ನೀವು ಹಾಲಿಗೆ ನೀರು ಹಾಕಲೇಬೇಕು ಕಣ್ರೀ…


Team Udayavani, Mar 17, 2020, 5:05 AM IST

ನೀವು ಹಾಲಿಗೆ ನೀರು ಹಾಕಲೇಬೇಕು ಕಣ್ರೀ…

ನನ್ನೆದುರು ಚಕ್ಕಳ ಮಕ್ಕಳ ಹಾಕಿ ಕುಳಿತ ದೈವೀ ಮುಖಕಾಂತಿಯ ಆ ಜ್ಯೋತಿಷಿಗಳು ಗಂಟೆ ಹೊಡೆದಂತೆ ಹೇಳಿದ್ದರು.

“ನೀವು ಹಾಲಿಗೆ ನೀರು ಹಾಕಲೇಬೇಕು ಕಣ್ರೀ ‘. ಮುಂದಿನ ವಿಚಾರ ಹೇಳುವ ಮೊದಲು. ನಿಮಗೆ ಕೊಂಚ ಪ್ಲಾಷ್‌ಬ್ಯಾಕ್‌ ಹೇಳಲೇ ಬೇಕು. 1992ರ ಮಾತಿದು. ತಂದೆಯವರ ಪುನರಪಿ ಅನಾರೋಗ್ಯ ಇನ್ನಿತರ ಸಮಸ್ಯೆಗಳಿಂದ ಚೆನ್ನಾಗಿಯೇ ನಡೆಯುತ್ತಿದ್ದ “ಹೊಟೆಲ್‌ ಅಕ್ಷತ’ವನ್ನು ಮತ್ತೂಬ್ಬರಿಗೆ ಬಾಡಿಗೆಗೆ ಕೊಟ್ಟಿದ್ದೆವು. ಹೋಟೆಲ್‌ ಬೇಸರ ತರಿಸಿತ್ತು. ನಿತ್ಯ ಜಾಗರಣೆ, ಮನಸಿಗೆ ನೆಮ್ಮದಿಯಿಲ್ಲ. ಒಬ್ಬನೇ ಸಂಬಾಳಿಸಹುದಾದ ಹೊಸತೊಂದು ವ್ಯವಹಾರ ಮಾಡಲು ತಲೆ ಕೆಡಿಸಿಕೊಂಡಿದ್ದೆ. ಸಮೀಪದ ತೆಲಿಗಿ ಗ್ರಾಮದಲ್ಲಿ ಆಗ ಬಂದ್‌ ಆಗಿದ್ದ ಟೆಂಟ್‌ ಟಾಕೀಸ್‌ಅನ್ನು ಸುಪರ್ದಿಗೆ ತೆಗೆದುಕೊಂಡು ನಡೆಸಲು ಹೋದೆ. ಮೊದಲಿನಿಂದಲೂ ಸಿನಿಮಾ ನನ್ನ ಐಚ್ಛಿಕ ವಿಷಯ. ಮಾತುಕತೆ ಆಯಿತು, ನಾಲ್ಕು ತಿಂಗಳ ನಂತರ ಅಡ್ವಾನ್ಸ್‌ ಪಡೆದು ವಶಕ್ಕೆ ಕೊಡುವುದಾಗಿ ಹೇಳಿದರು.

ಈ ಮಧ್ಯೆ ನನ್ನ ತಂಗಿಯ ಮನೆ ಕೊಪ್ಪಕ್ಕೆ ಹೋಗಿದ್ದಾಗ ಅಲ್ಲಿನ ಖ್ಯಾತ ಜ್ಯೋತಿಷಿಯವರ ಬಳಿ ಇಷ್ಟವಿರದಿದ್ದರೂ ಭಾವನ ಒತ್ತಾಯದ ಮೇರೆಗೆ ಹೋಗಿ ಜಾತಕ ಎದುರಿಗಿಟ್ಟು ಕುಳಿತೆ. ಆಗ ಅವರು ಗುಂಡು ಹೊಡೆದಂತೆ ಹೇಳಿದ್ದು. “ನೀವು ಹಾಲಿಗೆ ನೀರು ಹಾಕಲೇಬೇಕು ಕಣ್ರೀ… ಪುನಃ ಹೋಟೆಲ್‌ ಮಾಡಲೇಬೇಕು, ಅದರಲ್ಲಿಯೇ ನಿಮ್ಮ ಅಭ್ಯುದಯವಿದೆ, ಟೆಂಟ್‌ ಟಾಕೀಸ್‌ ಮಾಡಿದರೆ ಮುರು ವರ್ಷದಲ್ಲಿಯೇ ಅಗ್ನಿ ಅನಾಹುತದಲ್ಲಿ ಎಲ್ಲವನ್ನೂ ಕಳೆದುಕೊಳ್ಳುವಿರಿ………’

