ಈ ಸಮಯ ರಿಯಾಜ್‌ ಮಯ


Team Udayavani, May 12, 2020, 8:54 AM IST

TIME TO0000

ಮನಸ್ಸನ್ನ, ಸ್ವರವನ್ನ ಒಂದು ಕಡೆ ನಿಲ್ಲಿಸ್ರಿ…
ರಿಯಾಜ್‌ ಮಾಡೋರಿಗೆ, ಒಳ್ಳೆಯ ಗುರು ಸಿಕ್ಕಬೇಕ್ರಿ. ಶಾಸನಉಕ್ಕನುಗುಣವಾಗಿ ಅಭ್ಯಾಸಮಾಡಿದ ಗುರು ಸಿಕ್ಕರಂತೂ ಅದು, ಶಿಷ್ಯನ ಸೌಭಾಗ್ಯ. ಅಂಥ ಗುರುವಿನಿಂದ ಮಾರ್ಗದರ್ಶನ ಆದರೆ, ರಿಯಾಜ್‌ ಹೇಗಿರುತ್ತೆ, ಏನು ಮಾಡಬೇಕು  ಅನ್ನೋದು ತಿಳಿದಿರ್ತದ. ರಿಯಾಜ್‌ಗೆ ಕುಂತಾಗ, ತಕ್ಷಣ ಮೂಡ್‌ ಬರೋದಿಲ್ಲ. ತಂಬೂರ ತಗೊಂಡು, ಅದನ್ನ ಹಚ್ಚಿ, ದನಿ ಕೂಡಿಸಾಕ ಟೈಂ ಆಗ್ತದೆ. ಇದಕ್ಕೆ ಏನೂ ಮಾಡಂಗಿಲ್ಲ.

ಯಾವ ದಾರೀನೂ ಇಲ್ರಿ. ಗಟ್ಟಿ ಮನಸ್ಸೊಂದು  ಮಾಡಬೇಕು, ಅಷ್ಟ… ಇದಕ್ಕ ನಲವತ್ತು ನಿಮಿಷ ಹಿಡೀತದ. ಆನಂತರ, ನಿಧಾನಕ್ಕ ಮೂಡು ಹತ್ತತದ. ಅಭ್ಯಾಸ ಮಾಡಬೇಕು ಅನ್ನೋ ಮನಸ್ಸಿದ್ದರೆ ಏನೂ ಆಗಲ್ರಿ. ಇಷ್ಟಾದಮೇಲೂ ಮನಸ್ಸು ಗಡಬಡ ಮಾಡ್ತದೆ, ಚಂಚಲ ಆಗ್ತದೆ. ಸಾಕ್‌  ಬಿಡು ಅನಿಸ್ತದೆ. ಸ್ವರದ್ದು, ಮನಸ್ಸಿನದ್ದು ಓಡಾಟ ಜಾಸ್ತಿ. ಹೀಗಾಗಿ, ರಿಯಾಜಿಗೆ ಕೂತೋನು, ಅದರವಿರುದಟಛಿ ಹೋರಾಡಿ, ಜಯಶಾಲಿ ಆಗಬೇಕಾಗ್ತದೆ.

