ನೀನು ನಾಚುತ್ತಾ ಕಾಫಿ ಕೊಡು, ಉಳಿದಿದ್ದು ನನಗೆ ಬಿಡು!


Team Udayavani, Sep 11, 2018, 6:00 AM IST

25.jpg

ಪ್ರತಿಬಾರಿ ನಾನು ಗೆದ್ದಾಗ ಭಯವಾಗುತ್ತಿತ್ತು. ನನಗಾಗಿ ದೊಡ್ಡ ಸೋಲೊಂದು ಕಾದಿದೆ ಅನಿಸುತ್ತಿತ್ತು. ಆ ಸೋಲು ಕೂಡ ಇಷ್ಟೊಂದು ಸಿಹಿಯಾಗಿರುತ್ತದೆ ಅಂತ ಗೊತ್ತಿರಲಿಲ್ಲ.

ಸೂರ್ಯನೆಂಬ ಪುಕ್ಕಲ, ರಾತ್ರಿಗೆ ಹೆದರಿ ಓಡಿ ಹೋಗಿದ್ದ. ಚಂದ್ರನದು ಪಾರ್ಟ್‌ಟೈಮ್‌ ಡ್ನೂಟಿ, ಅವನ ಸುಳಿವೂ ಇರಲಿಲ್ಲ. ನಕ್ಷತ್ರಗಳ ಬೆಳಕೊಂದು ಬೆಳಕೆ!? ಕಪ್ಪು ಗವ್ವೆಂದಿತ್ತು. ಅಂಗೈ ಬೆವರಿನಲ್ಲಿ ನಲುಗುತ್ತಿದ್ದ ನಿನ್ನ ಪತ್ರವನ್ನು ಅಂಥ ಕತ್ತಲಲ್ಲೂ ಒಂದೇ ಗುಕ್ಕಿಗೆ ಓದಿಬಿಟ್ಟೆ! ಪ್ರೀತಿಯ ಪಾಲಿಗೆ ಕಡು ಕತ್ತಲೆಯೂ ಅಂದು ಬೆಳಕಾಗಿತ್ತಾ? ಆ ಕತ್ತಲಲ್ಲೂ ನಿನ್ನ ಅಕ್ಷರಗಳಷ್ಟೇ ಹೊಳೆಯುತ್ತಿದ್ದವಾ? ಗೊತ್ತಿಲ್ಲ. ಪ್ರೀತಿಯ ಮುಂದೆ ಕತ್ತಲು ಬೆಳಕಿನದು ಯಾವ ಮಾತು ಬಿಡು…

“ಮುಂಜಾನೆಯ ನನ್ನೆಲ್ಲಾ ಕನಸುಗಳನ್ನು ಜೀವನಪೂರ್ತಿ ಸಿಂಗರಿಸುವ ಜವಾಬ್ದಾರಿಯನ್ನು ನಿನಗೆ ಗುತ್ತಿಗೆಯಾಗಿ ಕೊಡುತ್ತಿದ್ದೀನಿ ಕಣೋ ಹುಡುಗ…’ ಅನ್ನುವ ಸಾಲನ್ನು ಓದಿಕೊಂಡಾಗ ಈ ಬದುಕಿನಲ್ಲಿ  ಮೊದಲ ಬಾರಿಗೆ ಖುಷಿಯ ಅನುಭವವಾಯ್ತು. ನನ್ನ ಅಷ್ಟೆಲ್ಲಾ ಸೋಲುಗಳು ಇಂದು ದೊಡ್ಡ ಗೆಲುವನ್ನು ತಂದು ಕೊಟ್ಟವು. ಈ ಒಂದು ಗೆಲುವಿಗಾಗಿ ನಾನು ಎಂಥ ಸೋಲುಗಳಿಗಾಗಿಯೂ ಸಿದ್ಧನಿದ್ದೆ. ಸೋಲುತ್ತಾ ಹೋದೆ. ನಿಜಕ್ಕೂ ಗೆದ್ದಿದ್ದು ನಾನಾ? ಅಲ್ಲ ನಮ್ಮ ಪ್ರೀತಿ.

