ಮತ್ತೆಂದೂ ಎದುರಾಗಬೇಡ ಪ್ಲೀಸ್‌…


Team Udayavani, Mar 17, 2020, 4:30 AM IST

ಮತ್ತೆಂದೂ ಎದುರಾಗಬೇಡ ಪ್ಲೀಸ್‌…

ಬೀದಿ ದೀಪದ ಬೆಳಕಲ್ಲಿ ಕಾಲ ಸರಿದದ್ದೇ ಗೊತ್ತಾಗಲಿಲ್ಲ ನೋಡು. ಹೆತ್ತವರ ಕನಸಿನ ಭಾರ ಹೊತ್ತು ನಾನು ಕಾಣದೂರಿಗೆ ಬಂದು ಬಿದ್ದೆ. ಊರು ಬಿಡುವ ದಿನ ಬಾಗಿಲ ಸಂಧಿಯಲಿ ನಿಂತು ನೀನು ಕಣ್ಣೀರಾಗಿದ್ದು ಯಾಕೆ?

ಬದುಕಿಗೆ ಎಷ್ಟೊಂದು ಬಣ್ಣಗಳು ಅಲ್ವಾ? ಕೇವಲ ಎರಡೇ ವರ್ಷಗಳು, ಬದುಕು ಎಷ್ಟೊಂದು ಬಣ್ಣ ಬಳಿದುಕೊಂಡಿದೆ! ಅದೊಂದು ಕಾಲವಿತ್ತು, ಮರಳಿ ಬಾರದಂತಹದ್ದು. ರಾತ್ರಿ ಊಟದ ನಂತರ ಬೀದಿಯಲಿ ಚಾಪೆ ಹಾಸಿಕೊಂಡು ನಮ್ಮಮ್ಮ – ನಿಮ್ಮಮ್ಮ ಹರಟೆ ಹೊಡೆಯುತ್ತಿದ್ದದ್ದು, ನಾವಿಬ್ಬರೂ ಬೀದಿ ದೀಪದ ಬೆಳಕಲ್ಲಿ ಆಟವಾಡುತ್ತಿದ್ದದ್ದು, ನೆನಪಿದೆಯಾ ನಿನಗೆ?

“ಏನೋ, ನನ್ನ ಮಗಳನ್ನ ಕಟ್ಕೊಳ್ತಿಯೇನೋ?’ ಎಂದು ನಿಮ್ಮಮ್ಮ ನನ್ನ ಕೆನ್ನೆ ಚಿವುಟಿದ್ದು, “ಅಯ್ಯೋ, ನಮ್ಮಂತವ್ರಿಗೆಲ್ಲ ಮಗಳ ಕೊಡ್ತೀರಾ ನೀವು?’ ಎಂದು ನಮ್ಮಮ್ಮ ಕೇಳಿದ್ದು…  ಬೀದಿ ದೀಪದ ಬೆಳಕಲ್ಲಿ ಕಾಲ ಸರಿದದ್ದೇ ಗೊತ್ತಾಗಲಿಲ್ಲ ನೋಡು. ಹೆತ್ತವರ ಕನಸಿನ ಭಾರ ಹೊತ್ತು ನಾನು ಕಾಣದೂರಿಗೆ ಬಂದು ಬಿದ್ದೆ. ಊರು ಬಿಡುವ ದಿನ ಬಾಗಿಲ ಸಂಧಿಯಲಿ ನಿಂತು ನೀನು ಕಣ್ಣೀರಾಗಿದ್ದು ಯಾಕೆ? ಬಸ್ಸು ಕಣ್ಮರೆಯಾಗಿ, ಮೇಲೆ ಎದ್ದಿದ್ದ ಧೂಳು ಕ್ರಮೇಣ ಕಡಿಮೆಯಾದರೂ ನಿನ್ನ ದುಗುಡ ಕೆಳಗೆ ಇಳಿಯಲೇ ಇಲ್ಲವಲ್ಲಾ ಯಾಕೆ?