ಇನ್ನ, ಹಾಡೋರು ದನಿ ಕಾಯೊಬೇಕು. ಅದಕ್ಕ ತಮ್ಮ  ದನಿ ಬಗ್ಗೆ  ಳ್ಕೊಬೇಕು. ಪ್ರತಿಯೊಬ್ಬರ ದನಿಗೂ ಅಳತೆ ಇರ್ತದ. ದಪ್ಪ ದನಿ ಅಂದ್ರ, ಕರಿ 1, ಬಿಳೆ 1 ಕ್ಕೆ ದನಿ ಇರ್ತದೆ. ಇಂಥವರು, ಬೇರೆ ಅವ್ರು ಬಿಳೆ ನಾಲ್ಕು, ಬಿಳೆ ಮೂರಕ್ಕೆ ಹಾಡ್ತಾರ ಅಂತ ತಾವೂ ಹಾಡೋಕೆ ಹೋದ್ರ, ದನಿ ಕೆಡ್ತದ. ಕೇಳುವವರಿಗೆ  ಇಂಪು ಅನಿಸೋಲ್ಲ. ಬರ್ತಾ ಬರ್ತಾ ದನಿ ಹೋಗಿಬಿಡ್ತದ. ಹಾಗಾಗಿ, ದನಿ ಪಟ್ಟಿ ಒಳಗ, ಪ್ರಾಕ್ಟೀಸ್‌ ಮಾಡ್ಕೊಬೇಕು. ತೆಳ್ಳನೆ ವಾಯ್ಸ್ ಇದ್ರ, ಖರದು (ಕೆಳ ಶೃತಿ)ರಿಯಾಜ್‌ ಮಾಡ್ಲೆ ಬೇಕಾಗ್ತದ. ಆಗ, ದನಿ  ಹತೋಟಿಗೆ ಬರ್ತದ. ಹತೋಟಿ  ಅಂದ್ರ ಮತ್ತೇನಿಲ್ಲ. ಸ್ವರಾಭ್ಯಾಸ ಮಾಡಿ, ಪಳಗಿಸಿಕೊಳ್ಳಬೇಕು. ಹೇಗಂದ್ರ ಶಡ್ಜ, ಪಂಚಮದಾಗ ಸ್ವರ ನಿಲ್ಲಿಸೋದು.

ಸುಮ್ಮನೆ ಅಲ್ಲ, ಕೇಂದ್ರೀಕೃತಗೊಳ್ಳಬೇಕು. ಆಚೆ ಈಚೆ ಹೋಗಬಾರದು. ಇದನ್ನುಮಾಡೋಕೇ ಸುಮಾರು ದಿವಸ  ಇಡಸ್ತದ. ಆಮೇಲೆ, ಶಡ್ಜದಿಂದ ಶಡ್ಜಕ್ಕೆ ರಿಯಾಜು ಮಾಡಬೇಕು. ಸರಳಿ ಸ್ವರಗಳು, ಅಲಂಕಾರ ಸ್ವರಗಳ ಹಿಂದೆ ಬೀಳಬೇಕು. ಬೆಳಗ್ಗೆ ಸೂರ್ಯ ಉದಯ ಆಗೋದೊಳಗೆ ಏಳಬೇಕು. ತಂಬೂರ ತಗೊಂಡು ಸ್ವರಾಭ್ಯಾಸ ಮಾಡಬೇಕು.  ಸೂರ್ಯೋದಯದ ನಂತರ, ಶಡ್ಜದಿಂದ ಶಡ್ಜದವರೆಗೆ ಹೇಗೆ ಅಭ್ಯಾಸ ಮಾಡಬೇಕು ಅನ್ನೋದನ್ನ, ಆ ಶಿಷ್ಯನ ಸಾಮರ್ಥ್ಯ ಆಧರಿಸಿ, ಗುರು ಹೇಳಿಕೊಡ್ತಾನ. ಗುರುಗಳು ಒಂದು ತಾಸು ಹೇಳಿಟ್ಟಾರ ಅಂದ್ರ, ಶಿಷ್ಯ ನಾಲ್ಕು ತಾಸ್‌ ರಿಯಾಜ್‌  ಮಾಡಬೇಕಾಗ್ತದೆ…
* ಪಂಡಿತ್‌ ವೆಂಕಟೇಶ್‌ ಕುಮಾರ್‌ ಹಿರಿಯ ಗಾಯಕರು, ಹಿಂದೂಸ್ತಾನಿ

