ಚಿನ್ನ ಕಾಸರಗೋಡಿನ ಚಿನ್ನ


Team Udayavani, Dec 22, 2017, 2:04 PM IST

22-38.jpg

ಕಾಸರಗೋಡಿನ ಮಾತು ಬಂದಾಗ‌ಲೆಲ್ಲ ನನಗೆ ನೆನಪಾಗುವುದು ಹಲವಾರು ಸಂಗತಿಗಳು.ಈ ಪೈಕಿ ಗಿರಿಧರ್‌ ಸ್ಟೋರ್ ಕೂಡ ಒಂದು ನೆನಪು. ಈಗ ಅದು ಗಿರಿಧರ ಮೆಟಲ್‌ ವರ್ಕ್ಸ್ ಆಗಿದೆ. ಆ ಅಂಗಡಿಯಲ್ಲಿ ನೀವು ಚಿನ್ನಾರನ್ನು ಗಲ್ಲಾದಲ್ಲಿ ಕಾಣಬಹುದು. 

ಚಿನ್ನ ಆಗ ಬಹುಶಃ ಹೈಸ್ಕೂಲು ವಿದ್ಯಾರ್ಥಿ. ನಾನು ಕಾಲೇಜ್‌ ಲೆಕ್ಚರರ್‌. ಈ ಚಿನ್ನ ಗಿರಾಕಿಗಳ ಜತೆ ಮಾತಾಡುತ್ತ ಸ್ಟೀಲ್‌ ಪಾತ್ರೆಗಳ ಮೇಲೆ ಸ್ಟೈಲೋದಿಂದ ಕರ್ರ ಎಂದು ಹೆಸರು ಕೊರೆಯುವ ಚಿತ್ರ ನನ್ನ ಕಣ್ಣ ಮುಂದೆ ಈಗಲೂ ಇದೆ. ವೇಣುಗೋಪಾಲ ಕಾಸರಗೋಡು ಅವರ ಶಿಷ್ಯ ಚಿನ್ನ . ಚಿನ್ನರ ಸೃಜನಾತ್ಮಕ ಉತ್ಸುಕತೆಗೆ ಇನ್ನೂ ಬಿಡುಗಡೆ ಸಿಗದೆ ಅದೊಂದು ಪುಂಡಾಟವೆಂದು ಕಾಣಿಸುತ್ತಿದ್ದ ಸಮಯದಲ್ಲಿ ಅದಕ್ಕೊಂದು ದಿಗªರ್ಶನ ನೀಡಿದ್ದು ವೇಣುಗೋಪಾಲ ಎಂದು ಅನಿಸುತ್ತದೆ. ಅವರೆಲ್ಲ ಸೇರಿಕೊಂಡು “ಯವನಿಕಾ ಕಲಾವಿದರು’ ಎಂಬ ನಾಟಕ ತಂಡ ಕಟ್ಟಿಕೊಂಡು ನಾಟಕ ಆಡಲು ತೊಡಗಿದರು. ಈ ನಡುವೆಯೇ ಹತ್ತಾರು ಚಿತ್ರಗಳಲ್ಲಿ ಅಭಿನಯಿಸಿದರು. ಕಾಸರಗೋಡನ್ನೇ ತನ್ನ ಕಾರ್ಯಕ್ಷೇತ್ರವನ್ನಾಗಿ ಆರಿಸಿಕೊಂಡು ಅದನ್ನು ಮಂಗಳೂರು, ಉಡುಪಿ ಕಡೆಗೂ ವಿಸ್ತರಿಸಿದ್ದಲ್ಲದೆ, ಗಲ್ಫ್ ದೇಶಗಳಿಗೂ ಕಾಲಿರಿಸಿದ್ದಾರೆ. 

ಚಿನ್ನರ ಆಸಕ್ತಿ ಕನ್ನಡದ ಜತೆಗೆ ತುಳು, ಕೊಂಕಣಿಗೂ ಹರಡಿದೆ. ಕರ್ನಾಟಕದ ಕೊಂಕಣಿ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಘರ್‌ ಘರ್‌ ಕೊಂಕಣಿ ಎಂಬ ಜನ ಸಂಪರ್ಕ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದ್ದಾರೆ. ಚಿನ್ನ ಏನಾದರೂ ಮಾಡಿಕೊಂಡೇ ಇರುತ್ತಾರೆ. ನಾಟಕ, ಮಕ್ಕಳ ತರಬೇತಿ, ಗಾಯನ, ಸಾಹಿತ್ಯ ಕಾರ್ಯಕ್ರಮ, ಅನುವಾದ, ಮನೆ ಮನೆ ಭೇಟಿ ಇತ್ಯಾದಿ ಇತ್ಯಾದಿ. ಏನು ಮಾಡಲಿ ಸರ್‌? ಹುಚ್ಚು! ಎನ್ನುತ್ತಾರೆ. ಅದರ ಬೆನ್ನಲ್ಲೆ ಇಂಥ ಹುಚ್ಚು ಎಲ್ಲರಿಗೂ ಇರುತ್ತಿದ್ದರೆ ಎಂದು ಆಶಿಸುತ್ತಾರೆ. ಅದು ನನ್ನ ಆಶಯವೂ ಹೌದು. 

