ನಟಾಶಾಳ ಸನ್ನಿಯಾಗುವ ಆಶಾ


Team Udayavani, Dec 8, 2017, 3:46 PM IST

08-33.jpg

ನಟಾಶಾ ಸ್ಟಾಂಕೊವಿಕ್‌ಳನ್ನು ನಟಿಯೆಂದು ಕರೆಯುವುದು ಕಷ್ಟ. ಆದರೆ, ಡ್ಯಾನ್ಸರ್‌ ಎಂದು ಧಾರಾಳವಾಗಿ ಹೇಳಬಹುದು. ಹೆಸರಿನಲ್ಲಿ ಅರ್ಧಭಾಗ ಭಾರತೀಯಳಂತೆಯೂ ಇನ್ನರ್ಧ ಭಾಗ ಐರೋಪ್ಯಳಂತೆಯೂ ಕಾಣಿಸುವ ಈಕೆ ಸರ್ಬಿಯಾ ದೇಶದವಳು. 

ಎಲ್ಲಿಯ ಸರ್ಬಿಯಾ ಎಲ್ಲಿಯ ಬಾಲಿವುಡ್‌ ಎತ್ತಣಿಂದೆತ್ತ ಸಂಬಂಧವಯ್ಯ ಎಂದು ತಲೆಕೆಡಿಸಿಕೊಳ್ಳಬೇಡಿ. ಜಾಗತೀಕರಣದ ಈ ಜಮಾನದಲ್ಲಿ ಜಗತ್ತಿನ ಮೂಲೆಮೂಲೆಯಲ್ಲಿರುವ ನಟಿಯರು, ಮೋಡೆಲ್‌ಗ‌ಳು ಬಾಲಿವುಡ್‌ಗೆ ಬಂದು ಹೋಗುತ್ತಿದ್ದಾರೆ. ಈ ರೀತಿ ಬಂದ ನಟಾಶಾ ಮಾತ್ರ ಇಲ್ಲಿಯೇ ಖಾಯಂ ಆಗಿ ತಳವೂರುವ ಪ್ರಯತ್ನದಲ್ಲಿದ್ದಾಳೆ. ಸರ್ಬಿಯಾದಲ್ಲಿ ನಟಿ ಮತ್ತು ಮಾಡೆಲ್‌ ಎಂದು ಗುರುತಿಸಿಕೊಂಡಿದ್ದರೂ ಈಕೆ ಮೂಲತಃ ಡ್ಯಾನ್ಸರ್‌. ಸತತ 17 ವರ್ಷ ಬ್ಯಾಲೆ ಕಲಿತು ಅದರಲ್ಲಿ ಅಪಾರ ಪರಿಣತಿಯನ್ನು ಪಡೆದುಕೊಂಡಿದ್ದಾಳೆ. 