ಜ್ಯೋತಿಷಿಗಳು ಹೀಗೆ ಹೇಳಿದಾಗ- ನನ್ನ ಅಹಂಗೆ ಪೆಟ್ಟುಬಿದ್ದಿತ್ತು. ಇದ್ದ ಹೋಟೆಲನ್ನು ಬಾಡಿಗೆಗೆ ಕೊಟ್ಟು ಮತ್ತೆ ಅದರ ಬುಡಕ್ಕೆ ಶರಣಾಗುವುದೇ? “ಸಾಧ್ಯವೇ ಇಲ್ಲ ಜೋಯಿಸರೇ…..’ ಎಂದು ಕೈ ಮುಗಿದು ಎದ್ದು ಬಂದಿದ್ದೆ. ಕಾಕತಾಳೀಯವಾಗಿ ಟೆಂಟ್‌ ಟಾಕೀಸನ್ನು ಅದರ ಮಾಲೀಕರೇ ಪುನರಾಂಭಿಸಿದರು. ಇತ್ತ ಬಾಡಿಗೆಗೆ ಕೊಟ್ಟಿದ್ದ ಹೋಟೆಲಿಗೆ 4 ವರ್ಷಗಳಲ್ಲಿ ನಾಲ್ಕು ಮಾಲೀಕರು ಬದಲಾದರು. ಈ ಸ್ಥಳದಲ್ಲಿ ವ್ಯವಹಾರ ಏಳಿಗೆಯಾಗುವುದಿಲ್ಲ ಎಂದು ಮಾತನಾಡಲಾರಂಭಿಸಿದರು. ನನಗೂ ಬೇರೆ ಯಾವುದೇ ವ್ಯವಹಾರ ಆರಂಭಿಸಲು ಸಾಧ್ಯವಾಗಲಿಲ್ಲ. ಏನೋ ಅಡ್ಡಿ ಆತಂಕ!

ಇನ್ನು ಸುಮ್ಮನಿದ್ದರೆ ನಮ್ಮ ಜಾಗಕ್ಕೆ ಕಳಂಕ ಕಟ್ಟಿಟ್ಟ ಬುತ್ತಿ. ಜೋಯಿಸರು ಹೇಳಿದಂತೆ ಹೋಟೆಲೇ ನನ್ನPerfect Professionಅಹುದೇ? ಗಟ್ಟಿ ಧೈರ್ಯ ಮಾಡಿ 1996ರಲ್ಲಿ ಕೊಟ್ಟ ಹೋಟೆಲನ್ನೇ ವಾಪಸ್‌ ಪಡೆದು ಹೊಸ ಆಸನಗಳು, ಯಂತ್ರಗಳು, ಪಾತ್ರೆ ಪಡಗಗಳೊಂದಿಗೆ “ಹೋಟೆಲ್‌ ಅಭಿರುಚಿ’ ಆರಂಭಿಸಿದೆ. ನಮ್ಮ ಪರಿಶ್ರಮ, ಗ್ರಾಹಕರ ವಿಶ್ವಾಸ ಎಲ್ಲಕ್ಕೂ ಮಿಗಿಲಾಗಿ ದೈವಾನುಗ್ರಹ ಮಿಳಿತವಾಗಿ ಹೋಟೆಲ್‌ ಮುಂದಿನ ವರ್ಷ ಬೆಳ್ಳಿ ಹಬ್ಬ ಆಚರಿಸಲಿದೆ. ನನ್ನ Perfect Profession ನನಗೂ ಸಮಾಜದಲ್ಲಿ ಗೌರವ ದಕ್ಕಿದೆ.

ಕೆ.ಶ್ರೀನಿವಾಸರಾವ್‌

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.