ಕಾಣದೂರಿನಿಂದ ಮರಳಿ ಬಂದವನಿಗೆ ನೀನು ಕಾಣಲೇ ಇಲ್ಲ ಕಣೆ. ಮತ್ಯಾರದೋ ಕನಸಿನರಮನೆಯ ಬೆಳಗಲು ಊರು ಬಿಟ್ಟಾಗಿತ್ತು. ನೀನು ಹಸಿರ ಚಪ್ಪರದಡಿ ಸಪ್ತಪದಿ ತುಳಿಯುವಾಗ ನನ್ನೆದೆ ಬಾಗಿಲಿನಿಂದ ಒಂದೊಂದು ಹೆಜ್ಜೆ ದೂರಾಗುತ್ತಿದ್ದೆ. ಅಲ್ಲಿ ಹೊಸ್ತಿಲ ಮೇಲಿನ ಪಡಿ ಹೊದೆಯುತ್ತಿದ್ದರೆ ಇಲ್ಲಿ ನನ್ನೆಲ್ಲಾ ಆಸೆಗಳು ಮಣ್ಣಲ್ಲಿ ಬಿದ್ದು ಹೊರಳಾಡುತ್ತಿದ್ದವು.

ನಿನ್ನನ್ನು ಸಂಪೂರ್ಣ ಮರೆಯುವ ಉದ್ದೇಶದಿಂದಲೇ ಮರಳಿ ಕಾಣದೂರಿಗೆ ಬಂದವನಿಗೆ ನೀನು ಮತ್ತೆ ಕಣ್ಣಿಗೆ ಬೀಳಬಾರದಿತ್ತು. ತಿಳಿನೀರ ಕೆಳಗಿನ ಮರಳ ಕೆಣಕಬಾರದಿತ್ತು. ಮನಸೀಗ ರಾಡಿಯಾಗಿದೆ. ನರಳುವ ಮನಸ ತಣಿಸುವ ಕೆಲಸ ಎಷ್ಟೊಂದು ಕಷ್ಟವೆಂಬ ಅರಿವಿಲ್ಲ ನಿನಗೆ. ಇದು ನಿನ್ನ ಊರು ಎಂದು ಗೊತ್ತಿದ್ದರೆ ನನ್ನ ನಕ್ಷೆಯಲ್ಲಿ ಈ ಊರನ್ನೇ ಅಳಿಸಿಹಾಕುತ್ತಿದ್ದೆ. ನಿನ್ನೆಡೆಗಿನ ದಾರಿಗಳಿಗೆ ಬಲವಂತದ ಬೇಲಿ ಬಿಗಿದು, ಬೆನ್ನು ತೋರಿಸಿ ಹೊರಟುಬಿಡುತ್ತಿದ್ದೆ. ದಯವಿಟ್ಟು ಕಣ್ಮರೆಯಾಗಿಬಿಡು. ಅರೆಸತ್ತ ಬದುಕ ಕಟ್ಟಿಕೊಳ್ಳಲು ಪರದಾಡುತ್ತಿದ್ದೇನೆ. ನೀನಿದ್ದ ಕೆಲವು ವರ್ಷಗಳು ನನ್ನ ಬದುಕನ್ನೇ ಬದಲಾಯಿಸಿಬಿಟ್ಟವು ಎಂಬ ಭ್ರಮೆಯಿಂದ ಹೊರಬರಲು ಹೆಣಗಾಡುತ್ತಿದ್ದೇನೆ. ಮತ್ತೆಂದೂ ಎದುರಾಗಬೇಡ. ನೀನು ಕಂಡಷ್ಟೂ ನೆನಪಿನ ಕುಣಿಕೆ ಬಿಗಿಯಾಗುತ್ತದೆ. ಹೇಗೋ ಉಸಿರಾಡುತ್ತೇನೆ… ಪ್ಲೀಸ್‌…

-ಲಕ್ಷ್ಮೀಸುತ ಸುರೇಶ್‌

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.