ಎಲ್ಲ ವಿದೇಶಿ ನಟಿಯರಂತೆ ಬಾಲಿವುಡ್‌ಗೆ ಬಂದು ಮಿಂಚಬೇಕೆಂಬ ನಟಾಶಾಳನ್ನು ಮೊದಲು ಕರೆತಂದದ್ದು ಒಂದು ಜಾಹೀರಾತು ಏಜೆನ್ಸಿ. ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಕಂಪೆನಿಯ ಹಲವು ಉತ್ಪನ್ನಗಳಿಗೆ ಮಾಡೆಲ್‌ ಆದ ನಟಾಶಗಳಿಗೆ ಬಾಲಿವುಡ್‌ ಬಾಗಿಲು ತೆರೆದದ್ದು ಒಂದು ಕಾಂಡೋಮ್‌ ಜಾಹೀರಾತು. ರಣವೀರ್‌ ಸಿಂಗ್‌ ಜತೆಗೆ ಈ ಜಾಹೀರಾತಿನಲ್ಲಿ ನಟಿಸಿದ ಬಳಿಕ ಬಾಲಿವುಡ್‌ ಸಂಪರ್ಕಕ್ಕೆ ಬಂದ ನಟಾಶಾಗಳಿಗೆ ಇಲ್ಲಿ ತನ್ನಂಥವರಿಗೆ ಭಾರೀ ಅವಕಾಶ ಉಂಟು ಎಂದು ತಿಳಿಯಲು ತಡವಾಗಲಿಲ್ಲ. 2013ರಲ್ಲಿ ಸತ್ಯಾಗ್ರಹ ಚಿತ್ರದಲ್ಲಿ ಐಟಂ ಹಾಡಿಗೆ ಕುಣಿಯುವ ಮೂಲಕ ನಟಾಶಾ ಅಧಿಕೃತವಾಗಿ ಬಾಲಿವುಡ್‌ ಆರಂಗೇಟ್ರಂ ಮಾಡಿದಳು. ವಯ್ನಾರ, ಥಳಕುಬಳುಕಿನಲ್ಲಿ ಯಾವ ಬಾಲಿವುಡ್‌ ನಟಿಗೂ ಕಡಿಮೆಯಿಲ್ಲ. ನಟಾಶಾಳನ್ನು ಬೇಗನೇ ಬಾಲಿವುಡ್‌ ತನ್ನೊಳಗೆ ಸೇರಿಸಿಕೊಂಡಿತು.

ಡಿಸ್ಕಿಯಾಂ, ಹಾಲಿಡೇ,  ಆ್ಯಕ್ಷನ್‌ ಜಾಕ್ಸನ್‌, 7 ಅವರ್ ಟು ಗೋ, ಡ್ಯಾಡಿ ಚಿತ್ರಗಳಲ್ಲಿ ಕುಣಿದ ಬಳಿಕ ಈಗ ನಟಾಶಾ ಗಮನ ಸೆಳೆಯಲಾರಂಭಿಸಿದ್ದಾಳೆ. ಅದರಲ್ಲೂ ಡ್ಯಾಡಿಯಲ್ಲಿ ಅವಳ ಡ್ಯಾನ್ಸ್‌ ಡ್ಯಾನ್ಸ್‌ ಹಾಡಿನ ನೃತ್ಯ ಸೂಪರ್‌ಹಿಟ್‌ ಆಗಿದ್ದು , ಇದನ್ನು ನೋಡಿಯೇ ಫ‌ಕ್ರಿ ರಿಟರ್ನ್ಸ್ ಚಿತ್ರ ತಂಡ ಅವಳನ್ನು ಕರೆದು ಅವಕಾಶ ಕೊಟ್ಟಿದೆ. “ಡ್ಯಾಡಿ ನನಗೆ ಬ್ರೇಕ್‌ ಕೊಟ್ಟ ಚಿತ್ರ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾಳೆ ನಟಾಶಾ. ನಾಲ್ಕು ವರ್ಷದಲ್ಲಿ ಅವಳು ತಮಿಳು, ಮಲಯಾಳಕ್ಕೂ ಹೋಗಿ ಬಂದಿದ್ದಾಳೆ. ಅಂತೆಯೇ ಬಿಗ್‌ಬಾಸ್‌-8 ರಿಯಾಲಿಟಿ ಶೋದಲ್ಲೂ ಸ್ಪರ್ಧಿಸಿದ್ದಾಳೆ. ಇಲ್ಲಿರುವಾಗ ಕಲಿತ ಹರಕುಮುರುಕು ಹಿಂದಿ ಈಗ ಅವಳಿಗೆ ಬಹಳ ಉಪಯೋಗಕ್ಕೆ ಬರುತ್ತಿದೆಯೆಂತೆ. ಬಾಲಿವುಡ್‌ನ‌ಲ್ಲಿ ಸನ್ನಿ ಲಿಯೋನ್‌ ಮಾದರಿಯಲ್ಲಿ ತಳವೂರಬೇಕು ಎನ್ನುವುದು ಅವಳ ಮಹತ್ವಾಕಾಂಕ್ಷೆ. 

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.