ಈ ಪಾಪಚ್ಚಿಯ ಹೃದಯದ ಮೇಲೆ ಸಮ್ಮತಿಯ ಸಹಿ ಹಾಕಿ ಬಿಡು…..


Team Udayavani, Oct 31, 2017, 11:11 AM IST

31-22.jpg

ಬೆಳದಿಂಗಳ ಬಿಲ್ಲೆಯೇ…
ನಿನ್ನ ಕಂಡ ಆ ಅಮೃತಘಳಿಗೆಯಿಂದೀಚೆಗೆ ನನ್ನ ಅಂತರಂಗದಲ್ಲಿ ಸಿಹಿಯಾದ ಅನಾಹುತಗಳ ಅಲೆ ವಿಪರೀತವಾಗಿಬಿಟ್ಟಿದೆ. ನನ್ನೆಲ್ಲಾ ಚಡಪಡಿಕೆಗಳನ್ನು, ನಿನ್ನೊಟ್ಟಿಗೆ ಮಾಡಿಕೊಳ್ಳಬೇಕೆಂದಿರುವ ಒಡಂಬಡಿಕೆಗಳನ್ನು ಬಯಲು ಮಾಡಲಾಗದೆ ಬಸವಳಿದಿದ್ದೇನೆ. ನಿನ್ನ ಕಣ್ಣುಗಳಲ್ಲಿ ನನ್ನ ಒಲವ ದೃಷ್ಟಿ ನೆಟ್ಟು, ಎಲ್ಲವನ್ನೂ ತೋಡಿಕೊಂಡು ಹಗುರಾಗಿಬಿಡಬೇಕೆಂದು ಅದೆಷ್ಟು ಹಗಲು ರಾತ್ರಿಗಳ ರಿಹರ್ಸಲ್ಲು ನಡೆಸಿದ್ದೇನೆ ಗೊತ್ತಾ? ಉಹುಂ, ಆ ಯೋಜನೆಗಳೆಲ್ಲಾ ಅನುಷ್ಠಾನಗೊಳ್ಳದೆ ಹಳ್ಳ ಹಿಡಿದುಬಿಟ್ಟಿವೆ. ಮೇಲಾಗಿ, ಎದೆನುಡಿಗಳನ್ನೆಲ್ಲಾ ಚಕಚಕಾ ಅಂತ ಕಾಗದಕ್ಕಿಳಿಸಿ ನಿನಗೆ ತಲುಪಿಸಬೇಕೆಂದು ಎಷ್ಟೇ ತಿಪ್ಪರಲಾಗ ಹಾಕಿದರೂ, ದಿಕ್ಕೆಟ್ಟ ಪದಗಳು ದಕ್ಕುತ್ತಲೇ ಇಲ್ಲ. ಪ್ರವಾಹೋಪಾದಿಯಲ್ಲಿ ಧುಮ್ಮಿಕ್ಕುವ ನಿನ್ನದೇ ಕನವರಿಕೆಗಳಿಗೆ ಕಡಿವಾಣದ ಜಾಡು ಯಾವುದೆಂದು ತೋಚುತ್ತಿಲ್ಲ. ಚೂರು ಸಹಕರಿಸೆಯಾ ಸವಿಜೇನೆ?

ಅಂದಹಾಗೆ ಮೊನ್ನೆ ದೀಪಾವಳಿಯಂದು ನಮ್ಮೂರ ಬೀದಿಯಲ್ಲಿ ಹಚ್ಚಿಟ್ಟ ಸಾಲು ಸಾಲು ಹಣತೆಗಳಿಗಿಂತ ನಿನ್ನೆರಡು ಅವಳಿ ಕಣ್ಣುಗಳ ಹಾವಳಿಯ ಹಾಲೆºಳಕಿಗೆ ನನ್ನೊಳಗೊಂದು ಸ್ಫೂರ್ತಿಯ ಬುಗ್ಗೆ ಭುಗಿಲೆದ್ದಿದೆ. ನನ್ನೆದೆಯೊಳಗಿದ್ದ ಅಷ್ಟೂ ನೋವುಗಳನ್ನೆಲ್ಲಾ ಅಚ್ಚುಕಟ್ಟಾಗಿ ಗುಡಿಸಿ ನಿರಾಳತೆಯ ಭಾವಕ್ಕೆ ದೂಡಿದ ನಿನಗೆ ಯಾವ ಬಿರುದುಬಾವಲಿ ನೀಡಬೇಕೆಂದು ತಿಳೀತಿಲ್ಲವಲ್ಲ?
ಗೊತ್ತುಗುರಿಯಿಲ್ಲದೆ ನಿನ್ನನ್ನು ಹುಚ್ಚನಂತೆ ಹಚ್ಚಿಕೊಂಡುಬಿಟ್ಟಿದ್ದೀನಿ. ಕ್ಷಣಕ್ಷಣಕ್ಕೂ ನಿನ್ನ ನೆನಪುಗಳನ್ನೇ ಆರಾಧಿಸುತ್ತಾ ಮಿಠಾಯಿಯಂತೆ ಚಪ್ಪರಿಸುತ್ತಿದ್ದೇನೆ. ಎಡಬಿಡದೆ ಎದೆಪೂರಾ ನಿನ್ನನ್ನೇ ಆರಾಧಿಸುತ್ತಿದ್ದೇನೆ. ಈ ಪಾಪಚ್ಚಿ ಹುಡುಗನ ಹೃದಯದ ಮೇಲೊಂದು ಸಮ್ಮತಿಯ ಸಿಹಿಯಾದ ಸಹಿ ಗೀಚಿಬಿಡು, ನನ್ನ ಈ ಮಿಕ್ಕ ಬದುಕನ್ನು ನಿನ್ನ ಖುಷಿಗಾಗಿ ಎತ್ತಿಟ್ಟುಬಿಡುವೆ. ಪ್ರಾಮಿಸ್‌!

ಇಂತಿ,
ನಿನ್ನ ಧ್ಯಾನಿ ಹಾಗೂ ಮೌನಿ
ಹೃದಯ ರವಿ

ಟಾಪ್ ನ್ಯೂಸ್

1-asasa

Vote; ಬೇರೆಲ್ಲ ಬದಿಗಿಡಿ ಇಂದು ತಪ್ಪದೆ ಮತ ಚಲಾಯಿಸಿ! :ನೀವು ಗಮನಿಸಬೇಕಾದದ್ದು..

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

1-waadassda

OBC-Muslim ಮೀಸಲು ವಿವಾದ ತಾರಕಕ್ಕೆ: ಪ್ರಧಾನಿ ಹೇಳಿಕೆ ಅಲ್ಲಗಳೆದ ಸಿದ್ದರಾಮಯ್ಯ

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್‌ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ

ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್‌ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ

1-asasa

Vote; ಬೇರೆಲ್ಲ ಬದಿಗಿಡಿ ಇಂದು ತಪ್ಪದೆ ಮತ ಚಲಾಯಿಸಿ! :ನೀವು ಗಮನಿಸಬೇಕಾದದ್ದು..

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

20

Election illegal: ನಿನ್ನೆ 2.31 ಕೋ. ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.