ಕೇಳಬಯಸುವಿರೇನು ಇವರ ಕಥೆಯ


Team Udayavani, May 24, 2019, 6:00 AM IST

q-13

ಹೆದ್ದಾರಿಯ ಎರಡೂ ಬದಿಯಲ್ಲೂ ಸಾಲು ಸಾಲು ಮರಗಳು.ಅವುಗಳನ್ನು ನೋಡುತ್ತಿದ್ದರೆ ಕಣ್ಣಿಗೇನೋ ಹಬ್ಬ. ಅದೆಷ್ಟು ವರುಷಗಳು ಬೇಕಾಯಿತೋ ಆ ಗಿಡಗಳು ಹೆಮ್ಮರವಾಗಿ ಬೆಳೆಯಲು. ಗಿಡವಾಗಿದ್ದಂಥವು ಇಂದು ಮರವಾಗಿ ಬೆಳೆದು ಜೀವಸಂಕುಲಕ್ಕೆ ಆಶ್ರಯದಾಣವಾಗಿವೆ. ಬಳಲಿ ಬಂದವರಿಗೆ ಜಾತಿ-ಧರ್ಮ ಎಂಬ ಭೇದ-ಭಾವವಿಲ್ಲದೆ ಪ್ರತಿಯೊಂದು ಜೀವಿಗೂ ನಾವಿದ್ದೇವೆ ಬಾ ಎಂದು ಕೈ ಬೀಸಿ ಕರೆಯುತ್ತವೆ.

ಆ ಪ್ರದೇಶದಲ್ಲಿದ್ದ ಸಾಲುಸಾಲು ಮರಗಳನ್ನು ಕಂಡ ಪ್ರತಿಯೊಬ್ಬರಲ್ಲಿಯೂ ಒಮ್ಮೆ ಆಶ್ಚರ್ಯಚಕಿತರಾಗಿ ಸಾಲು ಮರದ ತಿಮ್ಮಕ್ಕ ಏನಾದರೂ ಈ ಮರಗಳನ್ನು ಪಾಲನೆ ಮಾಡಿದ್ದಾರಾ, ಎಂಬ ಪ್ರಶ್ನೆ ಮೂಡಿದರೂ ತಪ್ಪಾಗ‌ಲಾರದು. ಅಷ್ಟೊಂದು ಸುಂದರವಾಗಿತ್ತು ಆ ಪ್ರದೇಶ. ಅಂದ ಹಾಗೆ, ಈ ಪ್ರದೇಶ ಬೇರೆ ಎಲ್ಲಿಯೋ ಇರುವುದಲ್ಲ, ರಾಷ್ಟ್ರೀಯ ಹೆದ್ದಾರಿ 73ರ ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣಿಸುವಾಗ ಕಂಡುಬರುವ ನಯನಮನೋಹರ ಮರಗಳ ಚಿತ್ರಣವಿದು.

ವಿಪರ್ಯಾಸವೆಂದರೆ, ಇನ್ನು ಮುಂದೆ ಈ ಮರಗಳ ನೆನಪು ಕೇವಲ ನೆನಪಾಗಿಯೇ ಉಳಿಯಬೇಕಷ್ಟೆ. ಮಾನವ ತನ್ನ ಸ್ವಾರ್ಥಕ್ಕಾಗಿ ಏನೆಲ್ಲ ಮಾಡುತ್ತಿರುವಾಗ, ಇನ್ನು ದಷ್ಟಪುಷ್ಟವಾಗಿ ಬೆಳೆದಿರುವ ಈ ಮರಗಳು ಅವನಿಗೆ ಯಾವ ಲೆಕ್ಕ. ಹೆದ್ದಾರಿಯನ್ನು ಅಗಲೀಕರಣ ಮಾಡುವುದರ ಮೂಲಕ ಮಂಗಳೂರು-ಬೆಂಗಳೂರು ನಡುವಿನ ಪ್ರಯಾಣ ಸಮಯವನ್ನು ಕಡಿಮೆಗೊಳಿಸುವುದು ಈ ಯೋಜನೆಯ ಉದ್ದೇಶ. ಆದರೆ, ರಸ್ತೆ ಅಗಲೀಕರಣ ಎಂಬ ಹೆಸರಿನಲ್ಲಿ ಹೆದ್ದಾರಿಯ ಬದಿಯಲ್ಲಿರುವ ಸಾಲು-ಸಾಲು ಮರ, ಮನೆ, ಅಂಗಡಿ-ಮುಂಗಟ್ಟು, ಗದ್ದೆ-ತೋಟಗಳು ಸರ್ವನಾಶವಾಗಿದೆ. ಇದಕ್ಕೆ ಪ್ರತಿಯಾಗಿ ಸರ್ಕಾರ ಧನಸಹಾಯವನ್ನು ನೀಡಿದೆ. ಆದರೆ, ಶತಮಾನಗಳಿಂದ ಬೆಳೆದು ಬಂದು ಜೀವಸಂಕುಲವನ್ನೇ ರಕ್ಷಿಸುತ್ತಿದ್ದ ಈ ಸಹಸ್ರಾರು ಮರಗಳ ಋಣವನ್ನು ತೀರಿಸಲು ಅದೆಷ್ಟೇ ಧನ ಸೌಲಭ್ಯ ನೀಡಿದರೂ ಸಾಧ್ಯವಿಲ್ಲ.

