ಹೊಸತರ ಅನ್ವೇಷಣೆ
Team Udayavani, Mar 31, 2017, 3:50 AM IST
ಸೃಜನಶೀಲ ಮನಸ್ಸು ಗಳು ಸದಾ ಹೊಸತರ ಅನ್ವೇಷಣೆ ಯಲ್ಲಿ ತೊಡಗಿರುತ್ತವೆ. ಹಾಗಾಗಿ ಸಂಗೀತ, ನೃತ್ಯ, ಚಿತ್ರಕಲೆ ಇತ್ಯಾದಿಗಳಲ್ಲೆಲ್ಲ ಮೂಲ ಆಶಯಕ್ಕೆ ಧಕ್ಕೆ ಬಾರದಂತೆ, ಸಮಕಾಲೀನತೆಗೆ ಹತ್ತಿರವಾಗಿ ಹೊಸತರ ಹುಡುಕಾಟ ನಡೆಯುವುದನ್ನು ಕಾಣಬಹುದು.
ಮಂಗಳೂರಿನ ಮಹಾಲಸ ಚಿತ್ರಕಲಾ ಶಾಲೆಯ 19 ವಿದ್ಯಾರ್ಥಿಗಳು ಅನ್ವೇಷಣೆ ಎನ್ನುವ ಶೀರ್ಷಿಕೆಯೊಂದಿಗೆ ಹೊಸತನದ ಹುಡುಕಾಟದಲ್ಲಿ ತೊಡಗಿ, ರಚಿಸಿದ 32 ಕಲಾಕೃತಿಗಳ ಪ್ರದರ್ಶನ ಉಡುಪಿಯ ಜಂಗಮ ಮಠದ ಚಿತ್ರಕಲಾ ಮಂದಿರ ಕಲಾವಿದ್ಯಾಲಯದ ವಿಭೂತಿ ಆರ್ಟ್ಗ್ಯಾಲರಿಯಲ್ಲಿ ಪ್ರದರ್ಶಿಸಲ್ಪಟ್ಟಿತು. ಮೊಹೆಂಜೊದಾರೊ, ಹರಪ್ಪಾ ಸಂಸ್ಕೃತಿಯ ಕಲೆ, ಸಿಂಧೂ ನಾಗರಿಕತೆಯ ಕಾಲದ ಕಲೆ, ತಾಳೆಗರಿಯಲ್ಲಿ ಚಿತ್ರಿಸಿದ ಪೌರಾಣಿಕ ಕಥಾಚಿತ್ರ, ಮಧುಬನಿ, ತೊಗಲುಗೊಂಬೆ ಶೈಲಿ, ಜನಪದ ಸಂಸ್ಕೃತಿ ಮುಂತಾದವುಗಳ ಅಧ್ಯಯನಪೂರ್ವಕ ಅನುಕರಣೆಯೊಂದಿಗೆ ಹಳೆ ನೆನಪು, ಜೂಜಾಟ, ನವಿರಾದ ಸ್ಪರ್ಶ, ಚಿಂತೆ, ಬೀದಿ ಮಕ್ಕಳ ಬದುಕು ಹೀಗೆ ಸಮಕಾಲೀನ ಚಿಂತನೆಗಳನ್ನು ಸಮೀಕರಿಸಿದ ಕಲಾಕೃತಿಗಳು ಸೊಗಸಾಗಿದ್ದವು. ಬಹಳ ಸೊಗಸಾದ ರೇಖಾ ವಿನ್ಯಾಸ, ಹಿನ್ನೆಲೆ ಮೈವಳಿಕೆ ಮತ್ತು ವರ್ಣ ಸಂಯೋಜನೆಗಳೊಂದಿಗೆ ಉತ್ತಮ ಅಭಿವ್ಯಕ್ತಿ ಇಲ್ಲಿತ್ತು. ಉಡುಪಿಯ ಕಲಾಪ್ರಿಯರಿಗೆ ಹೊಸತನದ ಕಲಾಕೃತಿಗಳನ್ನು ಪರಿಚಯಿಸಿದ ಕಲಾಶಾಲೆಯ ಕಾರ್ಯದರ್ಶಿ ಡಾ| ಯು.ಸಿ. ನಿರಂಜನ್, ಎರಡೂ ಕಲಾಶಾಲೆಗಳ ಪ್ರಾಂಶುಪಾಲರಾದ ರಾಜೇಂದ್ರ ತ್ರಾಸಿ ಮತ್ತು ಕೆ. ಪುರುಷೋತ್ತಮ್ ನಾಯಕ್ ಹಾಗೂ ಕಲಾವಿಭಾಗದ ಮುಖ್ಯಸ್ಥ ಖ್ಯಾತ ಕಲಾವಿದ ಎನ್.ಎಸ್. ಪತ್ತಾರ್ ಅಭಿನಂದನಾರ್ಹರು.
ಕೆ. ದಿನಮಣಿ ಶಾಸ್ತ್ರೀ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ
60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ
Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ
JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಅಮಾನತು