ಪತ್ತೇದಾರಿ ಪ್ರತಿಭೆಗಳಾಗಿ!


Team Udayavani, Aug 29, 2017, 6:15 AM IST

Ban29081703SJsh.jpg

ಶತ್ರು ದೇಶದವರು ನಡೆಸುವ ದುಷ್ಕೃತ್ಯಗಳನ್ನು ತಡೆಯಲು ಗಡಿಯಲ್ಲಿ ಸೈನಿಕರು ಸದಾ ಸನ್ನದ್ಧರಿರುತ್ತಾರೆ. ದೇಶದ ಒಳಗೆ ಜರುಗುವ ಅಪಘಾತ, ಕಳವು, ದರೋಡೆ, ಅಪಹರಣಗಳಂಥ ಅಪರಾಧಗಳ ತಡೆಗೆ ಪೊಲೀಸರಿದ್ದಾರೆ. ಹಾಗೆಯೇ ಉಗ್ರರ ದಾಳಿ, ಬಾಂಬ್‌ ಸ್ಫೋಟ, ಇತ್ಯಾದಿ ಭಯೋತ್ಪಾದಕ ಚಟುವಟಿಕೆಗಳ ನಿಗ್ರಹಕ್ಕೆ ಪೊಲೀಸರಿಗಿಂತ ಮುಂಚಿತವಾಗಿ ಮಾಹಿತಿ ಕಲೆಹಾಕಿ ಕ್ರಮಕ್ಕೆ ಯೋಜನೆ ರೂಪಿಸುವವರೇ ಗುಪ್ತಚರ ಅಧಿಕಾರಿಗಳು. ಈಗ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಗುಪ್ತಚರ ಇಲಾಖೆಯಲ್ಲಿ 1300 ಸಹಾಯಕ ಗುಪ್ತಚರ ಅಧಿಕಾರಿಗಳ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ…

ಜನಸಂದಣಿಯಿಂದ ಗಿಜಿಗಿಡುವ ಮಾಲ್‌ನಲ್ಲಿ ಬಾಂಬ್‌ ಇರಿಸಲಾಗಿದೆ ಎಂದು ಅನಾಮಧೇಯ ಕರೆಯೊಂದು ಬರುತ್ತದೆ. ಪೊಲೀಸರಿಗೂ, ಮಾಲ್‌ನ ಮಾಲೀಕರಿಗೂ ದೊರೆತಿರುವ ಮಾಹಿತಿಯ ಪ್ರಕಾರ ಅದು ಇನ್ನೇನು ಕೆಲವೇ ನಿಮಿಷಗಳಲ್ಲಿ ಸಿಡಿಯಲಿದೆ. ಜರೂರಾಗಿ ಈಗ ಏನು ಮಾಡಬೇಕು? ದೇಶದ ರಾಜಕೀಯ ಮುಖಂಡನೊಬ್ಬ ಭಯೋತ್ಪಾದಕ ಚಟುವಟಿಕೆಗೆ ಸಾಥ್‌ ನೀಡುತ್ತಿದ್ದಾನೆಯೇ ಎಂದು ತಿಳಿಯುವುದು ಹೇಗೆ? ದೇಶದೊಳಗೆ ಉಗ್ರರು ನುಸುಳಿ¨ªಾರೆ, ಇಂತಿಂಥ ಕಡೆಯೇ ಅಡಗಿ¨ªಾರೆ ಎಂಬುದರ ಮಾಹಿತಿ ನೀಡುವವರಾದರೂ ಯಾರು?… ಈ ರೀತಿಯ ಪ್ರಶ್ನೆಗಳಿಗೆ ಉತ್ತರದ ರೂಪದಲ್ಲಿ ಕಾಣಿಸುವುದೇ ಗುಪ್ತಚರ ಇಲಾಖೆ! ಸರ್ಕಾರವೂ ಸೇರಿದಂತೆ ಅನೇಕ ಗುಪ್ತಚರ ಏಜೆನ್ಸಿಗಳು ಕರ್ತವ್ಯ ನಿರ್ವಹಿಸುತ್ತಿವೆ. ಇವು ದೇಶದಲ್ಲಿ ನಡೆಯಬಹುದಾದ, ನಡೆಯುವ ಅಹಿತಕರ ಘಟನೆಗಳ ಕುರಿತು ಮಾಹಿತಿ ಸಂಗ್ರಹಿಸಿ, ಅದನ್ನು ಹೇಗೆ ನಿಯಂತ್ರಿಸಬಹುದು ಎಂದೂ ಸಲಹೆ ನೀಡಿ, ಆ ವರದಿಯನ್ನು ಕೇಂದ್ರ ಗೃಹ ರಕ್ಷಣಾ ವ್ಯವಹಾರಗಳ ಸಚಿವಾಲಯಕ್ಕೆ ರವಾನಿಸುತ್ತಿರುತ್ತದೆ.ಇಂಥ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಗುಪ್ತಚರ ಇಲಾಖೆಯಲ್ಲಿ ಖಾಲಿ ಇರುವ 1300 ಸಹಾಯಕ ಗುಪ್ತಚರ (ಗ್ರೇಡ್‌ ||/ಎಕ್ಸಿಕ್ಯೂಟಿವ್‌) ಅಧಿಕಾರಿಯಾಗಲು ಯುವಕರಿಗೆ ಅವಕಾಶ ಕಲ್ಪಿಸಲಾಗಿದೆ.

