ಕಂಪ್ಲೇಂಟ್‌ ಕೊಡೋಕೆ ಪ್ರಿನ್ಸಿಪಾಲ್‌ ಹತ್ರ ಹೋಗ್ತಿರೇನ್ರಿ?


Team Udayavani, Jun 25, 2019, 5:00 AM IST

11

ಬೇರೆ ಯಾರನ್ನೋ ನಾನು ಅಂತ ತಿಳಿದುಕೊಂಡು ನಿಮಗೆ ಗೊಂದಲವಾಗಬಾರದು ಅಂತ ನನ್ನ ಹೆಸರು, ತರಗತಿ, ರೋಲ್‌ ನಂಬರ್‌ ಕೂಡಾ ಬರೆದಿದ್ದೇನೆ. ನೀವು ನೋಡಿದ್ರೆ, ಲೆಟರ್‌ ಎತ್ತಿಕೊಂಡು, ದುಸುಮುಸು ಮಾಡುತ್ತಾ ಪ್ರಿನ್ಸಿಪಾಲರ ಬಳಿ ಓಡುವುದಾ?

ಹಾಯ್‌,
ಬಿರುಗಾಳಿಯ ವೇಗದಲ್ಲಿ ನೀವು ಪ್ರಿನ್ಸಿಪಾಲರ ಛೇಂಬರ್‌ ಕಡೆಗೆ ಹೋಗುತ್ತಿದ್ದುದನ್ನು ನೋಡಿದೆ. ನೀವು ಯಾವ ಕಾರಣಕ್ಕೆ ಅಷ್ಟು ಗಡಿಬಿಡಿಯಲ್ಲಿ ಹೊರಟಿದ್ದಿರೆಂದು ನನಗೆ ಗೊತ್ತು. ನೀವು ದಿನಾ ಕೂರುವ, ಆ ಕಿಟಕಿ ಬಳಿಯ ಬೆಂಚಿನಲ್ಲಿದ್ದ ಆ ಪತ್ರವೇ ಅದಕ್ಕೆಲ್ಲ ಕಾರಣ ತಾನೇ? ಸದ್ಯ, ಇವತ್ತು ಪ್ರಿನ್ಸಿಪಾಲ್‌ ಬಂದಿಲ್ಲ. ಹಾಗಾಗಿ ನಾನು ಬಚಾವಾದೆ.

ಹೌದೂರಿ, ಆ ಪತ್ರ ಬರೆದಿದ್ದು ನಾನೇ. ನಾನು ಯಾರಂತ ನಿಮಗೆ ಗೊತ್ತಿರಲಿಕ್ಕಿಲ್ಲ. ಯಾಕಂದ್ರೆ, ನೀವ್ಯಾವತ್ತೂ ಹುಡುಗರನ್ನು, ಅದರಲ್ಲೂ ನಮ್ಮಂಥ ಕೊನೆಯ ಬೆಂಚಿನ ಹುಡುಗರನ್ನು ಕಣ್ಣೆತ್ತಿ ನೋಡಿದವರೂ ಅಲ್ಲ. ಹಾಗಾಗಿ, ನಿಮ್ಮ ಗಮನ ಸೆಳೆಯಲೆಂದು ನಾನೇ ಆ ಪತ್ರವನ್ನು ಬರೆದಿದ್ದು. ಇದಕ್ಕೂ ಮೊದಲು ಬೋರ್ಡ್‌ ಮೇಲೆ ನಿಮ್ಮ ಹೆಸರನ್ನು ಬರೆದವನು, ಕಾರಿಡಾರ್‌ನಲ್ಲಿ ನೀವು ನಡೆದು ಹೋಗುವಾಗ ಕಂಬದ ಮರೆಯಲ್ಲಿ ನಿಂತು ನೋಡುತ್ತಿದ್ದವನು, ಲೈಬ್ರರಿಯಲ್ಲಿ ಬೇಕಂತಲೇ ನಿಮ್ಮ ಪಕ್ಕದ ಕುರ್ಚಿಯಲ್ಲಿ ಬಂದು ಕೂರುತ್ತಿದವನು ನಾನೇ. ಇಷ್ಟೆಲ್ಲಾ ಸೈಕಲ್‌ ಹೊಡೆದರೂ ನೀವು ಕ್ಯಾರೇ ಅನ್ನದಿದ್ದರೆ, ನಾನಾದರೂ ಏನು ಮಾಡಬೇಕು ಹೇಳಿ?

