ಕುಮಾರಿಯರ ಮೊಡವೆಗೆ ಕುಮಾರೀ ಮನೆಮದ್ದು


Team Udayavani, Nov 16, 2018, 6:00 AM IST

23.jpg

ಕುಮಾರೀ, ಘೃತಕುಮಾರೀ, ಲೋಳೆಸರ ಅಥವಾ ಎಲೋವೆರಾ ಇಂದಿನ ಹೆಚ್ಚಿನ ಮೊಡವೆ ನಿವಾರಕ, ಕಲೆನಿವಾರಕ, ಕಾಂತಿರಕ್ಷಕ, ಸೌಂದರ್ಯ ವರ್ಧಕಗಳಲ್ಲಿ ಒಂದು ಮುಖ್ಯ ಔಷಧೀಯ ಸಾಮಗ್ರಿ. ಶೋಡಷಿಯರನ್ನು ಕಾಡುವ ಮೊಡವೆಗೆ ಎಲೋವೆರಾ ಒಂದರಿಂದಲೇ ಹತ್ತುಹಲವು ಗೃಹೌಷಧಿಗಳನ್ನು ತಯಾರಿಸಿ ಬಳಸಬಹುದು.

ಕುಮಾರೀ,  ಜೇನು ಹಾಗೂ ದಾಲ್ಚಿನಿ ಫೇಸ್‌ಮಾಸ್ಕ್
ಕುಮಾರೀ ರಸದಲ್ಲಿ ಮೊಡವೆಯಲ್ಲಿನ ಬ್ಯಾಕ್ಟೀರಿಯಾ ನಿವಾರಕ, ಜೀವಾಣು ನಿರೋಧಕ ಗುಣಗಳಿವೆ. ಜೇನು ಹಾಗೂ ದಾಲಿcàನಿ ಹುಡಿಯಲ್ಲಿಯೂ ರೋಗಾಣುನಾಶಕ ಗುಣಗಳಿವೆ. ಜೊತೆಗೆ ಜೇನು ಕಲೆ ನಿವಾರಕ, ಕಾಂತಿವರ್ಧಕ. ದಾಲಿcàನಿ ಪುಡಿ ಮೊಡವೆ ಬೇಗ ಮಾಯಲು ಸಹಕಾರಿ.

ವಿಧಾನ: 10 ಚಮಚ ಶುದ್ಧ ಜೇನಿಗೆ, 5 ಚಮಚ ಎಲೋವೆರಾದ ರಸ ಅಥವಾ ಲೋಳೆಸರದ ಎಲೆಯ ತಿರುಳನ್ನು ಬೆರೆಸಿ, ಚೆನ್ನಾಗಿ ಕಲಕಬೇಕು. ತದನಂತರ 1/2 ಚಮಚ ದಾಲ್ಚಿನಿ ಹುಡಿಯನ್ನು ಈ ಮಿಶ್ರಣವನ್ನು ಮುಖಕ್ಕೆ ಲೇಪಿಸುವ ಸಮಯದಲ್ಲಿ ಬೆರೆಸಬೇಕು. 10 ನಿಮಿಷದ ಬಳಿಕ ಮುಖ ತೊಳೆಯಬೇಕು. ಈ ಮಾಸ್ಕ್ ಹೋಮ್‌ಸ್ಪಾದ ವಿಧಾನದೊಂದಿಗೆ ವಾರದಲ್ಲಿ 2-3 ಬಾರಿ ಬಳಸಿದರೆ ಶೀಘ್ರ ಮೊಡವೆ ನಿವಾರಣೆಯಾಗುತ್ತದೆ. ಮೊಡವೆ ಮಾಯಿಸುವ ಎಲೋವೆರಾ ಸ್ಪ್ರೆಯ ಮಾಯಕ ಮನೆಯಲ್ಲಿಯೇ ಎಲೋವೆರಾ ಸ್ಪ್ರೆ ತಯಾರಿಸುವ ವಿಧಾನ ಇಂತಿದೆ :

