ಸಿಕ್ಕಿಬಿತ್ತು ಕೋತಿ
Team Udayavani, Sep 19, 2019, 5:15 AM IST
ಒಂದಾನೊಂದು ಕಾಡಿನಲ್ಲಿ ಒಂದು ತೋಳ ವಾಸವಾಗಿತ್ತು. ಅದು ರಾತ್ರೋರಾತ್ರಿ ಕಾಡಿನ ಸಮೀಪವಿದ್ದ ಹಳ್ಳಿಗೆ ನುಗ್ಗಿ ಮೇಕೆ ಕುರಿಗಳನ್ನು ಹೊತ್ತುಕೊಂಡು ಬಂದು ತಿನ್ನುತ್ತಿತ್ತು. ಇದನ್ನು ಕೋತಿಯೊಂದು ಗಮನಿಸುತ್ತಿತ್ತು. ಅದು ಬಹಳ ದಿನಗಳಿಂದ ಹಳ್ಳಿಯ ಮನೆಗಳಿಗೆ ನುಗ್ಗಿ ಅಟ್ಟದಲ್ಲಿ ಸಂಗ್ರಹಿಸಿಡುತ್ತಿದ್ದ ಬಾಳೆಹಣ್ಣುಗಳನ್ನು ಲಪಟಾಯಿಸಲು ಹೊಂಚು ಹಾಕುತ್ತಿತ್ತು. ಆದರೆ ಅದಕ್ಕೆ ದಾರಿ ಗೊತ್ತಿರಲಿಲ್ಲ. ಅದಕ್ಕೆ ಕೋತಿ, ತೋಳದ ಸಹಾಯವನ್ನು ಪಡೆದುಕೊಳ್ಳಲು ನಿರ್ಧರಿಸಿತು.
ತೋಳ ತನ್ನ ಉಪಾಯಗಳನ್ನು ಕೋತಿ ಜೊತೆಗೆ ಹೆಮ್ಮೆಯಿಂದ ಹಂಚಿಕೊಂಡಿತು. ಕೋತಿ “ಮುಂದಿನ ಬಾರಿ ನೀನು ಆ ಗ್ರಾಮಕ್ಕೆ ಹೋಗುವಾಗ ನನ್ನನ್ನು ಜೊತೆಯಲ್ಲೇ ಕರೆದುಕೊಂಡು ಹೋಗುವೆಯಾ? ನಿನ್ನ ಶಕ್ತಿಯನ್ನು ನೋಡಬೇಕೆನಿಸುತ್ತಿದೆ’ ಎಂದು ಕೇಳಿಕೊಂಡಿತು. ತೋಳ “ಅಷ್ಟೇ ತಾನೇ…? ಈ ದಿನ ರಾತ್ರಿಯೇ ನಿನ್ನನ್ನು ಕರೆದುಕೊಂಡು ಹೋಗುತ್ತೇನೆ. ಸಿದ್ಧವಾಗಿರು’ ಎಂದು ಹೇಳಿತು. ಕೋತಿ ತುಂಬಾ ಸಂತೋಷಪಟ್ಟಿತು.
ಆ ದಿನ ರಾತ್ರಿ ತೋಳ ಮತ್ತು ಕೋತಿ ಎರಡೂ ಕಳ್ಳ ಹೆಜ್ಜೆ ಇಡುತ್ತಾ ಹಳ್ಳಿಯನ್ನು ಪ್ರವೇಶಿಸಿದವು. ದೂರದಲ್ಲಿ ಮೇಕೆಯ ದನಿ ಕೇಳಿಸಿತು. ಎರಡೂ ಅತ್ತ ಹೆಜ್ಜೆ ಹಾಕಿದವು. ಬಯಲಲ್ಲಿ ಮೇಕೆಯನ್ನು ಕಟ್ಟಿ ಹಾಕಿದ್ದರು. ತೋಳ “ಯಾರೋ ದಡ್ಡರು ತಮ್ಮ ಮೇಕೆಯನ್ನು ಕೊಟ್ಟಿಗೆಯಲ್ಲಿ ಕಟ್ಟಿಹಾಕುವುದಕ್ಕೆ ಬದಲಾಗಿ ಬಯಲಲ್ಲಿ ಕಟ್ಟಿದ್ದಾರೆ. ನನ್ನ ಕೆಲಸ ತುಂಬಾ ಸುಲಭವಾಯಿತು’ ಎನ್ನುತ್ತಾ ಮೇಕೆಯ ಬಳಿ ಹೋಯಿತು. ಇನ್ನೇನು ಅದು ಮೇಕೆಯ ಕತ್ತಿಗೆ ಬಾಯಿ ಹಾಕಬೇಕು ಎನ್ನುವಷ್ಟರಲ್ಲಿ ಗಲಾಟೆ ಮನುಷ್ಯರ ಕೇಳಿಬಂದಿತು. ನೋಡಿದರೆ, ಪೊದೆಯೊಂದರಲ್ಲಿ ಹೊಂಚು ಹಾಕಿ ಕುಳಿತಿದ್ದ ಹಳ್ಳಿಗರು ದೊಣ್ಣೆಗಳನ್ನು ಹಿಡಿದು ಅಟ್ಟಿಸಿಕೊಂಡು ಬರುತ್ತಿದ್ದರು.
ತಿಂಗಳುಗಳಿಂದ ತಮ್ಮ ಜಾನುವಾರುಗಳನ್ನು ತಿನ್ನುತ್ತಿದ್ದ ಪ್ರಾಣಿಯನ್ನು ಹಿಡಿಯಲು ಅವರು ಗುಂಪು ಕಟ್ಟಿಕೊಂಡು ಕಾಯುತ್ತಾ ಸಿದ್ಧವಾಗಿದ್ದರು. ಈ ವಿಚಾರ ತಿಳಿಯದ ತೋಳ ಮತ್ತು ಕೋತಿ ಸಿಕ್ಕಿಬಿದ್ದಿದ್ದವು. ತೋಳವೇನೋ ಕೆಟ್ಟೆನೋ ಬಿಟ್ಟೆನೋ ಎಂದು ವೇಗದಿಂದ ಓಡಿ ಪರಾರಿಯಾಯಿತು. ಆದರೆ ಕೋತಿ ಸಿಕ್ಕಿಬಿದ್ದಿತು. ಹಳ್ಳಿಗರು, ತೋಳಕ್ಕೆ ಸಹಾಯ ಮಾಡಲು ಬಂದಿದೆ ಎಂದುಕೊಂಡು ಕೋತಿಯನ್ನು ಹಿಡಿದು ಬಡಿದರು. ಕೋತಿ, ಇನ್ಯಾವತ್ತೂ ಹಳ್ಳಿಯ ಕಡೆ ತಲೆಹಾಕುವುದಿಲ್ಲ ನೋವಿನಿಂದ ಅಲ್ಲಿಂದ ಓಡಿಹೋಯಿತು.
– ಕೆ.ಎನ್.ಅಕ್ರಂ ಪಾಷಾ, ಚಿಂತಾಮಣಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…