ಸಾಲು ಸಾಲು ಸಾಧಕಿಯರು 


Team Udayavani, Aug 19, 2017, 3:09 PM IST

10.jpg

ದೇಶದ ಯಾವುದೇ ಭಾಗಕ್ಕೆ ಹೋದರೂ ಗಾಂಧೀಜಿ, ಅಂಬೇಡ್ಕರ್‌ ಸೇರಿದಂತೆ  ಸಾಧಕ ಮಹಾತ್ಮರ ಪುತ್ಥಳಿ, ಮೂರ್ತಿಗಳು ಕಾಣಸಿಗುತ್ತವೆ. ಆದರೆ ಮಹಿಳಾ ಸಾಧಕಿಯರ ಶಿಲ್ಪಗಳು? ಇದು ಅಪರೂಪ. ಆದರೆ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಆವರಣಕ್ಕೆ ಬಂದರೆ,  ಎಲ್ಲಾ ಸಾಧಕಿಯರನ್ನು ಕಣ್ತುಂಬಿಕೊಂಡು ಹೋಗಬಹುದು. 

ನಾಡಿನ ಖ್ಯಾತ ಕಲಾವಿದ ರಾಜಹರ್ಷ.ಟಿ. ಸೊಲಬಕ್ಕನವರ್‌ ಅವರೊಂದಿಗೆ 100 ಕಲಾವಿದರು,  ಕುಲಪತಿ ಪ್ರೊ.ಸಬೀನಾ ಭೂಮಿಗೌಡ ಅವರ ಕನಸಿನ  ಈ ಕಲಾ ಗ್ರಾಮಕ್ಕೆ ಜೀವ ನೀಡಿದ್ದಾರೆ.

  ಆಡಳಿತ ಕಚೇರಿ ಎದುರು ಮಹಾಶರಣೆ ಅಕ್ಕಮಹಾದೇವಿಯ 16 ಅಡಿ ಆಳೆತ್ತರದ ಹಾಗೂ 3.5 ಟನ್‌ ತೂಕದ ಬೃಹತ್‌ ಮೂರ್ತಿ ತಲೆ ಎತ್ತಿದೆ. ಇದನ್ನು ನೋಡಿದವರಿಗೆ 12ನೇ ಶತಮಾನದ ಅಕ್ಕಮಹಾದೇವಿ ಮತ್ತೆ ಹುಟ್ಟಿ ಬಂದಳೆ ಅನಿಸಿದರೆ ಅಚ್ಚರಿಯಿಲ್ಲ. 

ಇದರ ಜೊತೆಗೆ ದೇಶಕ್ಕೆ ವಿಶಿಷ್ಟ ಕೊಡುಗೆ ನೀಡಿದ ಖ್ಯಾತ ಮಹಿಳಾ ಸಾಧಕಿಯರ ಶಿಲ್ಪಗಳೂ ಇಲ್ಲಿವೆ. ಅದರಲ್ಲಿ ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಪುಲೆ, ಅಸಹಾಯಕರ ಕಣ್ಣು ತೆರೆಸಿದ ಮದರ್‌ ತೆರೇಸಾ, ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ, ವೀರರಾಣಿ ಕಿತ್ತೂರು ಚೆನ್ನಮ್ಮ, ಚಾಂದ್‌ಬೀಬಿ, ಸಾಲುಮರದ ತಿಮ್ಮಕ್ಕ, ಮೇಡಂ ಮೇರಿ ಕ್ಯೂರಿ, ಟೆನಿಸ್‌ ತಾರೆ ಸಾನಿಯಾ ಮಿಜಾì, ಬಾಹ್ಯಾಕಾಶ ವಿಜ್ಞಾನಿ ಕಲ್ಪನಾ ಚಾವ್ಲಾ, ಭಾರತ ರತ್ನ ಎಂ.ಎಸ್‌ ಸುಬ್ಬಲಕ್ಷ್ಮೀ , ಪಿ.ಟಿ ಉಷಾ ಸೇರಿದಂತೆ 20 ಸಾಧಕಿಯರ  ಸುಂದರ ರಾಕ್‌ ಕಲಾಕೃತಿಗಳು ಮಂತ್ರಮುಗªಗೊಳಿಸುತ್ತವೆ.