ಅಭ್ಯಾಸ ಮಾಡೋದು ಅಭ್ಯಾಸ ಆಗಬೇಕು…
ಸಂಗೀತ ಕಲಿಯೋಕೂ ಮೊದಲು, ಒಂದು ವಿಚಾರ ತಿಳಿಯಬೇಕು. ಏನಾದರೂ ಸಾಧನೆ ಮಾಡಬೇಕಾದರೆ, ಒಂದಷ್ಟು ತ್ಯಾಗ ಮಾಡಬೇಕು. ಅದರಲ್ಲಿ ಟಿ.ವಿ, ಮೊಬೈಲ…, ನಿದ್ದೆ… ಇವೆಲ್ಲ ಇರುತ್ತವೆ.  ಒಂದೇ ದಿವಸ, ಒಂದೇ ಸಲಕ್ಕೆ, ಗಂಟೆಗಟ್ಟಲೆ ಕುಳಿತು ಅಭ್ಯಾಸ ಮಾಡೋಕೆ ಆಗಲ್ಲ. ಹಾಗಾಗಿ, ಬೆಳಗ್ಗೆ ಅರ್ಧಗಂಟೆ, ಸಂಜೆ ಅರ್ಧಗಂಟೆ, ರಾತ್ರಿ ಒಂದುಗಂಟೆ, ಹೀಗೆ… ರೂಢಿಯಾದ ಮೇಲೆ ಗಂಟೆಗಟ್ಟಲೆ ಅಭ್ಯಾಸ  ಮಾಡಬಹುದು. ಬೇಸಿಕ್‌ ಅಂತ ಹೇಳ್ತಾರಲ್ಲ: ತಾರಕ  ಸ್ಥಾಯಿ, ಮಂದ್ರ ಸ್ಥಾಯಿ, ಜಂಟಿ ವರಸೆ, ಸರಳೆವರಸೆ, ಸ್ವರ ಜತಿ ಇವುಗಳ ಜೊತೆಗೆ, ಎಲ್ಲ ಅಕಾರಗಳನ್ನು ಮೊದಲುಅಭ್ಯಾಸ ಮಾಡಬೇಕು.

ಸಾ  ಇಂದ ನೇರವಾಗಿ ಮೇಲಿನ ಸ್ಥಾಯಿಗೆ ಹೋಗೋದು. ಸರಿಗಮಪದನಿಸ ವನ್ನು ಗಂಟಲಿಗೆ  ಹೊಂದಿಸಿ  ಕೊಳ್ಳೋದು. ಐದೈದು ಪದದಲ್ಲಿ ಅಕಾರ,ಇಕಾರ, ಉಕಾರ ಅಭ್ಯಾಸ ಮಾಡೋದು, ಹಮ್‌ ಕಾರ… ಇವೆಲ್ಲಾ ಬಹಳ ಮುಖ್ಯ. ಹಮ್ಮಿಂಗ್‌ ಅಂತಾರಲ್ಲ, ಅದು ಸರಿಯಾಗಬೇಕು ಅಂದರೆ, ಹಮ್‌ ಅಭ್ಯಾಸ ಮಾಡಲೇಬೇಕು. ಮೂರು ಕಾಲದಲ್ಲಿ ವರ್ಣಗಳನ್ನು ಅಭ್ಯಾಸ ಮಾಡಬೇಕು. ಆದಾದ ಮೇಲೆ ನಿಧಾನಕ್ಕೆ ಕೀರ್ತನೆ, ದೇವರ ನಾಮ, ತಿಲ್ಲಾನ… ಸಂಗೀತ ಕಲಿಕೆ ಹೀಗೆ ಮುಂದುವರಿಯುತ್ತಾ ಹೋಗುತ್ತದೆ. ಒಂದು ದಿನ ಮೇಳಕರ್ತ ರಾಗ, ಮತ್ತೂಂದು ದಿನ ಶಂಕರಾಭರಣ. ಹೀಗೆ, ದಿನಕ್ಕೊಂದು  ರಾಗಗಳನ್ನು ಅಭ್ಯಾಸ ಮಾಡುವುದರಿಂದ, ಗಂಟಲಲ್ಲಿ ಫೊ ಹಾಗೇ ಇರುತ್ತದೆ. “ಏನ್ರೀ, ಎಷ್ಟು ಚೆನ್ನಾಗಿ ಹಾಡ್ತೀರಾ..’ ಅಂತ ಅನ್ನಿಸಿಕೊಳ್ಳೋಕೂ, ಚಪ್ಪಾಳೆ ಗಿಟ್ಟಿಸಿಕೊಳ್ಳೋಕೂ ಈ ಅಭ್ಯಾಸ ಇರಬೇಕು.
* ಪಲ್ಲವಿ ಗುರುಪ್ರಸನ್ನ, ಶಾಸ್ತ್ರೀಯ ಸಂಗೀತಗಾರ್ತಿ