“ಬದುಕು ಈ ಮಟ್ಟಿಗೆ ಚೆಂದ ಎನಿಸಲು ಆರಂಭಿಸಿದ್ದು ನೀನು ಕಾಡಲು ಶುರುವಿಟ್ಟುಕೊಂಡ ಮೇಲೆಯೇ ಕಣೋ. ಪ್ರತಿಬಾರಿ ನಾನು ಗೆ¨ªಾಗ ಭಯವಾಗುತ್ತಿತ್ತು.ನನಗಾಗಿ ದೊಡ್ಡ ಸೋಲೊಂದು ಕಾದಿದೆ ಅನಿಸುತ್ತಿತ್ತು. ಆ ಸೋಲು ಕೂಡ ಇಷ್ಟೊಂದು ಸಿಹಿಯಾಗಿರುತ್ತದೆ ಅಂತ ಗೊತ್ತಿರಲಿಲ್ಲ. ಎದೆಯ ತಂಬೂರಿಯ ತಂತಿಗಳನ್ನು ಶೃತಿಗೊಳಿಸಿ ಇಟ್ಟಿದೀನಿ. ಒಮ್ಮೆ ನುಡಿಸಿ ಹೋಗು. ಯಾವ ಜನ್ಮದಲ್ಲೂ ಆ ನಾದದ ಗುಂಗು ಹೊರಟ ಹೋಗಬಾರದು ಕಣೋ…’ ಇಂತಹ ಸಾಲುಗಳನ್ನು ಬರೆದರೆ ನಾನಾದರೂ ಹೇಗೆ ಬದುಕಲಿ?

ನಾಳೆಯ ದಿನಗಳನ್ನು ನೆನೆಸಿಕೊಂಡರೆ ಅದೆಷ್ಟು ಪುಳಕ. ನನ್ನ ತೊಳುಗಳಲ್ಲಿ ನಿನ್ನ ಜೀಕಿಸಬೇಕು. ನಿನ್ನ ತೊಡೆಯ ಮೇಲೆ ನನ್ನೆಲ್ಲಾ ದುಗುಡಗಳನ್ನು ಆಚೆ  ಕಟ್ಟಿಟ್ಟು ಮಲಗಬೇಕು. ಮನೆ ಕಟ್ಟಿಸುವಾಗ ನೀನು ಕಿಚನ್‌ ವಿಷಯಕ್ಕೆ, ನಾನು ಬೆಡ್‌ರೂಮ್‌ ವಿಷಯಕ್ಕೆ ಜಗಳ ಕಾಯಬೇಕು. ನನ್ನಿಷ್ಟದ ಪಲಾವ್‌ಅನ್ನು ನೀನು ಮಾಡುವುದನ್ನು ಮುಂದೂಡಿ ರೇಗಿಸಬೇಕು. ಮಲ್ಲಿಗೆ ಹೂವನ್ನು ಮರೆತು ಬಂದು ಬೈಸಿಕೊಳ್ಳಬೇಕು. ನೋಡು, ನಾವು ಬದುಕಿಗೆ ಏನೆಲ್ಲಾವನ್ನು ಜೋಡಿಸಿಕೊಳ್ಳಬೇಕು. ಪರಸ್ಪರ ಒಪ್ಪಿಗೆ ಪತ್ರಗಳಿಗೆ ಸಹಿಯಾದ ಮೇಲೆ ಶಾಖೆ ತೆರೆಯಲು ತಡಮಾಡಬಾರದು. ನಾಳೆ ಬೆಳಗ್ಗೆ ಹೊತ್ತಿಗೆ ನನ್ನ ಅಪ್ಪಅಮ್ಮ ನಿಮ್ಮನೆಯಲ್ಲಿರುತ್ತಾರೆ. ನೀನು ಅವರಿಗೆ ನಾಚುತ್ತಾ ಕಾಫಿ ಕೊಡು, ಉಳಿದಿದ್ದನ್ನು ನನಗೆ ಬಿಡು! 

ಸದಾ. 

ಟಾಪ್ ನ್ಯೂಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

siddaramaiah

Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

Hubli; ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿ: ದಿಂಗಾಲೇಶ್ವರ ಸ್ವಾಮೀಜಿ

ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ

12-prakash-raj

April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

15

UV Fusion: ಜೀವನವನ್ನು ಪ್ರೀತಿಸೋಣ

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.