ಯಕ್ಷಧ್ರುವ ಸಂಭ್ರಮದಲ್ಲಿ “ನಾರಾಯಣ’ರಿಗೆ ಅಗ್ರಪೂಜೆ!


Team Udayavani, Jun 22, 2018, 9:22 PM IST

b-11.jpg

ಪ್ರಖ್ಯಾತ ಭಾಗವತರಾದ ಸತೀಶ್‌ ಶೆಟ್ಟಿ ಪಟ್ಲ ಸ್ಥಾಪಕಾಧ್ಯಕ್ಷರಾಗಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್‌ ವತಿಯಿಂದ ಮಂಗಳೂರಿನ ಅಡ್ಯಾರ್‌ ಗಾರ್ಡನ್‌ನಲ್ಲಿ ಮೇ 27ರಂದು ಜರಗಿದ ಮೂರನೆಯ ವರ್ಷದ ಯಕ್ಷಧ್ರುವ ಪಟ್ಲ ಸಂಭ್ರಮ ಯಕ್ಷಗಾನದ ಇತಿಹಾಸಕ್ಕೆ ವಿಶಿಷ್ಟ ಅಧ್ಯಾಯವನ್ನು ಸೇರ್ಪಡೆಗೊಳಿಸಿತು. ಸತತ 16 ತಾಸುಗಳ ಕಾಲ ಯಕ್ಷಗಾನದ ಎಲ್ಲ ಸ್ವರೂಪಗಳ ಅಭಿವ್ಯಕ್ತಿಯಾಯಿತು. ಸಾಮಾಜಿಕವಾಗಿ ಪ್ರಸ್ತುತವಾದ ಸೇವಾ ಕಾರ್ಯಕ್ರಮಗಳೂ ನಡೆದವು.

ಮಹಿಳಾ ಕಲಾವಿದರು ಉತ್ಸುಕತೆಯಿಂದ ಭಾಗವಹಿಸಿದರು. ಬಾಲಕಿಯರು ಪ್ರದರ್ಶಿಸಿದ “ಪುಣ್ಯಕೋಟಿ’ ಕಥಾ ಪ್ರಸಂಗ ಉಲ್ಲೇಖನೀಯ. ಬಳಿಕ ಕಲಾವಿದೆಯರು ಶಶಿಪ್ರಭಾ ಪರಿಣಯ ಪ್ರಸಂಗ ಪ್ರಸ್ತುತಪಡಿಸಿದರು. ಮಂಗಳೂರು, ಸುರತ್ಕಲ್‌, ಕಳಸ, ಕಾರಿಂಜದ ಈ ಕಲಾವಿದೆಯರಿಗೆ ಪೂರ್ಣಿಮಾ ಯತೀಶ್‌ ರೈ ನಿರ್ದೇಶನ ನೀಡಿದ್ದರು.ಮುಂಬಯಿಯ ಸಾನ್ವಿ ಅವರು ಪಟ್ಲ ಅವರ ಹಾಡುಗಳಿಗೆ ಯಕ್ಷಗಾನ ನೃತ್ಯ ಪ್ರದರ್ಶಿಸಿದರು. ಅವರ ಜತೆಗೆ ಯಕ್ಷನರ್ತನಗೈದ ಎಳೆಯರು ಹೃದನ್‌ ಶೆಟ್ಟಿ ಪಟ್ಲ ಮತ್ತು ರಾಶಿ ಆರ್‌. ಪೂಂಜ. ಮುಂದಿನ ಕಾರ್ಯಕ್ರಮ “ಯಕ್ಷಮಿತ್ರರು ದುಬಾೖ’ ಮಕ್ಕಳ ತಂಡದವರ ಏಕಾದಶಿ ವ್ರತ ಮಹಾತ್ಮೆ. ಜತೆಯಲ್ಲಿ ಸ್ವತಃ ಪಟ್ಲ ಅವರೇ ಭಾಗವಹಿಸಿ ಮೆರುಗು ಹೆಚ್ಚಿಸಿದರು.