ಅಭ್ಯಾಸ ಯೋಗದಂತೆ…
ಸಂಗೀತ ಅನ್ನೋದು ಮಲ್ಟಿ ಟಾಸ್ಕಿಂಗ್‌ ಇದ್ದಂತೆ. ತಾಳ, ಶೃತಿ, ಸಾಹಿತ್ಯ… ಹೀಗೆ ಒಂದು ಸಲ ಹಾಡಲು ಅಥವಾ ಅಭ್ಯಾಸಮಾಡಲು ಕುಳಿತರೆ, ಇಷ್ಟೂ ಕಡೆ ಗಮನ ಹರಿಸಬೇಕು. ಸಂಗೀತ ಪ್ರಾಣಾಯಾಮ ಇದ್ದಂತೆ.  ಮೊದಲು  ಓಂಕಾರದಿಂದ ಶುರು ಮಾಡಿ, ವರ್ಣಗಳನ್ನು ಅಭ್ಯಾಸ ಮಾಡಬೇಕು. ಇದರಿಂದ,ಉಸಿರಾಟದ ಮೇಲೆ ನಿಯಂತ್ರಣ ಸಿಗುತ್ತದೆ. ಪ್ರತಿಯೊಬ್ಬರ ಶೃತಿ ಬೇರೆ ಬೇರೆ ಇರುತ್ತೆ. ನಮ್ಮ ಶೃತಿ, ನಮಗೆ ಕಂಫ‌ರ್ಟ್‌ ಜೋನ್‌ ಯಾವುದು ಅಂತ ಮೊದಲು  ತಿಳಿದುಕೊಳ್ಳಬೇಕು. ತುಂಬಾ ಜನ, ಹೈ ಪಿಚ್‌ನಲ್ಲಿ ಹಾಡಿ, ಗಂಟಲು ಕೆಡಿಸಿಕೊಳ್ತಾರೆ. ಒಂದು ರಾಗ ಇಟ್ಕೊಂಡು, ನಮಗೆ ಹೊಂದುವಸ್ಪೀಡ್‌ಗೆ ತಕ್ಕಂತೆ, ಸ್ವರಗಳನ್ನು ಹೇಳಿಕೊಂಡು ಅಭ್ಯಾಸ ಮಾಡುವುದು ಒಳಿತು. ಇದರ ಜೊತೆ, ಅ  ಕಾರಗಳನ್ನು ಹೇಳಿಕೊಳ್ಳಬೇಕು.ಚೀಜ್‌ಗಳನ್ನು ಹಾಡ್ಕೊತಾ ಹಾಡ್ಕೊತಾ, ಸ್ಪೀಡ್‌ ಜಾಸ್ತಿ ಮಾಡ್ತಾ ಮಾಡ್ತಾ ಹೋಗಿ, ಮತ್ತೆ ಓಂಕಾರದಜೊತೆಗೆ ಅಭ್ಯಾಸ ಮುಗಿಸಬೇಕು. ಯೋಗಾಸನದ ಮುಕ್ತಾಯದಲ್ಲಿ  ಶವಾಸನ ಹಾಕಿಸ್ತಾರಲ್ಲ. ಹಾಗೇ.
* ಅರ್ಚನಾ ಉಡುಪ, ಹಿರಿಯ ಗಾಯಕಿ

ಟಾಪ್ ನ್ಯೂಸ್

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Horoscope: ಈ ರಾಶಿಯವರಿಗೆ ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರವಿರಲಿ

Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.