ಸೌತೇಕಾಯಿಗೆ ಮನಸೋತು ಬಯಲಲಿ ಕುಳಿತು…
ಪುರದ ಪುಣ್ಯಂ ಸೌತಡ್ಕ
Team Udayavani, Sep 14, 2019, 5:25 AM IST
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಸಮೀಪವಿರುವ ಪ್ರಸಿದ್ಧ ಪುಣ್ಯಕ್ಷೇತ್ರ. ಒಮ್ಮೆ ದನ ಕಾಯುವ ಹುಡುಗರಿಗೆ, ಸಹಸ್ರಾರು ವರ್ಷಗಳ ಹಿಂದಿನ ಗಣಪತಿ ದೇಗುಲದ ಮೂರ್ತಿಯು ಸಿಕ್ಕಿತು. ಆ ಹುಡುಗರು ವಿಗ್ರಹವನ್ನು ಮಣ್ಣಿಂದ ತೆಗೆದು, ಅದನ್ನು ಹೊತ್ತುಕೊಂಡು, ದಾರಿಯುದ್ದಕ್ಕೂ ಗಣಪನನ್ನು ಹೊಗಳುತ್ತಾ, ಒಂದು ಮರದ ಬುಡದಲ್ಲಿ ಇಟ್ಟರಂತೆ. ಅಲ್ಲಿಯೇ ಸಿಕ್ಕ ಕಲ್ಲುಗಳಿಂದ ಅದಕ್ಕೆ ಕಟ್ಟೆಯನ್ನು ನಿರ್ಮಿಸಿ, ತಾವು ಸೇವಿಸಲು ತಂದಿದ್ದ ಸೌತೇಕಾಯಿಯ ಮಿಡಿಗಳನ್ನು ನೈವೇದ್ಯಕ್ಕೆ ಇಟ್ಟರಂತೆ. ಕ್ರಮೇಣ ಈ ಗಣಪನಿಗೆ ಸೌತೇಕಾಯಿ ಸಮರ್ಪಿಸಿ, ಪೂಜಿಸುವುದು ವಾಡಿಕೆ ಆಯಿತು. ಅಂದಿನಿಂದ ಈ ಕ್ಷೇತ್ರಕ್ಕೆ “ಸೌತಡ್ಕ’ (“ಅಡ್ಕ’ ಎಂದರೆ, “ಬಯಲು’) ಎಂಬ ಹೆಸರು ಬಂತು. ಈಗಲೂ ಇಲ್ಲಿನ ಗಣಪ, ಬಯಲು ನಿವಾಸಿ.
– ಚಂದನ್ ಸುಬ್ರಹ್ಮಣ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…