ವೀಳ್ಯದೆಲೆಯ ಸವಿ


Team Udayavani, Jan 11, 2019, 12:30 AM IST

q-17.jpg

ಜೀರ್ಣಶಕ್ತಿಯನ್ನು ವೃದ್ಧಿಸಿ, ಹೊಟ್ಟೆ ಉಬ್ಬರ, ಕಫ‌ ಇತ್ಯಾದಿ ತೊಂದರೆಗಳನ್ನು ನೀಗಿಸಿ, ಥಂಡಿ ಹವಾಮಾನದಲ್ಲಿ ದೇಹವನ್ನು ಬೆಚ್ಚಗಿಡುವ ವೀಳ್ಯದೆಲೆಯ ಸೇವನೆ ಆರೋಗ್ಯಕ್ಕೆ ಬಹಳ ಉತ್ತಮ. ಬಾಯಿಯ ದುರ್ಗಂಧ ಹೋಗಲಾಡಿಸಿ ದಂತಕ್ಷಯವನ್ನು ನೀಗಿಸುವ ವೀಳ್ಯದೆಲೆಯನ್ನು ಹಲವಾರು ರೀತಿಯಲ್ಲಿ ಬಳಸಿ ಆರೋಗ್ಯ ವೃದ್ಧಿಸಬಹುದು.

ವೀಳ್ಯದೆಲೆಯ ತಂಬುಳಿ
ಬೇಕಾಗುವ ಸಾಮಗ್ರಿ: ವೀಳ್ಯದೆಲೆ- ನಾಲ್ಕು, ಜೀರಿಗೆ- ಅರ್ಧ ಚಮಚ, ಕಾಳುಮೆಣಸು- ಎಂಟು, ತೆಂಗಿನತುರಿ- ಅರ್ಧ ಕಪ್‌,         ಮಜ್ಜಿಗೆ- ಒಂದು ಕಪ್‌, ಉಪ್ಪು ರುಚಿಗೆ.

ತಯಾರಿಸುವ ವಿಧಾನ: ಬಾಣಲೆಗೆ ಒಂದು ಚಮಚ ತುಪ್ಪ ಹಾಕಿಕೊಂಡು ಹೆಚ್ಚಿಕೊಂಡ ವೀಳ್ಯದೆಲೆ ಮತ್ತು ಕಾಳುಮೆಣಸನ್ನು ಬಾಡಿಸಿಕೊಳ್ಳಿ. ಇದು ಆರಿದ ಮೇಲೆ ತೆಂಗಿನತುರಿ, ಉಪ್ಪು ಮತ್ತು ಸ್ವಲ್ಪ ಮಜ್ಜಿಗೆ ಸೇರಿಸಿ ನುಣ್ಣಗೆ ರುಬ್ಬಿಕೊಂಡು ಮಿಕ್ಸಿಂಗ್‌ ಬೌಲ್‌ಗೆ ಹಾಕಿ. ನಂತರ ಇದಕ್ಕೆ ಬೇಕಷ್ಟು ನೀರು ಮತ್ತು ಉಳಿದ ಮಜ್ಜಿಗೆ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ಸಾಸಿವೆ ಜೊತೆ ಜೀರಿಗೆ ಸೇರಿಸಿದ ಒಗ್ಗರಣೆಯನ್ನು ತುಪ್ಪದಲ್ಲಿ ನೀಡಿ. ಅರುಚಿಯನ್ನು ಹೋಗಲಾಡಿಸಲು ಈ ತಂಬುಳಿಯ ಸೇವನೆ ಉತ್ತಮ.

ಹೆಲ್ದೀ ಪಾನ್‌ 
ಬೇಕಾಗುವ ಸಾಮಗ್ರಿ:
ವೀಳ್ಯದೆಲೆ- ನಾಲ್ಕು, ಖರ್ಜೂರ- ಎರಡು, ಸೋಂಪುಕಾಳು- ಎರಡು ಚಮಚ, ಕಾಳುಮೆಣಸು- ಆರು, ಲವಂಗ- ಎರಡು, ಹುರಿದ ಅಗಸೆಬೀಜ- ಎರಡು ಚಮಚ, ಕಲ್ಲುಸಕ್ಕರೆ, ಸುಣ್ಣ  ಸ್ವಲ್ಪ.

ತಯಾರಿಸುವ ವಿಧಾನ: ತೊಟ್ಟು ತೆಗೆದು ಚೆನ್ನಾಗಿ ಸ್ವತ್ಛಮಾಡಿದ ವೀಳ್ಯದೆಲೆಗೆ ಸುಣ್ಣ ಹಚ್ಚಿ, ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಒಂದೊಂದಾಗಿ ವೀಳ್ಯದೆಲೆಯ ಮೇಲೆ ಹರಡಿದರೆ ಹೆಲ್ದೀ ಪಾನ್‌ ಸವಿಯಲು ಸಿದ್ಧ. ಈ ಪಾನ್‌ಗೆ ಜೀರಿಗೆ, ಹುರಿದ ಬಾದಾಮಿ, ಅಡಿಕೆ ಇತ್ಯಾದಿಗಳನ್ನೂ ಬೇಕಿದ್ದರೆ ಸೇರಿಸಬಹುದು.