ಯಾರಿಗೆ ಎಷ್ಟು ಹುದ್ದೆ? 
ಸಾಮಾನ್ಯ ವರ್ಗ-   951
ಹಿಂದುಳಿದ ವರ್ಗ- 184
ಪರಿಶಿಷ್ಟ ಜಾತಿ/ಎಸ್ಸಿ-109
ಪರಿಶಿಷ್ಟ ವರ್ಗ/ಎಸ್ಟಿ-  56
ಇದರಲ್ಲಿ ಎಕÕ…-ಸರ್ವಿಸ್‌ ಮೆನ್‌ ಹುದ್ದೆಗಳನ್ನೂ ಸೇರಿಸಲಾಗಿದೆ.

ಅರ್ಹತೆ ಏನಿರಬೇಕು?
ಸಹಾಯಕ ಗುಪ್ತಚರ ಅಧಿಕಾರಿಯಾಗಲು ಯಾವುದೇ ಪ್ರಮಾಣೀಕೃತ ವಿಶ್ವವಿದ್ಯಾಲಯದಲ್ಲಿ ಪದವಿ ಹೊಂದಿರಬೇಕು. ಜೊತೆಗೆ ಕಂಪ್ಯೂಟರ್‌ ಕುರಿತಾಗಿ ಜ್ಞಾನ ಅಗತ್ಯ.

ವಯೋಮಿತಿ ಎಷ್ಟು?
– ಸಹಾಯಕ ಗುಪ್ತಚರ ಹುದ್ದೆಗೆ 18ರಿಂದ 27 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಪರಿಶಿಷ್ಟ ಜಾತಿ/ವರ್ಗಕ್ಕೆ ವಯೋಮಿತಿಯಲ್ಲಿ 5 ವರ್ಷ ಮತ್ತು ಹಿಂದುಳಿದ ವರ್ಗಕ್ಕೆ 3 ವರ್ಷ ಸಡಿಲಿಕೆಯಿದೆ.
–  ಸಹಾಯಕ ಗುಪ್ತಚರ ಹುದ್ದೆಗೆ ಅವರ ಕಾರ್ಯವೈಖರಿ ಆಧಾರದ ಮೇಲೆ ಸಂಬಳ ಮತ್ತು ಪದೋನ್ನತಿ ಮಾಡಲಾಗುತ್ತದೆ. ಪ್ರಸ್ತುತ 9300ರಿಂದ 34,800 ರುಪಾಯಿವರೆಗೆ ಸರ್ಕಾರ ಸಂಬಳ ನಿಗದಿಪಡಿಸಿದೆ. ಜೊತೆಗೆ ಗ್ರೇಡ್‌ ಅನುಗುಣವಾಗಿ 4200 ರು. ಹಾಗೂ ಕೆಲವು ಕೇಂದ್ರೀಯ ಸವಲತ್ತುಗಳು ದೊರೆಯುತ್ತವೆ.

ಆಯ್ಕೆ ಹೇಗೆ?
– ಅಭ್ಯರ್ಥಿಗಳು ಹುದ್ದೆ ಪಡೆಯಲು ಲಿಖೀತ ಪರೀಕ್ಷೆ ಹಾಗೂ ಸಂದರ್ಶನ ಎದುರಿಸಬೇಕಾಗುತ್ತದೆ. ಲಿಖೀತವಾಗಿ ಶ್ರೇಣಿ 1 ಮತ್ತು ಶ್ರೇಣಿ 2 ಎಂಬ 100 ಮತ್ತು 50 ಅಂಕಗಳ ಪರೀಕ್ಷೆ ಇರುತ್ತದೆ.
– ಶ್ರೇಣಿ 1ರಲ್ಲಿ ಆಬೆಕ್ಟಿವ್‌ ಮಾದರಿಯಲ್ಲಿ 25 ಪ್ರಶ್ನೆಗಳಿಗೆ ಉತ್ತರಿಸಬೇಕು.
– ಶ್ರೇಣಿ 2ರಲ್ಲಿ 30 ಅಂಕಗಳಿಗೆ ಪ್ರಬಂಧ ಮತ್ತು 20 ಅಂಕಗಳಿಗೆ ಇಂಗ್ಲಿಷ್‌ ಕಾಂಪ್ರನ್ಶನ್‌ ಬರೆಯಬೇಕು. ಪರೀಕ್ಷೆಯ ಅಂಕಗಳ ಆಧಾರದಲ್ಲಿಯೇ ಆಯ್ಕೆ ಸಾಧ್ಯ. (ಟ್ರೈನಿಂಗ್‌ ಸಮಯದಲ್ಲಿ ದೈಹಿಕ ಪರೀಕ್ಷೆ ನಡೆಸಲಾಗುತ್ತದೆ.)
– ಬೆಂಗಳೂರು ಸೇರಿದಂತೆ ದೇಶದ 33 ನಗರಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ.

