ತೆಲುಗರ ನಾಡಲ್ಲಿ ಸಿರಿಬಾಗಿಲು ಪ್ರತಿಷ್ಠಾನದ ಯಕ್ಷಾಷ್ಟಕಂ

ಸಿರಿಬಾಗಿಲು ಪ್ರತಿಷ್ಠಾನ ಪ್ರಸ್ತುತಿ

Team Udayavani, Nov 1, 2019, 3:53 AM IST

14

ಶಶಿಪ್ರಭಾ ಪರಿಣಯ,ಗದಾಯುದ್ಧ- ರಕ್ತ ರಾತ್ರಿ, ಶ್ರೀ ಕೃಷ್ಣ ಲೀಲಾಮೃತ, ಭಸ್ಮಾಸುರ ಮೋಹಿನಿ,ನಾಗೋದ್ಧರಣ, ಭಕ್ತ ಪ್ರಹ್ಲಾದ,ಬೇಡರ ಕಣ್ಣಪ್ಪ ಮತ್ತು ಏಕಾದಶಿ ದೇವಿ ಮಹಾತ್ಮೆಗಳು ಪ್ರಸಂಗಗಳನ್ನು ಕನ್ನಡ ಪ್ರೇಕ್ಷಕರು ಮಾತ್ರಲ್ಲದೆ ತೆಲುಗು ಪ್ರೇಕ್ಷಕರು ಬೆರಗುಗಣ್ಣುಗಳಿಂದ ಆಸ್ವಾದಿಸಿದರು.

ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾದಿಂದ ಸಿರಿಬಾಗಿಲು ರಾಮಕೃಷ್ಣ ಮಯ್ಯರ ನೇತೃತ್ವದಲ್ಲಿ ಹೈದರಾಬಾದ್‌ನ ವಿವಿಧೆಡೆಗಳಲ್ಲಿ ಎಂಟು ಪೌರಾಣಿಕ ಆಖ್ಯಾನಗಳು ತೆಂಕುತಿಟ್ಟಿನ ಸಾಂಪ್ರದಾಯಿಕ ಚೌಕಟ್ಟಿನಲ್ಲಿ ಪ್ರಸ್ತುತಗೊಂಡಿತು. ಶಶಿಪ್ರಭಾ ಪರಿಣಯ,ಗದಾಯುದ್ಧ-ರಕ್ತ ರಾತ್ರಿ, ಶ್ರೀ ಕೃಷ್ಣ ಲೀಲಾಮೃತ,ಭಸ್ಮಾಸುರ ಮೋಹಿನಿ,ನಾಗೋದ್ಧರಣ,ಭಕ್ತ ಪ್ರಹ್ಲಾದ,ಬೇಡರ ಕಣ್ಣಪ್ಪ ಮತ್ತು ಏಕಾದಶಿ ದೇವಿ ಮಹಾತೆ¾ಗಳು ಪ್ರದರ್ಶಿತಗೊಂಡವು.ಕನ್ನಡ ಪ್ರೇಕ್ಷಕರು ಮಾತ್ರಲ್ಲದೆ ಯಕ್ಷಗಾನದ ವೇಷ ಭೂಷಣಗಳನ್ನು,ನಾಟ್ಯ,ಚೆಂಡೆ ಮದ್ದಳೆಗಳ ಝೇಂಕಾರವನ್ನು,ಕಥಾಭಾಗಗಳನ್ನು ತೆಲುಗು ಪ್ರೇಕ್ಷಕರು ಬೆರಗುಗಣ್ಣುಗಳಿಂದ ಆಸ್ವಾದಿಸಿದರು.