2 ಔನ್ಸ್‌ನ ಸ್ಪ್ರೆ ಬಾಟಲ್‌ನಲ್ಲಿ ಒಂದೂಕಾಲು ಔನ್ಸ್‌ ಶುದ್ಧ ನೀರು, 1/2 ಔನ್ಸ್‌ ಕುಮಾರೀ ತಿರುಳು (ಶುದ್ಧ ಎಲೋವೆರಾ ಜೆಲ್‌ ಸಹ ಬಳಸಬಹುದು), 3-4 ಹನಿ ಬಾದಾಮಿ ತೈಲ. ಇವೆಲ್ಲವನ್ನೂ ಚೆನ್ನಾಗಿ ಬೆರೆಸಿ ಸ್ಪ್ರೆ ಬಾಟಲಿನಲ್ಲಿ ಹಾಕಬೇಕು. ಕಣ್ಣಿಗೆ ಸೋಕದಂತೆ ಇಡೀ ಮುಖಕ್ಕೆ ಈ ಸ್ಪ್ರೆ ಬಳಸಿ. ಇದು ಮೊಡವೆಯನ್ನು ಉಂಟುಮಾಡುವ ಸೀಬಮ್‌ (ಸೆಬೆಷಿಯಸ್‌ ಗ್ರಂಥಿಯ ಸ್ರಾವ)ವನ್ನು ನಿವಾರಣೆ ಮಾಡಿ, ಆರೋಗ್ಯಕರ ಜೀವಕೋಶಗಳ ಉತ್ಪತ್ತಿಯನ್ನು ವರ್ಧಿಸುತ್ತದೆ.

ಕುಮಾರೀ, ಕೊಬ್ಬರಿ ಎಣ್ಣೆ ಮತ್ತು ಸಕ್ಕರೆ ಸ್ಕ್ರಬ್‌
ದೊಡ್ಡ ಕೆಂಪು ಮೊಡವೆಗಳನ್ನು ಮಾಯಿಸಲು ಹಾಗೂ ಕಲೆಯನ್ನು ನಿವಾರಿಸಲು ಇದು ಸಹಾಯಕ.

ವಿಧಾನ: 1/2 ಕಪ್‌ ಕೊಬ್ಬರಿ ಎಣ್ಣೆಗೆ 1/2 ಕಪ್‌ ಸಕ್ಕರೆ ಬೆರೆಸಿ ಚೆನ್ನಾಗಿ ಕಲಕಬೇಕು. ಕೊನೆಯಲ್ಲಿ ಒಂದೂಕಾಲು ಕಪ್‌ ಎಲೋವೆರಾದ ರಸ ಅಥವಾ ತಿರುಳು ಬೆರೆಸಬೇಕು. ಇದನ್ನು ಫ್ರಿಜ್‌ನಲ್ಲಿಟ್ಟು ವಾರಕ್ಕೆ 2-3 ಬಾರಿ ಬಳಸಬಹುದು. ಕಣ್ಣಿನ ಸುತ್ತಲಿನ ಭಾಗವನ್ನು ಬಿಟ್ಟು ಉಳಿದ ಭಾಗಕ್ಕೆ ಲೇಪಿಸಿ, ತುದಿ ಬೆರಳುಗಳಿಂದ ಮೃದುವಾಗಿ ಮಾಲೀಶು ಮಾಡಬೇಕು. ಇದರಿಂದ ಮೃತಚರ್ಮ ನಿವಾರಣೆ (ಎಕ್ಸ್‌ ಫೋಲಿಯೇಶನ್‌) ಉಂಟಾಗಿ, ಮೊಡವೆ, ಕಲೆ ನಿವಾರಣೆಯಾಗುತ್ತದೆ. ಮೊಡವೆ ನಿವಾರಣೆ, ಕಲೆನಿವಾರಣೆ ಜೊತೆಗೆ ಚಳಿಗಾಲದಲ್ಲಿ ಚರ್ಮವನ್ನು ಮಾಯಿಶ್ಚರೈಸ್‌ ಮಾಡಿ ತೇವಾಂಶವನ್ನು ವರ್ಧಿಸಲು ಪರಿಣಾಮಕಾರಿ ಮನೆಮದ್ದು:

ಬೇಕಾಗುವ ಸಾಮಗ್ರಿ: 1 ಕಪ್‌ ಎಲೋವೆರಾ ತಿರುಳು, 1/2 ಕಪ್‌ ಕೊಬ್ಬರಿ ಎಣ್ಣೆ , 10 ಚಮಚ ಜೊಜೋಬಾ ತೈಲ, 15 ಚಮಚ ಜೇನುಮೇಣ (ಅಥವಾ ಬೀವ್ಯಾಕ್ಸ್‌ ಬಾರ್‌ನ 3/4 ಭಾಗ), ಲ್ಯಾವೆಂಡರ್‌ ತೈಲ 5-8 ಹನಿ.