ಊಟದ ನಂತರ ಸವಿಯುವುದರಿಂದ ಜೀರ್ಣಶಕ್ತಿಗೆ ಉತ್ತಮ ಅಲ್ಲದೇ ಸುಣ್ಣ ಹಚ್ಚುವುದರಿಂದ ಕ್ಯಾಲ್ಸಿಯಂ ತೊಂದರೆಗೆ, ಬಾಯಿಯ ದುರ್ಗಂಧ, ಕಫ‌ ನಿವಾರಣೆಗೆ ಇದರ ಸೇವನೆ ಬಹಳ ಉತ್ತಮ.

ವೀಳ್ಯದೆಲೆಯ ಪಾನಕ 
ಬೇಕಾಗುವ ಸಾಮಗ್ರಿ: ವೀಳ್ಯದೆಲೆ- ಆರು, ಜೀರಿಗೆ- ಒಂದು ಚಮಚ, ಶುಂಠಿ- ಒಂದು ಚಮಚ, ಜೇನುತುಪ್ಪ- ಮೂರು ಚಮಚ, ಕಲ್ಲುಸಕ್ಕರೆ- ರುಚಿಗೆ ಬೇಕಷ್ಟು, ಕಾಳುಮೆಣಸಿನ ಪುಡಿ- ಒಂದು ಚಮಚ, ಲಿಂಬೆಹಣ್ಣು- ಒಂದು.

ತಯಾರಿಸುವ ವಿಧಾನ: ಸಣ್ಣಗೆ ಹೆಚ್ಚಿದ ವೀಳ್ಯದೆಲೆಯನ್ನು ಸ್ವಲ್ಪ$ ನೀರು ಸೇರಿಸಿ ಮಿಕ್ಸಿಜಾರಿಗೆ ಹಾಕಿ ನುಣ್ಣಗೆ ರುಬ್ಬಿ ಸೋಸಿಕೊಳ್ಳಿ. ನಂತರ ಇದಕ್ಕೆ ಕಾಳುಮೆಣಸು, ಲಿಂಬೆರಸ ಮತ್ತು ಜೇನುತುಪ್ಪಸೇರಿಸಿ ಚೆನ್ನಾಗಿ ಮಿಶ್ರಮಾಡಿ ಸರ್ವ್‌ ಮಾಡಬಹುದು. ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು ಅಥವಾ ಜೀರ್ಣಕ್ಕಾಗಿ ಈ ಪಾನಕದ ಸೇವನೆ ಉತ್ತಮ.

ವೀಳ್ಯದೆಲೆಯ ಬಜ್ಜಿ 
ಬೇಕಾಗುವ ಸಾಮಗ್ರಿ:
ವೀಳ್ಯದೆಲೆ- ಹತ್ತು, ಕಡ್ಲೆಹಿಟ್ಟು – ಒಂದು ಕಪ್‌, ಅಕ್ಕಿಹಿಟ್ಟು- ನಾಲ್ಕು ಚಮಚ,  ಇಂಗು- ಕಾಲು ಚಮಚ, ಕೆಂಪು ಮೆಣಸಿನಪುಡಿ- ಒಂದು ಚಮಚ, ಕಾರ್ನ್ಫ್ಲೋರ್‌- ಎರಡು ಚಮಚ, ಓಂಕಾಳು- ಎರಡು ಚಮಚ, ಜೀರಿಗೆ- ಒಂದು ಚಮಚ, ಉಪ್ಪು ರುಚಿಗೆ.

ತಯಾರಿಸು ವಿಧಾನ: ಮಿಕ್ಸಿಂಗ್‌ಬೌಲ್‌ಗೆ  ಕಡ್ಲೆಹಿಟ್ಟು, ಕಾರ್ನ್ ಫ್ಲೋರ್‌ ಮತ್ತು ಅಕ್ಕಿಹಿಟ್ಟು ಹಾಕಿ ಚೆನ್ನಾಗಿ ಮಿಶ್ರಮಾಡಿಕೊಳ್ಳಿ. 
ನಂತರ ಇದಕ್ಕೆ ಮೇಲೆ ತಿಳಿಸಿದ ಎಲ್ಲ ಸಾಮಗ್ರಿಗಳನ್ನು ಸೇರಿಸಿ ಬೇಕಷ್ಟು ನೀರು ಸೇರಿಸಿ ಚೆನ್ನಾಗಿ ಮಿಶ್ರಮಾಡಿ ದೋಸೆಹಿಟ್ಟಿನ ಹದಕ್ಕೆ ಕಲಸಿಕೊಂಡು, ವೀಳ್ಯದೆಲೆಗಳನ್ನು ಒಂದೊಂದಾಗಿ ಇದರಲ್ಲಿ ಮುಳುಗಿಸಿ ಕಾದ ಎಣ್ಣೆಯಲ್ಲಿ ಗರಿಗರಿಯಾಗಿ ಕರಿದರೆ ವೀಲೈದೆಲೆಯ ಬಜ್ಜಿ ರೆಡಿ.

ಗೀತಸದಾ

ಟಾಪ್ ನ್ಯೂಸ್

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.