ನಿನ್ನೂರ ದಾರಿಯಲಿ ಸಾಲು ದೀಪಗಳಂತೆ…


Team Udayavani, Aug 6, 2019, 5:00 AM IST

zz

ಸುಗ್ರೀವಾಜ್ಞೆ ಹೊರಡಿಸು- ಜಾರಿಗೊಳ್ಳಲಿ ಅನುರಾಗ ಶಾಸನ. ಮಡುಗಟ್ಟಿದ ನಿನ್ನೆದೆಯ ಮೋಡದಿಂದ ಮುಸಲಧಾರೆ ಸುರಿಯಲಿ. ಈ ಬಡವನ ಹೊಲದ ಮಣ್ಣು ನೆನೆಯುವಷ್ಟೂ ಸರಾಗವಾಗಿ ಹರಿದಾಡಲಿ.

ಪ್ರಿಯ ಹುಣ್ಣಿಮೆ..
ನಿನ್ನ ಬಗೆಗಿನ ಅಷ್ಟೂ ತುಮುಲಗಳನ್ನು ಅರುಹಿ, ವಿವರಿಸುವ ಯಾವ ಸದ್ವಿವಿವೇಕವೂ ಈಗ ನನ್ನಲ್ಲಿಲ್ಲ. ಒಲವು ಹೂಡಿರುವ ಈ ಚಳವಳಿಗೆ ಕಾರಣ ನಿನ್ನದೇ ಕಣ್ಣೋಟ. ಅದು ಪುಸಲಾಯಿಸಿ, ಬೆಂಬಲ ಸೂಚಿಸುವ ರೀತಿ ನಿನ್ನ ಗಮನಕ್ಕಿರಲಿಕ್ಕಿಲ್ಲ. ಅಂತೆಯೇ, ಈ ಅನಿರೀಕ್ಷಿತ ಆಂದೋಲನದಲ್ಲಿ ನನ್ನ ಕುಮ್ಮಕ್ಕೂ ಇಲ್ಲವೆಂದು ಸ್ಪಷ್ಟೀಕರಿಸುವೆ. ಪ್ರೇಮದ ಉಸಿರು ತಾಕುವುದು ಹೃದಯ-ಹೃದಯಗಳಿಗಲ್ಲವೇ?

ನಿನ್ನ ಸನಿಹದ ತಣ್ಣನೆ ಸ್ಪರ್ಷ, ಮತ್ತೆ ಮತ್ತೆ ನನ್ನನ್ನು ಅವಾಕ್ಕಾಗಿ ಮಾಡಿದೆ. ನಿನ್ನ ಆ ನಗು ಉಂಟು ಮಾಡುವ ಅವಾಂತರಗಳಿಗೆ ಏನೆನ್ನಲಿ..? ದಾಹದ ತೊಳಲಿಕೆಯಲ್ಲಿ ದಣಿದವನಿಗೆ ನಿನ್ನ ಹೃದಯದ ಒರತೆಯಿಂದ ಮೊಗೆದು, ತಿಳಿನೀರನ್ನಾದರೂ ಬಸಿದು ಕುಡಿಸು.

ನಿನ್ನ ಮೊದಲ ನೋಟದಲ್ಲೇ ನನ್ನ ಕನಸುಗಳು ಪ್ರಕಾಶಿಸಿದ್ದು. ಆ ಮಲ್ಲಿಗೆಯ ಘಮಲು ಅಮಲೇರಿಸಿದಾಗ. ಬಿಳಿ ಬಣ್ಣದ ಚಿತ್ತಾರದ ಸೀರೆಯ ನೆರಿಗೆಯ ನಡುವಲ್ಲಿ ಬದುಕು ಕಿಸಕ್ಕೆಂದು ನಕ್ಕೀತು. ಕಾಲೇಜು ಕಾರಿಡಾರಿನಲ್ಲಿ “ಪ್ರೀತಿ’ ಎಂಬ ಮಾಯದ ಬಳ್ಳಿ ಹುಟ್ಟಿದ್ದು ಆಗಲೇ.!! ಹುಟ್ಟಿದ್ದಷ್ಟೇ, ನಿನ್ನ ಅವಜ್ಞೆಯನ್ನು ಮೀರಿ ವಿಕಸಿತಗೊಳ್ಳಲೇ ಇಲ್ಲ ನೋಡು. ಆ ಬಿಗುಮಾನ ಕೊನೆಗಾಣಿಸಿ ನನ್ನ ಬಗ್ಗೆ, ಅಲ್ಲಲ್ಲ… ನಮ್ಮಿಬ್ಬರ ಬಗ್ಗೆ ಒಂದಷ್ಟು ಗಂಭೀರವಾಗಿ ಯೋಚಿಸುವ ತುರ್ತಿದೆ. ಆದುದರಿಂದ ಸುಗ್ರೀವಾಜ್ಞೆ ಹೊರಡಿಸು- ಜಾರಿಗೊಳ್ಳಲಿ ಅನುರಾಗ ಶಾಸನ. ಮಡುಗಟ್ಟಿದ ನಿನ್ನೆದೆಯ ಮೋಡದಿಂದ ಮುಸಲಧಾರೆ ಸುರಿಯಲಿ. ಈ ಬಡವನ ಹೊಲದ ಮಣ್ಣು ನೆನೆಯುವಷ್ಟೂ ಸರಾಗವಾಗಿ ಹರಿದಾಡಲಿ, ಅಲ್ಲಿ ಕೊನೆಯಿಲ್ಲದೆ ನಗಲಿ ಪ್ರೀತಿ ಲತೆಯ ಹೂವು..
ನಿನ್ನೂರ ದಾರಿಯಲ್ಲಿ ಸಾಲು ಸಾಲು ದೀಪಗಳಂತೆ, ಹೌದೇ..? ಹಾಗಿದ್ದರೆ ತಡ ಮಾಡಬೇಡ. ದೀಪ ದೀಪಗಳ ಬೆಳಕ ನುಂಗಿ ನನ್ನೂರ ಎದೆಯ ಕಗ್ಗತ್ತಲ ಹಾದಿಗೆ ಹುಣ್ಣಿಮೆಯಾಗು.
ನಿರೀಕ್ಷಿತ ಪ್ರೇಮಿ

-ನಾಗರಾಜ ಮಗ್ಗದ, ಕೊಟ್ಟೂರು

ಟಾಪ್ ನ್ಯೂಸ್

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.