ವಿಧಾನ: ಕೊಬ್ಬರಿ ಎಣ್ಣೆ, ಜೇನುಮೇಣ ಹಾಗೂ ಜೊಜೊಬಾ ತೈಲ ಸಣ್ಣ ಉರಿಯಲ್ಲಿ ಬಿಸಿಮಾಡಿ ಚೆನ್ನಾಗಿ ಕಲಕಬೇಕು. ತದನಂತರ ಗ್ಲಾಸ್‌ ಬ್ಲೆಂಡರ್‌ನಲ್ಲಿ ಹಾಕಿ ಸರಿಯಾಗಿ ತಣ್ಣಗಾಗಲು ಬಿಡಬೇಕು. ಒಂದು ಅಥವಾ ಒಂದೂವರೆ ಗಂಟೆಯ ಬಳಿಕ ಗ್ಲಾಸ್‌ ಬ್ಲೆಂಡರ್‌ನ ಮಿಶ್ರಣವನ್ನು  ಪುನಃ ಮಿಶ್ರ ಮಾಡಿ, ನಿಧಾನವಾಗಿ ಬ್ಲೆಂಡ್‌ ಮಾಡಬೇಕು. ಈ ಮಿಶ್ರಣಕ್ಕೆ ಎಲೋವೆರಾ ತಿರುಳು ಅಥವಾ ಜೆಲ್‌ ಬೆರೆಸಿ ಪುನಃ ಚೆನ್ನಾಗಿ ಕಲಕಬೇಕು. ಕೊನೆಯಲ್ಲಿ ಲ್ಯಾವೆಂಡರ್‌ ತೈಲ 10 ಹನಿ ಬೆರೆಸಿ ಮಿಶ್ರಣವನ್ನು ಗಾಳಿಯಾಡದ ಗಾಜಿನ ಬಾಟಲಲ್ಲಿ ಸಂಗ್ರಹಿಸಿ ಇಡಬೇಕು. ಇದನ್ನು ಫ್ರಿಜ್‌ನಲ್ಲಿ ಸಂಗ್ರಹಿಸಿಟ್ಟರೆ 3-4 ತಿಂಗಳುಗಳ ಕಾಲ ಬಳಸಬಹುದು. ಮನೆಯಲ್ಲೇ ಫೇಸ್‌ವಾಶ್‌
ಕುಮಾರಿಯರಿಗೆ ಉತ್ತಮ ಫೇಸ್‌ವಾಶ್‌-ಕುಮಾರೀ ತಿರುಳಿನಿಂದ ಮನೆಯಲ್ಲೇ ಈ ವಿಧಾನಲ್ಲಿ ತಯಾರಿಸಬಹುದು.

