ಸಾನಿಯಾಗೆ ಮಂಡಿ ನೋವಿನದ್ದೇ ಭಯ


Team Udayavani, Dec 9, 2017, 12:26 PM IST

sania.jpg

ಭಾರತದಲ್ಲಿ ಟೆನಿಸ್‌ ಅಲೆಯನ್ನು ಹೆಚ್ಚಿಸಿರುವ ಸುಂದರಿ ಸಾನಿಯಾ ಮಿರ್ಜಾ. ಗ್ಲಾಮರ್‌ಗೂ ಸೈ, ಆಟಕ್ಕೂ ಸೈ. ಎದುರಾಳಿ ಅಂಕಣದಲ್ಲಿರುವ ಆಟಗಾರರು ಎಷ್ಟೇ ಪ್ರಬಲವಾದ ಸರ್ವ್‌ ಮಾಡಿದರೂ ಈಕೆ ಸರಿಯಾಗಿ ತಿರುಗೇಟು ನೀಡಿದ್ದಾರೆ. ಪಾಕ್‌ ಕ್ರಿಕೆಟಿಗ ಶೋಯಿಬ್‌ ಮಲಿಕ್‌ ಜತೆ ಮದುವೆಯಾದಾಗ ಭರ್ಜರಿ ಟೀಕೆಗೆ ತುತ್ತಾಗಿದ್ದರು. ಒಮ್ಮೆ ರಾಷ್ಟ್ರೀಯ ಧ್ವಜಕ್ಕೆ ಕಾಲು ತಾಗುವಂತೆ ಕೂತು ಜನರ ಆಕ್ರೋಶವನ್ನೂ ಎದುರಿಸಿದ್ದಾರೆ. ಈ ಎಲ್ಲಾ ಸಂದರ್ಭವನ್ನೂ ಸಾನಿಯಾ ಧೈರ್ಯದಿಂದಲೇ ಎದುರಿಸಿದ್ದಾರೆ. ಆದರೆ ಇದೀಗ ಸಾನಿಯಾಗೆ ಭಯ ಕಾಡಿಸುತ್ತಿದೆೆ. ಆ ಭಯ ಹುಟ್ಟಿಸಿರುವುದು ಮಂಡಿ ನೋವು!

ಹೌದು, ಕ್ರೀಡಾಪಟುಗಳ ದೊಡ್ಡ ಶತ್ರು ಗಾಯ. ಮಾನಸಿಕವಾಗಿ ಎಷ್ಟೇ ಬಲಿಷ್ಠ ಆಟಗಾರನಾಗಿದ್ದರೂ ಪ್ರತಿಯೊಬ್ಬ ಕ್ರೀಡಾಪಟುವೂ ಗಾಯಕ್ಕೆ ಹೆದರುತ್ತಾರೆ. ಗಾಯದಿಂದ ತಮ್ಮ ಕ್ರೀಡಾ ಭವಿಷ್ಯಕ್ಕೆ ತೊಂದರೆಯಾದರೆ ಗತಿ ಏನು ಎಂದು ಚಿಂತಿಸುತ್ತಾರೆ. ಈ ಹಿಂದೆ ಎಷ್ಟೋ ಕ್ರೀಡಾಪಟುಗಳು ಗಾಯಕ್ಕೆ ತುತ್ತಾಗಿ ಭವಿಷ್ಯ ಕಳೆದುಕೊಂಡಿದ್ದಾರೆ. ಹೀಗಾಗಿ ಮಂಡಿನೋವು ಸಹಜವಾಗಿ ಟೆನಿಸ್‌ ತಾರೆ ಸಾನಿಯಾ ಮಿರ್ಜಾಗೂ ಭಯ ಹುಟ್ಟಿಸಿದೆ.

ಕ್ರಿಕೆಟ್‌ ದಂತಕಥೆಯಾಗಿದ್ದ ಸಚಿನ್‌ ತೆಂಡುಲ್ಕರ್‌, ಟೆನಿಸ್‌ ದಂತಕಥೆ ರೋಜರ್‌ ಫೆಡರರ್‌, ಖ್ಯಾತ ಫ‌ುಟ್ಬಾಲಿಗರಾದ ಲಿಯೋನೆಲ್‌ ಮೆಸ್ಸಿ, ಕ್ರಿಸ್ಟಿಯಾನೋ ರೋನಾಲ್ಡೊ, ಬ್ಯಾಡ್ಮಿಂಟನ್‌ ದಂತಕಥೆ ಲಿನ್‌ ಡಾನ್‌… ಎಲ್ಲರ ಕಥೆಯೂ ಅಷ್ಟೇ. ಇವರೆಲ್ಲ ಆಗಾಗ ಗಾಯಕ್ಕೆ ತುತ್ತಾದವರು. ಆದರೆ ಚೇತರಿಸಿಕೊಂಡು ಮತ್ತೆ ಪುಟಿದೆದ್ದವರು.

ಸಾನಿಯಾ ಸಿಂಗಲ್ಸ್‌ನಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಪಡೆಯದಿದ್ದರೂ ಮಹಿಳಾ ಡಬಲ್ಸ್‌, ಮಿಶ್ರ ಡಬಲ್ಸ್‌ನಲ್ಲಿ ಸಾಧನೆ ಮಾಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಭಾರತದಲ್ಲಿ ಟೆನಿಸ್‌ ಅಲೆ ಏಳಲು ಕಾರಣರಾಗಿದ್ದಾರೆ. ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದ್ದಾರೆ.

ಇಲ್ಲಿಯವರೆಗೆ ಸಾನಿಯಾ ಮಹಿಳಾ ಡಬಲ್ಸ್‌ನಲ್ಲಿ 3 ಗ್ರ್ಯಾನ್‌ಸ್ಲಾಮ್‌, ಮಿಶ್ರ ಡಬಲ್ಸ್‌ನಲ್ಲಿ 3 ಗ್ರ್ಯಾನ್‌ಸ್ಲಾಮ್‌ ಪಡೆದಿದ್ದಾರೆ. ಡಬಲ್ಸ್‌ನಲ್ಲಿ ವಿಶ್ವ ನಂ.1 ಶ್ರೇಯಾಂಕವನ್ನು ಪಡೆದಿದ್ದಾರೆ. ಆದರೆ ಇತ್ತೀಚೆಗೆ ನೀಡಿದ ಕಳಪೆ ಪ್ರದರ್ಶನದಿಂದ ಶ್ರೇಯಾಂಕದಲ್ಲಿ ಅಗ್ರ 10 ರಿಂದ ಹೊರಬಿದ್ದಿದ್ದಾರೆ. ಇದಕ್ಕೆ ಮಂಡಿ ನೋವಿನ ಗಾಯವೇ ಪ್ರಮುಖ ಕಾರಣವಾಗಿದೆ. ಸಾನಿಯಾ ಎಂಬ ಸುಂದರಿ ಆದಷ್ಟು ಬೇಗ ಮಂಡಿ ನೋವಿನಿಂದ ಹೊರಬಂದು ಮತ್ತೆ ಟೆನಿಸ್‌ ಅಂಗಳದಲ್ಲಿ ಮಿಂಚಲಿ ಎದು ಬಯಸೋಣ.

ಟಾಪ್ ನ್ಯೂಸ್

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

Kohli IPL 2024

IPL; 10 ಸೀಸನ್‌, 400 ರನ್‌: ಕೊಹ್ಲಿ ಸಾಧನೆ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

Kohli IPL 2024

IPL; 10 ಸೀಸನ್‌, 400 ರನ್‌: ಕೊಹ್ಲಿ ಸಾಧನೆ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.