ಸೀರೆ ನೇಯುವ ನೀರೆಯ ನಗು


Team Udayavani, Mar 13, 2019, 12:30 AM IST

x-3.jpg

ಹೆಣ್ಣಿನ ಸೌಂದರ್ಯವನ್ನು ಮತ್ತಷ್ಟು ಇಮ್ಮಡಿಗೊಳಿಸುವ ಉಡುಪು ಸೀರೆ. ಅದನ್ನು ತಯಾರಿಸುವ ಹೆಣ್ಣಿನ ಬದುಕೂ ಅಷ್ಟೇ ಸುಂದರ. ದಿನವಿಡೀ ಶ್ರಮಪಟ್ಟು, ಅಂದದ ಸೀರೆಯನ್ನು ಪುಟ್ಟ ಕೂಸಿನಂತೆ ಕೈಯಲ್ಲಿ ಹಿಡಿಯುವಾಗ, ಆಗುವ ಪುಳಕವೇ ಬೇರೆ…   

ಆಧುನಿಕತೆಯ ಅಬ್ಬರದಿಂದ ನಮ್ಮೆಲ್ಲರ ಜೀವನಶೈಲಿ ಬದಲಾಗಿದೆ. ಉಡುಗೆ- ತೊಡುಗೆಗಳಲ್ಲಿ ಹೊಸತನ ಕಂಡಿದೆ. ಆದರೂ, ಇನ್ನೂ ಕೆಲವೆಡೆ ನೇಕಾರಿಕೆಯಂಥ ಹಳೆಯ ಕಸುಬು ಉಸಿರಾಡುತ್ತಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಮ್ಮಡ ಗ್ರಾಮದ ಬಹುತೇಕ ಮಹಿಳೆಯರು ನೇಕಾರಿಕೆಯನ್ನೇ ನಂಬಿ, ಬದುಕನ್ನು ನೇಯುತ್ತಿದ್ದಾರೆ. 

ಬೆಳಗ್ಗೆ ಗಂಡಂದಿರು ಹೊಲ, ಗದ್ದೆ ಕೆಲಸಕ್ಕೆ ಹೋದರೆ, ಹೆಂಡತಿಯರು ಮನೆಗೆಲಸ ಮುಗಿಸಿ, ಕಣಿಕೆ ಸುತ್ತಿ ಬಟ್ಟೆ ನೇಯಲು ಮುಂದಾಗುತ್ತಾರೆ. ಕೈಮಗ್ಗ ಇದ್ದರೆ ದಿನಕ್ಕೆ 2 ಸೀರೆ ನೇಯುವ ಮಹಿಳೆಯರು, ಪವರ್‌ಲೂಮ್‌ ಮಗ್ಗದಿಂದ 5 ಸೀರೆ ನೇಯಬಲ್ಲರು. ಸೀರೆಯನ್ನಷ್ಟೇ ಅಲ್ಲ, ಶಾಲಾ ಸಮವಸ್ತ್ರ, ಪಂಚೆ, ರೇಷ್ಮೆ, ಜರಿ, ಕಾಟನ್‌, ಇಳಕಲ್‌, ಸ್ಪನ್‌ ಬಟ್ಟೆ, ಕಚ್ಚಾ ಕಾಟನ್‌ ಹೀಗೆ ವಿವಿಧ ಬಟ್ಟೆಗಳಿಂದ ವಸ್ತ್ರ ತಯಾರಿಸುತ್ತಾರೆ. 
ಕೈಮಗ್ಗಗಳ ಕಾರ್ಯವೈಖರಿ ನಿಧಾನವಾದ್ದರಿಂದ ಮಹಿಳೆಯರು ವಿದ್ಯುತ್‌ ಚಾಲಿತ ಪವರ್‌ ಲೂಮ್‌ ಮಗ್ಗಗಳನ್ನು ಬಳಸುತ್ತಿದ್ದಾರೆ. ಆದರೆ, ಚಿಮ್ಮಡ ಗ್ರಾಮದಲ್ಲಿ ಲೋಡ್‌ ಶೆಡ್ಡಿಂಗ್‌ನಿಂದಾಗಿ ಹಗಲು 2-3 ಗಂಟೆ ವಿದ್ಯುತ್‌ ಇರುವುದಿಲ್ಲ. ಇದರಿಂದಾಗಿ ನೇಯ್ಗೆಗೆ ಅಡಚಣೆಯಾಗುತ್ತಿದೆ ಅನ್ನೋದು ಇವರ ಅಳಲು. ಒಂದು ಸೀರೆ ನೇಯ್ದರೆ ಸಿಗುವುದು 50-100 ರೂಪಾಯಿ ಮಾತ್ರ. ಆದರೆ, ಹೆಚ್ಚಿನ ಲಾಭ ಮಧ್ಯವರ್ತಿಗಳ ಕೈ ಸೇರುತ್ತಿದೆ. 
ಪರಿಶ್ರಮಕ್ಕೆ ತಕ್ಕ ಫ‌ಲ ಸಿಗದೇ ಇರುವ ನೋವು, ಇವರನ್ನು ಸೋಮಾರಿಗಳನ್ನಾಗಿಸಿಲ್ಲ. ಬದಲಿಗೆ, ಹೆಚ್ಚೆಚ್ಚು ನೇಯುವ ಛಲವನ್ನು ತುಂಬಿದೆ. ಸೊಸೆಯಂದಿರು ನೇಯಲು ಕುಳಿತರೆ, ವಯಸ್ಸಾದ ಅತ್ತೆಯರು ಮಡಿಕೆ (ಲಡಿ) ತೋಡುತ್ತ, ಜರಿ ಬಿಡಿಸುತ್ತಾ ಅವರಿಗೆ ನೆರವಾಗುತ್ತಾರೆ. ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾ, ಮನೆಗೆಲಸ ಮಾಡುತ್ತಾ, ಯಾವ ಉದ್ಯೋಗಸ್ಥ ಮಹಿಳೆಯರಿಗಿಂತ ಕಮ್ಮಿಯಿಲ್ಲ ಎಂದು ನಿರೂಪಿಸಿದ್ದಾರೆ. 

