ನಿನ್ನ ಉತ್ತರಕ್ಕಾಗಿ 15 ದಿನ ಕಾಯ್ತೇನೆ…


Team Udayavani, May 21, 2019, 6:00 AM IST

lett

ನಿನ್ನ ಪ್ರೇಮ ನನ್ನ ಬಾಳಿನಲ್ಲಿ ಹೊಂಬೆಳಕನ್ನು, ನವ ಚೈತನ್ಯವನ್ನು ತುಂಬುತ್ತದೆಂದು ಅಂದುಕೊಂಡಿದ್ದೆ. ಅದುವೇ ಬದುಕಿಗೆ ಮುಳ್ಳಾಗಬಹುದೆಂಬ ಕಲ್ಪನೆ ಕನಸಿನಲ್ಲಿಯೂ ಹುಟ್ಟಿರಲಿಲ್ಲ.

ನನಗೀಗಲೂ ನಿನ್ನ ನೆನಪಿದೆ. ಆದರೆ, ಬರುಬರುತ್ತಾ ನಿನಗೆ ನನ್ನ ನೆನಪು ಕಡಿಮೆಯಾಗುತ್ತಿದೆಯೇನೋ ಎಂಬ ಹೆದರಿಕೆ ಶುರುವಾಗಿದೆ. ನಿನ್ನ ನಡವಳಿಕೆಗಳು ನೂರಾರು ಅನುಮಾನದ ಅಲೆಗಳನ್ನು ಸೃಷ್ಟಿಸಿವೆ. ನಂಬಿಕೆಯ ಗೋಪುರ ಸಂಶಯವೆಂಬ ಸುಂಟರಗಾಳಿಯ ಸುಳಿಗೆ ಸಿಲುಕಿ ನೆಲಕಚ್ಚುವ ಸ್ಥಿತಿ ತಲುಪಿದೆ. ನಿನ್ನ ಒಲವಿನ ಅರಮನೆಯಲ್ಲಿ ರಾಣಿಯಾಗಿ ಮೆರೆಯಬೇಕೆಂಬ ನನ್ನಾಸೆಯನ್ನು ಮಣ್ಣು ಪಾಲು ಮಾಡಲು ಯೋಚಿಸುತ್ತಿದ್ದೀಯ?

“ಪ್ರೀತಿ ಕುರುಡು’ ಎನ್ನುವ ಮಾತನ್ನು ಕೇಳಿದ್ದೆ. ಆದರೆ, ನನ್ನ ಬಾಳಿನಲ್ಲಿ ಆ ಮಾತು ನಿಜವಾಗುತ್ತದೆ ಅಂತ ನಾನು ಭಾವಿಸಿರಲಿಲ್ಲ. ನಿನ್ನ ಪ್ರೇಮ ನನ್ನ ಬಾಳಿನಲ್ಲಿ ಹೊಂಬೆಳಕನ್ನು, ನವ ಚೈತನ್ಯವನ್ನು ತುಂಬುತ್ತದೆಂದು ಅಂದುಕೊಂಡಿದ್ದೆ. ಅದುವೇ ಬದುಕಿಗೆ ಮುಳ್ಳಾಗಬಹುದೆಂಬ ಕಲ್ಪನೆ ಕನಸಿನಲ್ಲಿಯೂ ಹುಟ್ಟಿರಲಿಲ್ಲ.