ಒಮ್ಮೆ ನಾನು ಊರಿಗೆ ಹೋಗಿದ್ದಾಗ ಅಲ್ಲಿ ಚಿನ್ನ ಆಯೋಜಿಸಿದ್ದ ಅಭಿಯಾನವೊಂದು ನಡೆಯುತ್ತಿತ್ತು. ಗೀತ ಸಂಗೀತ ರಥ ಎಂಬ ಅಭಿಧಾಮದ ಆ ಕಾರ್ಯಕ್ರಮ ಕನ್ನಡದ ಭಾವಗೀತೆಗಳನ್ನು ಪ್ರಚುರಪಡಿಸುವ ಉದ್ದೇಶವನ್ನು ಹೊಂದಿತ್ತು. ಅದಕ್ಕಾಗಿ ಕರ್ನಾಟಕದ ಪ್ರಸಿದ್ಧ ಗಾಯಕರನ್ನು ಕರೆಸಲಾಗಿತ್ತು. ಈ ಅಭಿಯಾನದ ಒಂದಷ್ಟು ದೂರ ನಾನೂ ಭಾಗವಹಿಸಿದೆ. ಅಭಿಯಾನ ಸುಮಾರು ಒಂದೂವರೆ ಲಕ್ಷ ಜನರ ವೀಕ್ಷಣೆಗೆ ಒಳಗಾಯಿತು ಎಂದು ಹೇಳಲಾಗುತ್ತದೆ. ಯಕ್ಷ ತೇರು, ಲಾರಿ ನಾಟಕ ಮುಂತಾದ ಪ್ರಯೋಗಗಳು ಕೂಡ ಇದೇ ಬಗೆಯ ಯಶಸ್ಸಿಗೆ ಭಾಜನವಾದುವು.

