ರೋಮ್ನ ಚಕ್ರವರ್ತಿಯಂತೆ ಈ ಕಾಜಾಣ!
(ಒಂದು ಫೋಟೋ ಕತೆ )
Team Udayavani, Jul 6, 2019, 12:02 PM IST
ರೋಮ್ ನಗರಕ್ಕೆ ಬೆಂಕಿ ಬಿದ್ದಾಗ, ಚಕ್ರವರ್ತಿ ನೀರೋ ಪಿಟೀಲು ನುಡಿ ಸು ತ್ತಾ ಕುಳಿತಿದ್ದನಂತೆ! ಈ ಹಕ್ಕಿನೂ ಹಾಗೆ ಮಾಡ್ತಿದೆಯಾ? ಅಂತ ನನಗೆ ಸಂಶಯ ಶುರುವಾಗಿತ್ತು. ಇದು ಕಾಜಾಣ ಹಕ್ಕಿ. ಬಂಡೀಪುರದ ಅಭಯಾರಣ್ಯಕ್ಕೆ ಬೆಂಕಿ ಬಿದ್ದು, ಕಾಡಿನ ಮರಗಳು ಧಗಧಗನೆ ಹೊತ್ತಿ ಉರಿಯುವಾಗ, ವನ್ಯಮೃಗಗಳೆಲ್ಲ ಆಹುತಿಯಾಗಿ, ನರಳುತ್ತಿರುವಾಗ, ಈ ಕಾಜಾಣ ಮಾತ್ರ, ಅಗ್ನಿ ಜ್ವಾಲೆಯ ಸಮೀಪದಲ್ಲೇ ವಿರಾಜಮಾನವಾಗಿ ಕುಳಿತಿತ್ತು. ಅದರ ಕಣ್ಣುಗಳಲ್ಲಿ, ಬೃಹತ್ ಅಗ್ನಿಯನ್ನು ಕಂಡು, ಯಾವುದೇ ಆತಂಕಗಳಿರಲಿಲ್ಲ. ಸಾಮಾನ್ಯವಾಗಿ ದೊಡ್ಡ ಪ್ರಮಾ ಣದಲ್ಲಿ ಅಗ್ನಿ ಆವರಿಸಿದಾಗ, ಹೀಗೆ ಕಾಜಾಣಗಳು ಸನಿಹದಲ್ಲೇ ಹಾಜರಿ ಹಾಕಿರುತ್ತವೆ. ಅಗ್ನಿಯ ಜ್ವಾಲೆಗೆ ಮೋಹಿತಗೊಳ್ಳುವ ಪತಂಗಗಳು, ಹುಳುಗಳನ್ನು ತಿನ್ನಲು, ಕಾಜಾಣಗಳು ಹೊಂಚು ರೂಪಿಸುತ್ತಿರುತ್ತವೆ. ಇಲ್ಲಿ ಕ್ಲಿಕ್ಕಿಸಲಾದ ಕಾಜಾಣವೂ, ಅದೇ ಆಹಾರದ ಬೇಟೆಯನ್ನೇ ಎದುರು ನೋಡುತಿದೆ…
ಚಿತ್ರ: ಮಧುಸೂದನ್ ಎಸ್.ಆರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?