ಪ್ರಾರಂಭದಲ್ಲಿ ಪ್ರಣಯದ ನೌಕೆ ಏರುವಾಗ ನೀನಾಡಿದ ಮಾತು ನೆನಪಿದೆಯೇ? “ಉಸಿರಿರುವವರೆಗೆ ಜಂಟಿಯಾಗಿರೋಣ’ ಅಂತ ಹೇಳಿದ್ದೆ. ಆದರೀಗ, ನನ್ನನ್ನು ಒಂಟಿ ಮಾಡಲು ಹೊರಟಿರುವುದೇಕೆ? ಅಂದು ನೀನಾಡಿದ ಸಿಹಿ ನುಡಿಗಳು, ನಿನ್ನೊಂದಿಗೆ ಕಳೆದ ಮಧುರ ಕ್ಷಣಗಳು, ಪ್ರತಿ ನಿಮಿಷವೂ ನೀನು ನನಗಾಗಿ ಹಂಬಲಿಸುತ್ತಿದ್ದ ಆ ಪರಿ ಇಂದು ನನ್ನ ಜೀವ ಹಿಂಡುತ್ತಿದೆ. ಮತ್ತೆ ನೀನು ಮೊದಲಿನ ಹಾಗಾಗು ಎಂದು ಮನಸ್ಸು ಪ್ರಾರ್ಥಿಸುತ್ತಿದೆ.

ಎಳೆ ಮಗುವಿನ ಮನದಾಳದಲ್ಲಿ ಮೂಡಿದ ಪ್ರಶ್ನೆಗಳಿಗೆ, ಅನುಮಾನಗಳಿಗೆ ಉತ್ತರಿಸಬಹುದು. ಹಠ ಮಾಡಿದರೆ ಮುದ್ದು ಮಾಡಿ, ಮರುಳು ಮಾಡಬಹುದು. ಆದರೆ, ಪ್ರೀತಿಗೆ ಬಿದ್ದ ಮನಸ್ಸಿದೆಯಲ್ಲ, ಅದನ್ನು ನಿಯಂತ್ರಿಸುವುದು ಬಹಳ ಕಷ್ಟ. ಮಗುವಿಗಿಂತಲೂ ಮನಸ್ಸಿಗೆ ಹಠ ಜಾಸ್ತಿ. ನನ್ನದೇ ಮನಸ್ಸನ್ನು ನನಗೆ ಸಂಭಾಳಿಸುವುದು ಕಷ್ಟವಾಗಿದೆ.

ನಿನಗೆ ನನ್ನ ಜೊತೆ ಮಾತನಾಡದೆ, ನನ್ನನ್ನು ನೋಡದೆ ಇರಲು ಹೇಗಾದರೂ ಸಾಧ್ಯ? ಮೊದಲೆಲ್ಲ ನಾನು ಬೇಕೆಂದು ಹಠ ಹಿಡಿಯುತ್ತಿದ್ದ ನಿನ್ನ ಮನಸ್ಸು ಈಗ ನನ್ನನ್ನು ಮರೆತುಬಿಟ್ಟಿದೆಯಾ? ಆ ಮರೆವನ್ನು ನನಗೂ ಕಲಿಸಿಕೊಡಲು ನೀನೇ ಬರಬೇಕಿದೆ.

ನಾನು ನಿನ್ನ ಮುಂದೆ ನಿಂತಾಗ, ನೋಡಿದರೂ ನೋಡದ ಹಾಗೆ ಹೋಗುತ್ತೀಯಲ್ಲಾ ಆ ಕಾರಣಕ್ಕೇ ಈ ಪತ್ರ ಬರೆದಿರುವುದು. ಇದನ್ನು ಓದಿದ ಮೇಲಾದರೂ ನನ್ನೆಡೆಗೆ ಬರುವೆಯೇನೋ ಎಂಬ ಸಣ್ಣ ಆಸೆಯೊಂದು ಇನ್ನೂ ಎದೆಯಲ್ಲಿ ಜೀವಂತವಾಗಿದೆ. ನನ್ನ ನಂಬಿಕೆಯನ್ನು ಹುಸಿ ಮಾಡಬೇಡ. ನಿನ್ನ ಉತ್ತರಕ್ಕಾಗಿ ಹದಿನೈದು ದಿನ ಕಾಯುತ್ತೇನೆ.
ಸರೀನಾ?
ನಿನ್ನದೇ ನಿರೀಕ್ಷೆಯಲ್ಲಿರುವ

-ನಾಗರತ್ನ ಮತ್ತಿಘಟ್ಟ

ಟಾಪ್ ನ್ಯೂಸ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.