ಅರ್ಜಿ ಸಲ್ಲಿಕೆ ಹೇಗೆ?
ಸಹಾಯಕ ಗುಪ್ತಚರ ಹುದ್ದೆಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಆನ್‌ಲೈನಿನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಮೊದಲಿಗೆ www.recruitmentonline.in/mha11/ನಲ್ಲಿ ಲಾಗಿನ್‌ ಆಗಿ, ಪರೀಕ್ಷೆಗೆ ಸಂಬಂಧಿಸಿದಂತೆ ಇರುವ ಅಗತ್ಯ ಮಾಹಿತಿಗಳನ್ನು ಅರಿತು ಅರ್ಜಿ ಸಲ್ಲಿಸಲು ಮುಂದಾಗಬೇಕು. ಬಳಿಕ ಬರುವ ಪರದೆಯಲ್ಲಿ ಹೊಸ ಅಥವಾ ಈಗಾಗಲೇ ಅರ್ಜಿ ಸಲ್ಲಿಸಿದ್ದರೆ ರಿಜಿಸ್ಟ್ರೇಷನ್‌ ನಂಬರ್‌ ನಮೂದಿಸಿ ಮುಂದುವರಿಯಿರಿ. ಹೊಸ ಅಭ್ಯರ್ಥಿಗಳಿಗೆ ಮುಂದಿನ ಪರದೆಯಲ್ಲಿ ರಿಜಿಸ್ಟ್ರೇಷನ್‌ ಫಾರಂವೊಂದು ತೆರೆದುಕೊಳ್ಳುತ್ತದೆ. ಅದರಲ್ಲಿ ಹೆಸರು, ಇ-ಮೇಲ್‌ ವಿಳಾಸ, ಲಿಂಗ, ವರ್ಗ, ಜನ್ಮದಿನಾಂಕ, ಮೊಬೈಲ್‌ ನಂಬರ್‌, ಹೊಂದಲಿರುವ ಹುದ್ದೆ ಇತ್ಯಾದಿ ಮಾಹಿತಿ ತುಂಬಿ, ದೃಶ್ಯದಲ್ಲಿರುವ ಕೋಡ್‌ ನಂಬರ್‌ ಬರೆದು ರಿಜಿಸ್ಟರ್‌ ಆಗಿ. ಬಳಿಕ ಬರುವ ಪರದೆಯಲ್ಲಿ ಪೋಷಕರ ಹೆಸರು, ತಮ್ಮ ವಿದ್ಯಾರ್ಹತೆ ಮತ್ತು ವಿಳಾಸ ಸಂಬಂಧಿಸಿದ ಪೂರಕ ಮಾಹಿತಿ ತುಂಬಿ ಪರೀಕ್ಷಾ ಸೆಂಟರ್‌ ನಮೂದಿಸಿ. ಮುಂದಿನ ಪರದೆಯಲ್ಲಿ ಭಾವಚಿತ್ರ ಮತ್ತು ಸಹಿ ಚಿತ್ರಪ್ರತಿಯನ್ನು ಅಪ್ಲೋಡ್‌ ಮಾಡಿ. ಮುಂದಿನ ಪರದೆಯಲ್ಲಿ ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿಯೇ ಪಾವತಿಸಿ ಮತ್ತು ಪಾವತಿಸಿದ ಪ್ರತಿಯನ್ನು ಡೌನ್‌ಲೋಡ್‌ ಮಾಡಿಕೊಳ್ಳಿ. ಫಾರಂ ನಂಬರ್‌, ಪಾಸ್‌ವರ್ಡ್‌ ನೆನಪಿನಲ್ಲಿಟ್ಟುಕೊಳ್ಳಿ. ಪರೀಕ್ಷೆಗೆ ತಯಾರಾಗಿ.

