ನೀವು ಹಾಲಿಗೆ ನೀರು ಹಾಕಲೇಬೇಕು ಕಣ್ರೀ…


Team Udayavani, Mar 17, 2020, 5:05 AM IST

ನೀವು ಹಾಲಿಗೆ ನೀರು ಹಾಕಲೇಬೇಕು ಕಣ್ರೀ…

ನನ್ನೆದುರು ಚಕ್ಕಳ ಮಕ್ಕಳ ಹಾಕಿ ಕುಳಿತ ದೈವೀ ಮುಖಕಾಂತಿಯ ಆ ಜ್ಯೋತಿಷಿಗಳು ಗಂಟೆ ಹೊಡೆದಂತೆ ಹೇಳಿದ್ದರು.

“ನೀವು ಹಾಲಿಗೆ ನೀರು ಹಾಕಲೇಬೇಕು ಕಣ್ರೀ ‘. ಮುಂದಿನ ವಿಚಾರ ಹೇಳುವ ಮೊದಲು. ನಿಮಗೆ ಕೊಂಚ ಪ್ಲಾಷ್‌ಬ್ಯಾಕ್‌ ಹೇಳಲೇ ಬೇಕು. 1992ರ ಮಾತಿದು. ತಂದೆಯವರ ಪುನರಪಿ ಅನಾರೋಗ್ಯ ಇನ್ನಿತರ ಸಮಸ್ಯೆಗಳಿಂದ ಚೆನ್ನಾಗಿಯೇ ನಡೆಯುತ್ತಿದ್ದ “ಹೊಟೆಲ್‌ ಅಕ್ಷತ’ವನ್ನು ಮತ್ತೂಬ್ಬರಿಗೆ ಬಾಡಿಗೆಗೆ ಕೊಟ್ಟಿದ್ದೆವು. ಹೋಟೆಲ್‌ ಬೇಸರ ತರಿಸಿತ್ತು. ನಿತ್ಯ ಜಾಗರಣೆ, ಮನಸಿಗೆ ನೆಮ್ಮದಿಯಿಲ್ಲ. ಒಬ್ಬನೇ ಸಂಬಾಳಿಸಹುದಾದ ಹೊಸತೊಂದು ವ್ಯವಹಾರ ಮಾಡಲು ತಲೆ ಕೆಡಿಸಿಕೊಂಡಿದ್ದೆ. ಸಮೀಪದ ತೆಲಿಗಿ ಗ್ರಾಮದಲ್ಲಿ ಆಗ ಬಂದ್‌ ಆಗಿದ್ದ ಟೆಂಟ್‌ ಟಾಕೀಸ್‌ಅನ್ನು ಸುಪರ್ದಿಗೆ ತೆಗೆದುಕೊಂಡು ನಡೆಸಲು ಹೋದೆ. ಮೊದಲಿನಿಂದಲೂ ಸಿನಿಮಾ ನನ್ನ ಐಚ್ಛಿಕ ವಿಷಯ. ಮಾತುಕತೆ ಆಯಿತು, ನಾಲ್ಕು ತಿಂಗಳ ನಂತರ ಅಡ್ವಾನ್ಸ್‌ ಪಡೆದು ವಶಕ್ಕೆ ಕೊಡುವುದಾಗಿ ಹೇಳಿದರು.

ಈ ಮಧ್ಯೆ ನನ್ನ ತಂಗಿಯ ಮನೆ ಕೊಪ್ಪಕ್ಕೆ ಹೋಗಿದ್ದಾಗ ಅಲ್ಲಿನ ಖ್ಯಾತ ಜ್ಯೋತಿಷಿಯವರ ಬಳಿ ಇಷ್ಟವಿರದಿದ್ದರೂ ಭಾವನ ಒತ್ತಾಯದ ಮೇರೆಗೆ ಹೋಗಿ ಜಾತಕ ಎದುರಿಗಿಟ್ಟು ಕುಳಿತೆ. ಆಗ ಅವರು ಗುಂಡು ಹೊಡೆದಂತೆ ಹೇಳಿದ್ದು. “ನೀವು ಹಾಲಿಗೆ ನೀರು ಹಾಕಲೇಬೇಕು ಕಣ್ರೀ… ಪುನಃ ಹೋಟೆಲ್‌ ಮಾಡಲೇಬೇಕು, ಅದರಲ್ಲಿಯೇ ನಿಮ್ಮ ಅಭ್ಯುದಯವಿದೆ, ಟೆಂಟ್‌ ಟಾಕೀಸ್‌ ಮಾಡಿದರೆ ಮುರು ವರ್ಷದಲ್ಲಿಯೇ ಅಗ್ನಿ ಅನಾಹುತದಲ್ಲಿ ಎಲ್ಲವನ್ನೂ ಕಳೆದುಕೊಳ್ಳುವಿರಿ………’

