ಸೀಮೋಲ್ಲಂಘನೆಗೆ ಸಾಕ್ಷಿಯಾದ ಅಮೆರಿಕದ ಯಕ್ಷಗಾನ ಸಮ್ಮೇಳನ


Team Udayavani, Oct 4, 2019, 5:46 AM IST

c-1

ಅಮೆರಿಕದ ಕ್ಯಾಲಿಫೋರ್ನಿಯಾದ ಸನಾತನ ಯಕ್ಷರಂಗ ಕಲ್ಚರಲ್‌ ಸೆಂಟರ್‌ ಮತ್ತು ಕನ್ನಡ ಕೂಟ ಉತ್ತರ ಕ್ಯಾಲಿಫೋರ್ನಿಯಾದ ವತಿಯಿಂದ ಸನ್‌ಜೋಸೆಯಲ್ಲಿ ನಡೆದ ಪ್ರಥಮ ಯಕ್ಷಗಾನ ಸಮ್ಮೇಳನ ಯಕ್ಷಗಾನದ ಸೀಮೋಲ್ಲಂಘನಕ್ಕೆ ಸಾಕ್ಷಿಯಾಯಿತು.

ಎರಡು ದಿನಗಳ ಸಮ್ಮೇಳನದ ಮೊದಲ ದಿನ ಯಕ್ಷ-ಗಾನ-ಲಹರಿಯನ್ನು ಬಡಗಿನ ಕೆ.ಜೆ.ಗಣೇಶ್‌, ತೆಂಕುತಿಟ್ಟಿನ ಪಟ್ಲ ಸತೀಶ್‌ ಶೆಟ್ಟಿ ಹಾಗೂ ಕರ್ನಾಟಕ ಸಂಗೀತ ಗಮಕದಲ್ಲಿ ರಾಮ ಪ್ರಸಾದ್‌ ಕೆ.ವಿ.ಯವರು ನಡೆಸಿಕೊಟ್ಟರು. ಮದ್ದಲೆಯ ಸಾಥ್‌ ನೀಡಿದವರು ಬಡಗಿನಲ್ಲಿ ಪದ್ಮನಾಭ್‌ ಉಪಾಧ್ಯ ಹಾಗೂ ತೆಂಕಿನಲ್ಲಿ ಪದ್ಯಾಣ ಜಯರಾಮ್‌ ಭಟ್‌. ಮೃದಂಗವಾದಕರಾಗಿ ಗೋಪಾಲ ಲಕ್ಷ್ಮೀನಾರಾಯಣರವರು ಭಾಗವತರುಗಳ ಮನೋಧರ್ಮಕ್ಕನುಗುಣವಾಗಿ ಸಹಕರಿಸಿದರು. ಕೆ.ಜಿ.ಗಣೇಶ ನಾಟಿ ರಾಗದಲ್ಲಿ ವಾರಣ ವದನ ಗಣಪತಿ ಸ್ತುತಿಗೈದರೆ ರಾಮ ಪ್ರಸಾದರು ನಾಟಿ ರಾಗದಲ್ಲಿ ಮಹಾಗಣಪತಿ ಮನಸಾ ಸ್ಮರಾಮಿ ಯನ್ನೂ, ಪಟ್ಲರು ಹಿಂದೋಳದಲ್ಲಿ ನಿತ್ಯ ನಿರಾಮಯಿ ಪ್ರಣವ ಸ್ವರೂಪಿ ಯನ್ನು, ಪ್ರಸಾದರು ಮಾಮವತೋ ಶ್ರೀ ಸರಸ್ವತಿ ಪದವನ್ನು ಪ್ರಸ್ತುತ ಪಡಿಸಿದರು. ನಂತರ ಕೆ.ಜಿ.ಗಣೇಶ ಅಭೇರಿ ರಾಗದಲ್ಲಿ ಕುಂದ ಕುಟ¾ಲ ರದನ ಎಂಬ ಶೃಂಗಾರ ಪದವನ್ನು , ಪ್ರಸಾದರು ಅಭೇರಿಯಲ್ಲಿ ನಗುವೋ ಎಂಬ ಹಾಡನ್ನು ಪಟ್ಲರು ವೃಂದಾವನ‌ ಸಾರಂಗ ರಾಗದಲ್ಲಿ ಇಳೆ ವಸಂತ ಕಾಲ ಸೋದರಿ ಎಂಬ ಹಾಡನ್ನು ಹಾಡಿದರು. ಅನಂತರ ಕೆ.ಜಿ.ಯವರು ಮತ್ತು ಪಟ್ಲರು ರೇವತಿ ರಾಗದಲ್ಲಿ ಹಾಡಿದ ಸ್ಮರಿಸಯ್ಯ ರಾಮ ಮಂತ್ರವ ಎಂಬ ದ್ವಂದ್ವ ಗಾಯನ ಭಕ್ತಿಗಡಲಲ್ಲಿ ತೇಲಿಸಿತು. ಕೊನೆಯಲ್ಲಿ ಮೂವರೂ ಸೇರಿ ಹಾಡಿದ ನೋಡಿದನು ಕಲಿ ರಕ್ತ ಬೀಜನು ಮೋಹನ ರಾಗದ ಪದ್ಯದೊದಿಗೆ ಗಾನ ಲಹರಿ ಸಮಾಪನಗೊಂಡಿತು. ಬಳಿಕ ಪಟ್ಲ ನಿರ್ದೇಶನದ ನರಕಾಸುರ ವಧೆ ಎಂಬ ಪ್ರಸಂಗ ಚಂದ್ರಶೇಖರ ಧರ್ಮಸ್ಥಳ, ಪ್ರಶಾಂತ ಶೆಟ್ಟಿ ನೆಲ್ಯಾಡಿ, ಮೋಹನ್‌ ಬೆಳ್ಳಪ್ಪಾಡಿ, ಎಂ.ಎಲ್‌ ಸಾಮಗ ಮತ್ತು ಮಹೇಶ್‌ ಮಣಿಯಾಣಿಯವರ ಮುಮ್ಮೇಳದೊಂದಿಗೆ ಸಂಪನ್ನಗೊಂಡಿತು.