ರಾಮಕೃಷ್ಣ ಮಯ್ಯರು ತಮ್ಮ ಸಿರಿಕಂಠದಿಂದ ಮತ್ತು ಇನ್ನೋರ್ವ ಭಾಗವತರಾದ ದಿನೇಶ್‌ ಭಟ್‌ ಯಲ್ಲಾಪುರ ಇವರು ಸುಮಧುರ ಕಂಠದಿಂದ ಮಂತ್ರ ಮುಗ್ಧಗೊಳಿಸುವಲ್ಲಿ ಸಫ‌ಲರಾದರು. ಲವಕುಮಾರ ಐಲ ಮದ್ದಳೆಯಲ್ಲಿ ಮತ್ತು ಚೆಂಡೆಯಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್‌ ನುಡಿತಗಳ ಛಾಪನ್ನು ಮೂಡಿಸಿದರು.ಚಕ್ರತಾಳದಲ್ಲಿ ನಿಶ್ಚಿತ್‌ ಸಹಕರಿಸಿದರು.

ರಾಧಾಕೃಷ್ಣ ನಾವುಡರು ಗದಾಯುದ್ಧದ ಕೌರವನಾಗಿ, ಕೃಷ್ಣ ಲೀಲೆಯ ಕಂಸನಾಗಿ,ಭಸ್ಮಾಸುರ ಮೋಹಿನಿಯ ಭಸ್ಮಾಸುರನಾಗಿ,ಭಕ್ತ ಪ್ರಹ್ಲಾದದ ಹಿರಣ್ಯಕಶ್ಯಪುವಾಗಿ, ನಾಗೋದ್ಧರಣದ ಕಾಳಿಂಗನಾಗಿ,ಬೇಡರ ಕಣ್ಣಪ್ಪದ ಕೈಲಾಸ ಶಾಸ್ತ್ರಿಯಾಗಿ ಗಾಂಭೀರ್ಯ ಹಾಗೂ ತೂಕದ ಮಾತುಗಳಿಂದ ,ಸೂಕ್ತ ರಂಗ ನಡೆಗಳಿಂದ ರಂಗದರಾಜ ಎಂಬ ನೆಗಳೆ¤ಯನ್ನು ಸಾರ್ಥಕ ಪಡಿಸಿಕೊಂಡರು.

ಸ್ತ್ರೀ ವೇಷಧಾರಿಗಳಾದ ರಾಜೇಶ್‌ ನಿಟ್ಟೆ ಮತ್ತು ರಕ್ಷಿತ್‌ ದೇಲಂಪಾಡಿಯವರು ತಮ್ಮ ನಾಟ್ಯದಿಂದ ಸಭಿಕರ ಹೃನ್ಮನ ಸೆಳೆದರು. ಶಶಿಪ್ರಭಾ ಪರಿಣಯದಲ್ಲಿ ಭ್ರಮರಕುಂತಳೆ -ಶಶಿಪ್ರಭೆ ಹಾಗೂ ನಾಗೋದ್ಧರಣದ ಮತ್ಸé ರಾಣಿಯರ ಜೋಡಿಯಾಗಿ ಅದ್ಭುತ ಅಭಿನಯ ನೀಡಿದರು.ನಿಟ್ಟೆಯವರ ಭಸ್ಮಾಸುರ ಮೋಹಿನಿಯ ಮೋಹಿನಿ ಮತ್ತು ಬೇಡರ ಕಣ್ಣಪ್ಪದ ರಾಣಿಯ ಪಾತ್ರವನ್ನು ಕಂಡ ಸಭಿಕರು ಪುರುಷರೇ ಸ್ತ್ರೀ ಪಾತ್ರವನ್ನು ನಿರ್ವಹಿಸುವ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದರು.