ಜ್ಯೋತಿಷಿಗಳು ಹೀಗೆ ಹೇಳಿದಾಗ- ನನ್ನ ಅಹಂಗೆ ಪೆಟ್ಟುಬಿದ್ದಿತ್ತು. ಇದ್ದ ಹೋಟೆಲನ್ನು ಬಾಡಿಗೆಗೆ ಕೊಟ್ಟು ಮತ್ತೆ ಅದರ ಬುಡಕ್ಕೆ ಶರಣಾಗುವುದೇ? “ಸಾಧ್ಯವೇ ಇಲ್ಲ ಜೋಯಿಸರೇ…..’ ಎಂದು ಕೈ ಮುಗಿದು ಎದ್ದು ಬಂದಿದ್ದೆ. ಕಾಕತಾಳೀಯವಾಗಿ ಟೆಂಟ್‌ ಟಾಕೀಸನ್ನು ಅದರ ಮಾಲೀಕರೇ ಪುನರಾಂಭಿಸಿದರು. ಇತ್ತ ಬಾಡಿಗೆಗೆ ಕೊಟ್ಟಿದ್ದ ಹೋಟೆಲಿಗೆ 4 ವರ್ಷಗಳಲ್ಲಿ ನಾಲ್ಕು ಮಾಲೀಕರು ಬದಲಾದರು. ಈ ಸ್ಥಳದಲ್ಲಿ ವ್ಯವಹಾರ ಏಳಿಗೆಯಾಗುವುದಿಲ್ಲ ಎಂದು ಮಾತನಾಡಲಾರಂಭಿಸಿದರು. ನನಗೂ ಬೇರೆ ಯಾವುದೇ ವ್ಯವಹಾರ ಆರಂಭಿಸಲು ಸಾಧ್ಯವಾಗಲಿಲ್ಲ. ಏನೋ ಅಡ್ಡಿ ಆತಂಕ!

ಇನ್ನು ಸುಮ್ಮನಿದ್ದರೆ ನಮ್ಮ ಜಾಗಕ್ಕೆ ಕಳಂಕ ಕಟ್ಟಿಟ್ಟ ಬುತ್ತಿ. ಜೋಯಿಸರು ಹೇಳಿದಂತೆ ಹೋಟೆಲೇ ನನ್ನPerfect Professionಅಹುದೇ? ಗಟ್ಟಿ ಧೈರ್ಯ ಮಾಡಿ 1996ರಲ್ಲಿ ಕೊಟ್ಟ ಹೋಟೆಲನ್ನೇ ವಾಪಸ್‌ ಪಡೆದು ಹೊಸ ಆಸನಗಳು, ಯಂತ್ರಗಳು, ಪಾತ್ರೆ ಪಡಗಗಳೊಂದಿಗೆ “ಹೋಟೆಲ್‌ ಅಭಿರುಚಿ’ ಆರಂಭಿಸಿದೆ. ನಮ್ಮ ಪರಿಶ್ರಮ, ಗ್ರಾಹಕರ ವಿಶ್ವಾಸ ಎಲ್ಲಕ್ಕೂ ಮಿಗಿಲಾಗಿ ದೈವಾನುಗ್ರಹ ಮಿಳಿತವಾಗಿ ಹೋಟೆಲ್‌ ಮುಂದಿನ ವರ್ಷ ಬೆಳ್ಳಿ ಹಬ್ಬ ಆಚರಿಸಲಿದೆ. ನನ್ನ Perfect Profession ನನಗೂ ಸಮಾಜದಲ್ಲಿ ಗೌರವ ದಕ್ಕಿದೆ.

ಕೆ.ಶ್ರೀನಿವಾಸರಾವ್‌

ಟಾಪ್ ನ್ಯೂಸ್

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

rahul-Gandhi-Car

Defamation case; ಪ್ರಚಾರಕ್ಕಾಗಿ ನನ್ನ ವಿರುದ್ಧ ಮಾನಹಾನಿ ಕೇಸ್‌: ರಾಹುಲ್‌ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.