ಎರಡನೇ ದಿನ ಪಟ್ಲ ಬಳಗದವರಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಿತು. ಅನಂತರ ಕೆ.ಜಿಯವರ ನೇತೃತ್ವದಲ್ಲಿ ನಡೆದ ಭೀಷ್ಮ ವಿಜಯ ಪ್ರಸಂಗದಲ್ಲಿ ಭೀಷ್ಮನಾಗಿ ಶಶಿಧರ ಸೋಮಯಾಜಿ, ಪರಶುರಾಮನಾಗಿ ಎಂ.ಎಲ್‌ ಸಾಮಗ, ಸಾಲ್ವನಾಗಿ ನವೀನ್‌ ಹೆಗಡೆ, ಅಂಬೆಯಾಗಿ ಡಾ|ರಾಜೇಂದ್ರ ಕೆದ್ಲಾಯ, ವೃದ್ಧ ಬ್ರಾಹ್ಮಣನಾಗಿ ಶ್ರೀಪಾದ ಹೆಗಡೆ, ಪ್ರತಾಪಸೇನನಾಗಿ ಮೇಘಾ, ರಾಜಕುಮಾರರಾಗಿ ಅಪೂರ್ವಾ ಮತ್ತು ಅಜಯ್‌ ರಾಜ್‌, ಅಂಬಿಕೆ ಅಂಬಾಲಿಕೆಯರಾಗಿ ಉಷಾ ಹೆಬ್ಟಾರ್‌ ಮತ್ತು ಕಾವ್ಯಾ ಭಟ್‌ ಅಭಿನಯಿಸಿದರು.

ಕೆ.ಜೆ. ಗಣೇಶರ ನಿರ್ದೇಶನದಲ್ಲಿ ಅಮೆರಿಕ ಕನ್ನಡ ಕೂಟದ ಶಿಬಿರದಲ್ಲಿ ಕವಿರತ್ನ ಕಾಳಿದಾಸ ಎಂಬ ಪ್ರಸಂಗ ಸಾದರಗೊಂಡಿತು. ವಿಜಯವರ್ಮನಾಗಿ ಸಮರ್ಥ ಭೂಷಣ್‌, ಕಲಾಧರನಾಗಿ ಶಶಿಧರ ಸೋಮಯಾಜಿ, ವಿದ್ಯಾಧರೆಯಾಗಿ ಉಷಾ ಹೆಬ್ಟಾರ್‌, ಕುಮುದಪ್ರಿಯನಾಗಿ ಅಶ್ವಿ‌ನಿ, ಕಾಳಿಯಾಗಿ ಕಾವ್ಯಾ ಭಟ್‌ ಮತ್ತು ಕಾಳನಾಗಿ ಶ್ರೀಪಾದ ಹೆಗಡೆಯವರು ಮನ ಗೆಲ್ಲುವಲ್ಲಿ ಸಫ‌ಲರಾದರು.

ಕ್ಯಾಲಿಫೋರ್ನಿಯಾದ ಸನಾತನ ಧರ್ಮ ಕೇಂದ್ರದಲ್ಲಿ ನಡೆದ ಸುದರ್ಶನ ವಿಜಯ ಪ್ರಸಂಗದಲ್ಲಿ ಶತ್ರುಪ್ರಸೂದನಾಗಿ ಅಶ್ವಿ‌ನಿಯವರ ಅಭಿನಯ ಮನೋಜ್ಞವಾಗಿ ಮೂಡಿ ಬಂತು. ಶತ್ರುಪ್ರಸೂದನನ ಪಡೆಯವರಾಗಿ ಭಾರತಿ, ಭರತೇಶ್‌ ಮಯ್ಯ ಮತ್ತು ನಾಗರಾಜ್‌ ಅಭಿನಯಿಸಿದರೆ ಸುದರ್ಶನನಾಗಿ ಶ್ರೀಪಾದ ಹೆಗಡೆ ವಾಕ್‌ಚಾತುರ್ಯದಿಂದ ರಂಜಿಸಿದರು. ವಿಷ್ಣುವಾಗಿ ಶಶಿಧರ್‌ ಸೋಮಯಾಜಿಯವರು ಉತ್ತಮವಾಗಿ ಅಭಿನಯಿಸಿದರು. ಲಕ್ಷ್ಮೀಯಾಗಿ ಚೇತನಾ ಶೆಟ್ಟಿಯವರು ಭಾವಾಭಿವ್ಯಕ್ತಿಯಲ್ಲಿ ಸೈ ಎನಿಸಿಕೊಂಡರು. ದೇವೇಂದ್ರನ ಪಾತ್ರವನ್ನು ವೀಣಾರವರು ನಿರ್ವಹಿಸಿದರೆ ದೇವೇಂದ್ರನ ಬಲಗಳಾಗಿ ನಿಧಿ, ವರುಣ ಮತ್ತು ಸ್ಪೂರ್ತಿ,ದೂತನಾಗಿ ಅಜಯ್‌ ರಾಜ್‌ಅಭಿನಯಿಸಿದರು.

ಶಾಂತಿಕಾ ಹೆಗಡೆ

ಟಾಪ್ ನ್ಯೂಸ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.