ಗಡಿನಾಡ 5000 ಕನ್ನಡ ಮಕ್ಕಳಿಗೆ ಕುವೆಂಪುರವರ ನಾಡಗೀತೆಯನ್ನು ಮತ್ತು ಪೈಯವರ “ತಾಯೆ ಬಾರ ಮೊಗವ ತೋರ…” ಹಾಡನ್ನು ಕಲಿಸುವ ಕಾರ್ಯಕ್ರಮವನ್ನು ಜರುಗಿಸಿದ್ದಾರೆ. 3000 ಮಕ್ಕಳಿಗೆ ಅವರದೇ ಸಂಸ್ಥೆಯಾದ ರಂಗ ಚಿನ್ನಾರಿಯ ಮೂಲಕ ರಂಗ ತರಬೇತಿ ನಡೆಸಿಕೊಟ್ಟಿದ್ದಾರೆ. ಇನ್ನು ಮಣಿಪಾಲದಲ್ಲಿ ಎಂ. ವಿ. ಕಾಮತರ ಅಧ್ಯಕ್ಷತೆಯಲ್ಲಿ ಜರಗಿದ ಕೊಂಕಣಿ ಸಾಹಿತ್ಯ ಸಂಸ್ಕೃತಿ ಸಮ್ಮೇಳನ, ಉಡುಪಿಯಲ್ಲಿ ಜರಗಿದ ಕೊಂಕಣಿ ಮಾತಾ ಸಮ್ಮೇಳನ, ಕಾಸರಗೋಡಿನಲ್ಲಿ ನಡೆದ ಮಾತೃ ದೇವೋಭವ ಎಂಬ ವಿವಿಧ ಜಾತಿ ವರ್ಗಗಳ ಕೊಂಕಣಿ ಮಹಿಳಾ ಸಂಘಗಳ ಕೂಟ ಇವೆಲ್ಲವೂ ಚಿನ್ನ ಹಮ್ಮಿಕೊಂಡು ಕಾರ್ಯಗತಗೊಳಿಸಿದ ಕಾರ್ಯಕ್ರಮಗಳೇ. ಇನ್ನು ಸಾಹಿತ್ಯ ಕ್ಷೇತ್ರದ ಕುರಿತು ಹೇಳುವುದಾದರೆ ಚಿನ್ನ ಕನ್ನಡ, ಕೊಂಕಣಿ, ತುಳು ಮಲಯಾಳ ಕೈಯಾಡಿಸಿದ್ದಾರೆ. ಮಲಯಾಳದ ಪ್ರಸಿದ್ಧ ನಾಟಕಕಾರ ಎನ್‌. ಎನ್‌. ಪಿಳ್ಳೆಯವರ “”ಗುಡ್‌ ನೈಟ್‌” ಎಂಬ ಕಿರುನಾಟಕವನ್ನು “”ಎಕ್ಲೊ ಅನ್ನೆಕ್ಲೊ” (ಒಬ್ಬ ಇನ್ನೊಬ್ಬ) ಎಂಬ ಶೀರ್ಷಿಕೆಯಲ್ಲಿ ಕೊಂಕಣಿಗೆ, ಕೆ. ಟಿ. ಮಹಮ್ಮದ್‌ ಅವರ “”ಸಂಹಾರಂ” ಎನ್ನುವ ನಾಟಕವನ್ನು “”ಸಂಹಾರ” ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಬಂಗಾಳಿಯ ಶಂಭು ಮಿತ್ರ ಅಮಿತ್‌ ಚೈತ್ರರ “”ಕಾಂಚನ್‌ಗಂಗಾ” ನಾಟಕವನ್ನು ಪ್ರೇಮ ಕಾರಂತರ “”ಕುರುಡು ಕಾಂಚಾಣ” ಎಂಬ ಕನ್ನಡಾನುವಾದ ಆಧರಿಸಿ “”ಕಾಸು ಪಾತೆರೊಂಡು” ಎಂದು ತುಳುವಿಗೂ, “”ಗಾಂಟಿ” (ಗಂಟು) ಎಂದು ಕೊಂಕಣಿಗೂ ಅನುವಾದಿಸಿದ್ದಾರೆ. ವೇಣುಗೋಪಾಲರ “”ದೃಷ್ಟಿ” ನಾಟಕವನ್ನು “”ಧರ್ಮಯುದ್ಧ” ಎಂಬುದಾಗಿ ಕೊಂಕಣಿಗೆ ಅನುವಾದಿಸಿ, ದೇಶವಿದೇಶಗಳಲ್ಲಿ ಆಡಿಸಿದ್ದಾರೆ. ಇವೆಲ್ಲದಕ್ಕೂ ಕಲಶವಿಡುವಂತೆ ಚಿನ್ನ ಮಾಡಿದ ಇನ್ನೊಂದು ಕೆಲಸವೆಂದರೆ ಕನ್ನಡದ ಮೂವತ್ತು ಆಧುನಿಕ ಸಣ್ಣಕತೆಗಳನ್ನು “”ತೀಸ್‌ ಕಾಣಿಯೋ” (ಮೂವತ್ತು ಕತೆಗಳು) ಎಂಬ ಶೀರ್ಷಿಕೆಯಲ್ಲಿ ಕೊಂಕಣಿಗೆ ಅನುವಾದಿಸಿ ಪ್ರಕಟಿಸಿದ್ದು. ಈ ಕೃತಿಗೆ ಕೊಂಕಣಿ ಸಾಹಿತ್ಯ ಅಕಾಡೆಮಿಯ 2015ರ ಸಾಲಿನ ಉತ್ತಮ ಸಾಹಿತ್ಯ ಪ್ರಶಸ್ತಿ ದೊರೆತಿದೆ. ಕಾಸರಗೋಡಿನಂಥ ಒಂದು ಪ್ರದೇಶದಲ್ಲಿ ಇದ್ದುಕೊಂಡು ಇದನ್ನೆಲ್ಲ ಮಾಡುವುದೆಂದರೆ ಅದು ದೊಡ್ಡ ಕೆಲಸ. ಈಗ ಚಿನ್ನ ತನ್ನ ಮನೆಯ ಟೆರೇಸಿಗೇ ಒಂದು ಮಾಡು ಕಟ್ಟಿಸಿ ಅದನ್ನೊಂದು ಸಭಾಂಗಣವನ್ನಾಗಿ ಮಾಡಿಕೊಂಡಿದ್ದಾರೆ. ಪದ್ಮಗಿರಿ ಕಲಾಕುಟೀರ ಎನ್ನುವುದು ಇದರ ಹೆಸರು ಅಲ್ಲಿ ಆಗಿಂದಾಗ್ಗೆ ನಾಟಕ, ಸಿನೆಮಾ, ಗಾಯನ, ಕವನವಾಚನ, ಸಾಹಿತ್ಯ ಸಂವಾದ ಮುಂತಾದ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಈವತ್ತು ಕಾಸರಗೋಡು ಎಂದರೆ ಚಿನ್ನ, ಚಿನ್ನ ಎಂದರೆ ಕಾಸರಗೋಡು ಎನ್ನುವಂತಾಗಿದೆ. ಅರುವತ್ತರ ಅರಳು ಮರಳು ಎನ್ನುತ್ತೇವೆ. ಆದರೆ ಹಾಗೆ ಆಗ‌ಬೇಕಿಲ್ಲ, ಅರುವತ್ತರಲ್ಲೂ ಮನುಷ್ಯ ಕ್ರಿಯಾಶೀಲತೆಯ ಹುಚ್ಚನ್ನು ಬಿಟ್ಟುಕೊಡದೆ ಇರಬಹುದು ಎನ್ನುವುದಕ್ಕೆ ಚಿನ್ನ ಬಹು ದೊಡ್ಡ ನಿದರ್ಶನ. ಹೌದು, ಇಂಥ ಹುಚ್ಚು ಎಲ್ಲರಿಗೂ ಇರುತ್ತಿದ್ದರೆ!

ಕೆ. ವಿ. ತಿರುಮಲೇಶ್‌

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.