ಕಣ್ಣು ಬಿಡು, ಎದುರು ಪ್ರೀತಿಯಾಗಿ ನಿಂತಿರುವೆ!


Team Udayavani, Aug 1, 2017, 2:30 PM IST

01-JOSH-10.jpg

ಕಲ್ಪನೆಯ ಕವಲು ದಾರಿಯಲ್ಲಿ ಪ್ರೀತಿಯ ಮೊಗ್ಗು ಚಿಗುರೊಡೆಯಿತು, ಪ್ರೀತಿಯ ನಿರೀಕ್ಷೆಯಲ್ಲಿ ಮನ ಕಾಯುತ್ತಿರುವಾಗ ಹುಣ್ಣಿಮೆ ಚಂದ್ರನಂತೆ, ಬದುಕಿನ  ಭರವಸೆಯಂತೆ ಕಂಡೆ ನೀನು. ನಿನ್ನ ಆ ನೋಟ, ಅಂತ್ಯವಿಲ್ಲದ ಮಾತು, ನೀ ಮುಡಿವ ಆ ಮಲ್ಲಿಗೆಯ ಪರಿಮಳಕ್ಕೆ ನಾನಾಗಲೇ ಮರುಳಾಗಿದ್ದೆ. ಬದುಕು ಅನ್ನುವುದಿದ್ದರೆ ಅದು ನಿನ್ನ ಜೊತೆಗೆ ಎಂದು ತೀರ್ಮಾನಿಸಿದ್ದೆ.

ದಿನ ಕಳೆದಂತೆ, ನೀನು ಉಸಿರಿಗೆ ಉಸಿರಾದೆ. ನಾ ಕಾಣುವ ಕನಸಿಗೆಲ್ಲಾ ನೀ ಸಾಕ್ಷಿಯಾದೆ. ನನ್ನ ಪ್ರೀತಿಗೆ ಸ್ಫೂರ್ತಿಯಾದೆ. ಕತ್ತಲು ಕವಿದ ಬದುಕಿಗೆ ಆರದ ದೀಪದಂತೆ ನೀ ಬಂದೆ.ಪ್ರತಿಕ್ಷಣವೂ ನಿನ್ನ ಜೊತೆಯಿರಬೇಕು, ಮಾತಾಡಬೇಕು, ಬದುಕಿನಡೀ ನಿನಗೆ ಆಸರೆಯಾಗಿ ನಿಲ್ಲಬೇಕು. ನಿನ್ನ ಕಣ್ಣಂಚಿನಲ್ಲಿ ಹನಿ ನೀರೂ ಬರದ ಹಾಗೆ ನೋಡಿಕೊಳ್ಳಬೇಕೆಂಬ ಆಸೆ ನನ್ನದು. ಭಾವನಾತ್ಮಕ ಬದುಕಿನಲ್ಲಿ ನೂರಾರು ಕನಸನ್ನು ಕಟ್ಟಿ, ಬೆಟ್ಟದಷ್ಟು ಆಸೆ ಹೊತ್ತು ಸಾಗುತ್ತಿದ್ದೆ, ಪ್ರೀತಿಯ ವಿಷಯವನ್ನು ನಿನಗೆ ತಿಳಿಸಬೇಕೆಂದಾಗಲೆಲ್ಲ ಹೃದಯ ಹಿಂದೇಟು ಹಾಕುತ್ತಿತ್ತು, ಕಾರಣ ನೀನೇನಾದರೂ ತಿರಸ್ಕರಿಸಿದರೆ? ಎಂಬ ಭಯ ನನ್ನಲ್ಲಿತ್ತು.

ಮುಂದೊಂದು ದಿನ  ಧೈರ್ಯ ಮಾಡಿ ಹೇಗೋ ಹೇಳಿಯೇ ಬಿಟ್ಟೆ: “ಸ್ವಲ್ಪ ಕಾಲಾವಕಾಶ ಕೊಡು ಯೋಚನೆ ಮಾಡೋಕೆ’ ಎಂಬ ಉತ್ತರ ಬಂತು. ಅಂದು ನನ್ನೆಲ್ಲಾ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರ ಸಿಕ್ಕಿತ್ತು. ಇದೆಲ್ಲಾ ಆಗಿ ವರ್ಷಗಳೇ ಕಳೆದಿವೆ. ಆದರೂ ಇನ್ನೂ ಉತ್ತರ ಸಿಕ್ಕಿಲ್ಲ. ಅದೆಷ್ಟೋ ಬಾರಿ ಕೇಳಿದರೂ ‘ಹೇಳುವೆ ಹೇಳುವೆ’ ಎಂಬ ಶಬ್ಧ ಬಿಟ್ರೆ ಬೇರೇನೂ ಮಾತಿಲ್ಲ! ಗೆಳತಿ, ನಾ ನಿನ್ನ ಪ್ರೀತಿಯನ್ನ ಬಿಟ್ಟು ಬೇರೇನೂ ಬಯಸುತ್ತಿಲ್ಲ. ಇನ್ನೂ ಎಷ್ಟು ದಿನ ಅಂತ ಕಾಯಿಸುತ್ತೀಯಾ? ನನ್ನ ತಾಳ್ಮೆ ಪರೀಕ್ಷಿಸುತ್ತಿರುವೆಯಾ? ಇಲ್ಲ ನನ್ನ ಪ್ರೀತಿಯಾ? ನೀನು ನನ್ನ ಪ್ರೀತಿಯ ವಿಚಾರದಲ್ಲಿ ಇನ್ನೂ ಕಣ್ಮುಚ್ಚಿ ಯೋಚಿಸುತ್ತಲೇ ಇದ್ದೀಯಾ, ಏನು ಕತೆ?

ಕೊನೆಯದಾಗಿ, ಈ ಜೀವ ಕಣ್ಮುಚ್ಚುವವರೆಗೂ ನಿನ್ನ ಉತ್ತರಕ್ಕಾಗಿ ಕಾಯುವೆ, ನೀನು ಒಪ್ಪಿಕೊಂಡರೆ ಭಿಕ್ಷುಕನಿಗೆ ಸಿಕ್ಕ ಮೃಷ್ಠಾನ ಭೋಜನ ಸಿಕ್ಕ ಹಾಗೆ, ಹಾಲು-ಜೇನು ಸವಿದ ಹಾಗೆ. ಒಪ್ಪದೆ ಹೋದರೆ, ಕರುಳು ಕಿತ್ತು ಬರುತ್ತದೆ. ಹೃದಯ ಕಣ್ಣೀರು ಹಾಕುತ್ತೆ. ಮನಸ್ಸು ಮೌನವಾಗಿ ಉಸಿರು ನಿಲ್ಲುವಂತಾಗುತ್ತದೆ. ಬದುಕುವುದೇ ಈ ಜೀವ ನೀನಿಲ್ಲದ ಜೀವನದಲ್ಲಿ?.

ವೀರೇಶ್‌ ಎ. ದೊಡ್ಡಮನಿ.

ಟಾಪ್ ನ್ಯೂಸ್

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Horoscope: ಈ ರಾಶಿಯವರಿಗೆ ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರವಿರಲಿ

Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು

1-NG

JEE; ಮಹಾರಾಷ್ಟ್ರ ರೈತನ ಮಗ ಮೇನ್‌ ಟಾಪರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.