ಅತಿರೇಕಗಳಿಲ್ಲದ ,ಶುದ್ಧವಾದ, ಹಿತ ಮಿತವಾದ ಹಾಸ್ಯ ಮಹೇಶ್‌ ಮಣಿಯಾಣಿಯವರ¨ªಾಗಿದ್ದು , ರಂಗನಡೆಗೆ ಕೊರತೆ ಬಾರದಂತೆ ಬೇಹಿನ ಚರ,ಅಗಸ,ಕಾಶೀಮಾಣಿ,ದೂತ ,ಅಜ್ಜಿ ಮುಂತಾದ ಪಾತ್ರಗಳಲ್ಲಿ ಹಾಸ್ಯದ ಮೂಲಕ ನೆರೆದ ಸಭಿಕರನ್ನು ನಗೆಗಡಲಲ್ಲಿ ಮುಳುಗಿಸಿದರು. ಅರುವತ್ತರ ಹರೆಯದಲ್ಲಿಯೂ ಚೆಂಡಿನಂತೆ ಪುಟಿಯುವ ಗುಂಡಿಮಜಲು ಗೋಪಾಲ ಭಟ್ಟರ ಅಶ್ವತ್ಥಾಮನನ್ನು ಎಷ್ಟು ಬಣ್ಣಿಸಿದರೂ ಸಾಲದು. ಎಲ್ಲ ಪ್ರಸಂಗಗಳಲ್ಲಿ ನಾಯಕ ಪಾತ್ರದಲ್ಲಿ ಕಾಣಿಸಿಕೊಂಡ ಪುಷ್ಪರಾಜ ಜೋಗಿಯವರು ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.ಶಂಭಯ್ಯ ಕಂಜರ್ಪಣೆಯವರ ಇದಿರು ವೇಷಗಳು ಅವರೊಬ್ಬ ಅನುಭವಿ ಕಲಾವಿದ ಎನ್ನುವುದನ್ನು ತೋರಿಸಿಕೊಟ್ಟಿತು.ಶಶಿಕಿರಣ ಕಾವು ಅವರ ಗರುಡ ವೇಷವು ಬಣ್ಣದ ವೇಷಗಳಲ್ಲಿ ಅವರ ಅನುಭವ ,ಹಿಡಿತಗಳನ್ನು ತೋರ್ಪಡಿಸಿತು. ಕೃಷ್ಣನ ಪಾತ್ರ ಹಾಗೂ ಪುಂಡು ವೇಷಗಳಲ್ಲಿ ಪ್ರಕಾಶ್‌ ನಾಯಕ್‌ ನೀರ್ಚಾಲ್‌ ಮಿಂಚಿದರು. ರಕ್ತರಾತ್ರಿ ಪ್ರಸಂಗದಲ್ಲಿ ಪೆರುವೋಡಿ ಸುಬ್ರಹ್ಮಣ್ಯ ಭಟ್ಟರ ಶಿವಶಕ್ತಿ ಅತ್ಯದ್ಭುತವಾಗಿತ್ತು.ಬಲ ಪಾತ್ರಗಳಲ್ಲಿ ಕಾಣಿಸಿಕೊಂಡ ಕಲಾವಿದರು ಉತ್ತಮವಾಗಿ ತಮ್ಮ ಪಾತ್ರಗಳನ್ನು ನಿರ್ವಹಿಸಿದರು.ಕೊನೆಯ ದಿನದ ಪ್ರದರ್ಶನ ಏಕಾದಶಿ ದೇವಿ ಮಹಾತ್ಮೆ. ಸುಮಾರು 400 ಕ್ಕೂ ಮಿಕ್ಕಿದ ತೆಲುಗು ಪ್ರೇಕ್ಷಕರು ಭಕ್ತಿ ಭಾವದಿಂದ ಪ್ರಸಂಗವನ್ನು ವೀಕ್ಷಿಸಿದರು.ಒಟ್ಟಂದದಲ್ಲಿ ತಂಡದ ಪ್ರಸ್ತುತಿ ಉತ್ತಮ ವಾಗಿದ್ದು,ಬಹುಕಾಲ ಮನದಲ್ಲಿ ಅಚ್ಚೊಳಿಯುವಂತಾಗಿದೆ.

ರಮಾದೇವಿ,ಹೈದರಾಬಾದ್‌

ಟಾಪ್ ನ್ಯೂಸ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.