ಮುಖ್ಯದ್ವಾರದ ಆರಂಭದಲ್ಲೇ ಹಳ್ಳಿ ಪರಂಪರೆಯಿಂದ ಜಾಗತಿಕ ಮಟ್ಟದ ಆಧುನಿಕ ಪರಂಪರೆಯ ಕಲಾಕೃತಿಗಳ ಅನಾವರಣವಾಗಿದೆ. ಬದುಕು ಬಿಂಬಿಸುವ ಚಿತ್ರಣವಿದೆ. ಅಲ್ಲಿನ ಜನಜೀವನ, ಬಾಲಕಿಯರ ಶಿಕ್ಷಣ, ಮಹಿಳೆಯರ ಕೆಲಸದ ಒತ್ತಡ, ಗ್ರಾಮದ ಬಾಲಕಿ ಹಂತ-ಹಂತವಾಗಿ ಪಟ್ಟಣ, ನಗರ ಪ್ರದೇಶಕ್ಕೆ ಕಾಲಿಟ್ಟು ಉನ್ನತ ಶಿಕ್ಷಣ ಪಡೆಯುವ ಹಂತಗಳನ್ನು ಇಲ್ಲಿ ಕೆತ್ತಿಟ್ಟಿದ್ದಾರೆ. ಈ ಮೂರ್ತಿಗಳ ಜೊತೆಗೆ ವೈದ್ಯ, ನ್ಯಾಯವಾದಿ, ಸ್ನಾತಕೋತ್ತರ ಪದವೀಧರೆ,  ಮಹಿಳೆಯರ ಧ್ಯಾನ, ಓದುವ ಭಂಗಿಗಳು ಗಮನಸೆಳೆಯುತ್ತವೆ. 

ಹೆಚ್ಚಾ ಕಡಿಮೆ ಶಿಲ್ಪಗಳ ರಚನೆಗಾಗಿಯೇ 50ಲಕ್ಷ ರೂಪಾಯಿಗೂ ಹೆಚ್ಚು ವ್ಯಯಿಸಲಾಗಿದೆ. ಈ ಶಿಲ್ಪಗಳನ್ನು ಇಟ್ಟಿಗೆ, ಮರಳು, ಕಬ್ಬಿಣ, ಸಿಮೆಂಟ್‌ ಬಳಸಿ ಅತ್ಯಾಕರ್ಷಕವಾಗಿ ರಚಿಸಲಾಗಿದೆ. ಒಂದೊಂದು ಶಿಲ್ಪವೂ ಸುಮಾರು 6.5 ಅಡಿಯಷ್ಟು ಎತ್ತರವಾಗಿದ್ದು, ಸುಮಾರು 450 ಕೆ.ಜಿ ಭಾರವಿದೆ. ಈ ಶಿಲ್ಪಗಳು ಸುಮಾರು 100ರಿಂದ 150 ವರ್ಷಗಳವರೆಗೆ ಬಾಳಿಕೆ ಬರುವ ಅಂದಾಜಿದೆ ಎನ್ನುತ್ತಾರೆ ವಿವಿ ಅಧಿಕಾರಿಗಳು. ಇವುಗಳ ವೀಕ್ಷಣೆಗೆ ಯಾವುದೇ ಪ್ರವೇಶ ಶುಲ್ಕವಿಲ್ಲ. ವಿಜಯಪುರಕ್ಕೆ ಹೋದರೆ ನಿಮ್ಮ ಪ್ರವಾಸದ ಪಟ್ಟಿಯಲ್ಲಿ ಮಹಿಳಾ ವಿವಿಯನ್ನು ಸೇರಿಸುವುದು ಮರೆಯಬೇಡಿ.  ಇದೂ ಕೂಡ ನೋಡಲೇಬೇಕಾದ, ಭೇಟಿ ನೀಡಲೇ ಬೇಕಾದ ಸ್ಥಳ. 

ಗುರುರಾಜ.ಕನ್ನೂರ

ಟಾಪ್ ನ್ಯೂಸ್

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.