ಅದಕ್ಕೇ ನಿನ್ನೆ ಧೈರ್ಯ ಮಾಡಿ, ತಂಗಿಯ ಬಳಿ ಇದ್ದ ಸ್ಕೆಚ್‌ಪೆನ್‌ಗಳು, ಕಲರ್‌ ಪೆನ್ಸಿಲ್‌ಗ‌ಳನ್ನೆಲ್ಲ ಬಳಸಿ, ನನಗೆ ತಿಳಿದಂತೆ ರಂಗುರಂಗಾದ ಪತ್ರವನ್ನು ಬರೆದೆ. ಇಲ್ಲಿಯವರೆಗೆ ಯಾವ ನೋಟ್ಸನ್ನೂ, ಲ್ಯಾಬ್‌ ರೆಕಾರ್ಡನ್ನೂ ಇಷ್ಟು ತಾಳ್ಮೆ ವಹಿಸಿ ಬರೆದವನಲ್ಲ ನಾನು. ಇಷ್ಟೆಲ್ಲಾ ಕಷ್ಟಪಟ್ಟಿದ್ದು ವ್ಯರ್ಥವಾಗಬಾರದು ಅನ್ನಿಸಿತು. ಹಾಗಾಗಿ, ನನ್ನ ಪ್ರೀತಿಯನ್ನು ನೀವು ಒಪ್ಪಿಕೊಳ್ಳದಿದ್ದರೂ, ಕನಿಷ್ಠ ಪಕ್ಷ ನನ್ನ ಪರಿಶ್ರಮವನ್ನು ಮೆಚ್ಚಿ “ಇವನ್ಯಾರಪ್ಪಾ, ಇಷ್ಟು ಚೆನ್ನಾಗಿ ಲೆಟರ್‌ ಬರೆದಿದ್ದಾನೆ’ ಅನ್ನುವ ಕುತೂಹಲಕ್ಕಾದರೂ ನನ್ನತ್ತ ತಿರುಗಿ ನೋಡಬೇಕು ಅಂತಲೇ ನಾನು ಆ ಪತ್ರವನ್ನು ನಿಮ್ಮ ಬೆಂಚಿನ ಮೇಲೆ ಇಟ್ಟಿದ್ದು. ಬೇರೆ ಯಾರನ್ನೋ ನಾನು ಅಂತ ತಿಳಿದುಕೊಂಡು ನಿಮಗೆ ಗೊಂದಲವಾಗಬಾರದು ಅಂತ ನನ್ನ ಹೆಸರು, ತರಗತಿ, ರೋಲ್‌ ನಂಬರ್‌ ಕೂಡಾ ಬರೆದಿದ್ದೇನೆ. ನೀವು ನೋಡಿದ್ರೆ, ಲೆಟರ್‌ ಎತ್ತಿಕೊಂಡು, ದುಸುಮುಸು ಮಾಡುತ್ತಾ ಪ್ರಿನ್ಸಿಪಾಲರ ಬಳಿ ಓಡುವುದಾ?