ಯಕ್ಷಧ್ರುವ ಪಟ್ಲ ಸಂಭ್ರಮಕ್ಕಿದು 3ನೇ ವರ್ಷ. ಸಹಜವಾಗಿ ಪ್ರಸಿದ್ಧ ಕಲಾವಿದರ ಕೂಡುವಿಕೆಯ ತಾಳಮದ್ದಲೆ ಪ್ರಧಾನ ಆಕರ್ಷಣೆಗಳಲ್ಲೊಂದು. ಪ್ರಸಂಗ- ಅಗ್ರಪೂಜೆ. ಭಾಗವತರು- ದಿನೇಶ್‌ ಅಮ್ಮಣ್ಣಾಯ, ಸುಬ್ರಹ್ಮಣ್ಯ ಧಾರೇಶ್ವರ. ಹಿಮ್ಮೇಳದಲ್ಲಿ ಸುಬ್ರಹ್ಮಣ್ಯ ಭಟ್‌ ದೇಲಂತ ಮಜಲು, ಪರಮೇಶ್ವರ ಭಂಡಾರಿ ಗುಣವಂತೆ, ರಾಮಕೃಷ್ಣ ಮಂದಾರ್ತಿ, ಗುರುಪ್ರಸಾದ್‌ ಬೊಳಿಂಜಡ್ಕ. ಕಲಾವಿದರು: ಕುಂಬ್ಳೆ ಸುಂದರ ರಾವ್‌, ರಾಧಾಕೃಷ್ಣ ಕಲ್ಚಾರ್‌, ಕದ್ರಿ ನವನೀತ ಶೆಟ್ಟಿ, ಭಾಸ್ಕರ ರೈ ಕುಕ್ಕುವಳ್ಳಿ, ಹರೀಶ್‌ ಬೊಳಂತಿಮೊಗರು, ಸದಾಶಿವ ಆಳ್ವ ತಲಪಾಡಿ.

ಅಂದಹಾಗೆ, ಪಾಂಡವರ ರಾಜಸೂಯ ಯಾಗದಲ್ಲಿ ಅಗ್ರಪೂಜೆ ಶ್ರೀಕೃಷ್ಣನಿಗೇ ಸಲ್ಲುತ್ತದೆ. ಅಂತೆಯೇ ಯಕ್ಷಧ್ರುವ ಪಟ್ಲ ಪ್ರತಿಷ್ಠಾನದ ಯಕ್ಷಸಂಭ್ರಮದ ಮೂರೂ ಆವೃತ್ತಿಗಳಲ್ಲಿ ಪ್ರತಿಷ್ಠೆಯ ಪಟ್ಲ ಪ್ರಶಸ್ತಿಯನ್ನು ಸ್ವೀಕರಿಸಿದವರು “ನಾರಾಯಣ’ರು! ಅಂದರೆ, ಮೂರು ಮಂದಿ ನಾರಾಯಣರು. ಮೊದಲ ವರ್ಷ- ಪೆರುವಾಯಿ ನಾರಾಯಣ ಶೆಟ್ಟಿ. ಎರಡನೆಯ ವರ್ಷ- ಬಲಿಪ ನಾರಾಯಣ ಭಾಗವತರು. ಈ ಬಾರಿ- ಡಾ| ಶಿಮಂತೂರು ನಾರಾಯಣ ಶೆಟ್ಟಿ!

ಪ್ರತಿಷ್ಠಾನವು ಯಕ್ಷಗಾನದ ಮತ್ತು ಯಕ್ಷ ಕಲಾವಿದರ ಸಂಬಂಧಿತ ಮತ್ತಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಪಟ್ಲ ಸತೀಶ್‌ ಶೆಟ್ಟಿ ಅವರು ಹೇಳುತ್ತಾರೆ: “ಮುಂದಿನ ಡಿಸೆಂಬರ್‌ನೊಳಗೆ ಎಲ್ಲ ಕಡೆಗಳಲ್ಲೂ ಪ್ರತಿಷ್ಠಾನದ ಘಟಕಗಳ ಸ್ಥಾಪನೆ ಪೂರ್ಣಗೊಳ್ಳಲಿದೆ. ಒಂದು ಲಕ್ಷ ಸದಸ್ಯರನ್ನು ನೋಂದಾಯಿಸಲಾಗುತ್ತದೆ. ಅಶಕ್ತ ಕಲಾವಿದರಿಗೆ ನೂರು ಮನೆಗಳನ್ನು ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ.

ಪಟ್ಲ ಭಾಗವತರ ಮೂರು ತಲೆಮಾರು ಕಲಾವಿದರಾಗಿ ಭಾಗವಹಿಸಿದ್ದು ವಿಶೇಷವಾಗಿತ್ತು. ಸತೀಶರ ತಂದೆ ಪಟ್ಲ ಮಹಾಬಲ ಶೆಟ್ಟಿ ಅವರು ಚಕ್ರತಾಳದಲ್ಲಿ, ಯಕ್ಷಗಾನ ಪ್ರದರ್ಶನ ವೊಂದರಲ್ಲಿ ಸತೀಶರು ಭಾಗವತರಾಗಿ, ಎಳೆಯರ ಒಂದು ಪ್ರದರ್ಶನದಲ್ಲಿ ಸತೀಶರ ಪುತ್ರ ಹೃದನ್‌ ಶೆಟ್ಟಿ ಪಟ್ಲ ಅವರು ವೇಷಕಟ್ಟಿ ಕುಣಿದರು! ಪ್ರೇಕ್ಷಕರಾಗಿ 3 ತಲೆಮಾರಿನ ಅನೇಕ ಕುಟುಂಬಗಳವರು ಭಾಗವಹಿಸಿದ್ದು  ಉಲ್ಲೇಖನೀಯ.

 ಮನೋಹರ ಪ್ರಸಾದ್‌

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.