ಸಾಮಗ್ರಿಗಳು: ಕುಮಾರೀ ಎಲೆಯ ತಿರುಳು, ಸೋಪ್‌ ಬಾರ್‌, ಬೇಕಿಂಗ್‌ ಸೋಡಾ, ಜೇನು ಹಾಗೂ ಫಿಲ್ಟರ್‌ ಮಾಡಿದ ನೀರು 1 ಕಪ್‌.
ವಿಧಾನ: ಸ್ವಲ್ಪ ನೀರಿನಲ್ಲಿ 4 ಚಮಚ ಬೇಕಿಂಗ್‌ ಸೋಡಾವನ್ನು ಕರಗಿಸಿ ಇಡಬೇಕು. ತೀಕ್ಷ್ಣ ಗುಣವಿಲ್ಲದ ಸೋಪ್‌ಬಾರನ್ನು ತೆಗೆದುಕೊಂಡು ಅದನ್ನು ಗ್ರೇಟ್‌ (ತುರಿಯಬೇಕು) 8 ಚಮಚದಷ್ಟು ಸೋಪ್‌ ತುರಿಯನ್ನು ಒಂದು ಬೌಲ್‌ನಲ್ಲಿ ತೆಗೆದುಕೊಳ್ಳಬೇಕು. ಒಂದು ಸಾಸ್‌ಪ್ಯಾನ್‌ನಲ್ಲಿ 1 ಕಪ್‌ (20ml) ನೀರನ್ನು ಬಿಸಿ ಮಾಡಿ, ಅದನ್ನು ಸೋಪ್‌ ತುರಿ ಇರುವ ಬೌಲ್‌ನಲ್ಲಿ  ನಿಧಾನವಾಗಿ ಕಲಕುತ್ತಾ ಸುರಿಯಬೇಕು. ಸರಿಯಾಗಿ ಸೋಪ್‌ತುರಿ ಕರಗುವವರೆಗೆ ಚೆನ್ನಾಗಿ ಮಿಶ್ರಮಾಡಬೇಕು. ತದನಂತರ ಬೇಕಿಂಗ್‌ ಸೋಡಾ ಮಿಶ್ರಮಾಡಿದ ನೀರನ್ನು ಹಾಕಿ ಕಲಕಬೇಕು. ಕೊನೆಯಲ್ಲಿ 3 ದೊಡ್ಡ ಚಮಚ ಎಲೋವೆರಾದ ತಿರುಳು, 2 ದೊಡ್ಡ ಚಮಚ ಜೇನು ಬೆರೆಸಿ ಚೆನ್ನಾಗಿ ಮಿಶ್ರಮಾಡಿದರೆ ಎಲೋವೆರಾ ಜೇನುತುಪ್ಪದ ಫೇಸ್‌ವಾಶ್‌ ರೆಡಿ. ಇದನ್ನು ಒಂದು ಬಾಟಲಲ್ಲಿ ಸಂಗ್ರಹಿಸಿ ಇಡಬೇಕು.
ಬಳಸುವ ವಿಧಾನ: ಮೊದಲು ಮುಖವನ್ನು ಬೆಚ್ಚಗಿನ ನೀರಿನಿಂದ ತೊಳೆಯಬೇಕು. 1-2 ಚಮಚದಷ್ಟು ಕುಮಾರೀ ಫೇಸ್‌ವಾಶ್‌ನ್ನು ಅಂಗೈಯಲ್ಲಿ ತೆಗೆದುಕೊಂಡು, ತುದಿ ಬೆರಳುಗಳಿಂದ ಮುಖಕ್ಕೆ ವರ್ತುಲಾಕಾರದಲ್ಲಿ ಮಾಲೀಶು ಮಾಡಬೇಕು. 2-3 ನಿಮಿಷಗಳ ಬಳಿಕ ತಣ್ಣೀರಿನಲ್ಲಿ ತೊಳೆದರೆ ಮುಖ ಕಾಂತಿಯುತ ಹಾಗೂ ಫ್ರೆಶ್‌ ಆಗುತ್ತದೆ. ದಿನಕ್ಕೆ 1-2 ಬಾರಿ ನಿತ್ಯ ಬಳಸಿದರೆ ಶ್ರೀಘ್ರ ಮೊಡವೆ, ಕಲೆ ನಿವಾರಣೆಯಾಗುತ್ತದೆ.

ಕುಮಾರೀ ಜ್ಯೂಸ್‌ ಸೇವನೆ: 1-2 ಚಮಚ ಎಲೋವೆರಾದ ರಸವನ್ನು 1 ಕಪ್‌ ನೀರಿಗೆ ಸೇರಿಸಿ, ನಿತ್ಯ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸಿದರೆ ಮೊಡವೆ ನಿವಾರಕ. ಹೀಗೆ ಕುಮಾರಿಯರ ಮನೆಯಲ್ಲಿ ಕುಮಾರೀ ಗಿಡವೊಂದಿದ್ದರೆ ಮೊಡವೆಯ ಗೊಡವೆ ಇಲ್ಲ !

ಡಾ. ಅನುರಾಧಾ ಕಾಮತ್‌

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.