ಅಯ್ಯೋ! ನಮಗಿನ್ನಿರುವುದು ಕೇವಲ ಕೆಲವೇ ದಿನಗಳು. ನಾವು ಕೊನೆ ಕಾಣುತ್ತಿದ್ದೇವೆ. ಈ ನೀಚ ಮನುಜ ತನ್ನ ಸ್ವಾರ್ಥಕ್ಕಾಗಿ ನಮ್ಮ ಸಂಕುಲವನ್ನೇ ನಾಶ ಮಾಡುತ್ತಿದ್ದಾನೆ- ಎಂದು ಮರಗಳು ರೋದಿಸುತ್ತಿದ್ದರೆ, ಅವುಗಳ ಮೂಕ ವೇದನೆಯನ್ನು ಕೇಳುವವರು ಯಾರೂ ಇಲ್ಲ. ದಿನಕ್ಕೆ ಸುಮಾರು 5-6 ಮರಗಳು ನೆಲಕ್ಕೆ ಉರುಳುತ್ತಿದ್ದವು. ಅವುಗಳನ್ನು ತುಂಡು ತುಂಡಾಗಿ ಕತ್ತರಿಸಿ ಸಾಗಿಸುತ್ತಿರುವುದನ್ನು ಕಂಡರೆ ಕರುಣೆ ಇದ್ದವರಿಗೆ ಒಮ್ಮೆ ಎದೆಗೆ ಚೂರಿ ಹಾಕಿದ ಅನುಭವವಾಗದೇ ಇರದು. ಮರಗಳನ್ನು ಕಡಿಯಲು ಮುಂದಾಗಿರುವ ಸರ್ಕಾರ ಗಿಡಗಳನ್ನು ನೆಡುವ ಬಗ್ಗೆಯಾಗಲಿ, ಪರಿಸರ ಸಂರಕ್ಷಣೆಗಾಗಲಿ ಯಾವುದೇ ಪರ್ಯಾಯ ಕ್ರಮವನ್ನೂ ಕೈಗೊಂಡಿಲ್ಲ.

ಮಾನವ ಎಷ್ಟು ಕ್ರೂರಿ ಅಲ್ಲವೆ? ತನ್ನ ಸುಖಕ್ಕಾಗಿ ಯಾರನ್ನೂ, ಹೇಗೆ ಬೇಕಾದರೂ ಪಳಗಿಸುತ್ತಾನೆ. ನಗರ ಪ್ರದೇಶದಲ್ಲಂತೂ ಮರಗಳ ಸುಳಿವೇ ಇಲ್ಲ ! ಇನ್ನು ಹಳ್ಳಿಯಲ್ಲಿದ್ದ ಮರಗಳ ಮೇಲೂ ಅವನ ವಕ್ರ ದೃಷ್ಟಿ ಬಿದ್ದು ಅವುಗಳೂ ಇಂದು ನಾಶದ ಅಂಚಿನಲ್ಲಿದೆ. ಅಂದು ರಾಜನಾಗಿದ್ದ ಅಶೋಕ ತನ್ನ ಪ್ರಜೆಗಳ ಹಿತಾಸಕ್ತಿಗೆಂದು ರಸ್ತೆಯ ಬದಿಯಲ್ಲಿ ಮರಗಳನ್ನು ಬೆಳೆಸಿದ್ದರು. ಆದರೆ, ಇಂದು ಜನರ ಆಸಕ್ತಿಗಾಗಿಯೇ ಮರಗಳ ನಾಶವಾಗುತ್ತಿದೆ. ಎಂಥ ಕಾಲ ಬಂತು ನೋಡಿ! ಸ್ವಾರ್ಥಕ್ಕಾಗಿಯೋ, ನಗರಾಭಿವೃದ್ಧಿ ಯೋಜನೆಗಾಗಿಯೋ ಈ ಥರ ಏಕಾಏಕಿ ಬೇಕಾ ಬಿಟ್ಟಿ ಮರಗಳನ್ನು ಕಡಿಯುವ ಮೊದಲು ಸ್ವಲ್ಪ ಮಟ್ಟಿನ ಚಿಂತನೆ ನಡೆಸಿ ಮರಗಿಡಗಳನ್ನು ಬೆಳೆಸಿ ಉಳಿಸುವ ಕೆಲಸವಾಗ ಬೇಕು.

ಸುಷ್ಮಾ ಎಂ. ಎಸ್‌.
ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿನಿ,
ವಿವೇಕಾನಂದ ಕಾಲೇಜು, ನೆಹರುನಗರ, ಪುತ್ತೂರು

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.