವಿರಾರು ಮಕ್ಕಳ ಚಿತ್ರಗಳು ಬಂದಿದ್ದರೂ 230 ಬಾಲ ಕಲಾವಿದರನ್ನು ಆಯ್ಕೆಮಾಡಿ ಅವರಿಗೆ ಸೃಜನ ಸ್ವತ್ಛತಾ ಕಲಾಮೇಳ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮಠದ ಏಕಗಮ್ಯಾನಂದ ಮಹಾರಾಜ್‌ರವರ ನೇತೃತ್ವದಲ್ಲಿ ಹಾಗೂ ಶಿಕ್ಷಕಿ ಲಲಿತಾ ಕಲ್ಕೂರ ಮತ್ತು ರಂಜನ್‌ ಬೆರ್ಲಪ್ಪಾಡಿಯವರ ನಾಯಕತ್ವದಲ್ಲಿ ಈ ಕಲಾಮೇಳ ನಡೆಯಿತು. 16 ಸಂಪನ್ಮೂಲ ವ್ಯಕ್ತಿಗಳು ಕಲೆಯ ವಿವಿಧ ಪ್ರಕಾರಗಳಲ್ಲಿ ತರಬೇತಿ ನೀಡಿದ್ದು ಆಯ್ಕೆಮಾಡಿದ ವಿದ್ಯಾರ್ಥಿಗಳಾಗಿದ್ದ ಕಾರಣ ಕಲಾಭಿವ್ಯಕ್ತಿ ರೂಪದ ಫ‌ಲಿತಾಂಶ ಉತ್ತಮವಾಗಿತ್ತು. ಚಿತ್ರಕಲೆಯ ಜಲವರ್ಣ, ಚಾರ್ಕೊಲ್‌, ಕೊಲಾಜ್‌, ವರ್ಲಿ, ಕಾವಿ, ಪೇಪರ್‌ ಕ್ರಾಫ್ಟ್, ಆವೆಮಣ್ಣಿನ ಕಲಾಕೃತಿ, ಭಾವಚಿತ್ರ ರಚನೆ, ಗಾಳಿಪಟ, ಮಡಿಕೆ ಚಿತ್ತಾರ, ರೇಖಾಚಿತ್ರ, ಮುಖವಾಡ, ಗ್ರೀಟಿಂಗ್ಸ್‌, ವ್ಯಂಗ್ಯಚಿತ್ರ, ಕ್ಯಾರಿಕೇಚರ್‌ ಮುಂತಾದ ಪ್ರಕಾರಗಳನ್ನು ಆಯಾ ವಿಷಯಗಳಲ್ಲಿ ಪರಿಣತರಾದ ಸಂಪನ್ಮೂಲ ಕಲಾವಿದರು ಪ್ರಾತ್ಯಕ್ಷಿತೆ ನೀಡುವ ಮೂಲಕ ತರಬೇತಿ ನೀಡಲಾಗಿತ್ತು.

ಹಿರಿಯ ಕಲಾವಿದರಾದ ಗಣೇಶ್‌ ಸೋಮಾಯಾಜಿ ಮತ್ತು ಪೆರ್ಮುದೆ ಮೋಹನ್‌ ಕುಮಾರ್‌ರವರು ಜಲವರ್ಣ ಚಿತ್ರರಚಿಸುವ ತರಬೇತಿ ನೀಡಿದ್ದು, ಕಲಾವಿದ ದಯಾನಂದ್‌ರವರು ಕರಿ ಬಣ್ಣದಿಂದ ಸುಂದರ ನಿಸರ್ಗ ದೃಶ್ಯ ಚಿತ್ರಗಳನ್ನು ರಚಿಸಬಹುದೆಂದು ಮಾಹಿತಿ ನೀಡಿದರು. ನಗುವಿನ ಸಿಂಚನವಿರುವ ವ್ಯಂಗ್ಯ ಚಿತ್ರಗಳನ್ನು ಜಾನ್‌ ಚಂದನ್‌ರವರು ಚಿತ್ರಿಸಿ ಮಕ್ಕಳಿಂದ ಚಿತ್ರರಚನೆ ಮಾಡಿಸಿದರು. ಸಪ್ನಾ ನೊರೋನ್ಹರವರು ವರ್ಲಿ ಚಿತ್ರ ರಚಿಸಿದರೆ ವೀಣಾ ಶ್ರೀನಿವಾಸ್‌ ಕಾವಿ ಚಿತ್ರಕಲೆಯನ್ನು ಮಾಡಿಸಿರುವರು. ಸುಧೀರ್‌ ಕಾವೂರು ಮುಖವಾಡ ರಚನೆ, ತಾರಾನಾಥ್‌ ಕೈರಂಗಳರವರು ಪೇಪರ್‌ ಕೊಲಾಜ್‌, ಸುಂದರ್‌ ತೋಡಾರ್‌ ಪೇಪರ್‌ ಕ್ರಾಫ್ಟ್, ಶಾಲಿನಿಯವರು ಮಣ್ಣಿನ ಮಡಿಕೆ ಚಿತ್ತಾರ, ವೆಂಕಿ ಪಲಿಮಾರ್‌ ಆವೆಮಣ್ಣಿನ ಕಲಾಕೃತಿ, ಸತೀಶ್‌ರಾವ್‌ ಗಾಳಿಪಟ ರಚನೆ, ಭವನ್‌ ಭಾವಚಿತ್ರ (ಕ್ಯಾರಿಕೇಚರ್‌), ನೇಹಾರಾವ್‌ ಗ್ರೀಟಿಂಗ್ಸ್‌ ಕಾರ್ಡು ತಯಾರಿ ಬಗ್ಗೆ ಪ್ರಾತ್ಯಕ್ಷಿಕೆಯೊಂದಿಗೆ ತರಬೇತಿ ನೀಡಿದರು. ಮನೆಯಲ್ಲಿ ತ್ಯಾಜ್ಯಗಳೆಂದು ಎಸೆಯುವ ವಸ್ತುಗಳಿಂದಲೇ ಸುಂದರ ಕಲಾಕೃತಿಗಳನ್ನು ರಚಿಸಬಹುದೆಂಬ ಸಂದೇಶದೊಂದಿಗೆ ಸ್ವತ್ಛತಾ ಮನಸು ಎಂಬ ಶಿಬಿರದ ಪರಿಕಲ್ಪನೆಗೆ ಪೂರಕವಾಗಿ ವಿದ್ಯಾರ್ಥಿಗಳಲ್ಲಿ ಕಲೆಯೊಂದಿಗೆ ಸ್ವತ್ಛತಾ ಜಾಗೃತಿ ಮೂಡಿಬಂದದ್ದು ವಿಶೇಷವಾಗಿತ್ತು. 

ದಿನೇಶ್‌ ಹೊಳ್ಳ

ಟಾಪ್ ನ್ಯೂಸ್

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.