ನಾವು ಎಷ್ಟೇ ದುಡಿದರೂ, ಸಿಗೋದು ಸ್ವಲ್ಪ ಹಣ ಮಾತ್ರ. ಟೆಂಡರ್‌ ಕೊಟ್ಟವರಿಗೆ ಹೆಚ್ಚು ಲಾಭ ಸಿಗುತ್ತದೆ. ಕೆಲವು ಸಲ ತುಂಬಾ ಸಿಟ್ಟು ಬರುತ್ತೆ. ಆದ್ರೆ, ಏನು ಮಾಡೋಕಾಗುತ್ತೆ ಹೇಳಿ? ಇನ್ನು ಈ ಲೋಡ್‌ಶೆಡ್ಡಿಂಗ್‌ನಿಂದ ಕೆಲಸ ಅರ್ಧಕ್ಕೆ ನಿಂತು, ದುಡಿಮೆಗೆ ದೊಡ್ಡ ಪೆಟ್ಟು ಬೀಳುತ್ತದೆ. 
 ಗೀತಾ ಪಂಕಿ, ನೇಕಾರ ಮಹಿಳೆ

ವಿದ್ಯುತ್ತನ್ನೇ ನಂಬಿಕೊಂಡಿರುವ ನಮ್ಮ ಕೆಲಸಕ್ಕೆ ಲೋಡ್‌ಶೆಡ್ಡಿಂಗ್‌ನಿಂದ ತುಂಬಾ ತೊಂದರೆಯಾಗುತ್ತಿದೆ. ಎಷ್ಟೇ ಕಷ್ಟಪಟ್ಟರೂ ದಿನದಲ್ಲಿ 2-4 ಸೀರೆಗಿಂತ ಹೆಚ್ಚು ನೇಯಲು ಸಾಧ್ಯವೇ ಇಲ್ಲ.
ಬಸಮ್ಮ ಯಂಕಂಚಿ, ನೇಕಾರ ಮಹಿಳೆ

– ಐಶ್ವರ್ಯ ಬ. ಚಿಮ್ಮಲಗಿ

ಟಾಪ್ ನ್ಯೂಸ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.