ಶುಲ್ಕ ಹಾಗೂ ಕೊನೆಯ ದಿನ
ಮೊದಲ ಬಾರಿಗೆ ಪರೀಕ್ಷೆ ಬರೆಯುತ್ತಿರುವ ಅಭ್ಯರ್ಥಿಗಳಿಗೆ 100 ರು. ಪರೀಕ್ಷಾ ಶುಲ್ಕ ನಿಗದಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಸೆಪ್ಟೆಂಬರ್‌ 2 ಕೊನೆಯ ದಿನ. ಹೆಚ್ಚಿನ ಮಾಹಿತಿಗೆ, 
http://mha.nic.in/sites/upload_files/mha/files/DetailedAdvtforACIOII_11082017%20exam.pdf ಸಂಪರ್ಕಿಸಿ.

 - ಎನ್‌. ಅನಂತನಾಗ್‌

ಟಾಪ್ ನ್ಯೂಸ್

Sullia ಮರ ಕಡಿಯುತ್ತಿದ್ದಾಗ ದುರ್ಘ‌ಟನೆ; ಮರಗಳ ನಡುವೆ ಸಿಲುಕಿ ವ್ಯಕ್ತಿ ಸಾವು

Sullia ಮರ ಕಡಿಯುತ್ತಿದ್ದಾಗ ದುರ್ಘ‌ಟನೆ; ಮರಗಳ ನಡುವೆ ಸಿಲುಕಿ ವ್ಯಕ್ತಿ ಸಾವು

yogi adityanath

Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ

farmers, trailer, housewives star campaigners for CM Jagan’s party

Andhra Pradesh; ಸಿಎಂ ಜಗನ್‌ ಪಕ್ಷಕ್ಕೆ ರೈತರು,ಟೆೃಲರ್‌, ಗೃಹಿಣಿಯರೇ ಸ್ಟಾರ್‌ ಪ್ರಚಾರಕರು!

BJP ಅಧಿಕಾರದ ರಾಜ್ಯಗಳಲ್ಲಿ ಎಸ್‌ಸಿಪಿ, ಟಿಎಸ್‌ಪಿ ಕಾಯ್ದೆ ಜಾರಿ ಮಾಡಿಲ್ಲ: ಸಿಎಂ

BJP ಅಧಿಕಾರದ ರಾಜ್ಯಗಳಲ್ಲಿ ಎಸ್‌ಸಿಪಿ, ಟಿಎಸ್‌ಪಿ ಕಾಯ್ದೆ ಜಾರಿ ಮಾಡಿಲ್ಲ: ಸಿಎಂ

ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್‌

Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್‌

ಉಗ್ರರಿದ್ದಲ್ಲೇ ನುಗ್ಗಿ ವಿನಾಶ: ಪ್ರಧಾನಿ ಮೋದಿ

ಉಗ್ರರಿದ್ದಲ್ಲೇ ನುಗ್ಗಿ ವಿನಾಶ; ಇದು ನವಭಾರತದ ಹೆಗ್ಗಳಿಕೆ: ಪ್ರಧಾನಿ ಮೋದಿ

Suspense still about Rae Bareli, Amethi Congress candidates!

Lok Sabha; ರಾಯ್‌ಬರೇಲಿ, ಅಮೇಠಿ ಕಾಂಗ್ರೆಸ್‌ ಅಭ್ಯರ್ಥಿಗಳ ಬಗ್ಗೆ ಇನ್ನೂ ಸಸ್ಪೆನ್ಸ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sullia ಮರ ಕಡಿಯುತ್ತಿದ್ದಾಗ ದುರ್ಘ‌ಟನೆ; ಮರಗಳ ನಡುವೆ ಸಿಲುಕಿ ವ್ಯಕ್ತಿ ಸಾವು

Sullia ಮರ ಕಡಿಯುತ್ತಿದ್ದಾಗ ದುರ್ಘ‌ಟನೆ; ಮರಗಳ ನಡುವೆ ಸಿಲುಕಿ ವ್ಯಕ್ತಿ ಸಾವು

yogi adityanath

Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ

farmers, trailer, housewives star campaigners for CM Jagan’s party

Andhra Pradesh; ಸಿಎಂ ಜಗನ್‌ ಪಕ್ಷಕ್ಕೆ ರೈತರು,ಟೆೃಲರ್‌, ಗೃಹಿಣಿಯರೇ ಸ್ಟಾರ್‌ ಪ್ರಚಾರಕರು!

BJP ಅಧಿಕಾರದ ರಾಜ್ಯಗಳಲ್ಲಿ ಎಸ್‌ಸಿಪಿ, ಟಿಎಸ್‌ಪಿ ಕಾಯ್ದೆ ಜಾರಿ ಮಾಡಿಲ್ಲ: ಸಿಎಂ

BJP ಅಧಿಕಾರದ ರಾಜ್ಯಗಳಲ್ಲಿ ಎಸ್‌ಸಿಪಿ, ಟಿಎಸ್‌ಪಿ ಕಾಯ್ದೆ ಜಾರಿ ಮಾಡಿಲ್ಲ: ಸಿಎಂ

ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್‌

Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.