ನೀವು ಮಾಡಿದ್ದು ಸರೀನಾ ಹೇಳಿ? ಮೊದಲೇ ಕೊನೆಯ ಬೆಂಚಿನ ಹುಡುಗ ನಾನು. ಲೆಟರ್‌ ಬರೆದಿದ್ದಾನೆ, ಅದೂ ಏನು? ಲವ್‌ ಲೆಟರ್‌ ಅಂತ ಗೊತ್ತಾದ್ರೆ ಪ್ರಿನ್ಸಿಪಾಲರು ಸುಮ್ಮನೆ ಬಿಡ್ತಾರ? ನಂದೇ ತಪ್ಪು ಅಂತ ಕ್ಲಾಸಿಂದ ಆಚೆ ಹಾಕ್ತಾರೆ ಅಷ್ಟೆ. ಇದರಲ್ಲಿ ನಿಮ್ಮ ತಪ್ಪೂ ಇದೆ ಅಂತ ಹೇಳಿದ್ರೆ ಅವರು ನಂಬೋದಿಲ್ಲ. ಹೌದೂರಿ, ಇದರಲ್ಲಿ ನಿಮ್ಮದೂ ತಪ್ಪಿದೆ. ನೀವು ದಿನಾ ಚೂಡಿದಾರ ಹಾಕ್ಕೊಂಡು, ಉದ್ದ ಕೂದಲನ್ನು ಲೂಸಾಗಿ ಜಡೆ ಹೆಣೆದು, ಕಿವಿಗೊಂದು ಪುಟ್ಟ ಜುಮ್ಕಿ, ಹಣೆಗೊಂದು ಬಿಂದಿಯಿಟ್ಟು ದೇವತೆಯಂತೆ ಕ್ಲಾಸಿಗೆ ಬಂದರೆ, ಅದನ್ನು ನಾನು ಮೆಚ್ಚಿಕೊಂಡರೆ ಅದು ನನ್ನೊಬ್ಬನ ತಪ್ಪಾ? ತಲೆ ತಗ್ಗಿಸಿಕೊಂಡು ಬಂದು, ವಿಧೇಯಳಾಗಿ ಪಾಠ ಕೇಳಿ, ಎಲ್ಲ ಪರೀಕ್ಷೆಯಲ್ಲೂ ಫ‌ಸ್ಟ್‌ ಬಂದು, ಕಾಲೇಜು ಫ‌ಂಕ್ಷನ್‌ಗಳಲ್ಲಿ ಹಾಡನ್ನೂ ಹೇಳಿ ಚಪ್ಪಾಳೆ ಗಿಟ್ಟಿಸಿಕೊಳ್ಳುವ ನಿಮ್ಮನ್ನು ಆರಾಧಿಸದಿದ್ದರೆ, ಅದು ನನ್ನ ತಪ್ಪಾಗುತ್ತದೆ.

ಈಗ ಅರಿವಾಯ್ತಾ, ಈ ವಿಷಯದಲ್ಲಿ ನಿಮ್ಮದೂ ತಪ್ಪಿದೆ. ಹಾಗಂತ ನಾನೂ ಪ್ರಿನ್ಸಿಪಾಲರ ಹತ್ತಿರ ಹೇಳ್ತೀನಿ. ಹೇಳಬಾರದು ಅಂತಿದ್ದರೆ, ನೀವು ನಾಳೆ ನನ್ನತ್ತ ತಿರುಗಿ ನೋಡಬೇಕು. ಮುಗುಳ್ನಕ್ಕರಂತೂ ಇನ್ನೂ ಸಂತೋಷವೇ. ನೀವಾಗಿಯೇ ಬಂದು ಮಾತಾಡಿಸಿದರಂತೂ, ಸ್ವರ್ಗಕ್ಕೆ ಮೂರೇ ಗೇಣು…

ಇಷ್ಟೆಲ್ಲ ಹೇಳಿದ ಮೇಲೂ, ನೀವು ಪ್ರಿನ್ಸಿಪಾಲರ ಬಳಿ ಹೋಗುತ್ತೇನೆ ಅಂದರೆ, ನಿಮ್ಮದು ಕಲ್ಲುಹೃದಯ ಅಂತ ಅರ್ಥ…

ಇಂತಿ ನಿಮ್ಮ ಧ್ಯಾನಿ
ಪನ್ನಗ

ಟಾಪ್ ನ್ಯೂಸ್

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

1-ewewqe

IPL; ಕೆಕೆಆರ್‌ ನೀಡಿದ 262 ರನ್ ಗುರಿ ತಲುಪಿ ದಾಖಲೆ ಬರೆದ ಪಂಜಾಬ್

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

1-ewewqe

IPL; ಕೆಕೆಆರ್‌ ನೀಡಿದ 262 ರನ್ ಗುರಿ ತಲುಪಿ ದಾಖಲೆ ಬರೆದ ಪಂಜಾಬ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.